ಕಾಲೇಜಿಗೆ ಹೋಗುತ್ತಿದ್ದಾಗ ಬರೆದಿದ್ದು. ಹೀಗೆ, ಕಸ ತೆಗೆಯುವಾಗ ಕೈಗೆ ಸಿಕ್ಕಿ ನಗು ಬರಿಸಿಬಿಟ್ಟಿತು. ನೀವೂ ಓದಿ ನೋಡಿ.
ರಜಿನಿ,
ನಿನ್ನ ಒಡಲಲ್ಲಿ,
ಮೇಲೊಂದು ಚುಕ್ಕಿ,
ಕೆಳಗೊಂದು ಚುಕ್ಕಿ,
ಮೇಲೆ ಮತ್ತೊಂದು,
ಕೆಳಗೆ ಅದಕೊಂದು,
ವಿಶ್ವಾಮಿತ್ರಾ ಹುಟ್ಟಿಸಿದನೇನು ಅಣಕ?
ಊಹೂಂ, ಇದು ಸ್ವಯಂಕೃತಾಪರಾಧ!
ಇಲ್ಲಿ ಒಬ್ಬೊಬ್ಬನೂ ತ್ರಿಶಂಕು,
ಏಕೆ ನಾನು?
ಎಲ್ಲಿಗೆ ನಾನು?
ಏನು ನಾನು?
ಆಮೇಲೇನು?
ಯಾರಿಗೂ ಗೊತ್ತಿಲ್ಲ
ಬೇಕೆ? ಅದೂ ಇಲ್ಲ
ತಿಳಕೊಳ್ಳಲು ಸಮಯವಿಲ್ಲ!
ಡೆವಿಲ್ ಸಿನೇಮಾ
-
ದರ್ಶನ್ ಅಭಿನಯದ ಅದ್ಭುತ ಸಿನೇಮಾ ಡೆವಿಲ್… ಮೊದಲನೇ ದಿನ ಮೊದಲನೇ ಶೋ ನೋಡೋದು ಇದ್ಯಲ್ಲ ಆ
ಅನುಭವ ಎಲ್ಲರಿಗೂ ಸಿಗೋದಿಲ್ಲ..ವಿ ಐ ಪಿ ಫಾಸ್ ಕೂಡ ಎಲ್ಲರಿಗೂ ಸಿಗೋದಿಲ್ಲ, ಫಾರಿನ್
ಲೊಕೇಶನ್ ಅಲ್...
3 ವಾರಗಳ ಹಿಂದೆ
