ಕಾಲೇಜಿಗೆ ಹೋಗುತ್ತಿದ್ದಾಗ ಬರೆದಿದ್ದು. ಹೀಗೆ, ಕಸ ತೆಗೆಯುವಾಗ ಕೈಗೆ ಸಿಕ್ಕಿ ನಗು ಬರಿಸಿಬಿಟ್ಟಿತು. ನೀವೂ ಓದಿ ನೋಡಿ.
ರಜಿನಿ,
ನಿನ್ನ ಒಡಲಲ್ಲಿ,
ಮೇಲೊಂದು ಚುಕ್ಕಿ,
ಕೆಳಗೊಂದು ಚುಕ್ಕಿ,
ಮೇಲೆ ಮತ್ತೊಂದು,
ಕೆಳಗೆ ಅದಕೊಂದು,
ವಿಶ್ವಾಮಿತ್ರಾ ಹುಟ್ಟಿಸಿದನೇನು ಅಣಕ?
ಊಹೂಂ, ಇದು ಸ್ವಯಂಕೃತಾಪರಾಧ!
ಇಲ್ಲಿ ಒಬ್ಬೊಬ್ಬನೂ ತ್ರಿಶಂಕು,
ಏಕೆ ನಾನು?
ಎಲ್ಲಿಗೆ ನಾನು?
ಏನು ನಾನು?
ಆಮೇಲೇನು?
ಯಾರಿಗೂ ಗೊತ್ತಿಲ್ಲ
ಬೇಕೆ? ಅದೂ ಇಲ್ಲ
ತಿಳಕೊಳ್ಳಲು ಸಮಯವಿಲ್ಲ!
ಮುಕ್ತ
-
ಬಾಂದಳದ ತುಂಬಾ ಎರಚಿದ್ದ ನಕ್ಷತ್ರಗಳನ್ನೇ ದಿಟ್ಟಿಸುತ್ತಿದ್ದಳು ಭೂಮಿ.
ಬಾಲ್ಕನಿಯಲ್ಲಿ ಕುಳಿತು ಅಮಾವಾಸ್ಯೆಯ ಕಾರಿರುಳನ್ನು ಆಸ್ವಾದಿಸುವುದೆಂದರೆ ಅವಳಿಗೆ ಬಹಳ ಇಷ್ಟ.
ಆದರ...
3 ದಿನಗಳ ಹಿಂದೆ