tag:blogger.com,1999:blog-45279954327668999132023-07-18T10:37:07.473+05:30ಬರೆಯೋ ಆಸೆ...ಒಂದು ಸುಂದರವಾದ ಬರಹ ಉತ್ತಮವಾದ ಚಿತ್ರಪಟದಂತೆ...ಪ್ರಕೃತಿಯ ಒಂದು ರಮ್ಯ ದೃಶ್ಯದಂತೆ... ಬಲ್ಲವನೇ ಬಲ್ಲ ಬೆಲ್ಲದ ಸವಿಯ.
ಓದಿನಿಂದ ದೊರೆತ ರೋಮಾಂಚನವೇ ಬರೆಯಲು ಸ್ಫೂರ್ತಿ...
ಬರೆಯೋದಕ್ಕೇನೋ ಪ್ರಾರಂಭಿಸಿಬಿಟ್ಟಿದ್ದೇನೆ, ಇನ್ನು ತಲೆನೋವು ಓದುಗರಿಗೆ ಬಿಟ್ಟಿದ್ದು :)ಮುತ್ತುಮಣಿhttp://www.blogger.com/profile/02071788886580605152noreply@blogger.comBlogger39125tag:blogger.com,1999:blog-4527995432766899913.post-25137906284698961562015-01-22T21:45:00.000+05:302015-01-22T21:46:06.637+05:30ಶ್ರೀ ಶಾರದಾ ಸೊಲ್ಯೂಷನ್ಸ್.<div dir="ltr" style="text-align: left;" trbidi="on">
<br />
ಸ್ನೇಹಿತರೇ,<br />
<br />
ಈ ಬಾರಿ ನಾನು ಬರೆಯುತ್ತಿರುವುದು ಕ್ರಿಯೇಟಿವ್ ಲೇಖನವಾಗಲೀ ಪದ್ಯವಾಗಲೀ ಅಲ್ಲ, ಬದಲಿಗೆ ಇದೊಂದು ವಿನಂತಿ ಪತ್ರ. ಜಾಹೀರಾತು ಪತ್ರವೆನ್ನಲೂ ಅಡ್ಡಿಯಿಲ್ಲ.<br />
<br />
ಸುಮಾರು ಎರಡು ವರ್ಷಗಳ ಹಿಂದೆ ನಾನು ಒಂದು ಕನ್ಸಲ್ಟೆನ್ಸಿ ಮಾಡಬೇಕೆಂದು ನಿರ್ಧರಿಸಿ, ಆ ನಿಟ್ಟಿನಲ್ಲಿ ಕೆಲಸ ಮಾಡಲು ಶುರು ಮಾಡಿದ್ದೆ. ಈಗ ಅದರ ಬಗ್ಗೆ ಧೈರ್ಯವಾಗಿ ಎಲ್ಲರ ಮುಂದೆ ಮಾತನಾಡುವಂತಹ ಸಮಯ ಬಂದಿದೆ. ನನ್ನ ಪುಟ್ಟ ಕನ್ಸಲ್ಟೆನ್ಸಿಯ ಹೆಸರು 'ಶ್ರೀ ಶಾರದಾ ಸೊಲ್ಯೂಷನ್ಸ್'. <br />
<br />
<br />
ನನ್ನ ಈ ಕನ್ಸಲ್ಟೆನ್ಸಿಯಲ್ಲಿ ಭಾಷಾಂತರ, ಲಿಪ್ಯಂತರ, ಡಿಟಿಪಿ, ಪ್ರತಿಲೇಖನ (Transcription), ಸಂಪಾದನೆ, ಕರಡು ತಿದ್ದುವುದು ಈ ಮುಂತಾದ ಭಾಷಾ ಸೇವೆಗಳೆಲ್ಲವನ್ನು ಒದಗಿಸುತ್ತೇವೆ. ಸದ್ಯ, ನಾವು ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಈ ಮೂರು ಭಾಷೆಗಳಲ್ಲಿ ಸೇವೆಗಳನ್ನು ಕೊಡಬಲ್ಲೆವು.<br />
<br />
ನಿಮಗೇ ಈ ಸೇವೆ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಬಹುದು. ನಿಮ್ಮ ಸ್ನೇಹಿತರಿಗೆ ಇಂತಹ ಸೇವೆಗಳು ಬೇಕಾದಲ್ಲಿ ದಯವಿಟ್ಟು ಅವರಿಗೆ ನಮ್ಮ ಪರಿಚಯ ಮಾಡಿಕೊಡಿ.<br />
<br />
ಈ ಈಮೇಲ್ ವಿಳಾಸಕ್ಕೆ ನಿಮ್ಮ ಅಗತ್ಯಗಳ ಬಗ್ಗೆ ತಿಳಿಸಿ ಬರೆದರೆ, 24 ಗಂಟೆಗಳೊಳಗಾಗಿಯೇ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ - hemak291@gmail.com <br />
<br />
ಧನ್ಯವಾದಗಳು,<br />
<br />
ನಿಮ್ಮಲ್ಲೇ ಒಬ್ಬಳಾದ <br />
ಹೇಮಾ</div>
ಮುತ್ತುಮಣಿhttp://www.blogger.com/profile/02071788886580605152noreply@blogger.com0tag:blogger.com,1999:blog-4527995432766899913.post-7072707282641319392014-12-06T04:30:00.003+05:302014-12-06T04:30:56.459+05:30ನಾನು<div dir="ltr" style="text-align: left;" trbidi="on">
ನಾನೊಂದು ಹರಿಯುವ ನದಿ!<br />
ನನಗಿಲ್ಲ ದೊಣ್ಣೆನಾಯಕನಪ್ಪಣಿ!<br />
<br />
ನನ್ನ ಲಕ್ಷ್ಯವಿಹುದಲ್ಲಿ!<br />
ಮುತ್ತುಗಳಿಗೆ ಮುತ್ತಿಡುವಲ್ಲಿ!!<br />
<br />
ಬೆಟ್ಟವ ಹತ್ತು, ಬಣ್ಣವ ಹಚ್ಚು,<br />
ತಡೆ, ತಡೆ ನಿಲ್ಲು!<br />
<br />
ಅರೆ! ನೀವು ಬೊಬ್ಬಿರಿದೇನು ಫಲ!<br />
ಸಿಗಬಹುದೇನೋ ನಿಮಗೊಂದು ಸಾಧನೆಯೆಂಬ ಅಮಲ!<br />
<br />
ನಾ ನಿಲ್ಲುವಳಲ್ಲ, ಕಾಲಿಲ್ಲ! <br />
ಓ ಕೇಳಲಿಲ್ಲ ನಿಮ್ಮ ಧ್ವನಿ, ಕಿವಿಯಿಲ್ಲ!<br />
<br />
ನಾನೊಂದು ಹರಿಯುವ ನದಿ!<br />
ನನಗಿಲ್ಲ ದೊಣ್ಣೆನಾಯಕನಪ್ಪಣಿ!</div>
ಮುತ್ತುಮಣಿhttp://www.blogger.com/profile/02071788886580605152noreply@blogger.com0tag:blogger.com,1999:blog-4527995432766899913.post-10917127038055664922014-09-28T20:39:00.000+05:302014-09-28T20:39:21.847+05:30ಆಂಬುಲೆನ್ಸ್<div dir="ltr" style="text-align: left;" trbidi="on">
<br />
ನವ ನಾಗರಿಕನ ಸೃಷ್ಟಿ.<br />
<br />
ನವ ನವ ಜ್ಞಾನವ, ತಂತ್ರ ಜ್ಞಾನವ,<br />
ಅಳೆದೂ ಸುರಿದೂ, ಕಲೆಸೀ ಬೆರೆಸೀ,<br />
ಹಗಲನು ದುಡಿಸಿ, ರಾತ್ರಿಯ ಸವೆಸಿ<br />
ಇಲ್ಲಿದೆ ನೋಡಿ, ಒಂದೆಡೆ ಸೇರಿ,<br />
ಈತನ ಜ್ಞಾನ ಸಮಷ್ಟಿ!<br />
<br />
ಓಹೋ! ಇದು ಸಂಜೀವಿನಿ, ಪ್ರಾಣದಾಯಿನಿ<br />
ಮಾನವೀಯತೆಯ ಸಂಕೇತ<br />
ಓಡುತ ಬಂದರೆ ಪಕ್ಕಕ್ಕೆ ಸರಿವರು,<br />
"ಬಿಡಿ, ಬಿಡಿ, ಆಂಬುಲೆನ್ಸ್ ಬರ್ತಿದೆ,<br />
ನಮ್ ನಿಮ್ ಎಲ್ಲರ ಕರ್ತವ್ಯ!"<br />
<br />
------ <br />
<br />
ಹೌದೇ? ನಿಜವೇ? ನಾನೊಂದಿರಿ ವರವೇ?<br />
ಲೆಕ್ಕಕೆ ಸಿಗದ, ಕಂಡು ಮುಗಿಯದ,<br />
ಭೂಮಿಯ ಒಡಲಿಗೆ ನಾ ಬೇಕೆ?<br />
ಜಾಗ ಬಿಡಿ! ಜಾಗ ಬಿಡಿ! ಜಾಗ ಬಿಡಿ! ಜಾಗ ಬಿಡಿ!<br />
ಕೂಗುವುದೊಂದು ಹೆಚ್ಚೆ!!!!<br />
<br />
ಹೇ! ನವನೇ! ಎದೆಯುಬ್ಬಿಸಬೇಡ!<br />
ಕೈ ಮುಗಿದು ಜೈಕಾರ ಹಾಕಿಸಿಕೊಳ್ಳಬೇಡ!<br />
ನೀ ಕಾಣ ಬಯಸದ ನಿನ್ನದೇ ಇನ್ನೊಂದು ಮುಖ ನಾನು!<br />
<br />
<br />
<br /><br /></div>
ಮುತ್ತುಮಣಿhttp://www.blogger.com/profile/02071788886580605152noreply@blogger.com1tag:blogger.com,1999:blog-4527995432766899913.post-75317969351237421952014-06-28T21:44:00.001+05:302014-09-14T10:12:27.610+05:30ಫ್ರಿಜ್ನಲ್ಲಿಟ್ಟರೆ ಕೆಟ್ಟುಹೋಗತ್ತೆ........ :)<div dir="ltr" style="text-align: left;" trbidi="on">
<br />
ಫ್ರಿಜ್ಜಲ್ಲಿ ಇಟ್ರೆ ಕೆಟ್ಟೋಗತ್ತೆ.....! (ನಾನು ಆಕ್ಚುವಲಿ ಹೇಳಿದ್ದು, ಡೋಂಟ್ ಕೀಪ್ ಇಟ್ ಇನ್ ದ ಫ್ರಿಜ್!), ಅದೇನಾಯಿತು ಅಂದ್ರೆ ನಾನು ಆಫೀಸಿಗೆ ತೆಗೆದುಕೊಂಡು ಹೋಗುವ ಪುಳಿಯೋಗರೆ ಗೊಜ್ಜನ್ನ ತುಂಬಾ ಫೇಮಸ್ ಆಗಿ ಹೋಯ್ತು... ಸರಿ ನನಗೆ ಎಲ್ಲರಿಗೂ ಗೊಜ್ಜು ತೆಗೆದುಕೊಂಡು ಹೋಗಿ ಕೊಡುವ ಎಂಬ ಪರಮಾದ್ಭುತ ಯೋಚನೆ ಹೊಳೆಯಿತು. ಅವರು ಪದೇ ಪದೇ ಕೇಳುತ್ತಿದ್ದರು, 'ಹೌ ಡು ಯು ಡು ದಿಸ್ ಯಾ'?, 'ಕ್ಯಾನ್ ಯು ಶೋ ಅಸ್ ಒನ್ಸ್ ಹಿಯರ್?' ಮುಂತಾಗಿ. ನನಗೇನೂ ಗೊಜ್ಜು ಮಾಡಲು ಬರುವುದಿಲ್ಲ, ಆದರೆ ರೀತಿನೀತಿ ಗೊತ್ತು. ಅದನ್ನು ಒಂದು ಹದಕ್ಕೆ ಸರಿಯಾಗಿ ತರುವ ರೀತಿ ಗೊತ್ತಿಲ್ಲ. ವಿಧಾನವೂ ತುಂಬಾ ಸರಿಯಾಗಿ ಗೊತ್ತು ಎಂದು ಹೇಳಲಾರೆ. ಒಟ್ಟಿನಲ್ಲಿ, ಹುಣಸೇಹಣ್ಣು, ಕಡಲೆಬೀಜ, ಒಣಕೊಬ್ಬರಿ, ಕಡಲೆಕಾಯಿ ಎಣ್ಣೆ ಇಷ್ಟು ಬೇಕು ಎಂದು ಗೊತ್ತಿತ್ತು, ಅಷ್ಟನ್ನು ಕೊಂಡು ತಂದು ಅಮ್ಮನ ಕೈಯಲ್ಲಿ ಮಾಡಿಸಿಕೊಂಡು ತೆಗೆದುಕೊಂಡು ಹೋಗಿ ಕೊಟ್ಟೆ. ಕೊಟ್ಟು ಹೇಳಿದೆ, 'ಡೋಂಟ್ ಕೀಪ್ ಇಟ್ ಇನ್ ದ ಫ್ರಿಜ್'! ಅರೆ!! ಅವರು ಮತ್ತೆ ಮತ್ತೆ ಕೇಳಿದರು. "ವಾಟ್ ಆರ್ ಯು ಸೇಯಿಂಗ್? ಯೂ ಶುಡ್ ಕೀಪ್ ಇಟ್ ಆರ್ ನಾಟ್ ಕೀಪ್ ಇಟ್?" ನಾನು ಮನಸಿನಲ್ಲಿ, "ಇಲ್ಲಮ್ಮ ತಾಯಿ, ಫ್ರಿಜ್ನಲ್ಲಿ ಇಡಬೇಡ, ನೀರು ಬಿದ್ರೆ ಹಾಳಾಗುತ್ತೆ! ನಿಮಗೆ ಹೇಗಪ್ಪ ಹೇಳೋದು ಅಂದ್ಕೊಂಡು" ಬಾಯಲ್ಲಿ "ನೋ ನೋ ಬೇಲಾ, ಡೋಂಟ್ ಕೀಪ್ ಇಟ್ ಇನ್ ದ ಫ್ರಿಜ್, ದ ಥಿಂಗ್ ಈಸ್ ಇಟ್ ಶುಡ್ ನಾಟ್ ಕಮ್ ಇನ್ ಕಾಂಟ್ಯಾಕ್ಟ್ ವಿತ್ ವಾಟರ್, ಇಟ್ ಈಸ್ ಬೀಯಿಂಗ್ ಬಾಯಿಲ್ಡ್ ಸೋ ದಟ್ ಇಟ್ ಡಸ್ ನಾಟ್ ಹ್ಯಾವ್ ಎನಿ ವಾಟರ್ ಕಾಂಟೆಂಟ್, ಡೋಂಟ್ ವರಿ ಇಟ್ ವಿಲ್ ಸ್ಟೇ ಆ್ಯಸ್ ಲಾಂಗ್ ಆ್ಯಸ್ ಯೂ ವಾಂಟ್" ಎಂದು ಹೇಳಿ ಸಣ್ಣದೊಂದು ನಗೆ ಬೀರಿದೆ. "ಓ ಐ ಸೀ" ಉತ್ತರ ಬಂತು.<br />
<br />
ಇಲ್ಲಿಗೀ ಕತೆ ಮುಗಿಯಿತು.<br />
<br />
ಮುಗೀಲಿಲ್ಲ! ಇದೆಲ್ಲ ಆಗಿ ಸುಮಾರು ಎರಡು ವರ್ಷಗಳಾಗಿರಬಹುದು, ಆದರೆ, ನನಗೆ ಇನ್ನೂ ಕೊರೆಯತ್ತದೆ, ಅಬ್ಬಾ! ನಾವು ಇಂತಹ ಎಷ್ಟೊಂದು ಮಷಿನ್ನುಗಳ ಮೇಲೆ ಡಿಪೆಂಡ್ ಆಗಿಬಿಟ್ಟಿದ್ದೇವೆ! "ಹೊಸ ಹೊಸ ವಿಧಾನ ಬಂದಿರುವಾಗ, ಹಳೆಯದೇಕೆ ಬಳಸುತ್ತೀರಿ?" ಎಂದು ಟೀವಿಲಿ, ಪೇಪರಿನಲ್ಲಿ, ಅಲ್ಲಿ ಇಲ್ಲಿ ನಮ್ಮ ಜ್ಞಾನೇಂದ್ರಿಯಗಳಿಗೆ ಬೀಳುತ್ತಲೆ ಇರುತ್ತವೆ. ಅತಿ ಹೆಚ್ಚು 'ಅಡ್ವಾಸ್ಡ್' ಯಾವುದು ಎಂಬುದರ ಹಿಂದೆ ಬಿದ್ದು ಬಿಟ್ಟಿದ್ದೇವೆ.<br />
<br />
ನಮ್ಮ ಉಪ್ಪಿನಕಾಯೇ ಆಗಲಿ, ಮೇಲೆ ಹೇಳುವಂತಹ ಗೊಜ್ಜುಗಳೇ ಆಗಲಿ, ಹಪ್ಪಳ - ಸಂಡಿಗೆಗಳೇ ಆಗಲಿ, ಒಣ ದ್ರಾಕ್ಷಿಯೇ ಆಗಲಿ, ನಮ್ಮ ಪೂರ್ವಜರು ಪ್ರಕೃತಿಯನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡು ಇದನ್ನೆಲ್ಲಾ ಮಾಡಿಕೊಂಡು ಬಂದಿದ್ದಾರೆ. ನೀರಿನ ಹಾಗೂ ಗಾಳಿಯ ಜೊತೆಗಿನ ವಸ್ತುಗಳ ಒಡನಾಟದ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ! ಅಂದ ಹಾಗೆ, ನಮ್ಮ ಚಪಾತಿಗಳು 'ಆಶೀರ್ವಾದ ಗೋಧಿಹಿಟ್ಟು' ಬರುವ ಮೊದಲೂ ಮೆತ್ತಗಿರುತ್ತಿತ್ತು. ಅದನ್ನು ಪದರ ಪದರವಾಗಿ ಮಾಡಿ, ಗಾಳಿಗೆ ಅವಕಾಶ ಮಾಡಿಕೊಡುವ ರೀತಿ ಎಷ್ಟು ಅದ್ಭುತವಾಗಿದೆ! ಕೆಲವು ಕಡೆ ಚಪಾತಿಯನ್ನು ಗಟ್ಟಿಯಾಗಿ ಮಾಡುತ್ತಾರೆ, ಅದು ಬೇರೆಯೇ ವಿಷಯ ಎಂದುಕೊಳ್ಳುತ್ತೇನೆ. ಅದಕ್ಕೆ ಸ್ಥಳೀಯ ಕಾರಣವೇನಾದರೂ ಇರಬಹುದು ಅನ್ನಿಸುತ್ತೆ ನನಗೆ. ಉಪಯೋಗಕ್ಕಿಂತ 'ಸೈಡ್ ಎಫೆಕ್ಟ್'ಗಳೇ ಜಾಸ್ತಿಯಾಗಿದ್ದರೂ, ನಮ್ಮ ಪೂರ್ವಜರ ವಿದ್ಯೆ ನಮಗೆ ತಿಳಿಯದೇ ಹೋದದ್ದರಿಂದ, ಜಾಹೀರಾತುಗಳಿಗೆ ತಲೆಬಾಗಿ ಬಂದುದನ್ನು ಸ್ವೀಕರಿಸುತ್ತಿದ್ದೇವೋ ಏನೋ!!!!<br />
<br />
ಹೇಗಪ್ಪಾ ಇದರಿಂದ ಹೊರಗೆ ಬರುವುದು! <br />
<br />
<br /></div>
ಮುತ್ತುಮಣಿhttp://www.blogger.com/profile/02071788886580605152noreply@blogger.com2tag:blogger.com,1999:blog-4527995432766899913.post-57197129693971717582012-09-05T15:08:00.000+05:302012-09-05T15:08:47.423+05:30ಭಯದ ಭಯ<div dir="ltr" style="text-align: left;" trbidi="on">
<br />
ಭಯವೆಂದರೆ ಭಯ
<br />
ನನಗೆ, ಭಯವೆಂದರೆ ಭಯ
<br />
<br />
ಭಯ ಭೂತ, ಭಯ ಪಿಶಾಚಿ,
<br />
ಬಂದು ಮೆತ್ತಿಕೊಂಡಿತೆಂದರೆ
<br />
ಬಿಡದೇ ಬಿಡದು
<br />
<br />
ಟ್ರ್ಯಾಕಿನಲ್ಲಿ ಎಲ್ಲರಿಗೂ ಮುಂದೆ
<br />
ಓಡಬೇಕಾದವನ ಕಾಲು
<br />
ಹೂತು ಹೋಗಿ, ಮೇಲೇಳದಂತೆ
<br />
ಮಾಡಿತ್ತು ಭಯ
<br />
<br />
ಪರೀಕ್ಷೆಯಲ್ಲಿ ಪುಟಗಳನ್ನು
<br />
ತುಂಬಿಸಬೇಕಾಗಿದ್ದವನ ಕೈ
<br />
ಜಡಹಿಡಿದು ಬೀಳುವಂತೆ ಮಾಡಿತ್ತು ಭಯ
<br />
<br />
ತನ್ನ ಮೇಲೆ ಹರಿಹಾಯುವ ಬಾಸಿನ
<br />
ಮುಖಕ್ಕುಗಿದು ಹೊರನಡೆಯುವ ರೋಷವನ್ನು
<br />
ಐಸ್ ಕ್ಯೂಬಿನಂತೆ ತಣ್ಣಗೆ ಮಾಡಿತ್ತು ಭಯ
<br />
<br />
ಅದಕ್ಕೇ ನನಗೆ ಭಯವೆಂದರೆ
<br />
ಬಹಳ ಭಯ
<br />
ದೂರ ಓಡಿದ್ದೇನೆ ಅದರಿಂದ
<br />
ನನ್ನ ಹತ್ತಿರವೂ ಸುಳಿಯಗೊಡದೆ
<br />
<br />
<br />
<br />
<br />
<br />
<br />
<br /></div>
ಮುತ್ತುಮಣಿhttp://www.blogger.com/profile/02071788886580605152noreply@blogger.com1tag:blogger.com,1999:blog-4527995432766899913.post-81373338648170441172012-09-05T15:07:00.000+05:302012-09-05T15:07:08.577+05:30ಅತಿ ಜಾಣ<div dir="ltr" style="text-align: left;" trbidi="on">
ಹ್ಞೂ ತಳ್ಳು! ಇನ್ನೊಂದು ಸ್ವಲ್ಪ
<br />
ಹ್ಞಾ ಹಾಗೇ! ಪರವಾಗಿಲ್ಲಪ್ಪ
<br />
<br />
ನಾನು ಅಂದುಕೊಂಡ ಹಾಗೆ ಸಾಗುತ್ತಿದೆ
<br />
ಎಲ್ಲಾ, ಈ ಗೋಡೆ ಬಿದ್ದು ಹೋಗಲು,
<br />
ಎಷ್ಟು ಲೆಕ್ಕ ಹಾಕಿದ್ದೇನೆ ನಾನು?
<br />
<br />
ಇಟ್ಟಿಗೆಗಳೆಷ್ಟು? ಮರಳೆಷ್ಟು?
<br />
ನೀರೆಷ್ಟು?
<br />
ಎತ್ತರ, ಆಳ, ಅಗಲ
<br />
ಎಲ್ಲವನ್ನು ಅರಿದು ಕುಡಿದು ಬಿಟ್ಟಿದ್ದೇನೆ...
<br />
<br />
ಅದರ ಮುಂದೆ ನನ್ನ ಶಕ್ತಿ ಎಷ್ಟು?
<br />
ಹೆಂಗಸರಿಗೆಷ್ಟು? ಗಂಡಸರಿಗೆಷ್ಟು?
<br />
ತಳ್ಳಲು ಬೇಕಾದ ಶಕ್ತಿಯೆಷ್ಟು?
<br />
ದಿನೇ ದಿನೇ ನನ್ನಲ್ಲಿ ಕುಗ್ಗುವ ಶಕ್ತಿಯೆಷ್ಟು?
<br />
ಅದನ್ನು ಸರಿಪಡಿಸಲು ಬೇಕಾದ ಆಳುಗಳೆಷ್ಟು?
<br />
ಹ್ಞಾ! ಆಯ್ತು. ಈ ವರುಷ ಮೂರು
<br />
ಮಕ್ಕಳು! ಇನ್ನು ಈ ಗೋಡೆ
<br />
ನಮ್ಮೆಲ್ಲರ ಕೈ ಭಾರಕ್ಕೆ ಅದರಿ ನೆಲಕ್ಕುರುಳುವುದೇ!
<br />
<br />
ಹ್ಹ ಹ್ಹ ಹ್ಹ
<br />
<br />
ಬಂದಿದ್ದ ಒಬ್ಬ ಹಾರೆ ಗುದ್ದಲಿ ಹಿಡಿದು
<br />
ಗೋಡೆಯನ್ನು ಬೀಳಿಸುತ್ತೇನೆಂದು
<br />
ಅಳೆದು ಸುರಿದು ನೋಡಿ ಪರಕಿ ಹೇಳಿಬಿಟ್ಟೆ
<br />
ನಿನ್ನ ಬಡಕಲು ಕೊಡಲಿಯೆಲ್ಲಿ? ಈ ದೊಡ್ಡ ಗೋಡೆಯೆಲ್ಲಿ?
<br />
ಬಯ್ದು ಓಡಿಸಿಬಿಟ್ಟೆ, ದಡ್ಡನನ್ನ...
<br />
<br />
ಹ್ಞೂ ತಳ್ಳಿ! ಇನ್ನೊಂದು ಸ್ವಲ್ಪ
<br />
ಹ್ಞಾ ಹಾಗೇ! ಇನ್ನೇನು ಬಿದ್ದೇ ಬಿಡುತ್ತದೆ...
<br />
<br />
<br /></div>
ಮುತ್ತುಮಣಿhttp://www.blogger.com/profile/02071788886580605152noreply@blogger.com0tag:blogger.com,1999:blog-4527995432766899913.post-84580305785861300972012-09-04T21:47:00.000+05:302012-09-04T21:47:50.203+05:30ವಿನಂತಿ<div dir="ltr" style="text-align: left;" trbidi="on">
<br />
ನಾನು ತಿಳಿಯದೇ ಮಾಡಿದ ತಪ್ಪನ್ನು,<br />
ನೀನು ಹಟಕ್ಕೆ ಬಿದ್ದು ಮಾಡುವುದೇನು?<br />
ನಾನು ಕಣ್ಣಿದ್ದೂ ಕುರುಡಾದೆ, ಕಿವಿಯಿದ್ದು ಕೇಳದಾದೆ,<br />
ಅಂತರಂಗದೊಳಕ್ಕೆ, ನಿನ್ನನ್ನು ಕೂಗಿ ಕರೆಯುವೆ ಎಂದುಕೊಂಡಾಗ,<br />
ನೀನು ಹೃದಯವಿದ್ದೂ.......<br />
<br />
ಪ್ರೀತಿ ಎನ್ನುವುದು,<br />
ಅಂಗಳದಲ್ಲಿ ಬಂದು ಕೂತ ಹಕ್ಕಿಯೇ?<br />
ಈಗಿದ್ದು, ಈಗಿಲ್ಲವೆಂಬುದು ಉಂಟೇ?<br />
ಕಣ್ಣಾಮುಚ್ಚಾಲೆಯೇ?<br />
<br />
ಸರಿ ತಪ್ಪುಗಳ ವಿವೇಚನೆಗೆ ನಾನು ಎಷ್ಟರವಳೂ ಅಲ್ಲ,<br />
ಹಠ ಮಾಡಿ ಗೆಲ್ಲುವುದೆಂಬ ಪ್ರೀತಿಯೂ ಇಲ್ಲ,<br />
<br />
ಗೆಳೆಯಾ, ಇದು ನಿನಗೆ ಹಿತವೇ?<br />
<br /></div>
ಮುತ್ತುಮಣಿhttp://www.blogger.com/profile/02071788886580605152noreply@blogger.com0tag:blogger.com,1999:blog-4527995432766899913.post-91529279197611924592012-03-12T12:21:00.005+05:302012-03-12T13:53:25.057+05:30ಸಹಾಯ ಬೇಕು!!ಹಾಯ್,<br /><br />ಎಷ್ಟೊಂದು ದಿನ ಆದಮೇಲೆ ಬರ್ತಾ ಇದೀನಿ, ಆದರೆ ನಿಮಗೆಲ್ಲಾ ಏನಾದ್ರೂ ಓದೋಕೆ ಕೊಡೋಣ ಅಂದ್ರೆ ನನ್ನ ಕೈಲಿ ಸದ್ಯಕ್ಕೆ ಆಗ್ತಿಲ್ಲ. ಬದಲಾಗಿ ನನಗೆ ನಿಮ್ಮೆಲ್ಲರಿಂದ ಒಂದು ಸಹಾಯ ಬೇಕು.<br /><br />೧ರಿಂದ ೫ನೇ ತರಗತಿಯ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡಲು ಹೊಸ ಹೊಸ ವಿಧಾನಗಳೇನಾದರೂ ಬಂದಿವೆಯೇ? ಮಕ್ಕಳಿಗೆ ಬಹಳ ಮೋಜು ಎನಿಸಬೇಕು, ಅವರ ಭಾಷಾ ಸಾಮರ್ಥ್ಯ ಹೆಚ್ಚಾಗಬೇಕು. ಅಂತಹ ಸಂಸ್ಥೆಗಳೇನಾದರೂ ತಿಳಿದಿವೆಯೇ? ತಿಳಿದಿದ್ದರೆ ನನಗೆ ಅಂತಹ ಸಂಸ್ಥೆ ಅಥವಾ ವ್ಯಕ್ತಿಗಳ ಪರಿಚಯ ಮಾಡಿಕೊಡಿ.<br /><br />ನಾನು ಹೀಗೇಕೆ ಕೇಳುತ್ತಿದ್ದೇನೆಂದು ತಿಳಿದುಕೊಳ್ಳಲು ಈ ಲಿಂಕ್ ನೋಡಿ. ನಾನು ಈ ಸಂಸ್ಥೆಯ ಜೊತೆ ಸದ್ಯ ಪ್ರಾಜೆಕ್ಟ್ ಒಂದನ್ನು ಮಾಡುತ್ತಿದ್ದೇನೆ :)<br /><br />www.hlc.org.in<br /><br />ಹೇಮಾಮುತ್ತುಮಣಿhttp://www.blogger.com/profile/02071788886580605152noreply@blogger.com0tag:blogger.com,1999:blog-4527995432766899913.post-25356516107869702552010-03-19T22:21:00.002+05:302010-03-19T22:24:33.692+05:30ಒಂದು ಹೆಸರಿಡದ ಕವನಸಾಲು ದೀಪಗಳ ಹಚ್ಚುತಿದೆ<br />ಕಾಣದ ಸುಂದರ ಕೈಯೊಂದು<br />ರಂಗವಲ್ಲಿಯ ಚುಕ್ಕೆಗಳನಿಡುತಿದೆ;<br />ತನ್ನ ಚಂಚಲ ನಡಿಗೆಯ <br />ಹೆಜ್ಜೆಹೆಜ್ಜೆಯನು ಮೂಡಿಸುತಿದೆಮುತ್ತುಮಣಿhttp://www.blogger.com/profile/02071788886580605152noreply@blogger.com11tag:blogger.com,1999:blog-4527995432766899913.post-46639048465858969512010-03-05T12:54:00.002+05:302010-03-05T12:57:07.503+05:30ಅತಿ ಜಾಣರುಕ್ಮಿಣಿ ಏನು ಮಾಡಿದರೂ ಎದ್ದು ಹೊರಡಲಿಲ್ಲ! ಬಹಳ ದಿನಗಳಾದ್ದರಿಂದ ಆ ಮೂಡ್ ಸಹ ಹೋಗಿಬಿಟ್ಟಿದೆ. ಸದ್ಯಕ್ಕೆ ಹಳೆಯದೊಂದು ಕವನ, ನಿಮ್ಮ ಮುಂದೆ...<br /><br />ಹ್ಞೂ ತಳ್ಳು! ಇನ್ನೊಂದು ಸ್ವಲ್ಪ<br />ಹ್ಞಾ ಹಾಗೇ! ಪರವಾಗಿಲ್ಲಪ್ಪ<br /><br />ನಾನು ಅಂದುಕೊಂಡ ಹಾಗೆ ಸಾಗುತ್ತಿದೆ <br />ಎಲ್ಲಾ, ಈ ಗೋಡೆ ಬಿದ್ದು ಹೋಗಲು, <br />ಎಷ್ಟು ಲೆಕ್ಕ ಹಾಕಿದ್ದೇನೆ ನಾನು?<br /><br />ಇಟ್ಟಿಗೆಗಳೆಷ್ಟು? ಮರಳೆಷ್ಟು?<br />ನೀರೆಷ್ಟು?<br />ಎತ್ತರ, ಆಳ, ಅಗಲ <br />ಎಲ್ಲವನ್ನು ಅರಿದು ಕುಡಿದು ಬಿಟ್ಟಿದ್ದೇನೆ...<br /><br />ಅದರ ಮುಂದೆ ನನ್ನ ಶಕ್ತಿ ಎಷ್ಟು?<br />ಹೆಂಗಸರಿಗೆಷ್ಟು? ಗಂಡಸರಿಗೆಷ್ಟು?<br />ತಳ್ಳಲು ಬೇಕಾದ ಶಕ್ತಿಯೆಷ್ಟು?<br />ದಿನೇ ದಿನೇ ನನ್ನಲ್ಲಿ ಕುಗ್ಗುವ ಶಕ್ತಿಯೆಷ್ಟು?<br />ಅದನ್ನು ಸರಿಪಡಿಸಲು ಬೇಕಾದ ಆಳುಗಳೆಷ್ಟು?<br />ಹ್ಞಾ! ಆಯ್ತು. ಈ ವರುಷ ಮೂರು<br />ಮಕ್ಕಳು! ಇನ್ನು ಈ ಗೋಡೆ<br />ನಮ್ಮೆಲ್ಲರ ಕೈ ಭಾರಕ್ಕೆ ಅದರಿ ನೆಲಕ್ಕುರುಳುವುದೇ!<br /><br />ಹ್ಹ ಹ್ಹ ಹ್ಹ<br /><br />ಬಂದಿದ್ದ ಒಬ್ಬ ಹಾರೆ ಗುದ್ದಲಿ ಹಿಡಿದು<br />ಗೋಡೆಯನ್ನು ಬೀಳಿಸುತ್ತೇನೆಂದು<br />ಅಳೆದು ಸುರಿದು ನೋಡಿ ಪರಕಿ ಹೇಳಿಬಿಟ್ಟೆ<br />ನಿನ್ನ ಬಡಕಲು ಕೊಡಲಿಯೆಲ್ಲಿ? ಈ ದೊಡ್ಡ ಗೋಡೆಯೆಲ್ಲಿ?<br />ಬಯ್ದು ಓಡಿಸಿಬಿಟ್ಟೆ, ದಡ್ಡನನ್ನ...<br /><br />ಹ್ಞೂ ತಳ್ಳಿ! ಇನ್ನೊಂದು ಸ್ವಲ್ಪ<br />ಹ್ಞಾ ಹಾಗೇ! ಇನ್ನೇನು ಬಿದ್ದೇ ಬಿಡುತ್ತದೆ...ಮುತ್ತುಮಣಿhttp://www.blogger.com/profile/02071788886580605152noreply@blogger.com9tag:blogger.com,1999:blog-4527995432766899913.post-90664657359953268372009-12-19T13:00:00.024+05:302009-12-19T13:53:05.177+05:30ಇದನ್ನು ಸಣ್ಣ ಕಥೆ ಎನ್ನಬಹುದೋ, ’ಒಂದು ಪ್ರಸಂಗ’ ಎನ್ನಬಹುದೋ ನನಗೆ ತಿಳಿಯುತ್ತಿಲ್ಲ. ನಾನು ಮನಸ್ಸಿನಲ್ಲಿ ಅಂದುಕೊಂಡಂತೆ ಪೇಪರಿನ ಮೇಲೆ ಬರಲಿಲ್ಲವಾದ್ದರಿಂದ ಇದಕ್ಕೊಂದು ಟೈಟಲ್ ಕೊಡುವ ಗೋಜಿಗೂ ಹೋಗಲಿಲ್ಲ. ಏನೇ ಬರೆದರೂ, ಹಾಳು-ಮೂಳಾದರೂ ಬ್ಲಾಗಿನಲ್ಲಿ ಹಾಕಲೇಬೇಕಂದುಕೊಂಡಿದ್ದೇನೆ, ಏನಾದರೂ ಪ್ರತಿಕ್ರಿಯೆ ಸಿಗುತ್ತದೆಂಬ ಕಾರಣಕ್ಕೆ. ಹಾಗಾಗಿ ಇದನ್ನೂ ಹಾಕುತ್ತಿದ್ದೇನೆ .<br /><br /> ------- <br /><br />"ಹೌ ಟು ಇಂಪ್ರೆಸ್ ಯುವರ್ ಬಾಸ್?" (ನಿಮ್ಮ ಬಾಸ್ ಮನವೊಲಿಸುವುದು ಹೇಗೆ?) ಪುಸ್ತಕವನ್ನು ಓದುತ್ತಿದ್ದ ಭಾವನಾಗೆ ಇದ್ದಕ್ಕಿದ್ದ ಹಾಗೆ ಅತ್ತೆ ತನ್ನನ್ನು ಕರೆಯುತ್ತಿರುವುದು ಕೇಳಿಸಿ ಸಿಡಿಮಿಡಿಯಾಯಿತು. ಎದ್ದು ಹೋಗಿ ಅವರ ಮುಂದೆ ನಿಂತುಕೊಂಡಳು, ಮಾತಾಡದೆ. ಅವರ ಠೀವಿಯೇನು ಕಡಿಮೆಯೇ? ಅವಳು ಬಂದುದನ್ನು ಗಮನಿಸಿದರೂ, ಅವಳ ಕಡೆ ತಿರುಗದಂತೆ, ಅಲ್ಲಿದ್ದ ತುರೆಮಣೆಯನ್ನೂ, ಕೆಳಕ್ಕೊಂದು ತಟ್ಟೆಯನ್ನೂ ಅವಳ ಕಡೆಗೆ ಸರಿಸಿ "ಈ ಒಪ್ಪು ತುರಿದಿಡು" ಎಂದರು. <br />"ನನಗೆ ಈ ರೀತಿ ಕೊಬ್ಬರಿ ತುರಿಯೋಕೆ ಬರೋಲ್ಲ ಅತ್ತೆ!"<br />"ಇದನ್ನ ಮೂರು ತಿಂಗಳಿಂದ ಹೇಳ್ತಿದ್ದೀಯಲ್ಲಾ?" ಅತ್ತೆಯ ಸ್ವರ ಸ್ವಲ್ಪ ಜೋರಾಯಿತು. ಭಾವನಾ ಜಗ್ಗದೇ ನಿಂತಿದ್ದಳು. ಅತ್ತೆ ಅವಳ ಕಡೆ ನೋಡದೆ ಮಾತನಾಡುತ್ತಿದ್ದದ್ದು ಅವಳಿಗೆ ಅಡ್ವಾಂಟೇಜೇ ಆಗಿತ್ತು. "ಸರಿ, ಅದೇನು ಮಾಡ್ಕೋತಿದ್ಯೋ ಮಾಡ್ಕೋ ಹೋಗು" ಅಂದರು ಅತ್ತೆ. ಇವಳು ಅಷ್ಟೇ ಸಾಕೆಂದು, ಮತ್ತೆ ರೂಮಿಗೆ ಬಂದು ತನ್ನ ಪುಸ್ತಕದಲ್ಲಿ ಮುಳುಗಿದಳು. "ಕೊಬ್ಬರಿ ತುರಿಯೋಕೆ ಬರದಿದ್ಮೇಲೆ, ಈ ಮನೇಗೆ ಕಾಯಿ ಯಾಕೆ ತರ್ತೀರಿ? ಒಣಕಲು ಬ್ರೆಡ್ಡು, ಸುಡುಗಾಡು ಸಾಸನ್ನೇ ಮೂರು ಹೊತ್ತೂ ಮುಕ್ರಿ" ಎಂದು ಅತ್ತೆ ಇನ್ನೊಂದಿಷ್ಟು ಬಡಬಡಿಸಿದರು. ನಿಧನಿಧಾನವಾಗಿ ಅವರ ಬೈಗುಳ ಮನಸ್ಸಿನಲ್ಲೇ ನಡೆಯತೊಡಗಿತು. <br /><br />ಅದಾಗಲೇ, ಮೇಲೆ ಹೋಗಿ ತನ್ನ ರೂಮಿನಲ್ಲಿ ಕೂತ ಭಾವನಾಗೇ ಇದ್ಯಾವುದೂ ಕೇಳಿಸಲಿಲ್ಲ. ಅವಳ ಮನಸಿನಲ್ಲಿ ತರಾವರಿ ಬೈಗುಳಗಳು ಮೇಲೇಳುತ್ತಿದ್ದವು. "ಇವರಿಗೆ ನಾನು ಆರಾಮಾಗಿದ್ದರೆ ಸಂಕಟ", "ವಾರಾಪೂರ್ತಿ ದುಡಿತೇನೆಂಬುದು ಮನಸ್ಸಿಗೆ ನಾಟುವುದೇ ಇಲ್ಲ"... ಸುಮಾರು ಹೊತ್ತು ಬುಸುಬುಸು ಎನ್ನುತ್ತಿದ್ದ ಮನಸ್ಸು ಕ್ರಮೇಣ ನಿರಾಳವಾಯಿತು. ಪುಸ್ತಕದಲ್ಲಿ ನಾಲ್ಕನೇ ಅಧ್ಯಾಯ ಮುಗಿಯಿತಾದ್ದರಿಂದ, ಐದನೇ ಅಧ್ಯಾಯವನ್ನು ಶುರುಮಾಡಿ ಅರ್ಧ ಮಾಡುವುದು ಬೇಡವೆಂದು ಅಷ್ಟಕ್ಕೇ ಮುಚ್ಚಿಟ್ಟು ಸ್ನಾನಕ್ಕೆ ನಡೆದಳು. <br /><br /> ***<br /><br />ಗೌರಿ, ನೆನ್ನೆ ತಾನೆ ನಾನು ಕಾಯಿ ತಂದಿದ್ದು? ಗೌರಿ... ಗೌರಿ... ಅಡುಗೆಮನೆಯಿಂದ ಯಾವ ಉತ್ತರವೂ ಬರದಿದ್ದರಿಂದ ಕೃಷ್ಣಪ್ಪನವರು ಕೊಂಚ ಹೊತ್ತು ಸುಮ್ಮನಿದ್ದರು. ’ಬೆಳಗ್ಗೇನೆ ಅಲ್ಲವೇ ಕಾಯಿ ಒಡೆದ ಶಬ್ದ ಕೇಳಿಸಿದ್ದು ನನಗೆ?’ ಎಂದು ನೆನೆಪಿಸಿಕೊಂಡು ಮತ್ತೆ ಕೂಗಿದರು. ಗೌರೀ... ಅಡುಗೆಮನೆಯಿಂದ ಉತ್ತರ ಬರಲಿಲ್ಲ. ಅಷ್ಟರಲ್ಲಿ ಕೆಳಗೆ ಬಂದ ಭಾವನಾಳನ್ನು ಕೇಳಿದರು ,"ಇವತ್ತು ಬೆಳಗ್ಗೆ ಕಾಯಿ ಒಡೆದ್ರೀ ಅಲ್ಲವೇ?", "ಹೌದು ಮಾವ, ಒಡೆದ ಹಾಗೆ ಶಬ್ದ ಕೇಳಿಸ್ತು" ಎಂದಷ್ಟೇ ಹೇಳಿ ಹೊರಕ್ಕೆ ನಡೆದಳು ಭಾವನಾ. ಅಡುಗೆಮನೆಯಿಂದ ಬಿರುಗಾಳಿಯಂತೆ ನುಗ್ಗಿ ಅತ್ತೆ, "ಹೌದು, ಕಾಯಿ ಒಡೆದೆ. ಇವತ್ತು ಹಾಕಲಿಲ್ಲ. ಒಂದಿನಕ್ಕೇನು ಪರವಾಗಿಲ್ಲ, ತಿನ್ನಿ" ಎಂದು ಹೋದರು. ಕೊಬ್ಬರಿತುರಿಯಿಲ್ಲದೇ ತಟ್ಟೆಯಲ್ಲಿದ್ದ ಉಪ್ಪಿಟ್ಟು ಹರಳು-ಹರಳಾಗಿ ಹೋಗಿತ್ತು. ಸವೆದುಹೋದ ಹಲ್ಲನ್ನಿಟ್ಟುಕೊಂಡು, ಅದನ್ನು ಖಾಲಿಮಾಡುವುದು ಹೇಗೆಂಬುದೇ ಈಗ ದೊಡ್ಡ ಸಮಸ್ಯೆಯಾಯಿತು. <br /><br />ಮತ್ತೆರಡು ಕ್ಷಣಕ್ಕೇ ಅತ್ತೆಗೆ ತನ್ನ ಪತಿದೇವರ ಕಷ್ಟ ನೆನಪಾಯಿತು. "ಮಜ್ಜಿಗೆ ಇವತ್ತು ಚೆನ್ನಾಗಿ ಹೆಪ್ಪುಕೊಂಡಿದೆ, ಇದನ್ನೇ ಹಾಕ್ತೀನಿ" ಎಂದುಕೊಡು ಬಂದ ಅತ್ತೆ ತಲೆಯೆತ್ತದೆ ಒಂದೆರಡು ಸೌಟು ಗಟ್ಟಿ ಮೊಸರನ್ನು ಬಡಿಸಿದರು. ನೀರು ತುಂಬಿದ ಕಣ್ಣುಗಳನ್ನು ಮೇಲೆತ್ತಲಾರದೆ ಪುನಃ ಅಡುಗೆಮನೆಯೊಳಕ್ಕೆ ಸೇರಿಕೊಂಡರು.ಮುತ್ತುಮಣಿhttp://www.blogger.com/profile/02071788886580605152noreply@blogger.com18tag:blogger.com,1999:blog-4527995432766899913.post-68115090888353574712009-11-15T18:09:00.030+05:302009-11-21T23:03:44.995+05:30ರುಕ್ಮಿಣಿಯ ಅಜ್ಜಿ ಮನೆ - ೧೧ಅತ್ತೆ ಪಟಕ್ಕನೆ, "ನಮ್ಮ ರುಕ್ಕೂ ಮಾಡದ ಕೆಲಸವೇ ಇಲ್ಲ, ಕೈ ಇಟ್ಟರೆ ಮುಗೀತು, ಮುಗಿಸಿಯೇ ತೀರೋದು. ನೀನು ಹೊರಡು. ತಲೆನೋವು ಅಂತಿದ್ದೆಯಲ್ಲಾ" ಎಂದರು. ರುಕ್ಕೂಗೆ ಸುಳಿಯಲ್ಲಿ ಸಿಕ್ಕ ಅನುಭವವಾಗತೊಡಗಿತು. <br /><br />"ಎಲ್ಲಿದೆ ಅತ್ತೆ ಒರಳು?" ಎಂದು ಕೇಳಿಕೊಂಡು, ಕೆಲಸಕ್ಕೆ ಹಚ್ಚಿಕೊಂಡಳು. ಆ ಒರಳು ತೊಳೆದು ಎಷ್ಟು ದಿನವಾಯ್ತೋ? ರುಬ್ಬುವುದಕ್ಕೆ ಶುರುಮಾಡುವ ಮೊದಲೇ ರುಕ್ಕೂಗೆ ಬೆನ್ನುನೋವು ಬರತೊಡಗಿತ್ತು. "ಅತ್ತೇ, ದಿನಾ ಸೋಫಾ ಮೇಲೆ ಕೂತು ಕೂತು ಜಡ್ಡು ಹಿಡಿದುಹೋಗಿತ್ತು. ಈಗ ಒಳ್ಳೆ ಎಕ್ಸಸೈಸ್ ಆಗ್ತಿದೆ" ಎಂದಳು. ಅತ್ತೆ "ನೀವು ಬಿಡಮ್ಮಾ" ಅಂದದ್ದಕ್ಕೆ ಏನು ಅರ್ಥವೋ ತಿಳಿಯದೇ ಕಕ್ಕಾಬಿಕ್ಕಿಯಾದಳು.<br /><br />"ಅಡಿಗೆ ಆಗಿದ್ಯಂತಾ ರುಕ್ಕೂ?" ಕೊಟ್ಟಿಗೆಯಿಂದ ಅಜ್ಜಿಯ ದನಿ ಕೇಳಿಸಿತು. ರುಕ್ಕೂ ಬಾಯಿಬಿಡುವ ಮೊದಲೇ ಅತ್ತೆ, "ಆಗತ್ತೆ ಇರಿ ನಿಧಾನಕ್ಕೆ, ಅವರಿನ್ನೂ ಬಂದಿಲ್ಲವಲ್ಲಾ?" ಎಂದರು. ರುಕ್ಕೂ ವಿಧಿಯಿಲ್ಲದೇ ಬಾಯಿಮುಚ್ಚಿಕೊಂಡಳು.<br /><br />ರುಬ್ಬಿ ಮುಗಿಸಿ, ಒರಳು ತೊಳೆದು ಮೇಲೇಳುವ ಹೊತ್ತಿಗೆ ಬೆನ್ನು ಸ್ವಲ್ಪ ಸಡಿಲವಾದಂತೆ ತೋರಿತು. ರುಕ್ಕೂಗೆ ಖುಷಿಯಾಯಿತು. ಅತ್ತೆ "ನೀವು ಪಲಾವು ಮಾಡಿಕೊಳ್ಳಿ, ರಾಗಿ ಹಿಟ್ಟು ಇದೆಯಾ" ಎಂದಳು. ಮತ್ತೇಕೋ ಬೇಡವೆನಿಸಿ, "ರಾತ್ರಿಗೆ ನಾನೇ ಮುದ್ದೆ ಮಾಡ್ತೀನಿ" ಎಂದು ಅಲ್ಲಿಂದ ಹೊರಟಳು. "ಮತ್ತೆ ಕೊಟ್ಟಿಗೆಗಾ?" ಎಂಬ ಪ್ರಶ್ನೆಗೆ "ಇಲ್ಲಾ ಅತ್ತೆ, ನನ್ನ ಹಳೇ ಫ್ರೆಂಡುಗಳನ್ನೆಲ್ಲಾ ನೋಡಿಕೊಂಡು ಬರ್ತೀನಿ" ಎಂದಳು. "ಲಲಿತಾ ಹಾಗೇ ಒಂದು ರೌಂಡು ಹೋಗಿ ಬರೋಣ ಬರ್ತೀಯಾ?" ಎಂದಳು. ಏನೂ ಉತ್ತರ ಬರಲಿಲ್ಲ, ಅತ್ತಿತ್ತ ತಿರುಗಿದ ಮೇಲೆ, ಲಲಿತಾ ರೂಮಲ್ಲಿ ಮಲಗಿದ್ದಿದ್ದು ಕಾಣಿಸಿತು. ಪಟ್ಟು ಬಿಡದೇ ಎಬ್ಬಿಸಿಕೊಂಡು ಹೊರಟಳು. "ಗುಣಾ ಎಲ್ಲೇ?" ಎಂದು ಕೂಗಿಡುತ್ತಾ ಅವಳನ್ನೂ ಸೇರಿಸಿಕೊಂಡಳು. ಗುಣಾಗೆ ಇವಳು ಕರೆದದ್ದಕ್ಕೆ ಅಲ್ಪ ಸ್ವಲ್ಪ ಖುಷಿಯೂ ಆಯಿತು. ಅಕ್ಕನ ಜೊತೆ ಹೋಗುವಾಗ ತಾನೇನು ಮಾಡಬಹುದು ಎಂದು ಯೋಚಿಸುತ್ತಾ ಹೆಜ್ಜೆ ಹಾಕಿದಳು.<br /><br />ಇವರು ರಸ್ತೆಗೆ ಹೋಗುತ್ತಲೇ, ಲಿಂಗಾಯಿತರ ಪಾರ್ವತಿ ದರ್ಶನವಾಯಿತು. ಒಳ್ಳೆಯ ಹೆಂಗಸು. ನೋಡುತ್ತಲೇ ಸಣ್ಣಗೆ ನಕ್ಕಳು. ಈಯಮ್ಮ ಆವತ್ತಿನಿಂದ ಮಾತು ಕಡಿಮೆ ಎಂದು ನೆನಪು ಮಾಡಿಕೊಂಡು ರುಕ್ಮಿಣಿಯೇ ಮಾತನಾಡಿಸಿದಳು. ಇವಳ ದನಿ ಕೇಳುತ್ತಲೇ ಪಾರ್ವತಿ ’ನಮ್ಮ ಕಮಲೀ ಮಗಳಲ್ವಾ ನೀನು?’ ಎಂದು ಇದ್ದಕ್ಕಿದಂತೆ ಹಳೆಯ ಫೋಟೋ ಒಂದನ್ನು ನೋಡಿ ಸಂತೋಷಪಡುವ ಹಾಗೆ ಸಂತೋಷಪಟ್ಟಳು. ’ಚೆನ್ನಾಗಿದ್ದೀಯಾ?’ ’ಅಮ್ಮಾ ಚೆನ್ನಾಗಿದ್ದಾರಾ?’, ’ಓದು ಮುಗೀತಾ?’, ’ಕೆಲಸ ಆಯ್ತಾ?’ ಎಂದು ವಿಚಾರಿಸಿದರು. ಇವಳು ಕೆಲಸ ಮಾಡುತ್ತಿರುವ ವಿಚಾರ ಕೇಳಿ ’ಹಾಗಿರಬೇಕು. ಅವರಿವರನ್ನ ನಂಬ್ಕೋಬೇಡಿ, ನಿಮ್ಮ ದುಡ್ಡು ನೀವು ದುಡೀರಿ’ ಎಂದು ಕಿವಿ ಮಾತು ಹೇಳಿದರು. ರುಕ್ಕೂಗೆ ಏಕೋ ಮನಸ್ಸು ತುಂಬಿ ಬಂತು. ಅವಳ ಮಗಳಿಗೆ ಅಳಿಯ ಕೊಡಬಾರದ ಕಷ್ಟ ಕೊಡುತ್ತಿದ್ದಾನೆಂಬುದನ್ನು ಗುಣಾ, ಲಲಿತಾ ಹೇಳಿದರು. ಓದಿಲ್ಲದ ಕಾರಣ ಅವಳು ಈಗಲೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳಂತೆ.<br /><br />ಅಲ್ಲಿಂದ ಮುಂದಕ್ಕೆ ಸಂಕಮ್ಮನ ಮನೆ. ರುಕ್ಮಿಣಿ ಅವರ ಮನೆಗೇ ಹೋಗಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿಕೊಳ್ಳುತ್ತಿದ್ದಳು. ಅಷ್ಟರಲ್ಲೇ ಯಾರೋ ಮಾತನಾಡುವುದು ಕೇಳಿಸಿತು, <br />’ಏ ಆ ಹುಡುಗಿ ನೋಡಿದ್ದೀಯಾ? ರುಕ್ಮಿಣಿ ಅಂತ ಅವಳ ಹೆಸರು’. <br />’ಅವಳ? ಯಾರೇ?’ <br />’ಯೇ, ಕಮಲಕ್ಕನ ಮಗಳು. ರಜಾಕ್ಕೆ ಬಂದಾಗಲೆಲ್ಲಾ ಎಮ್ಮೆ ಮೇಯ್ಸೋದೇ ಅವಳ ಕೆಲ್ಸ. ನಾನಂತೂ ಅವಳಿಗೆ ಎಮ್ಮೆ ಅಂತಲೇ ಹೆಸರಿಟ್ಟಿದ್ದೆ.’ ’ಹಾಗಾದ್ರೇ, ಕರೆಯಮ್ಮ ನೋಡೋಣ’ <br />’ಅಯ್ಯಪ್ಪಾ, ಅವಳನ್ನ ಯಾವತ್ತೂ ಕರ್ದಿಲ್ಲಪ್ಪಾ’ ತನ್ನ ಬಗ್ಗೆ ಇಷ್ಟೊಂದು ಸ್ವಾರಸ್ಯಕರ ಕಥೆ ಇದೆಯೆಂದು ಅವಳಿಗೇ ತಿಳಿದಿರಲಿಲ್ಲ. ತಿರುಗಿ ನೋಡಿದ ಕೂಡಲೇ ಮುಖಪರಿಚಯ ಸಿಕ್ಕಿತು. ಸ್ವಲ್ಪ ಕಿಚಾಯಿಸೋಣವೆಂದು ’ಏನು ನಿರ್ಮಲ? ಚೆನ್ನಾಗಿದ್ದೀಯಾ’ ಎಂದಳು. ಆ ಹುಡುಗಿ ಪಾಪ ತಡವರಿಸಿಕೊಂಡು ’ಚೆನ್ನಾಗಿದ್ದೀನಕ್ಕಾ’ ಎಂದಳು. ಅಷ್ಟಕ್ಕೇ ಸಮಾಧಾನವಾಗದೇ, "ದೊಡ್ಡ ದೊಡ್ಡವೆರಡು ಎತ್ತುಗಳಿದ್ವಲ್ಲಾ ಎಲ್ಲಿ?" ಅಂದಳು. ಆ ಹುಡುಗಿ ಮತ್ತೂ ತಡವರಿಸಿ ’ಒಂದು ಸತ್ತುಹೋಯಿತು, ಇನ್ನೊಂದನ್ನು ಮಾರಿಹಾಕಿದೆವು’ಎಂದಳು. <br />’ಎಮ್ಮೆಗಳು ನಿಮ್ಮವೇನಾ? ನೀವು ಡೈರಿಗೆ ಹಾಲು ಹಾಕ್ತೀರಾ?’<br />’ಊನಕ್ಕಾ, ಹಾಕ್ತೀವಿ. ಎರಡರಿಂದ ಎಂಟೊಂಬತ್ತು ಲೀಟರ್ ಆಗತ್ತೆ’<br />’ನೀವೂ ಜೋಳ ಬೆಳೆಯೋದೇನಾ?’<br />’ಎಲ್ಲಾರೂ ಅದೇ ತಾನೆ?’<br />’ನಿಮ್ಮ ತೋಟ ಯಾವುದೇಳು, ಕೆರೆ ಪಕ್ಕದಲ್ಲೇ ಇತ್ತಲ್ಲಾ ಅದಲ್ವಾ?’<br />’ಊ ಅದೇ’ <br />’ರಜಾ ಇತ್ತು ಅದಕ್ಕೇ ಊರಿಗೆ ಬಂದಿದ್ದೆ. ಸುಮ್ಮನೆ ಊರೆಲ್ಲಾ ಒಂದು ರೌಂಡು ಹಾಕಣ ಅಂತ ಬಂದೆ, ಬರ್ತೀನಿ’ ಎಂದು ಮುಕ್ತಾಯ ಹಾಡಿ ಹೊರಟಳು. ನಿರ್ಮಲಾಗಂತು ಹೀಗೆ ಹಟಾತ್ತನೆ ಮೈಮೇಲೆ ಎರಗಿದ ಅಪಾಯದಿಂದ ಗಾಬರಿಯಾಗಿಬಿಟ್ಟಿತ್ತು. ಆದರೆ, ಮಾತು ಮುಗಿಯುವಷ್ಟರಲ್ಲಿ ರುಕ್ಮಿಣಿಯ ಬಗ್ಗೆ ಪ್ರಶಂಸೆ ಮೂಡಿತ್ತು. ರುಕ್ಮಿಣಿಗಂತೂ ಒಳಗೊಳಗೆ ಹೆಮ್ಮೆಯಾಗುತ್ತಿತ್ತು. ಜೊತೆಗೇ ಸಣ್ಣಗೆ ಮಜಾ ತೆಗೆದುಕೊಳ್ಳುತ್ತಿದ್ದಳು. <br /><br />ಎರಡು ಹೆಜ್ಜೆ ಮುಂದಕ್ಕೆ ಹೋಗುತ್ತಲೇ, ಚಿನ್ನಮ್ಮ ಎದುರಿಗೆ ಬಂದಳು. ಚಿನ್ನಮ್ಮನನ್ನು ನೋಡಿದ್ದೇ ರುಕ್ಮಿಣಿ ’ನೀವು ಕೊಟ್ಟ ನಾಲ್ಕೂ ಜೋಳ ನಾನೆ ತಿಂದೆ’ ಎಂದು ಖುಷಿಯಿಂದ ಕಿರುಚಿದಳು. ಗುಣಾ, ಲಲಿತಾ ಗಂಭೀರವಾಗಿ ’ಅಕ್ಕಾ, ನಾವು ಸಂಕಮ್ಮನ ಮನೇಲಿರ್ತೀವಿ, ಬನ್ನಿ’ ಎಂದು ಮುಂದಕ್ಕೆ ಹೊರಟರು. ಚಿನ್ನಮ್ಮ ಏನೋ ಗ್ರಹಿಸಿದವಳಂತೆ ’ಒಂದು ನಿಮಿಷ ಮನೆಗೆ ಬಂದು ಹೋಗಮ್ಮಾ’ ಅಂದಳು. ರುಕ್ಮಿಣಿ ಮರುಮಾತಾಡದೆ ಅವಳ ಹಿಂದೆ ಹೊರಟಳು.ಮುತ್ತುಮಣಿhttp://www.blogger.com/profile/02071788886580605152noreply@blogger.com3tag:blogger.com,1999:blog-4527995432766899913.post-21101414150882811242009-09-18T14:55:00.042+05:302009-09-18T23:29:12.316+05:30ರುಕ್ಮಿಣಿಯ ಅಜ್ಜಿ ಮನೆ - ೧೦ರುಕ್ಕೂ ಒಳಗೆ ಹೋಗುತ್ತಿದ್ದಂತೆಯೇ ಯಾರೋ ಅವಸರವಾಗಿ ರೂಮಿನೊಳಕ್ಕೆ ಹೋದ ಹಾಗಾಯಿತು. ನನಗೇಕೆ ಎಂದುಕೊಂಡು ಸುಮ್ಮನಾದಳು. ಅತ್ತೆ! ಅತ್ತೆ! ಎಂದು ಒಂದೆರಡು ಸಲ ಕೂಗಿಟ್ಟಳು, ಆ ಕಡೆಯಿಂದ ಉತ್ತರ ಬರಲಿಲ್ಲ. ಒಂದು ಕ್ಷಣ ಕೊಟ್ಟಿಗೆಗೆ ವಾಪಾಸು ಹೋಗಿಬಿಡುವ ಎನಿಸಿತು. ಮತ್ತೆ ಯಾಕೆ ರಂಪ-ರಾಮಾಯಣ ಎಂದು ಅಡಿಗೆ ಮನೆಗೇ ಹೊರಟಳು.<br /><br />’ಏನತ್ತೆ ಮಾಡ್ತಾ ಇದ್ದೀರ?’ ಎಂದು ರಾಗವಾಗಿ ಕೇಳುತ್ತಾ ತಾನು ಕೂರುವುದಕ್ಕೆ ಒಂದು ಜಾಗವನ್ನು ಹುಡುಕತೊಡಗಿದಳು. ಅತ್ತೆ ಒಲೆಯ ಕಡೆಗೆ ತಿರುಗಿಕೊಂಡೇ ’ಆಯ್ತಾ, ಅಜ್ಜಿ ಜೊತೆ ಹರಟಿದ್ದು?’ ಎಂದರು. ’ಹ್ಞೂ ಮತ್ತೆ, ದೊಡ್ಡವರಿಂದ ಶುರುಮಾಡ್ಕೊಂಡು ಒಬ್ಬೊಬ್ಬರನ್ನಾಗಿ ವಿಚಾರಿಸಿಕೊಳ್ತಾ ಇದ್ದೀನಿ’ ಎಂದಳು ಬರುತ್ತಿದ್ದ ಸಿಟ್ಟನ್ನು ತಡೆದುಕೊಳ್ಳುತ್ತ. ’ಆಹಾಹಾ ಬಲೆ ಮಾತು ನೀವು ಬೆಂಗಳೂರಿನವರು’ ಎಂದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದರು ಅತ್ತೆ. <br />’ಹೌದು ಮತ್ತೆ, ನಾನು ನಿತ್ಯ ಆಫೀಸಿನಲ್ಲಿ ಹೀಗೆ ಮಾತಾಡೋದಕ್ಕೆ, ನನಗೆ ಸಂಬಳ ಕೊಡೋದು’<br />’ನಿಮ್ಮದು ಏನಾದ್ರೂ ಆರಾಮ್ ಕೆಲಸ ಬಿಡು’<br />’ಆ ಮನೇಲಿ ಅಡಿಗೆ ಮನೆ ಎಷ್ಟು ದೊಡ್ಡದಾಗಿತ್ತತ್ತೆ, ಅಲ್ಲೇ ಕೂತ್ಕೊಂಡು ಊಟ ಮಾಡ್ತಾ ಇರ್ಲಿಲ್ವಾ?’<br />’ನೀನೆ ಹಿಂಗಂತೀಯಲ್ಲಾ? ಹಾಳು, ಈಗೆಲ್ಲಾ ಅಡಿಗೆ ಮನೇಲಿ ಯಾರು ಊಟ ಮಾಡ್ತಾರೆ’<br /><br />’ಈ ಮನೆಯಲ್ಲಿ ಒಬ್ಬೊಬ್ಬರದು ಒಂದೊಂದು ವರಸೆ ಆಗಿದೆಯಲ್ಲಾ’ ಎಂದುಕೊಂಡು, ತರಕಾರಿಗಳನ್ನೆಲ್ಲಾ ಒತ್ತಟ್ಟಿಗೆ ಸರಿಸಿ ತಾನು ಕೂರಲು ಜಾಗ ಮಾಡಿಕೊಂಡಳು. ಅತ್ತೆ ಇವಳು ಕೂತದ್ದನ್ನು ಓರೆ ನೋಟದಲ್ಲಿ ನೋಡಿ ಅತ್ತಕಡೆಗೆ ತಿರುಗಿಬಿಟ್ಟಳು. ಅದು ಇವಳ ಗಮನಕ್ಕೂ ಬಂತು. <br />ಸುಮ್ಮನಿರಬರದೆಂದು ಮಾತಿಗೆ ಹಚ್ಚಿದಳು. <br />’ಏನು ಕೆಲಸ ಅತ್ತೆ ಈವಾಗ? ತರಕಾರಿ ಏನಾರು ಎಚ್ಲಾ ಹೇಳಿ.’<br />’ಅದ್ಯಾಕೆ, ನೀನು ನಮ್ಮ ಮನೆಯ ನೆಂಟಳು. ನೆಂಟರನ್ನ ಹಾಗಲ್ಲ ನಾವು ನೋಡಿಕೊಳ್ಳೋದು.’ <br />’ಏನು ಅಡಿಗೆ ಇವತ್ತು, ಹುಳ್ಸೊಪ್ಪು ಇದೆಯಾ ಅಥವಾ ಕಾಳು ಹುಳೀನಾ?’ <br />’ಅವೆಲ್ಲಾ ಯಾತಕ್ಕೆ, ಇವತ್ತು ಪಲಾವು ಮಾಡ್ತಾ ಇದ್ದೀನಿ. ನಮ್ಮೆನೇಗೆ ಬಂದಿದ್ದೀಯ ನೀನು, ನಿನಗೆ ಯಾವ ಸ್ವೀಟು ಬೇಕು ಹೇಳು. ಅದನ್ನೆ ಮಾಡ್ತೀನಿ.’<br /><br />ರುಕ್ಕೂಗೆ ಈಗ ಅಳು ಬರುವುದೊಂದೆ ಬಾಕಿಯಾಗಿತ್ತು. ಇದಕ್ಕಿಂತ ಹಳೆಯ ಸಿಡುಗುಟ್ಟುವ ಅತ್ತೆಯೇ ವಾಸಿಯಾಗಿತ್ತಲ್ಲ ಎನ್ನಿಸಿತು. ನಮ್ಮಜ್ಜಿ ಮನೆಗೆ ನಾನು ಬಂದರೆ, ಇವರ ನೆಂಟರ್ಯಾಕಾಗ್ತೀನಿ ಎಂದು ತಲೆಚಚ್ಚಿಕೊಳ್ಳುವಂತಾಯಿತು. ಇಲ್ಲದ ಉತ್ಸಾಹ ಬರಿಸಿಕೊಂಡು ಮತ್ತೆ ಮಾತಿಗೆ ತೆಗೆದಳು. <br /> <br />’ಪಲಾವಾ, ಮಾವನಿಗೆ ನಿತ್ಯ ಮುದ್ದೆ ತಿಂದು ಅಭ್ಯಾಸ ಅಲ್ವಾ ಅತ್ತೆ?’<br />’ಎರಡೊತ್ತು ಮುದ್ದೆ ಯಾರು ತಿಂತಾರೆ? ಬೇಜಾರು’ <br /><br />ರುಕ್ಕೂ ಮನಸ್ಸಿನಲ್ಲೇ ಹುಬ್ಬೇರಿಸಿದಳು. ಗುಣಾಳ ತಂಗಿ ಲಲಿತ ರೂಮಿನಿಂದ ಅಡಿಗೆ ಮನೆಗೆ ಬಂದಳು, ’ಏನು ಅಕ್ಕಾ, ಇಲ್ಲಿ ಕೂತಿದ್ದೀಯಾ?’ಎಂದುಕೊಂಡು. ಹಾಹೂ ಎಂದಾದ ಮೇಲೆ, ಲಲಿತ ಅವಳಮ್ಮನನ್ನು ಕುರಿತು ’ರುಬ್ಬಿಕೊಂಡು ಆಯ್ತೇನಮ್ಮ ಕರೆಂಟು ಹೊರ್ಟೋಗತ್ತೆ’ ಎಂದಳು. ಏನೋ ದೊಡ್ಡ ತಪ್ಪು ನಡೆದ ಹಾಗೆ ಅತ್ತೆ, ’ಅಯ್ಯೋ ಇಲ್ಲವೇ, ಒಂದು ನಿಮಿಷ ಕೈ ಆಡಿಸಿ ಬಿಡ್ತೀನಿ ಇರು, ರುಬ್ಬಿಟ್ಟುಬಿಡು. ಮಿಕ್ಸಿ ಕೆಳಗಿಟ್ಟುಕೋ’ ಎಂದಳು. <br /><br />ಲಲಿತ ಮಿಕ್ಸಿ ಸರಿಮಾಡಲು ಅಡಿಗೆಮನೆಯಲ್ಲಿ ಅಂತಿಂದಿತ್ತ ಓಡಾಡತೊಡಗಿದಳು. ಅವಳು ಸಾಮಾನು ತೆಗೆಯಲು ರುಕ್ಕೂ ಒಂದು ಸಾರಿ ಹಿಂದಕ್ಕೆ, ಇನ್ನೊಂದು ಸಾರಿ ಮುಂದಕ್ಕೆ ವಾಲಬೇಕಾಯಿತು. ಕಡೆಗೆ ಲಲಿತ ’ಅಕ್ಕ ಮುಚ್ಚಳ ನಿನ್ನ ಹಿಂದೆ ಇದೆ’ ಎನ್ನಲು, ’ನಾನು ಹಾಲಲ್ಲಿ ಕೂತ್ಕೋತೀನಿ ತಡಿ’ ಎಂದು ಎದ್ದಳು. ಇವರ ತರಾತುರಿಗೆ ತಡೆಯದೇ ಕರೆಂಟು ಹೊರಟೇ ಹೋಗಿತ್ತು. <br /><br />ಅಡಿಗೆ ಮನೆಯಲ್ಲಿ ಚಡಪಡಿಕೆ ಎಷ್ಟು ಹೊತ್ತಿಗೂ ನಿಲ್ಲದ್ದಕ್ಕೆ ರುಕ್ಕೂ ತಿರುಗೀ ಎದ್ದು ಬಂದು ಬಗ್ಗಿ ನೋಡಿದಳು. ’ಕರೆಂಟು ಹೊರಟೇ ಹೋಯಿತು, ಇನ್ನು ಆರು ಗಂಟೇಕಾಲ ಬರಲ್ಲ’ ಎಂದಳು ಲಲಿತ. ’ಆರುಗಂಟೇಗೆ ಬರುತ್ತಾ, ಆಗೆಲ್ಲಾ ಹನ್ನೆರಡು ಗಂಟೆ, ಹನ್ನೆರಡು ಗಂಟೆಗಲ್ವಾ ಕೊಡ್ತಾ ಇದ್ದದ್ದು’ ಎಂದ ರುಕ್ಕೂಗೆ ಒಂದು ರೀತಿ ಸಂತೋಷವೇ ಆಗಿತ್ತು. ’ರಾತ್ರಿ ಮಾಡೋಣ ಬಿಡು’ ಎಂದು ಅವರಿಬ್ಬರು ಪ್ಲಾನು ಹಾಕುತ್ತಿರುವಾಗ, ’ರುಬ್ಬುಗುಂಡು ಇದೆಯಲ್ಲಾ, ಒಂದು ಸುತ್ತು ತಿರುಗಿಸಿಬಿಡಿ’ ಎಂದಳು ಉತ್ಸಾಹದಿಂದ. ’ಓ, ಈಯಕ್ಕಾ ಇದನ್ನೂ ಮಾಡಿದೆ ಅಂತ ಕಾಣತ್ತೆ’ ಎಂದಳು ಲಲಿತ ಬೇಸರಗೊಂಡು. <br /><br />’ಹೋ ಅದೇನು ದೊಡ್ಡ ವಿಷಯ, ಅಜ್ಜೀನ ಕೇಳ್ನೋಡು, ಒಬ್ಬಟ್ಟಿಗೆ ಬೇಳೆ ರುಬ್ಬುತ್ತಿದ್ದೆ’ ಎಂದಳು ರುಕ್ಕೂ. ’ಹಾಗಾದ್ರೆ, ಇವತ್ತು ರುಬ್ಬೇ ರುಬ್ತಿ ಅನ್ನು’ ಎಂದು ಲಲಿತ ಅನ್ನುವ ಹೊತ್ತಿಗೆ ರುಕ್ಕೂ ಪಾತ್ರೆಯನ್ನು ಅವಳ ಕೈಯಿಂದ ತೆಗೆದುಕೊಂಡಾಗಿತ್ತು.ಮುತ್ತುಮಣಿhttp://www.blogger.com/profile/02071788886580605152noreply@blogger.com13tag:blogger.com,1999:blog-4527995432766899913.post-67343466543069028042009-09-11T19:51:00.038+05:302009-09-14T10:57:09.700+05:30ರುಕ್ಮಿಣಿಯ ಅಜ್ಜಿ ಮನೆ - ೯ರುಕ್ಕೂ ಸೀದಾ ಹೋಗಿ ಅಜ್ಜಿಯ ಜೊತೆ ಕೊಟ್ಟಿಗೆಯಲ್ಲೇ ಕೂತಳು. ’ಏನಜ್ಜಿ ಇದು ಅಧ್ವಾನ?’ ಎಂದಳು ಮೆತ್ತಗೆ. ಅಜ್ಜಿ ನೆಟ್ಟನೋಟದಲ್ಲೇ ಕೂತಿದ್ದು ನೋಡಿ ವಯಸ್ಸಾಯಿತಲ್ಲಾ, ಇನ್ನು ಕಿವಿಗೇನು ಗ್ಯಾರಂಟಿ ಎಂದುಕೊಂಡು ಸುಮ್ಮನಾದಳು. <br /><br />ಇವಳು ಬಂದದ್ದನ್ನು ಗಮನಿಸಿದ ಅಜ್ಜಿ ’ಏನು ನಿನಗೂ ದೊಡ್ಡ ಕಂಪನಿಲೇ ಕೆಲ್ಸಾನಾ?’ ಎಂದು ಮಾತಿಗೆ ಹಚ್ಚಿದರು. <br />ರುಕ್ಕೂ ’ಹ್ಞೂ. ಅಲ್ಲಿ ನಂಗೇನು ಕೆಲ್ಸ ಗೊತ್ತಾ ಅಜ್ಜಿ, ಎಲ್ಲಾರ್ಗೂ ಫೋನು ಮಾಡಿ ನಮ್ಮ ಕಂಪನೀಗೆ ಕೆಲ್ಸಕ್ಕೆ ಸೇರ್ಕೊಳಿ, ನಮ್ಮ ಕಂಪನಿಗೆ ಕೆಲ್ಸಕ್ಕೆ ಸೇರ್ಕೊಳಿ ಅನ್ನೋದು’ ಎಂದು ನಕ್ಕಳು. <br />’ಹ್ಞೂ, ಏನಾರು ಒಂದು ಮಾಡ್ಲೇಬೇಕಲ್ಲಮ್ಮ. ನಿನಗೂ ಹೋಗ್ತಾನೆ ಹತ್ತಾ?’<br />ಈ ಅಜ್ಜಿಗೆ ಗೊತ್ತಿಲ್ಲದೇ ಇರೋ ವಿಷಯಾನೇ ಇಲ್ಲ ಎಂದುಕೊಂಡು ಮಾತು ಮುಂದುವರೆಸಿದಳು. <br />’ಹ್ಞೂ, ಕೊಡ್ತಾರಜ್ಜಿ. ಬೇರೆ ದೇಶದೋರು ನಮಗೆ ಸಂಬಳ ಕೊಡೋದು. ಅವರಿಗೆ ಅದು ಇನ್ನೂರೋ ಮುನ್ನೂರೋ, ನಮಗೆ ಹತ್ತು ಸಾವಿರ ಅಂತ ಲೆಕ್ಕ’ <br />’ಹೌದಮ್ಮಾ, ಸಾಕಮ್ಮನ ನೆಂಟರೋನು ಇದ್ದ ಒಬ್ಬ ಹುಡುಗ. ಅವನೂ ಈಗ ಬೆಂಗಳೂರಲ್ಲೇ ಇದ್ದಾನೆ. ಈವಾಗೇನು ಅವನಿಗೆ ಮೂವತ್ತೋ,ನಲ್ವತ್ತೋ ಆಗೋಗಿರತ್ತೆ. ‘ರಾತ್ರಿ ಹೋಗಿ ಹಗಲು ಬರೋದು’ ಅಂತ ಕೆಲಸಕ್ಕಾ ನೀನು ಹೋಗೋದು?’<br />’ನಂದು ಆ ಥರಾ ಕೆಲಸ ಅಲ್ಲಾ ಅಜ್ಜಿ’<br />’ಹ್ಞೂ, ಹುಡುಗ್ರು ಬೇಕಾದ್ರೆ ಯಾವಾಗ ಬೇಕಾದ್ರೂ ಹೋಗ್ಲಿ, ಬರ್ಲಿ. ನೀವುಗಳು ಹೋಗ್ಬೇಡಿ ಅಂತ ಕೆಲಸಕ್ಕೆ’<br />ರುಕ್ಕೂಗೆ ನಗು ಬಂದರು ತಡೆದು ’ಆಯ್ತಜ್ಜಿ’ ಅಂದಳು. <br /><br />ಊರ ಹಳೆಯ ಸುದ್ದಿಯನ್ನೆಲ್ಲಾ ನೆನಪಿಸಿಕೊಳ್ಳುತ್ತಾ ಅಜ್ಜಿಯ ಜೊತೆ ಚೆನ್ನಾಗಿ ಹರಟಿದಳು. ಮಾತು ಮಾತಿಗೂ ಇಬ್ಬರಿಗೂ ತಡೆಯಲಾರದಷ್ಟು ನಗು ಬರುತ್ತಿತ್ತು. ಅಜ್ಜಿ ಮುಂಚಿನಂತೆಯೇ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಕೆಲವರನ್ನು ಹೊಗಳುತ್ತಾ, ಕೆಲವರನ್ನು ಬೈಯುತ್ತಾ ಮಾತು ಮುಂದುವರೆಸಿದರು. ರುಕ್ಕೂಗೆ ಮಾತ್ರ ಯಾವುದೋ ಕಣ್ಣುಗಳು ತನ್ನನ್ನೂ, ತನ್ನ ಅಜ್ಜಿಯನ್ನೂ ಸುತ್ತುತ್ತಿರುವಂತೆ ಅನ್ನಿಸುತ್ತಿತ್ತು. ಮಾತು ಮುಂದುವರೆಸುತ್ತಾ ’ಅಜ್ಜಿ ನೀನು ಈವಾಗ ಗೌಡರ ಮನೆಗೆ, ಸಾಕಮ್ಮನ ಮನೆಗೆ ಹೋಗಲ್ವಾ ಹರಟೆ ಹೊಡೆಯೋಕೆ’ ಎಂದು ಕೇಳಿದಳು. ’ಇಲ್ಲಮ್ಮಾ ನನಗೆ ಕಾಲಾಗದು. ಇನ್ನು ಮೇಲೆ ನನ್ನದೇನಿದ್ರೂ ಮನೆಯಿಂದ ಬಾಗಿಲಿಗೆ, ಬಾಗಿಲಿಂದ ಮನೆಗೆ ’ ಎಂದರು ಅಜ್ಜಿ. ಮಧ್ಯಾಹ್ನಕ್ಕೆ ಮೇವು ಹಾಕ್ತೀರ ಹಸೂಗೆ ಎಂದು ಕೇಳಿಕೊಂಡು ಜೋಳದ ಕಡ್ಡಿಗಳನ್ನು ಎಳೆದುಕೊಂಡು ಬಂದು ಹಸುಗಳ ಮುಂದೆ ಸುರಿದಳು. <br /><br />’ತೋಟಕ್ಕಾದರೂ ಹೋಗೋಣ ಅಂದ್ರೆ, ಗುಣಾ ಏನೂ ಹಾಕಿಲ್ಲ ಅಂದ್ಳು. ಹ್ಞೂ, ಈ ಊರಲ್ಲಿ ಯಾರೂ ತೋಟ ಮಾಡಿದ ಹಾಗೆ ಕಾಣಿಸಲಿಲ್ಲ ನನಗೆ, ಚಿಕ್ಕ ಮಾವ ಅವರುಗಳೇನಾದ್ರೂ ಹಾಕಿರ್ತಾರೇನೋ...’ ಎಂದುಕೊಂಡು ಊರಿಗೇ ಕೇಳಿಸುವ ಹಾಗೆ ತನಗೆ ತಾನೇ ಮಾತಾಡಿಕೊಳ್ಳುತ್ತಿದ್ದಳು. <br />’ಈ ಊರಲ್ಲಿ ನೀರಿಲ್ಲ ನಿಡಿಯಿಲ್ಲ, ನಿನಗೆ ತೋಟ ಯಾರು ಮಾಡ್ತಾರೆ? ಭೂಮಿತಾಯಿ ಎಷ್ಟು ಬೇಕೋ ಅಷ್ಟನ್ನೆಲ್ಲಾ ನುಂಗಲಿ’ ಎಂದು ಅಜ್ಜಿ ಸ್ವಲ್ಪ ಸ್ವಲ್ಪವೇ ಧ್ವನಿಯೇರಿಸುತ್ತಿದರು. <br />’ಅದೇನು? ಕೆರೆಲಾದ್ರೂ ನೀರಿರಲೇಬೇಕಲ್ಲಾ? ನಾನು ಒಂದ್ಸಾರಿ ಹೋಗಿ ಬಟ್ಟೆ ಒಕ್ಕೊಂಡು ಬಂದಿದ್ದೆ’.<br />’ಕೆರೆಯೆಲ್ಲಾ, ಬತ್ತೋಗಿದೆ ಈವಾಗ. ಈ ಊರಿಗೆ ಮಳೆ ಬಂದು ಮೂರು ವರ್ಷ ಆಯ್ತು.’<br />’ಮೂರು ವರ್ಷದಿಂದ ಮಳೆ ಇಲ್ವಾ? ಎಂದು ಆಶ್ಚರ್ಯಪಡುತ್ತಿದ್ದವಳಿಗೆ ಥಟ್ಟನೆ ಕಾಣೆಯಾಗಿದ್ದ ಸರ್ವೇ ತೋಪು ನೆನಪಿಗೆ ಬಂತು. <br />’ಅಯ್ಯೋ ಇರ್ಲಿ ಬಿಡಜ್ಜಿ. ಒಂದ್ಸಾರಿ ಐದು ವರ್ಷ ಮಳೆ ಬಂದಿರ್ಲಿಲ್ಲವಂತೆ, ಅಮ್ಮ ಹೇಳ್ತಿದ್ರು. ಗುಣಾ ಹೇಳಿದ್ದಾಳಲ್ಲಾ ಮುಂದಿನ ಸಾರಿ ರಾಗಿ, ಭತ್ತ ಹಾಕಿ ಹೊಲ ಮಾಡ್ತಾರಂತೆ, ನೋಡಣ ಬಿಡಿ’.<br />’ಹೊಲ ಮಾಡ್ತಾರಂತಾ, ಹೊಲ ಮಾಡಕ್ಕೆ ಇವರಿಗೆ...’ ಎಂದು ಅಜ್ಜಿ ಮತ್ತೆ ಧ್ವನಿಯೇರಿಸತೊಡಗಿದರು. <br />’ಶ್ರೀ ರಾಮನ ಮನೆ ನೆಲ್ಲಿಕಾಯಿ ಮರ ಹಾಗೇ ಇದ್ಯೇನಜ್ಜಿ, ಹೋಗಿ ಒಂದಷ್ಟು ಕಿತ್ತುಕೊಂಡು ಬರ್ತೀನಿ’ ಎಂದು ಜೋರಾಗಿ ಮಾತನಾಡಿ ಅಜ್ಜಿಯ ಧ್ವನಿಯನ್ನು ಉಡುಗಿಸಿದಳು.<br />’ಹೋ ನೆಲ್ಲಿಕಾಯಿ ಮರನಾ? ಇರಬೋದೇನೋಮ್ಮ? ಊಟಕ್ಕೇನಾದ್ರೂ ಏಳ್ತಾರೇನೋ ನೋಡೋಗು, ಮಧ್ಯಾಹ್ನ ಆಗ್ತಾ ಬಂತು’ ಎಂದರು. ತನ್ನ ಅತ್ತೆ ಆಗಲೇ ಗೊಣಗುಟ್ಟಿದ್ದನ್ನು ನೆನಪಿಸಿಕೊಂಡು ರುಕ್ಕೂ ಒಳಕ್ಕೆ ಹೊರಟಳು.ಮುತ್ತುಮಣಿhttp://www.blogger.com/profile/02071788886580605152noreply@blogger.com6tag:blogger.com,1999:blog-4527995432766899913.post-66034041385721176242009-09-02T15:43:00.030+05:302009-09-03T14:52:51.563+05:30ರುಕ್ಮಿಣಿಯ ಅಜ್ಜಿ ಮನೆ - ೮ಅಜ್ಜಿ ದನಗಳ ಕೊಟ್ಟಿಗೆಯಲ್ಲಿ ಕೂತಿದ್ದರು. ಎಲೆ ಅಡಿಕೆ ಮೆಲ್ಲುತ್ತಾ. ಅಜ್ಜೀ ಎಂದು ಊರಿಗೇ ಅರಚುವಂತೆ ಕೂಗಿಟ್ಟಳು. ’ಯೋಯ್, ಬಂದ್ಬಿಟ್ಯೇನು?’ ಎಂದರು. ಅಜ್ಜಿಗೆ ಸ್ವಲ್ಪ ಖುಷಿಯಾಗಿದ್ದ ಹಾಗೆ ಕಾಣಿಸಿತು. ’ಏನಜ್ಜಿ ಇಲ್ಲಿ ಕೂತ್ಕೊಂಡಿದ್ದೀರಾ’ಎಂದದಕ್ಕೆ ’ಇಲ್ಲೇ ತಣ್ಣಗಿದೆ’ ಎನ್ನುವ ಉತ್ತರ ಬಂತು. ಒಂದು ಕೆಂಚಗಿನ ಹಸು, ಒಂದು ಕಪ್ಪು ಬಿಳುಪಿನದು, ಪಕ್ಕದಲ್ಲಿ ಅದರ ಕರುವೋ ಏನೋ, ಪುಟಾಣಿದೊಂದು ಕರು ನಿಂತಿತ್ತು. ಎಮ್ಮೆಗಳೆಲ್ಲಾ ಎಲ್ಲೋದ್ವು ಅಜ್ಜಿ ಎಂದಳು? ಏನೋ ಕಳೆದುಕೊಂಡವಳಂತೆ. ’ಸರಿ, ಅವಕ್ಕೆ ವಯಸ್ಸಾಯ್ತು ಹೋಯ್ತು’ ಎಂದರು ಅಜ್ಜಿ. ಅದನ್ನು ಅಷ್ಟಕ್ಕೆ ಬಿಡದೆ, ಚಿಕ್ಕದೊಂದಿತ್ತಲ್ಲ ಇನ್ನೊಂದು ಇನ್ನೂ ಹಾಲು ಕೊಡುತ್ತಿತ್ತಲ್ಲ, ಹಣೆ ಮೇಲೆ ಬಿಳಿ ಮಚ್ಚೆ ಇತ್ತಲ್ಲ, ಎಂದು ಒಂದೊಂದರ ಪ್ರವರವನ್ನೂ ಬಿಡದೆ ಅಜ್ಜಿಯ ಬಾಯಿಂದ ಹೇಳಿಸಿದಳು. <br /><br />’ಅಕ್ಕ ಯಾವಾಗ ಬಂದ್ರಿ’ ಎಂದು ಹಿಂದುಗಡೆಯಿಂದ ಧ್ವನಿಯೊಂದು ಬಂತು. ಹಸುವಿನ ಮೇವಿಗೆ ಜೋಳದ ಕಡ್ಡಿಗಳನ್ನು ತಂದಿದ್ದಳು ರುಕ್ಕೂ ಅತ್ತೆಯ ದೊಡ್ಡಮಗಳು ಗುಣಶೀಲ. ’ಈವಾಗ್ಲೇ ಬಂದಿದ್ದು, ಹುಲ್ಲು ತರಲ್ವೇನೆ ಹಸೂಗೆ?’ಎಂದಳು ರುಕ್ಕೂ. ಈಗ ಕಕ್ಕಾಬಿಕ್ಕಿಯಾಗುವ ಸರದಿ ಗುಣಾಗೆ ಬಂತು. ಎಲ್ಲಾ ಬಿಟ್ಟು ಹುಲ್ಲಿನ ಬಗ್ಗೆ ಕೇಳಿದಳಲ್ಲಾ ಎಂದು ಬೇಸರವೂ ಆಯಿತು. ’ಹುಲ್ಲು ಯಾತಕ್ಕೆ. ಇದರಲ್ಲೇ ಹಾಲು ಚೆನ್ನಾಗಿ ಬರುತ್ತೆ. ಅದನ್ನ ಒರಕೊಂಡು ಕೂತ್ಕೊಳ್ಳೋರು ಯಾರಕ್ಕ. ನಮ್ಮ ಮನೆ ಒರವಾರಿ ಅಟ್ಟದ ಮೇಲೆ ಹೋಗಿಬಿಟ್ಟಿದೆ’ ಎಂದಳು ಗುಣ. ಅವಳ ಮಾತಿನಲ್ಲಿ ಅರ್ಧಂಬರ್ಧ ಹೆಮ್ಮೆಯೂ ಸೇರಿದ್ದು ರುಕ್ಕೂಗೆ ಗೊತ್ತಾಯಿತಾದರೂ ಯಾತಕ್ಕೆಂದು ಅರ್ಥವಾಗಲಿಲ್ಲ. ಒಟ್ಟು ರುಕ್ಕೂ ಬೇರೆ ಮಾತೆತ್ತಿದಳು. ’ಈಗ ಕಾಲೇಜಿಗೆ ಹೋಗ್ತೀಯಲ್ವಾ ನೀನು?’ ಅವಳು ಇನ್ನೂ ಹೆಮ್ಮೆಯಿಂದ ’ಹೌದು, ಪೇಟೇಗೆ ಹೋಗ್ತೀನಿ’. ಇಲ್ಲಿ ಮೇನ್ ರೋಡಲ್ಲಿ ದೊಡ್ಡ ರೆಸಾರ್ಟ್ ಮಾಡಿದ್ದಾರೆ ನೋಡಿ, ಆ ದಾರಿಲೇ ನಾನು ದಿನಾಲು ಹೋಗೋದು’ ಎಂದಳು. ’ನೀನು ಅಲ್ಲೇ ಇಳ್ಕೊಂಡು ಬಂದಿರ್ತೀ ಅಲ್ವೇನಕ್ಕಾ?’ ಎಂಬ ಮರುಪ್ರಶ್ನೆ ಬಂತು. <br /><br />’ಹ್ಞೂ, ಹ್ಞೂ, ತುಂಬಾ ದೊಡ್ಡದಾಗಿ ಕಟ್ಟಿದ್ದಾರೆ. ರೆಸಾರ್ಟಾ ಅದು? ಇದೇನು ಇಲ್ಲೆಲ್ಲಾ ಇಷ್ಟೊಂದು ಹುಲ್ಲು ಬೆಳೆದುಕೊಂಡಿದೆ?’ ಕೊಟ್ಟಿಗೆ ಪಕ್ಕದ ಹತ್ತಿಪ್ಪತು ಅಡಿ ಜಾಗದಲ್ಲಿ ಮೂರು ಮೂರು ಅಡಿ ಹುಲ್ಲು ಬೆಳೆದಿದ್ದು ನೋಡಿ ರುಕ್ಕೂ ಬೆರಗಾದಳು. <br /><br />’ಹುಲ್ಲೇನು ಎಲ್ಲಾ ಕಡೆ ಬೆಳೆದುಕೊಳ್ಳತ್ತೆ, ಆ ರೆಸಾರ್ಟಲ್ಲಿ ಛತ್ರ, ಸ್ವಿಮಿಂಗ್ ಫೂಲ್ ಎಲ್ಲಾ ಇದೆ’<br />’ಅಷ್ಟು ದೊಡ್ಡ ಜಾಗ ಇದ್ಯೆಲ್ಲಾ, ಈ ಕರುನಾ ಈ ಕಡೆ ಬಿಟ್ಬಿಡ್ಲಾ, ಹುಲ್ಲನ್ನೆಲ್ಲಾ ತಿನ್ನತ್ತೆ’<br />’ಅಯ್ಯೋ ಬೇಡ, ನಾನು ಹಾಕಿರೋ ಗಿಡಾನೆಲ್ಲಾ, ಅದು ತಿಂಧಾಕತ್ತೆ. ಅಲ್ಲಿರೋ ಪಾರ್ಕು ಎಂಥಾ ಚೆನ್ನಾಗಿದೆ ಗೊತ್ತಾ?’<br />’ಏ ಕರು ಏನು ಹಾಳು ಮಾಡತ್ತೆ? ಹೋಗ್ಲಿ ಬಿಡು. ನಿಮ್ಮ ಕಾಲೇಜಲ್ಲಿ ಪಾಠ ಎಲ್ಲಾ ಚೆನ್ನಾಗಿದೆಯಾ?’<br />’ಹ್ಞೂ, ನಮಗೇನು ಗೈಡು ಇದೆಯಲ್ಲಾ, ಪಾಸಾದ್ರೆ ಸಾಕು ’. <br />’ಏ ಗೈಡ್ ಎಲ್ಲಾ ಒದ್ಬೇಡ. ಟೆಕ್ಸ್ಟ್ ತಗೊಂಡು ಓದೋದೆ ಒಳ್ಳೇದು. ತೋಟದಲ್ಲಿ ಏನಾಕಿದ್ದೀರಾ?<br />’ಸದ್ಯಕ್ಕೆ ಏನು ಇಲ್ಲ, ಈ ಸಾರಿ ಭತ್ತ, ರಾಗಿ ಹಾಕಿ ಹೊಲ ಮಾಡ್ತೀವಿ. ಅಕ್ಕ ಸಾಯಂಕಾಲಕ್ಕೆ ರೆಸಾರ್ಟ್ಗೆ ಹೋಗಿ ಬರಣ್ವಾ’<br /><br />ಅವರ ಮಾತು ಎಲ್ಲಿಗೂ ನಿಲ್ಲದೇ ಗಿರಕಿ ಹೊಡೆಯುತ್ತಿದ್ದದ್ದು ಈಗಾಗಲೇ ರುಕ್ಕೂಗೆ ತಿಳಿದುಹೋಗಿತ್ತು. ’ಸಾಯಂಕಾಲನಾ?’ ಎಂದಷ್ಟೇ ಹೇಳೀ ಮುಂದಕ್ಕೆ ಏನು ಮಾತನಾಡಲೆಂದು ಯೋಚಿಸುತ್ತಿದ್ದಳು. ಗುಣಾ ಈ ಕರೂಗೆ ಏನು ಹೆಸರಿಟ್ಟಿದ್ದೀರೆ? ಎಂದಳು ಆಸೆಯಿಂದ. ’ಹೋ, ಅದೆಲ್ಲಾ ಪಟ್ಟಣದಲ್ಲಿ ಆರಾಮಾಗಿ ಇರೋರ್ಗೆ ನಮಗಲ್ಲಾ’ ಎಂದಳು ಗುಣಾ. ’ಗೌರಿ ಅಂತಾ ಹೆಸರಿಡಿ’ ಎಂದಳು. ’ಏನಮಾ, ಊರು ನೆನಪಾಯ್ತ?’ ಎಂದು ಮಾವನ ಕೀರಲು ಧ್ವನಿ ಕೇಳಿಸಿತು. ’ಹೋ, ಏನೋ ಬರಣ ಅಂತ ಬಂದ್ರೆ, ನೀವು ಒಂದ್ಸಾರಿನಾದ್ರೂ ನಮ್ಮೂರಿಗೆ ಬಂದಿದ್ದೀರಾ?’ ಎಂದು ದಬಾಯಿಸಿದಳು. ’ಹ್ಞೂ, ಆಯ್ತು. ಈವಾಗ ಸಾಯಂಕಾಲಕ್ಕೆ ಏನು ಪ್ರೋಗ್ರಾಮ್ ಹಾಕಣ ನಿಮಗೇ....’, ಹಳೇ ಮಾವನಿಗೆ ಇನ್ನೂ ಯಾವುದಕ್ಕೂ ಸೀರಿಯಸ್ನೆಸ್ ಬಂದಿಲ್ಲಾ ಅಂದುಕೊಂಡು, ’ಸಾಯಂಕಾಲಕ್ಕೆ’ ಎಂದು ಶುರುಮಾಡಿದಳು. ’ಅದನ್ನೇ ನಾನು ಹೇಳ್ತಿದ್ದೆ ಅಪ್ಪಾ, ಸಾಯಂಕಾಲಕ್ಕೆ ಅಕ್ಕನ್ನ ಕರಕೊಂಡು ರೆಸಾರ್ಟ್ ನೋಡಿಸಿಕೊಂಡು ಬರ್ತೀವು. ನಾನು ಲಕ್ಷ್ಮೀ ಹೋಗಿ’, ಎಂದು ಮಧ್ಯೆ ಬಾಯಿ ಹಾಕಿದಳು. ’ಹ್ಞೂ, ಬೆಂಗಳೂರಿಂದ ಬರೋರ್ಗೆ ಅದೇ ಸರಿ. ಸಾಯಂಕಾಲಕ್ಕೆ ಇವನ್ನೂ ಕರಕೊಂಡು, ಈ ಕಡೆಯಿಂದ ಹೋಗಿ...’ ಎಂದು ಮಾವ ರಾಗ ತೆಗೆದರು. ’ಮಾವ, ನಂಗದೆಲ್ಲಾ ಗೊತ್ತಿಲ್ಲ. ಬೆಂಗಳೂರಲ್ಲಿ ನಾನು ರೆಸಾರ್ಟ್ ನೋಡೇ ಇರ್ತೀನಿ. ಅದಕ್ಕೆ, ನೀವು ನನಗೆ ಹೊಲ, ಗದ್ದೆ, ತೋಪು ಇಂಥಾದ್ದನ್ನೆಲ್ಲಾ ತೋರಿಸ್ಬೇಕು, ತಾನೆ’ ಎಂದಳು. ಉಕ್ಕಿ ಬರುತ್ತಿದ್ದ ಕೋಪವನ್ನು ಅದುಮಿಕೊಳ್ಳುತ್ತಾ. ಮಾವ ಮತ್ತೆ ರಾಗವಾಗಿ ’ಹ್ಞೂ, ನೀನೆಂಗೇಳದ್ರೇ ಅಂಗೆ’ ಎಂದು, ತೆಪ್ಪಗೆ ಎದ್ದು ಹೊರಟರು. ಗುಣಾ, ’ಅಕ್ಕಾ, ಒಳಗ್ಬನ್ನಿ ಮನೆ ತೋರಿಸ್ತೀನಿ’ ಎಂದಳು. ಮನೆಯೆಲ್ಲಾ ಸುತ್ತುಹಾಕಿದಮೇಲೆ, ’ಏನೇ ಹೇಳು ಗುಣಾ, ಆ ಮನೇನೆ ಎನೋ ಒಂಥರಾ ಇಷ್ಟ ನಂಗೆ’ ಅಂದದಕ್ಕೆ ’ಆ ಮನೇನಾ, ಸದ್ಯ ಯಾವಾಗ ಬಿಡ್ತೀವೋ ಅನ್ಸಿತ್ತು. ಆ ಮನೇಗೆ ಸಗಣಿ ಬಳ್ದೂ ಬಳ್ದೂ ನಮ್ಮ ಕೈಯೇ ಸೇದು ಹೋಗ್ತಿತ್ತು’ ಎಂದಳು ಗುಣಾ. ’ಸಗಣಿ ಬಳೀತಿದ್ದಿದ್ದು ನಮ್ಮಜ್ಜಿ’ ಎಂದು ಬಾಯಿಗೆ ಬಂದರೂ, ಎತ್ತಗೋ ತಿರುಗುವಂತೆ ನಟಿಸಿದಳು. <br /><br />ಅತ್ತಿತ್ತ ತಿರುಗಿ, ಮತ್ತೆ ದನದ ಕೊಟ್ಟಿಗೇ ಕಡೇನೆ ರುಕ್ಕೂ ಹೊರಟಳು. ’ಇಲ್ಲೇ ಕೂತ್ಕೋ’ ಎಂದು ಕರೆದ ಗುಣಾಗೆ ’ಅಜ್ಜೀ ಜೊತೆ ಸ್ವಲ್ಪ ಹೊತ್ತು ಕೂತ್ಕೋತೀನಿ’ ಎಂದಳು. ’ಆಯ್ತು’ ಎಂದು ಹಿಂದಕ್ಕೆ ತಿರುಗಿದ ಮೇಲೆ, ’ಯಾರು ಮನೇಗೆ ಬಂದರೂ, ದನದ ಕೊಟ್ಟಿಗೇಲಿ ಕೂತ್ಕೊಳ್ಳೊ ಹಾಗೆ ಮಾಡುತ್ತೆ ಇದು’ ಎಂದು ಒದರಿದ್ದು ರುಕ್ಕೂಗೂ ಕೇಳಿಸಿತು. ಅಡುಗೆ ಮನೆಯಲ್ಲಿ ಅತ್ತೆ ’ನಮ್ಮನ್ನ ನೋಡೋಕೆ ಯಾರು ಬರ್ತಾರೆ?’ ಎಂದು ಗೊಣಗಿದ್ದೂ ಕೇಳಿಸಿತು.ಮುತ್ತುಮಣಿhttp://www.blogger.com/profile/02071788886580605152noreply@blogger.com7tag:blogger.com,1999:blog-4527995432766899913.post-30854559716224070612009-07-29T18:36:00.044+05:302009-07-29T20:55:16.427+05:30ರುಕ್ಮಿಣಿಯ ಅಜ್ಜಿ ಮನೆ - ೭ರುಕ್ಮಿಣಿ ಊರ ಹೊಲ ತೋಟಗಳನ್ನೆಲ್ಲಾ ದಾಟಿ ಅಜ್ಜಿ ಮನೆಯ ಬೀದಿಗೆ ಬಂದಳು. ಅಯ್ಯೋ! ಹಳೇ ಮನೆಯ ಬೀದಿಗೆ ಬಂದುಬಿಟ್ಟಿದ್ದಳು. ಖಾಲಿ ಜಾಗವನ್ನು ನೋಡಿ ಒಂದು ಕ್ಷಣ ಅವಳ ಎದೆ ಧಸಕ್ ಎಂದರೂ, ಒಮ್ಮೆಗೇ ಅವಳ ಬುದ್ಧಿ ಕೆಲಸಮಾಡಿ, ಹೊಸಮನೆ ಆಗಿದೆಯೆಂಬುದನ್ನು ನೆನಪು ಮಾಡಿಕೊಟ್ಟಿತು. ಸರಿ, ಅಲ್ಲಿಂದ ಹೊಸಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದಳು. ಇಷ್ಟೆಲ್ಲಾ ಆದರೂ ಇನ್ನೂ ರುಕ್ಮಿಣಿಯ ಮನಸ್ಸಿಗೆ ತೃಪ್ತಿಯಾಗಲಿಲ್ಲ. ಅವಳ ಕಣ್ಣು ಮನಸ್ಸು ಬೇರೆ ಏನನ್ನೋ ಹುಡುಕುತ್ತಿತ್ತು. <br /><br />ಹಾದು ಬಂದ ಹೊಲಗಳೆಲ್ಲಾ ಬಾಯಿ ಬಿಟ್ಟುಕೊಂಡು ಬಿಕೋ ಎನ್ನುತ್ತಿತ್ತು. ಅಲ್ಲಿ ಇಲ್ಲಿ ಎರಡೆರಡು ಸಾಲು ಫಾರಮ್ ಜೋಳ ಹಾಕಿದ್ದಾರೆ. ಅದೂ ಹಸುವಿನ ಮೇವಿಗೆ. ಅದೇ ಈಗ ಪ್ರಾಫಿಟೆಬಲ್ ಬಿಸಿನೆಸ್ ಅಲ್ಲವೇ? ಪಳ್ಳಿಗರ ಹೊಲವನ್ನು ನೋಡಿಯಂತೂ ರುಕ್ಕೂಗೆ ತಡೆಯಲಾರದಷ್ಟು ನಗು ಬಂದು ಬಿಟ್ಟಿತು. ಅವರ ಬೋರಿನಲ್ಲಿ ದೇವರ ದಯೆಯಿಂದ ನೀರು ಚೆನ್ನಾಗಿ ಬರುತ್ತಿದೆಯಂತೆ, ಅದಕ್ಕೆ ಅವರು ತೋಟದ ತುಂಬಾ ಕೊತ್ತಂಬರಿಸೊಪ್ಪಿನ ಬೆಳೆ ಬೆಳೆಯುತ್ತಿದ್ದಾರೆ! ಕೊತ್ತಂಬರಿಸೊಪ್ಪು ಒಂದು ಬೆಳೆಯೇ? ಬಿದ್ದ ಮಳೆಗೆ ಮೇಲೇಳುತ್ತಿದ್ದ ಕಡ್ಡಿಗಳು. <br /><br />ತನ್ನ ಹಳೆಯ ದಿನಗಳು ನೆನಪಿಗೆ ಬಂದವು ಅವಳಿಗೆ. ಒಂದು ದಿನ ಮಧ್ಯಾಹ್ನ ಅಜ್ಜಿ ಮಾಡಿಕೊಡುತ್ತಿದ್ದ ಮಣಿಪಾಯಸಕ್ಕಾಗಿ ಕಾದುಕೊಂಡು ಅಡಿಗೆಮನೆಯಲ್ಲಿ ಕೂತಿದ್ದಳು. ಮನೆಯಲ್ಲಿ ಯಾರು ಇಲ್ಲದ್ದನ್ನು ಖಾತರಿ ಮಾಡಿಕೊಂಡು ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿದ್ದ ದೊಡ್ಡದೊಂದು ನೋಟು ಕೊಟ್ಟರು. "ಇದು ಎಷ್ಟು ರೂಪಾಯಿ ನೋಟು ನೋಡು? ಅಲ್ಲಿ ಚಪ್ಪರದ ಪಕ್ಕ ಇಷ್ಟು ಜಾಗ ಇತ್ತಲ್ಲ, ಅಲ್ಲಿ ಚೆಲ್ಲಿದ್ದೆ ನಾಲ್ಕು ಧನಿಯಾ. ಕಾಯಿ ಕೊಂಡುಕ್ಕೊಳ್ಳಕ್ಕೆ ಬಂದಿದ್ನಲ್ಲಾ ಸಾಹೇಬ, ಅಜ್ಜಿ ಈ ನೋಟು ನಿನ್ನ ಕೊತ್ತಂಬರಿ ಸೊಪ್ಪಿಗೆ ಅಂದ್ನೇ. ಕಿತ್ಕೊಂಡು ಹೋದ್ರು, ಒಂದಷ್ಟು ಸೊಪ್ಪು" ಎಂದು ಉಸಿರು ನಿಲ್ಲಿಸದೇ ಹೇಳಿದರು. ರುಕ್ಕೂಗೆ ಏನು ಹೇಳಬೇಕೋ ತಿಳಿಯಲಿಲ್ಲ. ಮೆತ್ತಗೆ "ಅಜ್ಜಿ ಇದು ನೂರು ರೂಪಾಯಿ ನೋಟು" ಎಂದಿದ್ದಳು. ಅಷ್ಟಕ್ಕೇ ಅಜ್ಜಿ ಚೇಳು ಕಡಿದವರಂತೆ "ಹೌದೇನೆ, ತಗೊಂಡೋಗಿ ನಿಮ್ಮ ತಾತನಿಗೆ ಕೊಟ್ಟುಬಿಡು ಹೋಗು, ನೂರು ರೂಪಾಯಿಯಲ್ಲಿ ನನಗೇನು ಕೆಲಸ. ಹತ್ತೋ ಇಪ್ಪತ್ತೋ ಆಗಿದ್ದರೆ ನಿನಗೆ ಬಳೆ ತೆಗೆಯುವ ಅಂತಿದ್ದೆ" ಎಂದರು. <br /><br />ಆವತ್ತಿನ ಆ ನೆನಪಿಗೆ ರುಕ್ಕೂ ತನ್ನಷ್ಟಕ್ಕೆ ತಾನೆ ನಕ್ಕಳು. ಇದೇನು ಹೊಲದ ತುಂಬಾ ಕೊತ್ತಂಬರಿ ಬೆಳೆದಿದ್ದೀರಾ ಎಂದು ಕೇಳಿದ್ದಕ್ಕೆ, ಈಗ ಇದಕ್ಕೇ ತುಂಬಾ ಡಿಮ್ಯಾಂಡು ಎಂಬ ಉತ್ತರ ಬಂತು. ಅದರಲ್ಲಿ ಶಾಲೆಗೆ ಹೋದವನಂತೆ ಕಾಣುತ್ತಿದ್ದ ಈ ತಲೆಮಾರಿನ ಹುಡುಗನೊಬ್ಬ "ಅಕ್ಕ, ನೀವು ಬೆಂಗಳೂರಲ್ಲಿ ಹೋಟೇಲ್ಲಿಗೆ ಹೋಗಿ ದಿನಾ ದಿನಾ ತಿನ್ನಲ್ವೇ? ಎಷ್ಟು ಕೊತ್ತಂಬರಿ ಬೆಳೆದು ಕಳಿಸಿದರೂ ನಿಮ್ಮವರಿಗೆ ಸಾಲದು" ಎಂದನು. ರುಕ್ಕೂಗೆ ಮುಖದ ಮೇಲೆ ಕಬ್ಬಿಣ ಕಾಸಿ ಬರೆ ಎಳೆದಂತಾಯ್ತು. "ಅವರು ಹೊಸ ಹೊಸ ರುಚಿ ತೋರಿಸ್ತಾರೆ, ನಾವು ಹೋಗಿ ಹೋಗಿ ತಿಂತೀವಿ" ಎಂದಂದು ಮುಂದಕ್ಕೆ ನಡೆದುಬಿಟ್ಟಿದ್ದಳು. <br /><br />ಅಂತೂ ಮನೆಗೆ ಸೇರಿದ ರುಕ್ಕೂ ತಾನು ಅಂದುಕೊಂಡಂತೆ ಎಲ್ಲರಿಗೂ ’ಸರ್ಪ್ರೈಸ್’ ಕೊಟ್ಟಳು. ಆದರೆ, ಅವರಿಗಂತೂ ಅದು ’ಶಾಕ್’ ಆಗಿಹೋಯಿತು. "ಇದೇನಕ್ಕ ಹಾಗೇ ಬಂದುಬಿಡೋದಾ?" ಎಂದು ಅತ್ತೆಯ ದೊಡ್ಡಮಗ ಕೇಳಿದ್ದಕ್ಕೆ, "ಹೋಗೋ, ಹೋಗೋ, ನಮ್ಮಜ್ಜಿ ಮನೆಗೆ ನಾನು ಬರಕ್ಕೆ ನಿನ್ನ ಪರ್ಮಿಷನ್ ಕೇಳಬೇಕಿತ್ತೇನೋ?" ಎಂದು ಜೋರುಮಾಡಿದಳು. "ಅಲ್ಲಾ, ರೋಡಲ್ಲಿಳಿದು ಫೋನು ಮಾಡೀದ್ರೆ ಗಾಡಿ ತರ್ತಿದ್ದೆ?" ಎಂದ ಮುಖ ಸಣ್ಣಗೆ ಮಾಡಿಕೊಂಡು. ತನ್ನ ಹೊಸ ಗಾಡಿಯ ಚಮಕನ್ನು ಬೆಂಗಳೂರಿಂದ ಬರುವ ಅಕ್ಕನಿಗೆ ತೋರಿಸುವ ಅವನ ಆಸೆಗೆ ಮಣ್ಣು ಬಿದ್ದಿತ್ತು. "ಗೊತ್ತು, ಗೊತ್ತು, ಅದಕ್ಕೇ ನಾನು ಫೋನು ಮಾಡ್ಲಿಲ್ಲ. ಏ ಪಳ್ಳಿಗರ ತೋಟ ನೋಡಿದೆನೋ. ಜಬರದಸ್ತಾಗಿ ಕೊತ್ತಂಬರಿಸೊಪ್ಪು ಬೆಳೆದಿದ್ದಾರೆ!" ಎಂದಳು ಕೊಂಕಾಗಿ. ಇವಳ ಕೊಂಕು ಅವನಿಗೆ ಅರ್ಥವಾಯಿತೋ ಇಲ್ಲವೋ? "ಹೌದಕ್ಕ, ಅವರ ಬೋರಲ್ಲಿ ನೀರು ಚೆನ್ನಾಗಿದೆ. ಇದ್ದಿದ್ದರೆ ನಾವು ಬೆಳೀಬೋದಾಗಿತ್ತು". ಇವಳಿಗೆ ಸಿಟ್ಟು ಬಂದು "ಅದು ಸರಿ" ಎಂದಳು. ತಕ್ಷಣ ನೆನಪಿಗೆ ಬಂದು ಬ್ಯಾಗಿಂದ ಉಳಿದಿದ್ದ ಮೂರು ಎಳೇ ಜೋಳಗಳನ್ನು ತೆಗೆದು ಅವನ ಕೈಗಿಟ್ಟಳು. "ಚಿನ್ನಮ್ಮ ಸಿಕ್ಕಿದ್ದಳೋ, ಅವರ ತೋಟದ್ದೇ" ಎಂದಳು. "ಅಜ್ಜಿ ಎಲ್ಲೋ?" ಎಂದು ಕೂಗಿಡುತ್ತಾ, ಅವನ ಉತ್ತರಕ್ಕೂ ಕಾಯದೇ ಹಿತ್ತಲಿಗೇ ಓಡಿದಳು. ಅತ್ತೆ, ಮಾವ ಅವರ ಮಕ್ಕಳು ಇವಳ ಈ ಪರಿಯನ್ನು ಕಂಡು ಮುಖ ಮುಖ ನೋಡಿಕೊಂಡರು.ಮುತ್ತುಮಣಿhttp://www.blogger.com/profile/02071788886580605152noreply@blogger.com4tag:blogger.com,1999:blog-4527995432766899913.post-20573063869494427672009-07-09T15:45:00.031+05:302009-07-10T19:27:28.227+05:30ರುಕ್ಮಿಣಿಯ ಅಜ್ಜಿ ಮನೆ - ೬ರುಕ್ಕೂ ಎನ್ನಬಹುದೋ ಅಥವಾ ಮಿಸ್.ರುಕ್ಮಿಣಿ ಎನ್ನಬೇಕೋ? ಅವಳೀಗ ಬಿ.ಇ., ಎಂ.ಬಿ.ಎ., ಎಚ್.ಆರ್.ಎಕ್ಸಿಕ್ಯೂಟಿವ್. ಈಗ್ಗೆ ರುಕ್ಕೂ ಅಜ್ಜಿ ಮನೆಗೆ ಹೋಗಿ ಏಳೆಂಟು ವರ್ಷಗಳೇ ಆದುವೇನೋ? ಹೈಸ್ಕೂಲು, ಕಾಲೇಜು ಎಂದೆಲ್ಲಾ ಬೆಳೆಯುತ್ತಿದ್ದಂತೆ ಅವಳಿಗೆ ಅಲ್ಲಿಲ್ಲಿ ಹೋಗಿ ವಾರ-ತಿಂಗಳು ಇರುವುದು ಸಾಧ್ಯವಾಗದೇ ಹೋಯಿತು. ಕರೆದುಕೊಂಡು ಹೋಗಿ ಬಂದು ಮಾಡುತ್ತಿದ್ದ ತಾತನಿಗೂ ವಯಸ್ಸಾಗಿಬಿಟ್ಟಿದೆ. ಅಜ್ಜಿ ಆಕ್ಸಿಡೆಂಟ್ನಲ್ಲಿ ಕಾಲು ಮುರಿದುಕೊಂಡಿದ್ದಾರೆ. <br /><br />ಪೇಟೆಯಲ್ಲಿ ಬಸ್ಸು ಹತ್ತಲು ಹೋಗಿದ್ದಾರೆ. ಇವರು ಹತ್ತುವಷ್ಟರಲ್ಲಿ ಬಸ್ಸು ಮುಂದಕ್ಕೆ ಹೋಗಿಬಿಟ್ಟಿದೆ. ಕೆಳಕ್ಕೆ ಬಿದ್ದು ಸೊಂಟದ ಮೂಳೆ ಮುರಿದು ಹೋಗಿದೆ. ಈಗ ಅಜ್ಜಿ ಮೊದಲಿನ ಚಟುವಟಿಕೆಯ ಅಜ್ಜಿಯಾಗಿ ಉಳಿದಿಲ್ಲ. ಕೋಲು ಹಿಡಿದುಕೊಂಡು ಓಡಾಡುತ್ತಾರೆ. ಆಗ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಅಜ್ಜಿಯನ್ನು ನೋಡಲು ಊರಿಗೆ ಹೋಗಿದ್ದಳು ರುಕ್ಕೂ. ಆಮೇಲೆ, ಎಷ್ಟೊಂದು ಸುದ್ದಿಗಳು ಊರ ಬಗ್ಗೆ? ಮೊದಲಿನ ಮಣ್ಣಿನ ಮನೆಯ ’ಹಸುಗಳ ಮನೆ’ ಗೋಡೆ ಬಿದ್ದು ಹೋಯಿತಂತೆ. ಗೋಡೆ ರಿಪೇರಿ ಮಾಡಿಸುವ ಗೋಜು ಏಕೆಂದು ಹಿರೀಮಗ ತೋಟಕ್ಕೆ ಹತ್ತಿರವಾಗಿದ್ದ ಜಾಗದಲ್ಲಿ ಹೊಸಮನೆಯನ್ನೇ ಕಟ್ಟುತ್ತೇನೆಂದು ಪ್ಲಾನು ಹಾಕಿದ. ಇವನು ದುಡ್ಡುಹಾಕಿ ಮನೆ ಕಟ್ಟಿದರೆ ನಮಗೇನು ಲಾಭವೆಂದು, ಉಳಿದವರು ಮೊದಲು ಆಸ್ತಿ ಪಾಲಾಗಲಿ ಎಂದರು. ಸರಿ, ಊರುದ್ದ ಇದ್ದ ಆಸ್ತಿ ಮೂರು ಪಾಲಾಯಿತು. ಒಬ್ಬೊಬ್ಬರೂ ಒಂದೊಂದು ಮನೆ ಕಟ್ಟುವ ತೀರ್ಮಾನ ಮಾಡಿದರು. ತಾನೇ ಬಹಳ ಬುದ್ಧಿವಂತೆ ಎಂದುಕೊಂಡಿದ್ದ ಹಿರೀಸೊಸೆಗೆ ಆಶ್ಚರ್ಯವೋ ಆಶ್ಚರ್ಯ; ಸಿಮೆಂಟು ಮರಳಿಗೆ ದುಡ್ಡು ಸಾಲದೆ ತನ್ನ ಗಂಡ ಅತ್ತಿತ್ತ ಅಲೆದಾಡುತ್ತಿದ್ದರೆ, ಚಿಕ್ಕವರಿಬ್ಬರೂ ಆರಾಮಾಗಿ ತಾರಸಿ ಹಾಕಿಸಿ ಗೃಹಪ್ರವೇಶವನ್ನು ಮಾಡಿಸಿಬಿಟ್ಟರು. ಇನ್ನು ಅವರ ಮುಂದೆ ಮನೆಕಟ್ಟಿಸದೇ ಇರುವುದಕ್ಕಿಂತ ಮೇಲೆಂದು ಆಸ್ತಿ ಮಾರಿ, ಸಾಲ ಸೋಲ ಮಾಡಿ ಮನೆ ಕಟ್ಟಿಸಿದರಂತೆ, ಕಡೆಗೆ ಇವರಿಗೆ ಉಳಿದದ್ದು ಹತ್ತು ಗುಂಟೆ ನೆಲ, ಆ ಮನೆಯಿದ್ದ ಜಾಗವಷ್ಟೆ. <br /><br />ಆಗಾಗ, ಅಮ್ಮ ಫೋನಿನಲ್ಲಿ ಅಜ್ಜಿಯೊಡನೆ ಮಾತಾಡುತ್ತಿದ್ದರು, "ವಾಮೆಯನ್ನು ಮಾರಿಬಿಟ್ಟನೇ? ಹಳೇ ಮನೇನೂ ಹೋಯ್ತೆ? ಹೋಗಲೀ ಸಾಲವಾದರೂ ತೀರಿತಾ? ಐದು ತೆಂಗಿನ ಮರ ಇತ್ತೇ ಅಲ್ಲಿ?" ಇನ್ನೂ ಮುಂತಾದ ಮಾತುಗಳನ್ನು ಕೇಳಿಯೇ ರುಕ್ಕೂ ತನ್ನ ಅಜ್ಜಿ ಮನೆಯ ಪರಿಸ್ಥಿತಿ ಏನಾಗಬಹುದೆಂದು ಊಹಿಸುತ್ತಿದ್ದಳು. ತನ್ನ ಕನಸಿನ ಅರಮನೆ ಬಿರುಗಾಳಿಗೆ ಸಿಲುಕಿ ಹುಚ್ಚೆದ್ದು ಹಾಳಾಗುತ್ತಿರುವಂತೆ ಅವಳಿಗೆ ಭಾಸವಾಗುತ್ತಿತ್ತು. <br /><br />ಡಿಸೆಂಬರ್ ೨೫ರ ಕ್ರಿಸ್ಮಸ್ ಹಬ್ಬ ಈ ಸಾರಿ ಶುಕ್ರವಾರ ಬಿದ್ದು, ಒಟ್ಟಿಗೇ ಮೂರುದಿನಗಳ ರಜೆಯ ಯೋಗದಿಂದ ರುಕ್ಮಿಣಿಯ ತಪಸ್ಸು ಫಲಿಸಿತ್ತು. ಅವಳು ಮತ್ತೆ ಊರಿಗೆ ಹೋಗುವ ಆಸೆ ಸಿದ್ಧಿಸಿತ್ತು. ಅವಳ ಹಿರೀ ಅತ್ತೆ ಬೇರೆ ಫೋನಿನಲ್ಲಿ, "ರುಕ್ಕೂ, ನೀನು ಊರಿಗೆ ಬಂದು ಎಷ್ಟು ದಿನ ಆಯ್ತು? ನೀನು ಸಬ್ಬಕ್ಕಿ ಪಾಯಸವನ್ನು ’ಮಣಿಪಾಯಸ’ ಅನ್ನುತ್ತಿದ್ದುದನ್ನು ಈಗಲೂ ನೆನೆಸಿಕೊಳ್ಳುತ್ತೇನೆ. ಎರಡು ದಿನ ಇದ್ದು ಹೋಗುವಂತೆ, ಬಾ" ಎಂದಿದ್ದಳು! ಇದ್ದಕ್ಕಿದಂತೆ ತನ್ನ ಅತ್ತೆ ಇಷ್ಟೊಂದು ಬದಲಾಗಿರುವುದನ್ನು ಅವಳಿಗೆ ನಂಬಲಿಕ್ಕೇ ಆಗಲಿಲ್ಲ. ಹೋಗಲೀ, ಈಗಲಾದರೂ ಸರಿಹೋಯಿತಲ್ಲಾ ಎಂದು ಖುಷಿಪಟ್ಟಳು. ಇಂತಹವು ಎಷ್ಟೋ ಚಿದಂಬರ ರಹಸ್ಯಗಳು ಅವಳ ಮನಸ್ಸಿನಲ್ಲಿತ್ತು. ಹಿಂದೆ ಅತ್ತೆಯೇ ಆಗಲೀ,ಬೇರೆ ಯಾರೆ ಆಗಲೀ ಹೀಗೆ ಇದ್ದರು, ಹೀಗೀಗೆ ಅಂದರು ಎಂದು ಅವಳು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಹಾಗಾಗಿ, ಈಗ ಏನಾಗಿದೆಯೆಂಬುದನ್ನು ಹೇಳುವ ಪ್ರಮೇಯವೂ ಅವಳಿಗೆ ಬರಲಿಲ್ಲ. <br /><br />ಬಸ್ಸು ಕಮ್ಮನಳ್ಳಿಗೆ ಬಂದು ತಲುಪಿತು. ಮತ್ತೆ ತನ್ನ ನೀರಿಗೆ ಬಿಟ್ಟ ಹಾಗೆ ಖುಷಿಯಿಂದ ಹೆಜ್ಜೆ ಹಾಕಿದ ಅವಳನ್ನು ಟಾರು ರೋಡು ಎದುರುಗೊಂಡಿತು. ಪಿಚ್ಚೆನಿಸಿತು. ಹಾಗೇ ರಸ್ತೆಯ ಒಂದು ಪಕ್ಕಕ್ಕೆ ಗಮನಿಸುತ್ತಾ ನಡೆದಳು. ಕಾಲುದಾರಿಯ ಆಚೀಚೆ ಬೆಳೆಯುತ್ತಿದ್ದ ’ತಲೆ ತೆಗೆಯುವ’ ಗಿಡಗಳು, ಮುಟ್ಟಿದರೆಮುನಿ ಸೊಪ್ಪು ಟಾರಿಗೂ ಗೆನಿಮೆಗೂ ಮಧ್ಯೆ ಸ್ವಲ್ಪ ಉಸಿರಾಡುತ್ತಿತ್ತು. ಇವಳೂ ಸಮಾಧಾನದ ನಿಟ್ಟುಸಿರುಬಿಟ್ಟಳು. ಊರಿಗೆ ಕಾಲಿಡುತ್ತಿದ್ದಂತೆಯೇ ಕಾಣಬಾಕಾಗಿದ್ದದ್ದು ಸರ್ವೇ ತೋಪು. "ಅಲ್ಲವೇ?" ಎಂದು ನೆನಪಿಸಿಕೊಂಡು ಥಟ್ಟನೆ ಹಿಂದಕ್ಕೆ ತಿರುಗಿ ನೋಡಿದಳು. ಎಲ್ಲಿದೆ ಸರ್ವೇ ತೋಪು? ಬಟಾಬಯಲು ಕಾಣಿಸಿತು ಬೆನ್ನ ಹಿಂದೆ. ಮುಂದಕ್ಕೆ ಮುಖ ಹಾಕಿ ಸುಮ್ಮನೆ ಅತ್ತಿತ್ತ ನೋಡುತ್ತಾ ಮನೆ ಕಡೆ ಕಾಲು ಹಾಕಿದಳು. <br /><br />ಸರ್ವೇತೋಪು ಆದ ಕೂಡಲೇ ಚಿನ್ನಮ್ಮನ ತೋಟ, ಅದಾದ ಮೇಲೆ ಸೊಣ್ಣಮ್ಮನದ್ದು. ಅಷ್ಟು ದೂರದಲ್ಲಿ ಚಿನ್ನಮ್ಮ ಕಾಣಿಸಿದಳು. ಈಯಮ್ಮನಿಗೆ ಆಗಲೇ ವಯಸ್ಸಾಗಿ ಹೋಗಿರಬೇಕಿತ್ತಲ್ಲ ಎಂದುಕೊಂಡಳು. ’ಯಾರಮ್ಮೋ?’, ಚಿನ್ನಮ್ಮನ ಕಂಚಿನ ಕಂಠ ಇನ್ನೂ ಹಾಗೆ ಇದೆ! "ನಾನಮ್ಮೋ! ರುಕ್ಕೂ ರಾಮಪ್ಪನೋರ ಮನೆಗೆ", ರುಕ್ಕೂ ಬಾಯಿಂದ ಅನಾಯಾಸವಾಗಿ ಮಾತು ಹೊರಟಿತ್ತು. ತನ್ನ ಹಳೆಯ ಗಂಧ ಇನ್ನು ತನ್ನೊಳಗೆ ಉಳಿದುಕೊಂಡಿರುವುದು ಅವಳ ಗಮನಕ್ಕೂ ಬಂತು. "ರುಕ್ಕೂನಾ? ಓಹೋಹೋ, ಏನು ನಿನ್ನ ಎಮ್ಮೆಗಳು ಈಗ ನೆನಪಾದುವಾ?" ಎಂದುಕೊಂಡು ಚಿನ್ನಮ್ಮ ಮುಂದಕ್ಕೆ ಬಂದಳು. ರುಕ್ಕೂಗೂ ಉತ್ಸಾಹ ಬಂದು ತೋಟದೊಳಕ್ಕೆ ಧುಮುಕಿ ಚಿನ್ನಮ್ಮನ ಕಡೆಗೆ ನಡೆದಳು. ರುಕ್ಕೂ ಅಮ್ಮನ ಕ್ಷೇಮಸಮಾಚಾರ, ಅದೂ ಇದೂ ಎಲ್ಲಾ ಮಾತಾಡಿ ಆದ ಮೇಲೆ, "ಆಯ್ತು, ಊರಿಗೆ ಹೋಗಾಕ್ ಮುಂಚೆ ಮನೇಗ್ ಒಂದ್ ಸಾರಿ ಬಾ" ಎಂದು ಚಿನ್ನಮ್ಮ ಹೇಳುವಲ್ಲಿಗೆ ಅವರ ಮಾತುಕಥೆ ಮುಗಿಯಿತು. ತನ್ನ ಪಕ್ಕದಲ್ಲಿ ನಿಂತಿದ್ದ ಜೋಳದ ಗಿಡಗಳು ಆಗಲೇ ಅವಳ ಗಮನಕ್ಕೆ ಬಂದಿದ್ದು. <br />"ಎಳೇ ಕಾಯಿ ಇದೆಯಾ?"<br />"ಅಯ್ಯೋ, ಎಳೇದೇನು, ಬಲ್ತಿತೋರೋದೇ ತಗೊಂಡೋಗು, ಬೇಯಿಸ್ಬೋದು"<br />"ಬೇಡಪ್ಪಾ, ಬಲ್ತಿರೋದು ಊರಿಗೋಗೋವಾಗ ತಂಗೊಂಡು ಹೋಗ್ತೀನಿ. ಈಗ ಎಳೇದು ಒಂದೇ ಒಂದು ಸಾಕು" ಎಂದು ರುಕ್ಕೂ ಗಿಡದಲ್ಲಿ ಹುಡುಕತೊಡಗಿದಳು. ಅಷ್ಟರಲ್ಲಿ ಚಿನ್ನಮ್ಮ ನಾಲ್ಕು ಎಳೇ ಕಾಯಿ ಕಿತ್ತು ಅವಳ ಕೈಗಿತ್ತಳು. "ಬರ್ತೀನಮ್ಮೋ" ಎಂದು ರುಕ್ಕೂ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದಳು.<br /><br />ಎಳೇ ಜೋಳ ಕಡೆಯುತ್ತಾ ನಡೆಯುತ್ತಿದ್ದ ಹಾಗೇ, ಮೆಲ್ಲಮೆಲ್ಲಗೆ ಶುರುವಾಗಿ ಜೋರಾಗತೊಡಗಿತು ಯಾವುದೋ ಧ್ವನಿ, "ಯಾರ್ದೇನು ಅಕ್ಕಿ ತಂದು ನಾವು ತಿಂತಿಲ್ಲ....ಲಾಯ್ರಿನ ಕರೆಸಿ ಪಾಲು ಮಾಡ್ಲಿಲ್ವ? ನನ್ನ ಮನೆ ಮುಂದೆ ಬರಲಿ ನೋಡ್ಕೋತೀನಿ..." ಇನ್ನೂ ಏನೇನೋ. ಅರೇ, ಅವಳು ಸೊಣ್ಣಮ್ಮನ ಹಿರೀಸೊಸೆ! ಅಲ್ಲಿಗೆ ಸೊಣ್ಣಮ್ಮನ ಮನೆಯೂ ಪಾಲಾಗಿದೆಯೆಂಬುದು ಖಚಿತವಾಯಿತು. ಅದು ಪಾಲಾಗಿದ್ದೇಕೆಂಬುದಕ್ಕೆ ಸಾಕ್ಷಿಯೂ ರುಕ್ಕೂ ಕಣ್ಣಮುಂದೆಯೇ ನಿಂತಿತ್ತು. ಥಳ ಥಳ ಹೊಳೆಯುವ ಕಡಪಾಕಲ್ಲಿನಲ್ಲಿ ಚೌಕಟ್ಟು ಕಟ್ಟಿದ್ದರು. "ಶ್ರೀಮತಿ ಸೊಣ್ಣಮ್ಮನವರು, ಜನನ - ೧೯೨೫, ಮರಣ - ೨೦೦೭" ಎಂದು ಅದರ ಮೇಲೆ ನಮೂದಿಸಿತ್ತು. ಅದರ ಪಕ್ಕದಲ್ಲೇ ಕಲ್ಲಿನಲ್ಲಿ ಕಟ್ಟಿದ್ದ ಸೊಣ್ಣಮ್ಮನ ಗಂಡ ಯಳಚಪ್ಪನ ಸಮಾಧಿ ಅದಾಗಲೇ ಹಳೆಯದಾಗಿ ಹೋಗಿತ್ತು. "ಎಂಥ ಗಟ್ಟಿಗಾತಿ ಸೊಣ್ಣಮ್ಮ! ಅವಳೊಂದು ಗದರು ಹಾಕಿದಳೆಂದರೆ ಮಕ್ಕಳೆಲ್ಲ ಮೂಲೆ ಸೇರಿಕೊಂಡುಬಿಡುತ್ತಿದ್ದರು. ರುಕ್ಕೂ ಇನ್ನೂ ಮುಂದಕ್ಕೆ ಹೆಜ್ಜೆ ಹಾಕಿದಳು. <br /><br />ರಸ್ತೆಯಲ್ಲಿ ನಡೆದು ನಡೆದು ಸಾಕಾಗಿ, ಎಡಕ್ಕೆ ತಿರುಗುವ ಬದಲು ಎದುರಿಗಿದ್ದ ತೆಂಗಿನ ತೋಟದೊಳಕ್ಕೆ ನುಗ್ಗಿದಳು. ಮತ್ತೆ ’ಯಾರಮ್ಮೋ?’ ಎಂಬುದು ಕೇಳಿ ಬಂತು. ರುಕ್ಕೂ ತನ್ನ ಹಳೆಯ ಪ್ರವರವನ್ನೆಲ್ಲಾ ತಿರುಗೀ ಹೇಳಿಕೊಂಡಳು. "ಅಯ್ಯೋ, ರೋಡು ಮಾಡ್ಯವ್ರೇ. ಇತ್ತಾಗ್ಯಾಕ್ ಬಂದ್ರಿ? ರಮೇಶ ದಾರಿ ತೋರ್ಸು ಹೋಗೋ" ಎಂದು ಅವಳ ಸಹಾಯಕ್ಕೆ ನಿಂತರು. "ಅಯ್ಯೋ, ಬೇಡ ಬೇಡ, ರೋಡಲ್ಲಿ ಓಡಾಡಿ ಓಡಾಡಿ ಸಾಕಾಗಿದೆ, ಇಲ್ಲೇ ಗೆನಿಮೆ ಮೇಲೇ ನಡಕೊಂಡು ಹೋಗ್ತೀನಿ" ಎಂದು ಮುಂದುವರೆದಳು. "ಈ ಬೆಂಗಳೂರಿನವರು ಹುಡ್ಕೊಂಡು ಹುಡ್ಕೊಂಡು ಕಷ್ಟ ಪಡ್ತಾರೆ" ಎಂದು ಅವರು ಮಾತಾಡಿಕೊಂಡರು. ಅಲ್ಲಿಂದ ಒಂದೊಂದು ಗೆನಿಮೆ ದಾಟಿದಾಗಲೂ ಬೇರೆ ಬೇರೆಯವರು ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ರುಕ್ಕೂ ಅದೇ ಉತ್ತರಗಳನ್ನು ಕೊಟ್ಟುಕೊಂಡು ಮುಂದುವರೆಯುತ್ತಿದ್ದಳು.ಮುತ್ತುಮಣಿhttp://www.blogger.com/profile/02071788886580605152noreply@blogger.com11tag:blogger.com,1999:blog-4527995432766899913.post-43577222075062348292009-07-01T14:27:00.009+05:302009-07-03T21:56:08.929+05:30ರುಕ್ಮಿಣಿಯ ಅಜ್ಜಿ ಮನೆ - ೫ವೆಂಕಟರಾಜುವನ್ನು ಬೀಳ್ಕೊಂಡ ಮೇಲೆ ಅಜ್ಜಿಗೆ ಮತ್ತಿರಿಗಿ ಗೌಡರ ಕಾಫಿಯ ನೆನಪಾಯಿತು. ’ಬಾ ರುಕ್ಕೂ’ ಎಂದು ಕರೆದು ಅಜ್ಜಿ ಒಳಗೆ ನಡೆದರು. ಪೇಟೆಗೆ ಹೋಗಿದ್ದ ತಾತ ಮನೆಗೆ ಬರುವುದಕ್ಕೂ, ಗೌಡರು ಕಾಫಿಗೆ ಬರುವುದಕ್ಕೂ ಸರಿಯಾಯಿತು. ಇಬ್ಬರೂ ಸೇರಿ ಮನೆಯಲ್ಲಿ ಹೊಸದಾಗಿ ಬಂದಿದ್ದ ಟೀವಿಯನ್ನು ನೋಡುತ್ತಾ ಕುಳಿತರು. ಜೊತೆಗೆ ಅಜ್ಜಿ ರುಕ್ಕೂ ಕೈಲಿ ಕಳಿಸಿಕೊಟ್ಟ ಕಾಫಿಯನ್ನೂ ಹೀರಿದರು. ಮಳೆ, ಬೆಳೆ, ರಾಜಕಾರಣ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಮುಂಬರುವ ಎಲೆಕ್ಷನ್ನು ಹೀಗೆ ಟೀವಿಯಲ್ಲಿ ಒಂದೊಂದು ದೃಶ್ಯ ಬಂದಾಗಲೂ ಇವರ ಮಾತು ಹತ್ತಾರು ಕಡೆಗೆ ಹೊರಳಿಬರುತ್ತಿದ್ದವು. ಹೊರಗೆ ಹೋಗಿದ್ದ ಮಕ್ಕಳು ಸೊಸೆಯರೆಲ್ಲಾ ಒಬ್ಬೊಬ್ಬರಾಗಿ ಮನೆಗೆ ಬರತೊಡಗಿದರು. ರುಕ್ಕೂ ಅಡುಗೆ ಮನೆಗೂ ನಡುಮನೆಗೂ ಇದ್ದ ಬಾಗಿಲ ಮುಂದೆ ಕೂತು ಟೀವಿ ನೋಡತೊಡಗಿದಳು. ಆ ಜಾಗದಲ್ಲಿ ಕೂರುವುದರಿಂದ ಅವಳಿಗೆ ಅನುಕೂಲ ಏನಪ್ಪಾ ಅಂದರೆ, ಬಾಗಿಲ ಪಕ್ಕದಲ್ಲೇ ಹಾಕಿದ್ದ ದೊಡ್ಡ ಸೋಫಾ ಹೊರಗೆ ಕೂತವರನ್ನು ಮರೆಮಾಚುವುದಕ್ಕೆ ಸಹಾಯಕವಾಗಿತ್ತು. <br /><br />ಅಷ್ಟರಲ್ಲೇ, ಮನೆಯ ಮುಂದೆಯೇ ಇದ್ದ ಹಾಲಿನ ಡೈರಿಯವನು ಕೂಗು ಹಾಕಿದ, "ಅಜ್ಜಮ್ಮೋ, ಬೆಂಗಳೂರಿನಿಂದ ಫೋನ್ ಬಂದಿದೆ", ಬೆಂಗಳೂರಿನಿಂದ ಫೋನ್ ಬಂದಿದೆ ಎಂದ ಮೇಲೆ ಅದು ತನ್ನ ಮನೆಯಿಂದಲೇ ಇರಬೇಕು ಎಂದು ರುಕ್ಕೂಗೆ ಥಟ್ಟನೆ ಹೊಳೆಯಿತು. ಅಜ್ಜಿಯ ಹಿಂದೆ ಓಡಿಬಂದು ಫೋನ್ ಬೂತಿನಲ್ಲಿ ತಾನೂ ನಿಂತುಕೊಂಡಳು. ಮೊದಲು ಅಜ್ಜಿ ರುಕ್ಕೂವಿನ ಅಮ್ಮನೊಡನೆ ಮಾತನಾಡಿದರು. ತಾವು ಕಳಿಸಿದ್ದ ಹುಣಿಸೆಹಣ್ಣು, ಮಾವಿನಹಣ್ಣುಗಳ ಯೋಗಕ್ಷೇಮ ವಿಚಾರ ಆದಮೇಲೆ ಮಾತು ಹಪ್ಪಳ - ಸಂಡಿಗೆಗಳ ಕಡೆಗೆ ತಿರುಗಿತು. ಅಜ್ಜಿ ಕಳಿಸಿದ್ದ ಕುರುಕಲಿಗೆ ರುಕ್ಕೂ ಅಮ್ಮನ ನೆಂಟರ ಮನೆಯಿಂದ ಡಿಮ್ಯಾಂಡು ಬಂದಿದೆಯೆಂದು ಅವರಿಬ್ಬರ ಮಾತುಗಳಿಂದ ತಿಳಿಯಿತು. "ಆಗಲಿ ಬಿಡು, ಶುಕ್ರವಾರ ಕಳೀಲಿ, ಸೋಮವಾರಕ್ಕೆ ಕಳಿಸ್ತೀನಿ. ಅಷ್ಟೊತ್ತಿಗೆ ಸ್ವಲ್ಪ ರಾಗೀನು ಆಗಿರುತ್ತೆ" ಎಂದಾಗ, ಇದು ನನ್ನ ಬಗ್ಗೆಯೇ ಇರಬೇಕೆಂದು ರುಕ್ಕೂಗೆ ಸಣ್ಣಗೆ ಅನುಮಾನ ಶುರುವಾಯಿತು. ಅಷ್ಟರಲ್ಲಿ ಫೋನಿನಲ್ಲಿ ಮಾತನಾಡಬೇಕೆಂದೆನಿಸಿ, "ಅಜ್ಜೀ, ನಾನು" ಎಂದಳು. ಆಸೆಯಿಂದ ಫೋನ್ ತಗೊಂಡಿದೆಷ್ಟೋ ಅಷ್ಟೆ, ಏನೂ ಮಾತನಾಡಬೇಕೆಂದು ತೋಚಲಿಲ್ಲ. "ಹಲೋಓಓಓಓ, ಹ್ಞೂಊಊಊ" ಎಂದಳು. ಅಲ್ಲಿಂದ ಮುಂದಕ್ಕೆ ಬರೀ ಹ್ಞೂ, ಹ್ಞೂ, ಹ್ಞೂ ಎನ್ನುವುದೇ ಅವಳ ಕೆಲಸವಾಯಿತು. ಅಷ್ಟು ಹ್ಞೂಗುಟ್ಟಿದ್ದಕ್ಕೆ ಅವಳಿಗೆ ಗೊತ್ತಾದದ್ದಿಷ್ಟು. "೬ನೇ ಕ್ಲಾಸಿನ ರಿಸಲ್ಟ್ ಬಂದಿದೆ. ಏಳನೇ ಕ್ಲಾಸಿಗೆ ಸೇರಿಕೊಳ್ಳಬೇಕಾಗಿದೆ. ಬ್ಯಾಗು, ಬುಕ್ಕು, ಯೂನಿಫಾರಂಗಳನ್ನೆಲ್ಲಾ ಕೊಂಡುಕೊಳ್ಳಬೇಕಾಗಿದೆ. ಸೋಮವಾರ ತಾತನೊಡನೆ ಬೆಂಗಳೂರಿಗೆ ಬರಬೇಕಾಗಿದೆ". ರುಕ್ಕೂ ಫೋನಿಟ್ಟಳು. ಇಬ್ಬರೂ ಮನೆಗೆ ನಡೆದರು. <br /><br />ಕಾಫೀ ಸಮಾರಾಧನೆಯೆಲ್ಲಾ ಮುಗಿದು ಮನೆಯವರೆಲ್ಲಾ ಟೀವಿ ಮುಂದೆ ಕೂತಿದ್ದರು. ಗೌಡರು ಮನೆಗೆ ಹೊರಟುಹೋಗಿದ್ದರು. ಅತ್ತೆ ಹೊಸದಾಗಿ ತಂದಿದ್ದ ಮಿಕ್ಸಿಯಲ್ಲಿ ಹಿಟ್ಟು ರುಬ್ಬುತ್ತಿದ್ದರು. ಅಜ್ಜಿ ರಾತ್ರಿ ಊಟಕ್ಕೆ ಹೊಂಚಲು ಅಡುಗೆ ಮನೆಗೆ ಹೋದರು. ರುಕ್ಕೂ ಅತ್ತೆ ಬಳಿಗೆ ಹೋಗಿ, "ಹೊಸಾದ ಅತ್ತೆ ಮಿಕ್ಸಿ?" ಎಂದಳು. "ಹ್ಞೂ, ನೋಡು ಇನ್ನು ಮೇಲೆ ನಾವೂ ನಿಮ್ಮಂಗೇನೆ!" ಎಂದಳು ಅತ್ತೆ. ರುಕ್ಕೂ ಕಕ್ಕಾಬಿಕ್ಕಿಯಾಗಿ ಅಡುಗೆ ಮನೆಗೆ ನುಸುಳಿಕೊಂಡಳು. <br /><br /> * * * <br /><br />ಕಿಟಕಿಯಿಂದಾಚೆ ನೋಡುತ್ತಾ ಬಸ್ಸಿನಲ್ಲಿ ಹೋಗುತ್ತಿದ್ದ ರುಕ್ಕೂಗೆ ಒಮ್ಮೆಗೇ ನಗು ಉಕ್ಕಿ ಬಂದು, ಕಿಸಕ್ಕನೆ ನಕ್ಕಳು. ಈಗವಳು ನೆನಪಿಸಿಕೊಂಡದ್ದು ತನ್ನ ’ಎಮ್ಮೆ ಸಾಕುವ’ ಯೋಜನೆಯನ್ನು. ಅದರ ಹಿಂದೆಯೇ ಅಂಬುಜಮ್ಮನ ಮಾತು ನೆನೆಪಾಗಿ ಏನೋ ಒಂದು ಬೇಸರ ಮನಸ್ಸಿಗೆ ಬಂತು. ಬಸ್ಸು ಮುಂದಮುಂದಕ್ಕೆ ಕಮ್ಮನಳ್ಳಿಯ ಕಡೆ ಚಲಿಸುತ್ತಿತ್ತು.ಮುತ್ತುಮಣಿhttp://www.blogger.com/profile/02071788886580605152noreply@blogger.com5tag:blogger.com,1999:blog-4527995432766899913.post-69505213963361927502009-05-24T21:39:00.038+05:302009-06-08T18:41:31.633+05:30ರುಕ್ಮಿಣಿಯ ಅಜ್ಜಿ ಮನೆ - ೪ಇವಳ ಮಾತು ಕೇಳಿ ಅಜ್ಜಿ - ಅಂಬುಜಮ್ಮ ಒಬ್ಬರ ಮುಖ ಒಬ್ಬರು ನೋಡಿಕೊಂಡು ನಕ್ಕರೇ ವಿನಾ ಮರುಮಾತಾಡಲಿಲ್ಲ. ಅಜ್ಜಿ ಹಿಟ್ಟು ಬೀಸಿದ್ದು ಮುಗಿದ ಕೂಡಲೇ ಅಲ್ಲಿಂದ ಹೊರಟು ಬೇಗ ಬೇಗನೆ ಮನೆಗೆ ನಡೆಯುತ್ತಿದ್ದರು. ರುಕ್ಕೂಗೆ ಅವರ ಹೆಜ್ಜೆಗೆ ತಕ್ಕ ಹಾಗೆ ಹೆಜ್ಜೆ ಹಾಕುವುದು ಸ್ವಲ್ಪ ಕಷ್ಟವೇ ಆಯಿತು. ಹೆಚ್ಚು ಕಡಿಮೆ ಓಡಿಕೊಂಡೇ ಬರಿತ್ತಿದ್ದಳು. <br />"ಇದೇನಜ್ಜಿ ಇಷ್ಟೊಂದು ಅರ್ಜೆಂಟಾಗಿ ಬರ್ತಾ ಇದ್ದೀರ?" <br />"ಸ್ವಲ್ಪ, ಡಿಕಾಷ್ಕನ್ ಹಾಕಿ ಇಡಾಣ ನಡೆಯಮ್ಮೋ, ಇನ್ನು ಆಯಪ್ಪ ಬಂದರೆ ಕಾಯಿಸಬೇಕಾಗತ್ತೆ ಪಾಪ..." <br /><br />"ಯಾರು? ಮುನಿಶ್ಯಾಮಪ್ಪ ತಾತ ತಾನೆ? ನೀನ್ಯಾಕೆ ಅವರಿಗೆ ದಿನಾ ಕಾಫಿ ಮಾಡಿಕೊಡೋದು? ಅವರ ಮನೇಲಿ ಅವರು ಕುಡೀಬೇಕಪ್ಪ. ಬಂದ್ರೆ ಸ್ವಲ್ಪ ಕಾಯ್ಲಿ ಬಿಡು..." ದಿನನಿತ್ಯ ಅಜ್ಜಿ ಮುನಿಶ್ಯಾಮಪ್ಪ ತಾತ ಉರುಫ್ ಊರ ಗೌಡರಿಗೆ ಇಷ್ಟೇ ಕಳಕಳಿಯಿಂದ ಕಾಫಿ ಮಾಡಿಕೊಡುವುದು ನೋಡಿದರೆ, ರುಕ್ಕೂಗೆ ಸ್ವಲ್ಪ ಹೊಟ್ಟೆಕಿಚ್ಚು ಹುಟ್ಟುತ್ತಿತ್ತು. ತಿರುಗೀ ಅದೇ ಸುದ್ದಿ ಕೇಳಿ, ಅಜ್ಜಿ ಹಿಂದೆ ಓಡಿ ಬರೋದನ್ನು ನಿಲ್ಲಿಸಿ, ಮೂರಡಿ ಹಿಂದಕ್ಕೆ ನಿಧಾನವಾಗಿ ಹೆಜ್ಜೆ ಹಾಕತೊಡಗಿದಳು. <br /><br />"ಯೋಯ್, ಅಂಗಂತಾರಾ? ಓಹೋಹೋ, ಈ ಕಾಲದವರು ನೀವೆಲ್ಲಾ..." ಅಜ್ಜಿ ಸ್ವಲ್ಪ ಜೋರಾಗಿಯೇ ಗದರಿ ಮುಂದು ಮುಂದಕ್ಕೆ ನಡೆದರು.<br /><br />ರುಕ್ಕೂಗೆ ಈಗ ಕಣ್ಣನೀರು ಕೆನ್ನೆಮೇಲೆ ಬರುವುದೊಂದೇ ಬಾಕಿ. ತಾನು ಜೋರಾಗಿ ಮಾತನಾಡಿದ್ದು ನೆನಪಾಗಿ, ಅಜ್ಜಿ ಹಿಂದಕ್ಕೆ ತಿರುಗಿ, ಬಗ್ಗಿ ಮೆಲ್ಲಗೆ, ಬಾಯಿಯ ಅರ್ಧಭಾಗವನ್ನಷ್ಟೇ ಬಳಸಿಕೊಂಡು "ನಿಮ್ಮ ತಾತಂಗೆ ಬೇಕಬೇಕಾದ ಪೈಸೆ ಎಣಿಸಿದ್ದಾರಮ್ಮ ಅವರು, ಬಾ, ಮಣಿಪಾಯಸ ಮಿಕ್ಕಿದ್ದರೆ ಬಿಸಿ ಮಾಡಿ ಕೊಡ್ತೀನಿ ನಿಂಗೆ" ಎಂದರು. ರುಕ್ಕೂ ಮುಂದೆ ಹೋಗಿ ಅಜ್ಜಿ ಕೈ ಹಿಡಿದು ಮತ್ತೆ ಓಡಲು ಶುರುಮಾಡಿದಳು.<br /><br />ಈಗ್ಗೆ ಇಪ್ಪತೈದು ವರ್ಷಗಳ ಹಿಂದಿನ ಮಾತು, ತಾತ ತನ್ನ ತಾಯಿಯ ತಿಥಿ ಮಾಡಬೇಕಿತ್ತು. ಐವತ್ತು ರೂಪಾಯಿಯನ್ನು ಜೇಬಿಗಿಟ್ಟುಕೊಂಡು ಹೊರಟಿದ್ದರು. ಪೇಟೆಗೆ ಹೋಗುವಷ್ಟರಲ್ಲಿ ನೋಟೇ ಪತ್ತೆ ಇಲ್ಲ. ನಡೆದುಕೊಂಡೇ ವಾಪಸ್ಸು ಬಂದವರು ಸೀದಾ ಹೋಗಿದ್ದು ಮುನಿಶ್ಯಾಮಪ್ಪ ಗೌಡನ ಮನೆಗೆ. ಹೀಗೆ ಹೀಗೆ ಎಂದು ಹೇಳಿದರು. ಮುನಿಶ್ಯಾಮಪ್ಪ ಮರುಮಾತಾಡದೆ ಐವತ್ತು ರೂಪಾಯಿ ತೆಗೆದುಕೊಟ್ಟ. ಅಲ್ಲಿಗೆ ತಾತನ ಕಷ್ಟ ಪರಿಹಾರವಾಯಿತು. ಐವತ್ತು ರೂಪಾಯಿಯಲ್ಲಿ ತಿಥಿ ಮಾಡಬಹುದಾಗಿದ್ದ ಕಾಲವಾಗಿತ್ತೇನೋ ಅದು? ಇಷ್ಟೇ ಅಲ್ಲ, ತಾತನಿಗೆ ಆಗಾಗ ಇಂತಹ ’ಧನಸಹಾಯ’ ಇವರಿಂದ ಆಗುತ್ತಲೇ ಇರುತ್ತದೆ. ಬರಗಾಲ ಬಂದಾಗ ತಾತನ ಓಬಿರಾಯನ ಸಂಬಂಧಿಕರಿಗೆಲ್ಲಾ ಒಮ್ಮಿಂದೊಮ್ಮಿಗೇ ಇವರ ನೆನಪು ಬಂದು, ಹೆಂಡತಿ ಮಕ್ಕಳನ್ನು ಇಲ್ಲೇ ಬಿಟ್ಟಿದ್ದರು. ತಮ್ಮ ತವರೂರಿಗೆ ’ಅಪರೂಪಕ್ಕೆ’ ಬಂದಿಂದ ಹೆಣ್ಣುಮಕ್ಕಳನ್ನು ಯಾರೂ ಮಾತನಾಡಿಸುವ ಹಾಗೇ ಇರಲಿಲ್ಲ. ಹಾಗೆ ಅವರ ಮಕ್ಕಳಿಗೆ ಸೇವೆಯಲ್ಲಿ ಸ್ವಲ್ಪವೂ ಲೋಪವಾಗುವ ಹಾಗಿರಲಿಲ್ಲ. ಸರಿ ಸುಮಾರು ಇಪ್ಪತ್ತು ಮಕ್ಕಳಿದ್ದಿರಬಹುದು ಆ ಗ್ಯಾಂಗಿನಲ್ಲಿ. ಹೊತ್ತಿಗೊತ್ತಿಗೆ ಅಷ್ಟು ಜನಕ್ಕೆ ಮುದ್ದೆ ತೊಳಸಿ ಹಾಕುವುದೇ ಅಜ್ಜಿಗೊಂದು ಮಹಾಕಷ್ಟವಾಗಿತ್ತು. ಇಂತಹ ಸಮಯದಲ್ಲೂ ಮುನಿಶ್ಯಾಮಪ್ಪನೇ ತಾತನಿಗೆ ನೆರವಾಗಿದ್ದವನು. <br /><br />ಗೌಡನಿಗೆ ತನ್ನ ಮನೆಯಲ್ಲಿ ಮಾಡುವ ಕಾಫಿ ಸರಿಬರುತ್ತಿರಲಿಲ್ಲ. ವರ್ಷಗಟ್ಟಲೆಯಿಂದ ಅಜ್ಜಿಯ ಮನೆಯಲ್ಲಿ ನಿತ್ಯ ಸಂಜೆ ಕಾಫಿ ಕುಡಿಯುವುದು ಅಭ್ಯಾಸವಾಗಿಬಿಟ್ಟಿತ್ತು. ಅವರು ಮಾಡಿದ ಸಹಾಯಕ್ಕೆ ಒಂದು ಲೋಟ ಕಾಫಿ ಏನು ಮಹಾ ಎಂದು ಇವರು, ಅವರು ಕೊಡುವ ’ಕಾಸ್ಟ್ಲಿ’ ಕಾಫಿಗೆ ನಾನು ಯಾವತ್ತೋ ಒಂದು ದಿನ ಕೊಡುವ ದುಡ್ಡು ಲೆಕ್ಕವೇ ಎಂದು ಈಯಪ್ಪ. ಅಂತೂ, ಮೊದಲು ’ಧನಸಹಾಯ’ ಶುರುವಾದ್ದೋ ಅಥವಾ ’ಕಾಫಿ’ ಶುರುವಾಯಿತೋ ಎಂಬುದು ಯಾರಿಗೂ ನೆನಪಿರಲಿಲ್ಲ, ಬೇಕಾಗಿಯೂ ಇರಲಿಲ್ಲ. <br /><br />ಅಜ್ಜಿ ರುಕ್ಕೂ ಇಬ್ಬರೂ ಅಂಗಳ ತಲುಪುತ್ತಿದ್ದಂತೆಯೇ, ಅಜ್ಜಿಯ ಹಿರಿಸೊಸೆ ತನ್ನ ಕೈಗಳಲ್ಲಿ ಮೂರು ಬಿಂದಿಗೆಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ಬರುತ್ತಿದ್ದಳು. ಅಜ್ಜಿ ಓಡಿಬರುತ್ತಿರುವುದನ್ನು ನೋಡಿ, "ಓಹೋಹೋ, ಸಾಕು ಬಾರಮ್ಮ ನೀನು ಓಡಿಬರೋ ನಾಟಕ, ಎಲ್ಲೋದ್ರೇ ಅಲ್ಲೇ ಕೂತ್ಕೊಂಬುಡು, ಡಿಕಾಕ್ಷನ್ ಹಾಕಿಟ್ಟಿದ್ದೀನಿ, ಕರೆಂಟ್ ಬಂದಿದೆ, ನಾನು ನೀರಿಗೋಗ್ತೀನಿ, ಇನ್ನು ಕರೆಂಟೊಂದು ಹೊರಟೋದ್ರೆ ನೀರಿಗೂ ಗತಿಯಿಲ್ಲ" ಎಂದು ಕೂಗಿಡುತ್ತಾ ಊರಿನಲ್ಲಿ ಹೊಸದಾಗಿ ಹಾಕಿದ್ದ ನೀರಿನ ಟ್ಯಾಂಕಿನ ಕಡೆಗೆ ಹೊರಟುಬಿಟ್ಟಳು. <br /><br />ಈ ಮನೆಗೆ ಬಂದು ಬಹಳ ವರ್ಷಗಳಾಗಿದ್ದರಿಂದಲೋ ಏನೋ, ತನ್ನ ಅತ್ತೆಯ ಮೇಲೆ ಜೋರು ಮಾಡುವಷ್ಟು ಗೈರತ್ತು ಬಂದುಬಿಟ್ಟಿತ್ತು ಅವಳಿಗೆ. "ಹೋ, ಕಂಡಿದ್ದೀನಿ ಹೋಗ್ತಾಯಿ ನೀನು" ಎಂದು ಅಜ್ಜಿ ಗದರಿಕೊಂಡದ್ದು ಅವಳಿಗೇನು ಕೇಳಿಸಲಿಲ್ಲ. ಅಜ್ಜಿಯ ಮೇಲೆ ಸದಾ ರೇಗುತ್ತಿದ್ದ ಇವಳನ್ನು ಕಂಡರೆ ರುಕ್ಕೂಗೆ ಸರಿಬರುತ್ತಿರಲಿಲ್ಲ. ರುಕ್ಕೂನೇ ಆಗಲಿ ಅವಳೇನು ಪ್ರೀತಿಯಿಂದ ಮಾತಾಡಿಸಿದ್ದಿಲ್ಲ. ಯಾವಾಗಲೂ ಸಿಟ್ಟು. ಮನೆಯಿಂದ ಹೊರಗಿರಬೇಕಾದವರೆಲ್ಲಾ ಇಲ್ಲೇ ಬಂದು ವಕ್ಕರಿಸಿರುವುದು ಅವಳಿಗೆ ಸರಿಕಾಣುವುದಿಲ್ಲ. ಹಾಗೆ ವಕ್ಕರಿಸಿರೋದು ಯಾರು ಅಂದ್ರೆ ರುಕ್ಕೂನೇ. ಬೇಸಿಗೆ ರಜಾ ಬಂದೊಡನೆಯೇ, ತಾತನ ದೊಡ್ಡ ಸಂಸಾರದ ಮೊಮ್ಮಕ್ಕಳೆಲ್ಲಾ ಅಜ್ಜಿ ತಾತಾರನ್ನು ಕಾಣಲು ಬರುತ್ತಾರೆ. ಅವರೆಲ್ಲರಿಗೆ ಅಡಿಗೆ ಮಾಡಿಕ್ಕೋದು, ಅವರ ಬಟ್ಟೆ ಒಗೆಯೋದು ಇವೆಲ್ಲಾ ಅವಳಿಗೆ ಆಗುವುದಿಲ್ಲ. ಮಾಡುವುದೇನೋ ಅಜ್ಜೀನೇ, ಆದರೆ, ತಾನು ತನ್ನ ಗಂಡ ಹೊಲದಲ್ಲಿ ದುಡಿದ ಅಕ್ಕಿ ಬೇಳೆ ಖರ್ಚಾಗುವುದನ್ನು ಕಂಡರೆ ಅವಳಿಗೆ ಹೊಟ್ಟೆ ಉರಿಯುತ್ತಿತ್ತು. ಆ ಬೆಳೆಯಲ್ಲಿ ಉಳಿದ ಮಕ್ಕಳು ಸೊಸೆಯರ ಪಾಲೂ ಇದೆ ಎಂಬುದನ್ನು ನೆನೆಸಿಕೊಳ್ಳಲೂ ಅವಳಿಗೆ ಇಷ್ಟವಿಲ್ಲ. <br /><br />ಒಂದು ದಿನ ರುಕ್ಕೂ ಮನೆಯಲ್ಲಿ ಒಬ್ಬಳೇ ಸಿಕ್ಕಾಗ ಈ ಹಿರೀಸೊಸೆ ಅವಳಿಗೂ ಹೇಳಿದ್ದಳು<br />"ನಿಮ್ಮ ಅಜ್ಜಿ ಯಾರು ಹೇಳು?"<br />"ಇನ್ಯಾರು? ಇಲ್ಲಿದ್ದಾರಲ್ಲ ಅವರೇ ಕಮ್ಮನಳ್ಳಿ ಅಜ್ಜಿ" ರುಕ್ಕೂಗೆ ಅವಳಜ್ಜಿಯ ಹೆಸರು ಗೊತ್ತಿಲ್ಲ. ಅವಳ ಪಾಲಿಗೆ ಅವರು ’ಕಮ್ಮನಳ್ಳಿ ಅಜ್ಜಿ’. <br />"ಅಲ್ಲ, ನಿಮ್ಮಮ್ಮನ್ನ ಈ ಮನೆಯಿಂದ ಮದುವೆ ಮಾಡಿ, ನಿಮ್ಮಪ್ಪನ ಮನೆಗೆ ಕೊಟ್ಟಿದೆ. ಅವರು ಅಲ್ಲೇ ಇರಬೇಕು ಇಲ್ಲಿಗೆ ಬರಬಾರ್ದು".<br />"ಅಂದ್ರೆ, ನಮ್ಮಜ್ಜಿ ಯಾರು?"<br />"ಅಂದ್ರೆ, ನಿಮ್ಮಪ್ಪ ಅವರ ಅಮ್ಮ ಇದ್ದಾರಲ್ಲ , ಬೆಂಗಳೂರು ಅಜ್ಜಿ, ಅವರು ಮಾತ್ರಾನೇ ನಿಂಗೆ ಅಜ್ಜಿ. ಇವರಲ್ಲ. ಯಾತಕ್ಕೆ ಇವರ ಹಿಂದಿಟ್ಟುಕೊಂಡಿರ್ತೀಯ ಯಾವಾಗಲೂ?"<br />ಈ ಮಾತನ್ನು ಕೇಳಿ ರುಕ್ಕೂಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ಇದನ್ನು ಯಾರೊಟ್ಟಿಗಾದರೂ ಹೇಳಿಕೊಳ್ಳಲೂ ಇಲ್ಲ. ತನ್ನಷ್ಟಕ್ಕೆ ತಾನು ಎಂದಿನಂತೆಯೆ ಇದ್ದುಬಿಟ್ಟಳು. ಅವರು ಏನು ಹೇಳುತ್ತಿದ್ದಾರೆಂಬುದನ್ನು ಮನಸ್ಸಿಗೆ ತಂದುಕೊಳ್ಳುವಷ್ಟು ಬುದ್ಧಿಯೂ ಅವಳಿಗೆ ಇರಲಿಲ್ಲ. <br /><br />ಬೆನ್ನಮೇಲೆ ಮೂಟೆಯೊಂದನ್ನು ಹೊತ್ತುಕೊಂಡು ತಮ್ಮ ಮನೆ ಕಡೆಗೇ ಬರುತ್ತಿದ್ದ ವೆಂಕಟರಾಜನನ್ನು ಗಮನಿಸಿದ ರುಕ್ಕೂ, ಒಳಗೋಡುತ್ತಿದ್ದ ಅಜ್ಜಿಯನ್ನು ಕೂಗಿ ಕರೆದಳು. <br />"ಹೋ, ಬಾಪ್ಪೋ, ಅದೇನು ಇಷ್ಟು ಬೇಗ..."<br />"ಮೊದಲ್ ಮೂಟೆನಮ್ಮಾ, ಒಣಾಕ್ ಬುಡ್ತೀನಿ ಇಲ್ಲೇ"<br />"ಬೇಡ ಬೇಡ, ಹೊತ್ತು ಮುಳುಗ್ತಾ ಇದೆ, ನಾಳೆ ನಾವೇ ಹಾಕ್ಕೊಳ್ತೇವೇಳು, ಅಗೋ ಆ ಮಡೂನಲ್ಲಿ ಇಟ್ಬುಡು ಹೋಗು".<br />ಅಜ್ಜಿ ಏನೋ ಭಾರಿ ಖುಷಿಯಾದ ಹಾಗೆ ಇತ್ತು. ವೆಂಕಟರಾಜು ತಂದಿದ್ದು ಒಂದು ಮೂಟೆ ಭತ್ತವನ್ನು. ಅಂಗಳದಲ್ಲೇ ಸುರಿದು ಬಿಟ್ಟರೆ, ಮನೆಗೆ ಬರುತ್ತಿದ್ದಂತೆಯೇ ಅಜ್ಜಿಯ ಮಗನು ನೋಡುತ್ತಾನೆಂದು ಆಸೆ ಅವನಿಗೆ. ಅದು ಕೈಗೂಡಲಿಲ್ಲ. ಅವನಿಗೇನು ಅದರಿಂದ ಬೇಸರವಾಗಲಿಲ್ಲ. <br /><br />ಬಿತ್ತನೆ ಮಾಡುವ ಹೊತ್ತಿಗೆ ಅವನ ಬಾವಿಯಲ್ಲಿ ನೀರು ಬತ್ತಿಹೋಗಿತ್ತು. ಊರಿಗೆ ವಿದ್ಯಾವಂತನಾದ ಅಜ್ಜಿಯ ಮಗನು ಆಗಲೇ ಕೊಳವೆ ಬಾವಿ ಕೊರೆಸಿದ್ದ. ಗಂಗಾದೇವಿಯು ಭಾಳ ಖುಷಿಗೊಂಡು, ಕೆಳಗಿಂದ ಮೇಲಕ್ಕೆ ಬೇಕುಬೇಕೆಂದಾಗಲೆಲ್ಲಾ ಚಿಮ್ಮುತ್ತಿದ್ದಳು. ಆ ಕಾಲಕ್ಕೆ ಅಜ್ಜಿಯ ಮಗ ಅವನ ತೋಟಕ್ಕೆ ನೀರು ಬಿಟ್ಟಿದ್ದಕ್ಕೆ, ಈಗ ಒಂದು ಮೂಟೆ ಭತ್ತ ಇವರಿಗೆ ಬಂದು ಇಳಿದಿದ್ದು. ಇನ್ನು ಈ ಭತ್ತದಿಂದ ಅಜ್ಜಿಯ ಮಗ ಗದ್ದೆ ಮಾಡುವವನಿದ್ದ.ಮುತ್ತುಮಣಿhttp://www.blogger.com/profile/02071788886580605152noreply@blogger.com9tag:blogger.com,1999:blog-4527995432766899913.post-87779937106440872292009-05-15T17:07:00.062+05:302009-05-24T21:55:23.706+05:30ರುಕ್ಮಿಣಿಯ ಅಜ್ಜಿ ಮನೆ - ೩ಬೇಸಿಗೆ ಕಾಲದಲ್ಲಿ ಗೌಡರ ಮನೆಯ ದೊಡ್ಡ ಅಂಗಳದಲ್ಲಿ ಸಾಲುಸಾಲಾಗಿ ಆಳುಗಳು ಕೂತು ಹುಣಸೆಕಾಯಿ ಹೊಡೆಯುತ್ತಾರೆ. ಕೆಲವರು ಹುಣಸೆಕಾಯಿಯ ಸಿಪ್ಪೆ ಬಿಡಿಸಿ ಹಾಕುತ್ತಾರೆ, ಇನ್ನೂ ಕೆಲವರು ಸಿಪ್ಪೆ ತೆಗೆದ ಹುಣಸೆಹಣ್ಣುಗಳನ್ನು ಒಡೆದು ಬೀಜಗಳನ್ನು ಬೇರ್ಪಡಿಸುತ್ತಾರೆ. ಕಾಯನ್ನು ಒಂದು ಪಕ್ಕಕ್ಕೆ ಬಾಗಿರುವಂತೆ ನಿಲ್ಲಿಸಿ ಅದರ ಸೊಂಟದ ಮೇಲೆ ಸುತ್ತಿಗೆಯಿಂದ ಒಂದು ಏಟು ಕೊಡುವುದು. ಅದು ಎರಡು ಸೀಳಾಗುತ್ತಿದ್ದಂತೆಯೇ, ಬೀಜಗಳನ್ನು ಒಂದು ಪಕ್ಕಕ್ಕೆ ಹಣ್ಣನ್ನು ಇನ್ನೊಂದು ಪಕ್ಕಕ್ಕೆ ಹಾಕುವುದು. ಹೀಗೆ ಆ ಆಳುಗಳ ಬಲಗೈ ಮೇಲಕ್ಕೂ ಕೆಳಕ್ಕೂ, ಎಡಗೈ ಬಲಕ್ಕೂ ಎಡಕ್ಕೂ ಒಂದೇ ಸಮನೆ ಯಂತ್ರದ ರೀತಿ ಆಡುವುದನ್ನು ನೋಡುವುದೇ ರುಕ್ಕೂಗೆ ಒಂದು ರೀತಿಯ ಅನುಭವ. <br /><br />ರುಕ್ಕೂ ಮೆಲ್ಲಗೆ ಹೋಗಿ ಅವರಲ್ಲೊಬ್ಬರ ಹತ್ತಿರ ’ಸೇಫ್ ಡಿಸ್ಟೆನ್ಸ್’ ಎನ್ನಿಸುವಷ್ಟು ದೂರದಲ್ಲಿ ಕುಳಿತುಕೊಂಡಳು. ಅವರ ಕಾರ್ಯವೈಖರಿಯದು ಒಂದು ರೀತಿಯಾದರೆ ಅವರ ವಾಕುವೈಖರಿ ಇನ್ನೊಂದು ಅಧ್ಬುತವೇ. ’ಅವನಿದ್ದಾನೇನೆ ಇನ್ನೂ ಊರಲ್ಲಿ?’ ಎಂದು ಈ ಮೂಲೆಯಿಂದ ಒಂದು ಧ್ವನಿ. ’ಅವನು’ ಯಾರು ಎಂದು ರುಕ್ಕೂ ಯೋಚಿಸುತ್ತಿರುವಷ್ಟರಲ್ಲೇ ’ಅತ್ತಕಡೆಯೋರು ಬಂದು ಕರಕೊಂಡು ಹೋದರಂತೆ’ ಎಂದು ಇನ್ನೊಂದು ಮೂಲೆಯಿಂದ ಧ್ವನಿ ಬಂದು ಹೋಗಿರುತ್ತದೆ. ’ಅತ್ತಕಡೆ’ ಯಾವುದು ಎಂದು ರುಕ್ಕೂ ಯೋಚಿಸುವಷ್ಟರಲ್ಲಿ ’ಈ ಯಮ್ಮಂದಾದರೂ ಸರಿ ಹೋದಿತೂ ಅಂತ ನಾವಿದ್ರೇ, ಇವರದ್ದು ದಿನಾ ದಿನಾ ರಗಳೆ ಜಾಸ್ತೀನೆ ಆಗ್ತಾ ಇದೆ’, ಅಷ್ಟರಲ್ಲಿ ಮತ್ತೊಂದು ಧ್ವನಿ. ರುಕ್ಕೂ, ಆ ವಿಷಯವನ್ನು ಅರ್ಥಮಾಡಿಕೊಳ್ಳುವ ಗೋಜೇ ಬೇಡ, ತಾನಾಯಿತು ತನ್ನ ಹುಣಿಸೆಬೀಜವಾಯಿತು ಎಂದು ಕುಳಿತುಕೊಂಡುಬಿಟ್ಟಳು. <br /><br />ಆದರೂ ಹೆಚ್ಚಿಗೆ ಹೊತ್ತು ಇವಳಿಗೆ ಸುಮ್ಮನಿರಲು ಸಾಧ್ಯವಿಲ್ಲ. ಆ ಹೆಂಗಸರಲ್ಲಿ ಎಷ್ಟೊಂದು ಜನ ಇವಳ ’ಫ್ರೆಂಡ್ಸ್’ ಬೇರೆ. ಮಾಮೂಲಾಗಿ ಇವಳ ಮಾತುಗಳು ಪ್ರಶ್ನೆಗಳಿಂದಲೇ ಆರಂಭವಾಗುತ್ತದೆ. <br /><br />ನೀವ್ಯಾಕೆ ಇವರ ಮನೇಲಿ ಬಂದು ಕೆಲಸ ಮಾಡುವುದು? <br />ಹೊಟ್ಟೆಗೆ ಬೇಕಲ್ಲಮ್ಮ...<br />ನೀವೇ ಹುಣಿಸೆ ಮರ ಬೇಳೀಬೋದಲ್ಲ?<br />ನಮಗೆಲ್ಲಮ್ಮ ಆ ತಾಕತ್ತು...<br />ನಿಮ್ಮ ಹತ್ರ ತೋಟ ಇಲ್ಲವಾ?<br />ಇದೆ ಎಲ್ಲೋ ಒಂದಷ್ಟು, ಅಂಗೈ ಅಗಲ ಅದರಲ್ಲೇನು ಬೇಳೆಯೋದು...<br />ನೀವು ಏನು ಮಾಡಬೇಕು ಗೊತ್ತಾ? ಮೊದಲು ಒಂದು ಹುಣಿಸೆ ಮರ ನೆಡ್ರಿ, ಅದರಿಂದ ಬಂದ ಲಾಭದಲ್ಲಿ ಇನ್ನೊಂದು ಮರ ನೆಡ್ರಿ, ಹಾಗೇ ಮಾಡ್ತಾ ಇದ್ರೆ ನೀವು ದೊಡ್ಡ ಸಾಹುಕಾರರಾಗಬಹುದು...<br /><br />ರುಕ್ಕೂಳ ಈ ಮಾತಿಗೆ ಅವರೆಲ್ಲರೂ ಒಂದೇ ಸಾರಿಗೆ ನಕ್ಕುಬಿಟ್ಟರು. ರುಕ್ಕೂ ಕಣ್ಣಲ್ಲಿ ಮಾತ್ರ ಅಲ್ಲಿ ಕೂತಿದ್ದ ಮಂಗಮ್ಮ ಇನ್ನೊಂದೈದಾರು ವರ್ಷಗಳಲ್ಲಿ ಗೌಡತಿಯ ಹಾಗೆ ಒಡವೆ ವಸ್ತ್ರ ಹಾಕಿಕೊಂಡು ಮೆರೆಯುವ ದೃಶ್ಯ ಕಣ್ಣ ಮುಂದೆ ಬಂದು ನಿಂತಿತು. ತಿರುಗೀ ಅವಳ ಮಾತು ಶುರುವಾಯಿತು,<br /><br />ನಿಮ್ಮ ಮಕ್ಕಳನ್ನ ಯಾವ ಸ್ಕೂಲಿಗೆ ಸೇರಿಸ್ತೀರ?<br />ಇರೋದೊಂದು ಇಸ್ಕೂಲು...<br />ನೀವು ಇಲ್ಲಿ ಬಂದು ಕೆಲಸ ಮಾಡೋ ಥರ, ಗೌಡ್ರು ನಿಮ್ಮನೇಗೆ ಬಂದು ಕೆಲಸ ಮಾಡ್ತಾರ?<br />ಮೆಲ್ಲಿಗೆ ಮಾತಾಡಮ್ಮೋ, ನೀನೊಳ್ಳೇ, ಒಪ್ಪೊತ್ತಿನೂಟಕ್ಕೂ ಕಲ್ಲ್ ಹಾಕಿಬಿಡ್ತೀಯ...<br />ಅದ್ಯಾಕೆ, ನಾನು ಹೇಳ್ದಂಗೇ ನೀವು ಹುಣಿಸೆ ಮರ ಬೆಳಸ್ರೀ, ಆವಾಗ ನಾನೇಳ್ದಂಗ್ ಆಗ್ದೇ ಇದ್ರೆ ಕೇಳ್ರಿ...<br />ಸರಿಯೋಯ್ತು ...<br />ಮತ್ತೆ ಅವರೆಲ್ಲಾ ನಕ್ಕುಬಿಟ್ಟರು. ಮತ್ತೆ ಮಾತು ಶುರುವಾಯಿತು. <br /><br />"ಇವರಜ್ಜಿ ನೋಡಮ್ಮಾ, ನಮಗೆ ಊಟ ಹಾಕ್ತಾ ಇದ್ದದ್ದು"<br />"ಮೊದಲು ತಿನ್ರೇ ಬಿಸಿಯಾಗಿರೋದ್ನಾ, ಆಮೇಲಿರಲೀ ನಿಮ್ಮ ಕೆಲಸ ಅನ್ನೋಳು ಮಹಾತಾಯಿ"<br /><br />ಅಷ್ಟರಲ್ಲಿ ಎಲ್ಲರೂ ಊಟಕ್ಕೆ ಏಳಬೇಕೆಂದು ಗೌಡರ ಮೊಮ್ಮಗನು ಬಂದು ಕರೆದನು. ನೂರು ನೂರಿಪ್ಪತ್ತು ಜನಕ್ಕೆ ಹೇಗೆ ಅಡಿಗೆಗಳನ್ನು ಮಾಡಿಹಾಕುತ್ತಾರೋ ಎಂಬ ಆಲೋಚನೆ ಹೀಗೆ ಬಂದು ಹಾಗೆ ಹೋಯಿತು, ರುಕ್ಕೂಗೆ. ಇನ್ನು ನಾನೊಬ್ಬಳು ಇಲ್ಲಿ ಕೂತಿರುವುದು ದಂಡ, ಎಲ್ಲಿಗೆ ಹೋಗುವುದೆಂದು ಯೋಚನೆ ಹತ್ತಿಕೊಂಡಿತು. ಅಜ್ಜಿ ಅವಳು ಕೂತಿದ್ದ ಆವರಣದ ಕಲ್ಲು ಕಾಪೌಂಡಿನ ಆ ಕಡೆಯ ಸೊಂದಿಯಲ್ಲಿ ತೂರಿ ಹೋಗುತ್ತಿರುವುದು ಕಾಣಿಸಿತು. ಮತ್ತೆ ಇವಳ ಕಣ್ಣು ತಪ್ಪಿಸಿ ಎಲ್ಲೋ ಹೋಗುತ್ತಿದ್ದಾರೆ. ಇನ್ನೆಲ್ಲಿ? ಸೊಂದಿಯಲ್ಲಿ ತೂರಿದರೆ ಅಂಬುಜಮ್ಮನ ಮನೆಯೇ. ಈಗಲೇ ಬೇಡವೆಂದು ಬೇಟೆಗಾಗಿ ಕಾಯುವ ಹುಲಿಯಂತೆ ಕೂತೆ ಇದ್ದಳು. ಅಜ್ಜಿ ಮನೆಯ ಒಳಕ್ಕೆ ಹೋಗಿದ್ದು ಖಾತ್ರಿಯಾದ ಮೇಲೆ, ತನ್ನ ಮನೆಗೆ ಓಡಿಹೋಗಿ ಹುಣಸೆಬೀಜಕ್ಕೆ ಒಂದು ನೆಲೆ ಕಾಣಿಸಿ, ಅಲ್ಲಿಂದ ಅಂಬುಜಮ್ಮನ ಮನೆ ಕಡೆ ದಾಪುಗಾಲು ಹಾಕಿದಳು. <br /><br />ಇವಳು ಹೋಗುವಷ್ಟರಲ್ಲಿ ಅಜ್ಜಿ ತನ್ನ ಮುಂದಿನ ಕೆಲಸಕ್ಕೆ ಅಣಿಮಾಡಿಕೊಳ್ಳುತ್ತಿದ್ದರು. ಕೆಳಗಿನ ಕಲ್ಲನ್ನು - ಮೇಲಿನ ಕಲ್ಲನ್ನು ಸರಿಯಾಗಿ ಜೋಡಿಸಿ, ತೂತಿಗೆ ಒಂದು ಮರದ ಹಿಡಿಯನ್ನು ಜೋಡಿಸಿ, ಗುಂಡುಕಲ್ಲಿನಿಂದ ಅದರ ತಲೆ ಮೇಲೆ ಕುಟ್ಟಿ ಭದ್ರ ಮಾಡಿದರು. ಇವಳು ಇಲ್ಲಿಗೂ ಬಂದದ್ದು ನೋಡಿ ಅಜ್ಜಿಗೆ ಬಾಯಿಂದ ಮಾತೇ ಹೊರಡಲಿಲ್ಲ. "ನೋಡಮ್ಮೋ" ಎಂದಷ್ಟೇ ಹೇಳಿ ಅಂಬುಜಮ್ಮನ ಕಡೆಗೊಂದು ಸಾರಿ, ರುಕ್ಮಿಣಿಯ ಕಡೆಗೊಂದು ಸಾರಿ ನೋಡಿದರು. ಅಂಬುಜಮ್ಮನಿಗೆ ಈಗಷ್ಟೇ ಅಜ್ಜಿ ಅವಳ ಬಗ್ಗೆ ಹೇಳಿದ್ದ ಮಾತುಗಳು ನೆನಪಿಗೆ ಬಂದು ನಗು ತರಿಸಿಬಿಟ್ಟವು. ಈಗ ಅಜ್ಜಿಗೂ ಅಂಬುಜಮ್ಮನಿಗೂ ಮಾತುಕಥೆ ಶುರುವಾದವು. <br /><br />"ಎಷ್ಟು ಸೇರು ತಾಯಿ ನೀನು ಹೊಂಚುಹಾಕಿಟ್ಟಿರೋದು?" <br />"ಇನ್ನೂರೈವತ್ತು ಸೇರದೆ, ಗಟ್ಟಿಗಾತಿ ನೀನು, ಆಗಲ್ಲೇನು?"<br />"ಹೌದೇಳಮ್ಮೋ, ಸತಿ ಸಕ್ಕೂಬಾಯಿ ನಾನು, ರಾತ್ರಿಯೆಲ್ಲಾ ನಿನ್ನ ಮನೇಲಿ ಕೂತು ಹಿಟ್ಟು ಬೀಸ್ತೀನಿ" ಅಜ್ಜಿ ಸ್ವಲ್ಪ ಹುಸಿ ಕೋಪವನ್ನು ತೋರಿದರು. <br />ಅಂಬುಜಮ್ಮನಿಗೆ ನಗುವೇ ಬಂದುಬಿಟ್ಟಿತು. "ನನಗೊತ್ತಿಲ್ಲೇನು ನಿನ್ನ ಡ್ಯೂಟಿ, ನಾಲ್ಕು ಗಂಟೇಗೆ ಹೋಗಿ ಗೌಡ್ರಿಗೆ ಕಾಫಿ ಮಾಡ್ಕೊಡೋದು. ಒಂದು ಮೂವತೈದು ಸೇರದೆ ಹೇಗೋ ಮಾಡಿ ಇವ್ವತ್ತು ಬೀಸಿಟ್ಟುಕೊಂಡುಬಿಟ್ರೆ, ಇನ್ನೊಂದು ತಿಂಗಳು ಯೋಚನೆ ಇಲ್ಲ".<br /><br />ಅಂಬುಜಮ್ಮ ಮುಕ್ಕಾಲು ತುಂಬಿದ್ದ ರಾಗಿ ಮೂಟೆಯೊಂದನ್ನು ತಂದು ಬೀಸೋಕಲ್ಲಿನ ಮುಂದೆ ಸುರಿದರು. ಇಬ್ಬರೂ ಸೇರಿ ಅದ್ಯಾವುದ್ಯಾದೋ ಪದ ಹೇಳುತ್ತಾ ರಾಗಿ ಬೀಸತೊಡಗಿದರು. ರುಕ್ಕೂಗೆ ಇಂಥವುದರ ಮುಂದೆ ಸುಮ್ಮನೆ ಕೂತಿರಲು ಸಾಧ್ಯವಿಲ್ಲ, ’ನಾನು’ ’ನಾನು’ ಎಂದುಕೊಳ್ಳುತ್ತಾ, ಮೇಲಿಂದ ಕಾಳು ಸುರಿಯುವುದು, ಬೀಸಿದ ಹಿಟ್ಟನ್ನು ಜರಡಿ ಹಿಡಿಯುವುದು ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕೈ ಹಾಕುತ್ತಿದ್ದಳು. ಆದರೆ, ಬೇರೆ ಮಕ್ಕಳಿಂದ ಆಗುವ ಹಾಗೆ ಇವಳಿಂದ ಒಂದಕ್ಕೆರಡು ಕೆಲಸವಾಗುವುದಿಲ್ಲ. ಅಲ್ಪ ಸ್ವಲ್ಪ ಮಾಡಿದರೂ ಸರಿಯಾಗೆ ಮಾಡುತ್ತಾಳೆ. ಹಾಗಾಗಿ, ಅವರಿಬ್ಬರೂ ಇವಳನ್ನು ತಡೆಯಲಿಲ್ಲ. ತಡೆಯಲಾಗದೇ ಅಂಬುಜಮ್ಮ ಹೇಳೇಬಿಟ್ಟರು. "ನಿನಗ್ಯಾಕಮ್ಮ ಬೆಂಗಳೂರು, ಇಲ್ಲೆ ಇದ್ಬುಡು ಎಮ್ಮೆಗಳ ಮೇಸ್ಕೊಂಡು, ಬೆಂಗಳೂರ್ನಲ್ಲಿ ನೀನ್ ದಂಡ’. ಎಲ್ಲಾ ಸರಿಯಾದರೂ ರುಕ್ಕೂ ಸ್ವಲ್ಪ ಮಂದ, ಚಾಲಾಕಿತನವಿಲ್ಲ. ಆದ್ದರಿಂದಲೇ, ಅಂಬುಜಮ್ಮ ’ಬೆಂಗಳೂರಿನಲ್ಲಿ ದಂಡ’ ಎಂದದ್ದು. ಅಂಬುಜಮ್ಮನ ಮಾತು ಕೇಳಿ ರುಕ್ಕೂಗೆ ಗಲಿಬಿಲಿ ಆಗಿಹೋಯ್ತು. ಇದೇನು ಹೊಗಳಿಕೆಯೋ ತೆಗಳಿಕೆಯೋ? ಎಲ್ಲಾ ಸರಿ, ಆದರೆ ’ದಂಡ’ ಅಂದದ್ದು ಏಕೆ? ಆದರೂ ಸೋಲೊಪ್ಪದೇ ’ಹ್ಞೂ, ಏಳನೇ ಕ್ಲಾಸಿಗೆ ಇಲ್ಲೇ ಸೇರ್ಕೋತಿನಿ. ಎರಡು ಎಮ್ಮೆ ಸಾಕ್ತೀನಿ.’ ಎಂದಳು. ತಕ್ಷಣವೇ ಅಮ್ಮನ ಕಿವಿಗೆ ಈ ಮಾತು ಬಿದ್ದರೆ ಏನು ಗತಿಯಪ್ಪಾ ಎಂದು ಚಿಂತೆಗಿಟ್ಟುಕೊಂಡಿತು.ಮುತ್ತುಮಣಿhttp://www.blogger.com/profile/02071788886580605152noreply@blogger.com11tag:blogger.com,1999:blog-4527995432766899913.post-83965248525916127192009-05-13T10:29:00.062+05:302009-05-13T11:40:59.500+05:30ರುಕ್ಮಿಣಿಯ ಅಜ್ಜಿ ಮನೆ - ೨ಹೊರಕ್ಕೆ ಓಡಿ ಬಂದವಳೇ ರಾಶಿಯಿಂದ ಹುಲ್ಲನ್ನು ಎಳೆದು ತಂದು ಎಮ್ಮೆಗಳ ಮುಂದಕ್ಕೆ ಹಾಕಿದಳು. ಹಾಗೆ ಅದರೊಟ್ಟಿಗೆ ಮಾತಾಡುತ್ತಾ, ಅದರ ಮೈ ನೇವರಿಸುತ್ತಾ ಕೂತಿದ್ದಳು. ದೊಡ್ಡವಳಾದ ಮೇಲೆ ಬೆಂಗಳೂರಿನಲ್ಲಿ ಎರಡು ಎಮ್ಮೆಗಳನ್ನು ಸಾಕಿದರೆ, ಹಾಲು ತರುವ ತೊಂದರೆಯೇ ಇರುವುದಿಲ್ಲವಲ್ಲ ಎಂದು ಆಗಾಗ ಅವಳು ಆಲೋಚಿಸುತ್ತಿರುತ್ತಾಳೆ. ಇದನ್ನು ತನ್ನ ಅಣ್ಣನ ಬಳಿ ಒಂದು ಸಾರಿ ಹೇಳಿದ್ದಳು. "ಹೌದು ಇಬ್ಬರೂ ಸೇರಿ ಸಾಕೋಣ, ಹಾಗೇ ಡೈರಿಗೂ ಎರಡು ಲೀಟರ್ ಹಾಲು ಹಾಕೋಣ, ಲಾಭ ಬರುತ್ತೆ" ಎಂದು ಅವನು ಹೇಳಬಹುದೆಂದು ಇವಳು ಎಣಿಸಿದ್ದಳು. ಆದರೆ, ಅವನು ಅದನ್ನು ಕೇಳಿದೊಡನೆಯೇ ಜೋರಾಗಿ ನಕ್ಕುಬಿಟ್ಟ, "ಎಮ್ಮೆ ಸಾಕ್ತೀಯೇನೆ, ಎಲ್ಲಿ ಕಟ್ಟಿಹಾಕ್ತೀಯಾ? ಸಗಣಿ ಏನು ಮಾಡ್ತೀಯಾ, ಅಮ್ಮಾ ನೋಡಮ್ಮಾ ಇವಳು ಎಮ್ಮೆ ಸಾಕ್ತಾಳಂತೆ!" ಎಂದು ಅಣಕಿಸಿಬಿಟ್ಟ. ಆವತ್ತು ಅವನು ಮಾಡಿದ ಅವಮಾನಕ್ಕೆ ಸರಿಯಾಗಿ ಪಾಠ ಕಲಿಸಬೇಕು, ಎಮ್ಮೆಗಳನ್ನು ಸಾಕಿ ತೋರಿಸಲೇಬೇಕು ಎಂದು ಯೋಚಿಸುತ್ತಾ ಕೂತಿರುವಾಗಲೇ, ಅಜ್ಜಿ ಸಾಕಮ್ಮನ ಮನೆಯಿಂದ ಹೊರಕ್ಕೆ ಬಂದರು. "ನಡಿಯಮ್ಮೋ, ನಿಮ್ಮ ತಾತನಿಗೆ ಊಟಕ್ಕೆ ಹೊತ್ತಾಯಿತು " ಎಂದು ಹೊರಟರು. ಇವಳು ಅವರ ಹಿಂದೆಯೇ ಮನೆಗೆ ಬಂದಳು. <br /><br />ಅಜ್ಜಿ ತಾತನಿಗೂ ರುಕ್ಕೂಗೂ ಊಟಬಡಿಸಿ, ತೋಟದಲ್ಲಿದ್ದವರಿಗೆ ಊಟ ತೆಗೆದುಕೊಂಡು ಹೋಗಲು ಬಂದಿದ್ದ ’ಚೌಟ’ನ ಕೈಯಲ್ಲಿ ಊಟ ಕಳಿಸಿದರು. ’ಚೌಟು’ ಎಂದರೆ ಕಿವಿ ಕೇಳದೇ, ಮಾತು ಬಾರದೇ ಇರುವುದು. ಆ ಮನುಷ್ಯನಿಗೆ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ, ಮಾತು ಸರಿಯಾಗಿ ಬರುತ್ತಿರಲಿಲ್ಲ, ಹಾಗಾಗಿ, ’ಚೌಟೋನು’ ಎಂಬ ಹೆಸರೇ ಅವನಿಗೆ ಖಾಯಂ ಆಗಿ ಹೋಗಿತ್ತು. ಚೌಟೋನು ಅತ್ತ ಹೋಗುತ್ತಲೇ, ಅಜ್ಜಿಗೆ ಇವತ್ತು ಅಡಿಗೆ ಸ್ವಲ್ಪ ಹೆಚ್ಚಿಗೆ ಮಿಕ್ಕಿ ಹೋಗಿರುವುದು ಗಮನಕ್ಕೆ ಬಂತು. ’ಏ ಕರಿಯೇ ಅವನ್ನ, ಇಲ್ಲೇ ಊಟ ಮಾಡ್ಲೀ’ ಎಂದು ಅಡುಗೆ ಮನೆಯಿಂದ ಹೊರಕ್ಕೆ ಓಡಿಬಂದರು. ರುಕ್ಕೂಗೆ ಅವನನ್ನು ಮಾತಾನಾಡಿಸುವುದು ಹೇಗೆಂದು ಇವತ್ತಿಗೂ ತಿಳಿದಿರಲಿಲ್ಲ. ಏನೂ ಮಾಡಲಾಗದೆ ಸುಮ್ಮನೆ ನೋಡುತ್ತಾ ನಿಂತುಬಿಟ್ಟಳು. ಹೊರಗೆ ಬಂದ ಅಜ್ಜಿ, ಬೀದಿಯಲ್ಲಿ ಹೋಗುತ್ತಿದ್ದ ಒಬ್ಬ ಹುಡುಗನನ್ನು ಕರೆದು ’ಗೋಪಿ,ಗೋಪಿ ಅವನಿಗೆ ಹೇಳೋ ನಮ್ಮ ಮನೇಗೆ ಊಟಕ್ಕೆ ಬರೋಕ್ಕೆ’ ಎಂದು ಕೂಗಿದರು. ಗೋಪಿ ಓಡಿಹೋಗಿ ಚೌಟನನ್ನು ಹಿಡಿದು ಕೈಸನ್ನೆ ಬಾಯ್ಸನ್ನೆ ಮಾಡಿ ಹೇಳಿದ. ಚೌಟನು ತಿರುಗಿ ಹೂ ಎನ್ನುವಂತೆ ತಲೆಯಾಡಿಸಿ ಹೊರಟುಹೋದ. ಅಜ್ಜಿಗೆ ಈಗ ಒಂದು ರೀತಿ ಸಮಾಧಾನವಾದಂತಾಗಿ ಒಳಕ್ಕೆ ನಡೆದರು. <br /><br />ರುಕ್ಕು ಹೊರಗೆ ಜಗಲಿಯ ಮೇಲೆ ಕೂತಿದ್ದಳು. ಮಧ್ಯಾಹ್ನ ನಿದ್ದೆ ಮಾಡಬಾರದು ಎಂದು ಅವಳ ಶಪಥ. ಇವಳು ನಿದ್ದೆ ಮಾಡಿದಾಗಲೆಲ್ಲಾ, ಅಜ್ಜಿ, ತಾತ, ಕಡೆಗೆ ಅವಳ ಅಣ್ಣನೂ ಕೂಡ ಏನಾದರೊಂದು ತರಲೆ ಮಾಡಿಬಿಟ್ಟಿರುತ್ತಾರೆ. ಇವಳು ಕಟ್ಟಿದ್ದ ಮನೆಯನ್ನು ಬೀಳಿಸಿಬಿಡುವುದು. ಹುಡುಕಿಟ್ಟಿದ್ದ ’ರೇರ್’ ಬೀಜಗಳನ್ನು ಕಸಕ್ಕೆ ಎಸೆದು ಬಿಡುವುದು, ಹೀಗೆ ಏನೇನೋ. "ರುಕ್ಕೂ, ಒಂದು ಹೊತ್ತು ಹಾಗೆ ಉರುಳ್ಕೋಬಾರ್ದಾ" ದಿಂಬು ನೆಲದ ಮೇಲೆ ಹಾಕುತ್ತಾ, ಅಜ್ಜಿ ಕೂಗಿದರು. "ನೀನು ಮಲಕ್ಕೋ ಅಜ್ಜಿ, ಇಲ್ಲಿ ಕಟ್ಟಿರೋ ದೇವಸ್ಥಾನಾನ ಏನು ಮಾಡ್ಬೇಡ" ಎಂದು ಅಜ್ಜಿಗೆ ಕಟ್ಟಪ್ಪಣೆ ಹೊರೆಸಿ ಬೀದಿಗಿಳಿದಳು. ಇದು ಅವಳ ಫೇವರೆಟ್ ಕೆಲಸ. ಬೇಸಿಗೆ ಕಾಲವಾದ್ದರಿಂದ ಎಲ್ಲೆಲ್ಲೂ ಹುಣಸೇ ಹಣ್ಣು, ಹುಣಸೇ ಬೀಜದ ಮಳೆ. ಬೀದಿಯಲ್ಲಿ ಸುಮ್ಮನೆ ನಡಕೊಂಡು ಹೋಗುತ್ತಿದ್ದರೇ ಸಾಕು, ಕೈಯಿಗೊಂದು, ಕಾಲಿಗೆರಡು ಹುಣಸೇ ಬೀಜ ಸಿಗುತ್ತದೆ. ಒಂದೊಂದಾಗಿ ಬೀಜಗಳನ್ನು ಆರಿಸಿಕೊಳ್ಳುತ್ತಾ ತನ್ನ ಉದ್ದನೆಯ ಜಾಕೀಟಿಗೆ ಹಾಕಿಕೊಳ್ಳುತ್ತಾ ಮುಂದಕ್ಕೆ ನಡೆಯುತ್ತಿದ್ದಳು. ಒಂದಿನ್ನೂರು-ಮುನ್ನೂರು ಬೀಜ ಆಗಿಬಿಟ್ಟರೇ ಸಾಕು ಎಂದು ಅವಳ ಲೆಕ್ಕಾಚಾರ. ತನ್ನ ಊರಿಗೆ ಹೋದ ನಂತರ ’ಏಳುಗುಣಿ ಮನೆ’, ’ಸರಿ ಬೆಸ’, ’ಚೌಕಾಬಾರ’ ಆಟಗಳನ್ನು ಆಡಲು ಅವಳ ಈ ಸಿದ್ಧತೆ. ಹಿಂದೆ ಒಂದು ಸಾರಿ ಇದೇ ರಿತಿ ಬೇಕಾದಷ್ಟು ಬೀಜಗಳನ್ನು ಕೂಡಿಟ್ಟಿದ್ದಳು. ಅತೀ ಉತ್ಸಾಹದಿಂದ ಹುಣಸೇಬೀಜಗಳನ್ನು ನೀರಿನಲ್ಲಿ ತೊಳೆದು ಕವರಿಗೆ ಹಾಕಿಟ್ಟಿದ್ದಳು. ಆದರೆ, ನೀರು ಬಿದ್ದದ್ದೇ ಹುಣಸೇ ಸಿಪ್ಪೆಯೆಲ್ಲಾ ಎದ್ದು ಬಂದು ಅವಳ ಶ್ರಮವೆಲ್ಲಾ ಹಾಳಾಗಿ ಹೋಯಿತು. ಮತ್ತೆ ಅವಳು ಆ ಸಾಹಸಕ್ಕೆ ಕೈ ಹಾಕಲಿಲ್ಲ. <br /><br />ಮುಂದೆ ಮುಂದೆ ಸಾಗುತ್ತಾ ಮತ್ತೆ ಅವಳ ಸವಾರಿ ಗೌಡರ ಮನೆ ಕಡೆಗೆ ಬಂತು. ಈ ಸಾರಿ ಗೌಡರನ್ನು ನೋಡಲು ಅಲ್ಲ. ಅವರ ಮನೆಯಲ್ಲಿ ಹುಣಸೆಕಾಯಿ ಹೊಡೆಯುವ ಕೆಲಸಗಾರರನ್ನು ನೋಡಲು!<br /><br />(ಮುಂದುವರೆಯುತ್ತದೆ)ಮುತ್ತುಮಣಿhttp://www.blogger.com/profile/02071788886580605152noreply@blogger.com6tag:blogger.com,1999:blog-4527995432766899913.post-2969705760915932772009-05-10T14:07:00.079+05:302009-05-13T11:41:52.712+05:30ರುಕ್ಮಿಣಿಯ ಅಜ್ಜಿ ಮನೆ - ೧"ರುಕ್ಕೂ... ರುಕ್ಕಮ್ಮ ಮಣಿ ಪಾಯಸ ರೆಡಿ ಆಯ್ತು, ತಿನ್ನು ಬಾ", ಮನೆಯ ಮುಂದಿದ್ದ ಸುಂಕತ್ತಿ ಮರದ ಎಲೆಗಳು, ಕಡ್ಡಿಗಳಿಂದ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದ ರುಕ್ಮಿಣಿ ಒಂದೇ ಸಾರಿಗೆ ದೇವರನ್ನು ಮರೆತು ಅಡುಗೆ ಮನೆಗೆ ಓಡಿದಳು. ತನ್ನ ಮೆಚ್ಚಿನ ಸಬ್ಬಕ್ಕಿ ಪಾಯಸಕ್ಕೆ ಈ ಪುಟ್ಟುಹುಡುಗಿ ಇಟ್ಟಿದ್ದ ಹೆಸರು ’ಮಣಿ ಪಾಯಸ’. ಅಲ್ಲೇ ಹಜಾರದಲ್ಲಿ ಕೂತಿದ್ದ ತಾತ ಇವಳ ಓಟದ ಭರವನ್ನು ತಡೆಯಲಾರದೆ ಗುಡುಗಿದರು. "ಆಆಆಆಶಿಶೀ... ಹುಡುಗ್ರಿಗೇನು ಅಡಿಗೆ ಮನೇಲಿ ಕೆಲ್ಸ, ಬಾಮ್ಮ ಈಚೆಗೆ!". "ರೇಏಏಏ, ಸುಮ್ಮನಿರ್ತೀರ, ಪಾಯಸ ಕುಡಿಯಕ್ಕೆ ನಾನೇ ಕರ್ದಿದ್ದು". ತಾತನಿಂದ ಮರುಮಾತು ಬರದೇ ಇದ್ದ ಕಾರಣ, ರುಕ್ಮಿಣಿ ಧೈರ್ಯವಾಗಿ ಅಡುಗೆ ಮನೆಯಲ್ಲಿ ಹೋಗಿ ಕುಳಿತಳು. ಪಾಯಸದಿಂದ ಒಂದೊಂದೆ ಮಣಿಯನ್ನು ಸ್ಪೂನಿನಲ್ಲಿ ಆರಿಸಿ ಆರಿಸಿ ಒಂದು ಗಂಟೆ ಕಾಲ ತಿನ್ನುವುದು ಅವಳ ವಾಡಿಕೆ.<br /><br />ಬೆಳಿಗ್ಗೆಯೇ ಎದ್ದು ಮನೆ ಬಾಗಿಲು, ಹಿತ್ತಲು - ಮುಸುರೆ ಮುಗಿಸಿ, ಮಾರು ದೂರದ ಬೋರ್ವೆಲ್ನಿಂದ ಮಡಿನೀರು ತಂದಿದ್ದ ಅಜ್ಜಿ ಈಗ ಬೆಂಗಳೂರಿನಿಂದ ಬಂದಿದ್ದ ಮೊಮ್ಮಗಳ ಬೇಡಿಕೆಯನ್ನು ಈಡೇರಿಸಿದ್ದರು. ಒಂದು ಗಂಟೆ ಪಾಯಸವನ್ನು ತಿಂದು ಮುಗಿಸಿ, ಅಡುಗೆ ಮನೆಯಿಂದ ಹೊರಕ್ಕೆ ಬಂದಳು, ರುಕ್ಕು. ತಾತ ಅಂಗಳದಲ್ಲಿ ಸೌದೆ ಹೊಡೆಯುತ್ತಿದ್ದರು. ಅಜ್ಜಿ ಮನೆಯಲ್ಲಿಲ್ಲದೇ ಇರುವುದು ತಕ್ಷಣ ಅರಿವಾಯಿತು. ಒಂದೇ ಓಟಕ್ಕೆ ಊರ ಗೌಡರಾದ ಮುನಿಶ್ಯಾಮಪ್ಪನ ಮನೆಗೆ ಓಡಿದಳು. "ನಮ್ಮಜ್ಜಿ ಬಂದಿದ್ದಾರ?", ಸೀದಾ ಅಡಿಗೆ ಮನೆಗೇ ನುಗ್ಗುತ್ತಾ ಕೇಳಿದಳು. ’ಇತ್ತಾಗ್ ಬಂದಿಲ್ಲಮ್ಮೋ, ತಡಿ, ತಡಿ, ಎಳನೀರು ಕೊಚ್ಚುತವರೆ ಕುಡ್ಕೊಂಡು ಹೋಗು". ಊರಿನಲ್ಲಿ ಇಂಥ ಸೇವೆಗೇನು ಕಡಿಮೆಯಿಲ್ಲ. ಗೌಡರ ಮಗನ ಕೈಯಲ್ಲಿ ಎರಡು ಎಳನೀರು ಒಡೆಸಿಕೊಂಡು ಕುಡಿದು, ಗಂಜಿಯನ್ನು ಕೈಯಲ್ಲಿಟ್ಟುಕೊಂಡು ಮೆಲ್ಲುತ್ತಾ ನಡೆದಳು. <br /><br />ಅವಳು ಈಗ ಅಟ್ಯಾಕ್ ಮಾಡಲು ಹೋಗಿದ್ದು ಸಂಕಮ್ಮನ ಮನೆಯನ್ನು. ಅವಳಿಗೆ ಗೊತ್ತು ಅಜ್ಜಿ ಇಲ್ಲಾ ಗೌಡರ ಮನೆಗೆ ಹೋಗಿ ಹರಟೆ ಹೊಡೆಯುತ್ತಾರೆ, ಇಲ್ಲಾ ಸಂಕಮ್ಮನ ಮನೆಯಲ್ಲಿ ಕೂರುತ್ತಾರೆ, ಇಲ್ಲದಿದ್ದರೆ ಸೊಣ್ಣಮ್ಮ, ಅದೂ ಹೋದ್ರೆ ಲಿಂಗಾಯಿತರ ಮನೆ. <br /><br />ಅಜ್ಜಿಗೆ ದಿನಾ ಮಧ್ಯಾಹ್ನ ಮಾಮೂಲಿ ಬಿಡುವು. ಆ ಸಮಯದಲ್ಲಿ ತನ್ನ ಸ್ನೇಹಿತೆಯರ ಮನೆಗೆ ಹೋಗಿ ಕೂರುತ್ತಿದ್ದರು. ಇಲ್ಲವೇ ಹಸುವನ್ನು ಮೇವಿಗೆ ಕರೆದುಕೊಂಡು ಹೋಗಿ ಕಟ್ಟುತ್ತಿದ್ದರು. ರುಕ್ಕು ಬೇಸಿಗೆ ರಜಕ್ಕೆ ಹೋದಾಗಲೆಲ್ಲಾ ಅಜ್ಜಿಯ ಜೊತೆಯೇ ಕಾಲ ಕಳೆಯುವುದು. ಅವರು ಹೀಗೆ ಆಚೀಚೆ ಕುಳಿತಾಗಲೆಲ್ಲಾ ಅದೆಷ್ಟೋ ವಿಷಯಗಳನ್ನು ಹೇಳುತ್ತಿದ್ದರು. ೪೦ ರೂಪಾಯಿಗೆ ಒಂದೇ ರೂಮಿದ್ದ ಮನೆಯೊಂದನ್ನು ಕೊಂಡುಕೊಂಡದ್ದು, ನಂತರ ತಾವೇ ಅದಕ್ಕೆ ಇಟ್ಟಿಗೆ ಮಣ್ಣು ಜೋಡಿಸಿ ದೊಡ್ಡ ಮನೆ ಮಾಡಿದ್ದು, ತನ್ನ ಗಂಡನ ಕಡೆಯ ೩೦ - ೪೦ ಜನಕ್ಕೆ ತಾವೇ ಮುದ್ದೆಗಳನ್ನು ತೊಳಸಿ ಹಾಕುತ್ತಿದ್ದುದು, ಆರೇಳು ಜನ ಹೆಣ್ಣುಮಕ್ಕಳ ಮದುವೆ ಮಾಡಿದ್ದು, ಒಂದು ವರ್ಷ ಹಾಲು ಹಾಕಿದ ರಾಧಮ್ಮನಿಗೆ ಚಿನ್ನದ ಮೂಗುತಿ ಮಾಡಿಸಿಕೊಟ್ಟದ್ದು, ಕಾಸಿಗೆ ಕಾಸು ಸೇರಿಸಿ ಜಮೀನುಗಳನ್ನು ಮಾಡಿದ್ದು ಹೀಗೆ ಏನೇನೋ. ಆಮೇಲೆ, ಸರ್ಕಾರದ ರೂಲಿನ ಪ್ರಕಾರ ಹತ್ತರಲ್ಲಿ ಒಂದು ಭಾಗ ಭೂಮಿಯಷ್ಟೇ ಇವರ ಪಾಲಿಗೆ ಉಳಿದುಕೊಂಡಿತ್ತು. ಊರಿನಲ್ಲಿ ಸ್ಕೂಲಾಗಬೇಕೆಂಬ ವಿಷಯ ಮುಂದೆ ಬಂದಾಗ ತಾತನೇ ಉಳಿದಿದ್ದ ಜಾಗದಲ್ಲಿ ಒಂದಷ್ಟನ್ನು ಕೊಟ್ಟುಬಿಟ್ಟಿದ್ದರು. ಈ ಕಥೆಗಳನ್ನು ಹೇಳುವಾಗ ಅಜ್ಜಿಯ ಕೈಯಿಂದ ಕೆಲವರು ಬೈಸಿಕೊಂಡರೆ ಇನ್ನೂ ಕೆಲವರು ಹೊಗಳಿಸಿಕೊಳ್ಳುತ್ತಿದ್ದರು. <br /><br />ಮಕ್ಕಳು ಹೊರಗೆ ಕೆಲಸ ಮಾಡುತ್ತಿದ್ದರು, ಸೊಸೆಯಂದಿರು ತೋಟ ನೋಡಿಕೊಳ್ಳುತ್ತಿದ್ದರು, ಮನೆಯ ಕೆಲಸಗಳನ್ನೆಲ್ಲಾ ಇವರೇ ಮಾಡುತ್ತಿದ್ದುದು. ಅವರಿಗೆ ಅಂತಾ ವಯಸ್ಸೇನೂ ಆಗಿರಲಿಕ್ಕಿಲ್ಲ. ಬೇಗನೇ ಮದುವೆಯಾಗಿಬಿಟ್ಟಿರಬೇಕು, ಅದಕ್ಕೇ ಐವತ್ತು ವರ್ಷದಷ್ಟೊತ್ತಿಗೇ ಮೊಮ್ಮಗಳ ಮದುವೆಯನ್ನೂ ನೋಡಿಬಿಟ್ಟಿದ್ದರು. <br /><br />ರುಕ್ಮಿಣಿಯ ಊಹೆ ಸರಿಯಾಯಿತು, ಅಜ್ಜಿ ಸಂಕಮ್ಮನ ಮನೆಯಲ್ಲಿ ಕೂತಿದ್ದರು. ಎಲೆ ಅಡಿಕೆ ಹಾಕುತ್ತಾ. ಸಂಕಮ್ಮ ಮನೆಯಲ್ಲಿ ಇವಳಿಗೆ ಏನೋ ಒಂದು ರೀತಿ ಅನುಭವವಾಗುತ್ತಿತ್ತು. ಸಂಕಮ್ಮ ಬೇರೆಯವರ ಹಾಗೆ ಜೋರಾಗಿ ಮಾತನಾಡುತ್ತಿರಲಿಲ್ಲ. ಸದಾ ಹಸನ್ಮುಖಿ. ಅವರ ಮನೆಯೂ ಕೂಡ ಸ್ವಲ್ಪ ಮಬ್ಬಾಗಿಯೇ ಇರುತ್ತಿತ್ತು. ಇನ್ನೂ ಒಂದು ವಿಷಯವಿತ್ತು, ಇವಳು ಹೋದಾಗಲೆಲ್ಲ ಸಂಕಮ್ಮ ಬೀರೂವಿನ ಡ್ರಾಯರಿನಲ್ಲಿಂದ ಎರಡು ಸಣ್ಣ ಸಣ್ಣ ಮಿಠಾಯಿ ತೆಗೆದು ಕೊಡುತ್ತಿದ್ದರು. ಅವು ತಿನ್ನಲು ಬಹಳ ರುಚಿ. ಆ ಬೀರೂವನ್ನು ಯಾವಾಗಲೂ ಬೀಗ ಹಾಕಿ ಇಟ್ಟಿರುತ್ತಿದ್ದರು. "ನೋಡು, ಬಿಸಿಲು ಮನೇಲಿರ್ಲಿ ಅಂತ ನಾನಿದ್ರೇ" ಅಜ್ಜಿ ರಾಗ ತೆಗೆಯುತ್ತಿದ್ದಂತೆಯೇ, ಸಂಕಮ್ಮ "ಬರ್ಲೇಳು, ಮನೇಲ್ ಕೂತು ಕೂತು ಅದಕ್ಕೆ ಬೇಜಾರಾಗಲ್ಲೇನು" ಎಂದರು. ರುಕ್ಕು ಅಜ್ಜಿಯ ತೊಡೆ ಮೇಲೆ ಕೈ ಹಾಕಿ ಕೂತಳು. <br /><br />ಅವರಿಬ್ಬರ ಮಾತು ಎಲ್ಲಿಂದ ಎಲ್ಲೆಲ್ಲಿಗೋ ಸಾಗುತ್ತಿತ್ತು. ಸಂಕಮ್ಮನ ಚಿಕ್ಕ ಮಗಳು ಬಾಣಂತನಕ್ಕೆ ಬಂದಿದ್ದಾಳೆ. ಅವಳ ಆರೈಕೆ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳುತ್ತಿದ್ದಾಳೆ ಸಂಕಮ್ಮ. ಮೊದಲ ಮಗಳ ಬಾಣಂತನವನ್ನು ಈಗಾಗಲೇ ಅವರು ಮಾಡಿದ್ದಾರೆ. ಆದರೂ ಅಜ್ಜಿಯ ಹತ್ತಿರ ಕೇಳುವುದು, ಆಗ ಹಾಗಾಯ್ತಲ್ಲ, ಅದಕ್ಕೇನು? ಇದಕ್ಕೇನು? ಈ ಮಗು ದೊಡ್ಡಮಗಳ ಮಗುವಿನಷ್ಟು ಗಟ್ಟಿ ಬಂದಿಲ್ಲವೇ? ಹೀಗೇ ಏನೇನೋ ಕೇಳುತ್ತಿದ್ದಾರೆ. ರುಕ್ಮಿಣಿಗೆ ಇದೊಂದು ಅರ್ಥವಾಗದು. ಅವಳು ಅವರ ಮನೆಯಲ್ಲಿ ನೇತು ಹಾಕಿರುವ ಬೇರೆ ಬೇರೆ ದೇವರ ಫೋಟೋಗಳನ್ನು ನೋಡುತ್ತಲಿದ್ದಾಳೆ. ಅವಳು ಹುಟ್ಟಿದಾಗಿನಿಂದ ಇವುಗಳನ್ನು ನೋಡುತ್ತಿದ್ದರೂ ಇನ್ನೂ ಮನದಣಿದಿಲ್ಲ. ಅದರಲ್ಲಿ ಒಂದು ಹಸುವಿನ ಫೋಟೋ ಇತ್ತು. ಅದಕ್ಕೆ ತಲೆಯಿಂದ ಹೊಟ್ಟೆಯವರೆಗೆ ಮಾನವ ಹೆಣ್ಣಿನ ದೇಹ, ಅಲ್ಲಿಂದ ಹಿಂದಕ್ಕೆ ಹಸುವಿನ ದೇಹ. ವಿಚಿತ್ರ ಕಲ್ಪನೆಯಾದರೂ ನೋಡಲು ಸುಂದರವಾಗಿತ್ತು. ನಂದಿನಿಯೋ ಇನ್ಯಾವುದೋ ಹಸು ಅದಾಗಿರಬೇಕು. ಇವಳು ಅದನ್ನೇನು ಕೇಳಲು ಹೋಗುತ್ತಿರಲಿಲ್ಲ. ಅಲ್ಲಿದ್ದ ಒರಳುಕಲ್ಲು, ಎತ್ತರವಾದ ರಾಗಿ ಕಣಜ ಇವುಗಳನ್ನು ಕುತೂಹಲದಿಂದ ನೋಡುತ್ತಾ ಕೂತಿದ್ದಳು. ಸಂಕಮ್ಮನ ಯಜಮಾನಪ್ಪನು ಮನೆಗೆ ಬಂದೊಡನೆಯೆ ಸಂಕಮ್ಮ ’ನೀರು ಕೊಡಲೆ?’ ಎಂದು ಕೇಳಿದರು. "ಅದೇ ನೋಡು, ಆಚೆಯಿಂದ ಬಂದೋರಿಗೆ ಕೇಳೋದೇನು? ನೀರು ತಂದು ಕೊಡಬಾರ್ದೇನು?" ಎಂದು ಅಜ್ಜಿ ಗುಟುರು ಹಾಕಿದರು. ಸಂಕಮ್ಮ - ಯಜಮಾನಪ್ಪ ಇಬ್ಬರೂ ಮೆಲ್ಲಗೆ ನಕ್ಕರೆ ಹೊರತು ಮರುಮಾತಾಡಲಿಲ್ಲ. ಸಂಕಮ್ಮ ತಂದುಕೊಟ್ಟ ನೀರನ್ನು ಯಜಮಾನಪ್ಪ ಕುಡಿದನು. ಇದ್ದಕ್ಕಿದ್ದ ಹಾಗೆ ಎಮ್ಮೆ ಕೂಗಿದ್ದು ಕೇಳಿಸಿ, ’ನಾನು ಹಾಕಲಾ ಹುಲ್ಲು’ ಎಂದು ಪರ್ಮಿಷನ್ ಕೇಳಿಕೊಂಡು ರುಕ್ಕು ಆಚೆಗೆ ಬಂದಳು. "ನಿನಗ್ಯಾಕಮ್ಮ ಈ ಪಾಡೆಲ್ಲ" ಎಂದು ಸಂಕಮ್ಮ ಹೇಳಿದ್ದು ಅವಳ ಕಿವಿಗೆ ಬೀಳಲೇ ಇಲ್ಲ. ಎಮ್ಮೆಗಳನ್ನು ಮಾತನಾಡಿಸುವುದು, ಗದರಿಸುವುದು, ಮೇವು ಹಾಕುವುದು, ತೊಳೆಯುವುದು, ಸಗಣಿ ಸಾರಿಸುವುದು ಇವೆಲ್ಲಾ ಅವಳಿಗೆ ಕರಗತ. ಮೊದಮೊದಲು ಬೆಂಗಳೂರಿನವಳೆಂದು ಅಣಕಿಸಿದವರೂ ಈಗ ಸುಮ್ಮನಾಗಿದ್ದರು.<br /><br />(ಮುಂದುವರೆಯುತ್ತದೆ)ಮುತ್ತುಮಣಿhttp://www.blogger.com/profile/02071788886580605152noreply@blogger.com4tag:blogger.com,1999:blog-4527995432766899913.post-1500283307965421632009-04-03T22:15:00.052+05:302009-04-09T14:38:33.831+05:30ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ...ಮಕ್ಕಳ ಕ್ಷೇಯೋಭಿವೃದ್ಧಿಯ ಬಗೆಗೆ ಹಿಂದೆಂದಿಗಿಂತಲೂ ಈಗ ಚರ್ಚೆ ಹೆಚ್ಚು. ನಾನು ಕೆಲವು ದಿನಗಳು ಈ ಚರ್ಚೆಗಳಲ್ಲಿ ಭಾಗವಹಿಸಬೇಕಾಗಿ ಬಂದದ್ದರಿಂದ ಮತ್ತು ಆ ವಿಷಯಗಳು ಇನ್ನೂ ನನ್ನ ಮನಸ್ಸಿನಲ್ಲಿ ಗುಂಗುಡುತ್ತಿದೆಯಾದ್ದರಿಂದ, ನನ್ನ ಈ ಪೋಸ್ಟಿನ ವಿಷಯವೂ ಮಕ್ಕಳೇ ಆಗಿದ್ದಾರೆ. <br /><br /> * * *<br /> <br />ಪಕ್ಕದ ಮನೆಯ ಪುಟ್ಟ ಎರಡು ವರ್ಷದ ಹೆಣ್ಣುಮಗುವಿಗೆ ದಿನಕ್ಕೆ ಎರಡು ಬಾರಿ ಸ್ನಾನ, ಮತ್ತೆ ಎರಡು ಸಾರಿಯೂ ನಾಲ್ಕೈದು ಕ್ರೀಮು. ಮಗು ಕಪ್ಪಗಿದೆಯಂತೆ, ದೊಡ್ಡವಳಾದ ಮೇಲೆ ಹುಡುಗರು ಮೆಚ್ಚುವುದಿಲ್ಲವೆಂದು ಈಗಿನಿಂದಲೇ ತಾಲೀಮು!<br /><br />ಮಗಳು ನಾಲ್ಕನೇ ಕ್ಲಾಸು. ಅವಳಿಗೆ ಹಾಡು ಕಲಿಯಲು ಇಷ್ಟ, ಆದರೆ ತಾಯಿ ಕಳಿಸುವುದಿಲ್ಲ. ಅದರಿಂದ ಏನು ಲಾಭ ಎಂಬ ಅಸಡ್ಡೆ ಅವರಿಗೆ. ತಾವು ಕೆಲಸ ಮಾಡುವ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರಿಗೆ ಸರ್ಕಾರೀ ಕೆಲಸ ಸಿಕ್ಕಿದೆ. ಈಗ ಮಗಳನ್ನು ಅವರ ಬಳಿ ಟ್ಯೂಷನ್ನಿಗೆ ಕಳುಹಿಸುತ್ತಿದ್ದಾರೆ. ಎಕ್ಸಾಮ್ ಪಾಸು ಮಾಡುವ ಬಗ್ಗೆ ಟ್ರೇನಿಂಗ್ ತೆಗೆದುಕೊಳ್ಳಲು, ಮುಂದಕ್ಕೆ ಉಪಯೋಗವಾಗಲಿ ಎಂದು!<br /><br />ದೀಪಾವಳಿ ಹಬ್ಬದ ದಿನ ತಾಯಿ ತನ್ನ ಒಂಭತ್ತು ತಿಂಗಳ ಮಗುವನ್ನು ಎತ್ತಿಕೊಂಡು ಹೊರಗೆ ಬೀದಿಯಲ್ಲಿ ನಿಂತಿದ್ದಾಳೆ. ಉಳಿದ ಮಕ್ಕಳು ಒಂದೇ ಸಮ ಆಟಂ ಬಾಂಬ್ ಹೊಡೆಯುತ್ತಿದ್ದಾರೆ. ಏಕೆ ಇಲ್ಲಿ ನಿಂತಿರುವುದೆಂದು ಅವರನ್ನೇ ಕೇಳಬೇಕು. ’ಮಗುವಿಗೆ ಧೈರ್ಯ ಬರಲಿ ಎಂದು!’ <br /><br /> * * *<br /><br />ಇಂತಹವು ಈಗ ಸರ್ವೇಸಾಮಾನ್ಯ ಎನಿಸುತ್ತಿದೆ. ನಮ್ಮ ಮಕ್ಕಳು ಹೀಗೇ, ಇಂತಹವರೇ ಆಗಬೇಕೆಂದು ಡಿಸೈನ್ ಮಾಡಿ ಬೆಳೆಸುವುದು ಹಿಂದೆಂದೂ ಇರಲಿಲ್ಲವೆನಿಸುತ್ತದೆ. ತನ್ನ ಮಗನನ್ನು ಬದಲಾಯಿಸಲು ಪ್ರಯತ್ನಿಸಿದ ಹಿರಣ್ಯ ಕಶಿಪು ಇದಕ್ಕೊಂದು ಅಪವಾದ ಎಂದು ಬೇಕಾದರೆ ಹೇಳಬಹುದೇನೋ? ಆದರೆ, ಅವನೂ ಸೋತಿದ್ದು ನಿಜ ತಾನೆ? ನಮ್ಮ ಮಕ್ಕಳು ಬೇರೆ ಮಕ್ಕಳಿಗಿಂತ ಹಿಂದೆ ಉಳಿದುಬಿಡುತ್ತಾರೆ ಎಂದು ಭಯ ಕೆಲವರಿಗೆ. ಆದರೆ, ಹಿಂದುಳಿಯುವುದು ಎಂದರೇನು? ಅದೇ ಸ್ಪಷ್ಟವಾಗಿ ನಮಗೆ ತಿಳಿದಿಲ್ಲ. <br /><br />ನಮ್ಮ ಪೋಷಕರ ಮನೋಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾದರೆ ಒಂದು ಜಾಹಿರಾತನ್ನು ನೆನಪಿಸಿಕೊಳ್ಳಬೇಕು. ಮಗನಿಗೆ ಅಬ್ದುಲ್ ಕಲಾಮರ ಹಾಗೆ ಆಗಬೇಕೆಂಬ ಮಹದಾಸೆ. ಅದಕ್ಕೆ ತಾಯಿ ಏನು ಮಾಡಬೇಕು? ಅದೆಂತದೆಂತದೋ ಹಾಕಿ ಮಾಡಿರುವ ’ಬ್ರೇನ್ ಫುಡ್’ ತಿನ್ನಿಸಬೇಕು! ಕಲಾಮ್ ಸರ್ ನಿಜವಾಗಲೂ ’ಅಮೇಜ್ ಬ್ರೇನ್ ಫುಡ್’ ತಿಂದೇ ಹಾಗಾಗಿದ್ದ? ಇದರ ಬದಲು ನಮ್ಮ ಮಕ್ಕಳಿಗೆ ಅವರು ಸಾಗಿ ಬಂದ ದಾರಿಯನ್ನು ಹೇಳಿ ಉತ್ತೇಜಿಸುವುದು ಹೆಚ್ಚು ಉಪಯುಕ್ತವಲ್ಲವೇ? <br /><br />ಮುಸ್ಲಿಮ್ ಸಂತ ಕವಿ ಖಲೀಲ್ ಗಿಬ್ರನ್(ಮೂಲ ಉರ್ದು)ಬರೆದಿರುವ ಎರಡು ಪದ್ಯಗಳು ಈ ಆಲೋಚನೆಗಳಿಗೆಲ್ಲ ಉತ್ತರವೇನೋ ಎನ್ನುವಂತಿದೆ, ನೀವೂ ಓದಿ ನೋಡಿ: <br /><br />ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ<br />ಜೀವನದ ಸ್ವಪ್ರೇಮದ ಪುತ್ರಪುತ್ರಿಯರು ಅವರು<br />ಅವರು ನಿಮ್ಮ ಜತೆಗೆ ಇರುವುದಾದರೂ <br />ಅವರು ನಿಮಗೆ ಸೇರಿದವರಲ್ಲ.<br /><br />ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು<br />ಆದರೆ ಆಲೋಚನೆಗಳನಲ್ಲ, ಅವರಂತಿರಲು <br />ನೀವು ಪ್ರಯತ್ನಿಸಬಹುದು: ಆದರೆ,<br />ಅವರನ್ನು ನಿಮ್ಮಂತೆ ನೋಡದಿರಿ,<br />ಜೀವನ ಹಿಮ್ಮುಖವಾಗಿ ಹರಿಯದಿರಲಿ. <br /><br />(ಪದ್ಯಗಳನ್ನು ಒದಗಿಸಿದ ಚಂದ್ರಕಾಂತ ಮೇಡಮ್ ಗೆ ಧನ್ಯವಾದಗಳು)ಮುತ್ತುಮಣಿhttp://www.blogger.com/profile/02071788886580605152noreply@blogger.com7tag:blogger.com,1999:blog-4527995432766899913.post-24351468630630476642009-03-02T19:22:00.002+05:302009-03-02T20:06:15.023+05:30ನನ್ನ ಉತ್ತರ!<strong>ಕಥೆಯು ಅಸ್ಪಷ್ಟ, <br />ಎಂಬುದೀಗ ಸ್ಪಷ್ಟ!<br /><br />ಉತ್ತರವು ಬಹಳಾನೆ ಉದ್ದ ಬೆಳೆಯಿತು,<br />ವಾರೆಆಲೋಚನೆಯೊಂದು ಹೊಳೆಯಿತು<br /><br />ಇದೇ ಒಂದು ಪೋಸ್ಟಾದರೆ ಹೇಗೆ? <br />ಹೇಳಿಬಿಡಬಹುದಲ್ಲ ನಾನಂದುಕೊಂಡದ್ದನ್ನೆಲ್ಲಾ ಹಾಗೆ,<br /><br />ನೋಡಿ, ಇದೂ ಒಂದು ಪೋಸ್ಟು,<br />ಇದಕ್ಕೂ ದಯಪಾಲಿಸಿ ನಿಮ್ಮ ಕ್ರಿಟಿಕ್ಕು ಕಮೆಂಟು</strong><br /><br /><br />@ ಚಂದ್ರಕಾಂತ <br />ಉತ್ತರ ಕೊಡಲು ತಡಮಾಡಿದ್ದಕ್ಕೆ ಕ್ಷಮೆಯಿರಲಿ. ಕೆಲಸ ಹೆಚ್ಚೆನಿಸುವಷ್ಟು ಜಾಸ್ತಿಯಾಗಿತ್ತು! ನಿನ್ನೆ ನಿಮ್ಮ ಬ್ಲಾಗಿನಲ್ಲಿ ಬರೆದು ಇಲ್ಲಿಗೆ ಬರುವಷ್ಟರಲ್ಲಿ ಸಿಸ್ಟಮ್ ಕೈಕೊಟ್ಟುಬಿಟ್ಟಿತು!<br /><br />ಮತ್ತು ಸುಧೇಶ್,<br /><br />ನಿಮ್ಮಿಬ್ಬರ ಕ್ರಿಟಿಕ್ಸ್ ನನಗೆ ಬಹಳಷ್ಟು ತಿಳುವಳಿಕೆ ನೀಡಿವೆ, ಕಥೆ ಬರೆಯುವ ವಿಷಯದಲ್ಲಿ. <br /><br />ಇನ್ನು ತಡಮಾಡದೆ ನನ್ನ ಕಥೆಯ ಹಿಂದಿನ ಕಥೆಯನ್ನ ಹೇಳಿಬಿಡುತ್ತೇನೆ...<br /><br />ಈ ಡಿಸ್ಲೆಕ್ಸಿಯ ವಿಷಯದ ಬಗೆಗೆ ತುಂಬಾ ಚರ್ಚೆ ನಡೆಯುತ್ತಿದ್ದಾಗ, ನಾನೂ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಯಿತು. ಅದರಿಂದ ತಿಳಿದ ಕೆಲವು ವಿಷಯಗಳು ಹೀಗಿವೆ:<br /><br />೧. ಇಂಥದೊಂದು ಗುಣವು ಖಾಯಿಲೆಯೇ ಅಲ್ಲವೇ ಎಂಬುದು ಮೂಲ ಪ್ರಶ್ನೆ (ನನಗೆ!).<br />೨. ಈ ಗುಣವು ಹಿಂದಿನಿಂದಲೂ ಮನುಷ್ಯರಲ್ಲಿ ಕಾಣುವುದನ್ನು ನಾವು ಗಮನಿಸಬಹುದು. <br />೩. ಕೆಲ ’ಅತಿ ಬುದ್ಧಿವಂತರು’, ಅಂದರೆ ಐನ್ ಸ್ಟೈನ್ ಮುಂತಾದವರು ಹೀಗಿದ್ದರು ಎಂದರೆ, ಸಾಮಾನ್ಯರಿಗೆ ಅದು ಇರಲಿಲ್ಲವೆಂದಲ್ಲ.<br />೪. ಈಚೆಗೆ, ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳುವ ಸಲುವಾಗಿ, ದೊಡ್ದ ಹುದ್ದೆಯಲ್ಲಿರುವವರೊಬ್ಬರು ಈ ಪರೀಕ್ಷೆ ತೆಗೆದುಕೊಂಡಾಗ ’ನಿಮಗೆ ಡಿಸ್ಲೆಕ್ಸಿಯಾ ಇದೆ, ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಉತ್ತರ ಬಂತು! <br />೫. ಭಾರತದಂಥ ದೇಶದಲ್ಲಿ ಒಂದು ತರಗತಿಯನ್ನು ನೀವು ತೆಗೆದುಕೊಂಡರೆ ಸುಮಾರು ಅರ್ಧದಷ್ಟು ಮಕ್ಕಳು, ಓದಲು ಬರೆಯಲು ಕಷ್ಟಪಡುವುದನ್ನು ನೀವು ನೋಡಬಹುದು(ಅರ್ಧಕ್ಕಿಂತ ಕೊಂಚ ಕಡಿಮೆ ಎನಿಸುತ್ತದೆ.)ಅದರರ್ಥ ಅವರು ಹೇಳುವುದನ್ನು ಗ್ರಹಿಸಿಲ್ಲ ಎಂದಲ್ಲ.<br />೬. ನಾನು ಭೇಟಿಮಾಡಿದ ಒಬ್ಬ ಮನೋವೈದ್ಯರ ಪ್ರಕಾರ, ಭಾರತದಂತಹ ದೇಶದಲ್ಲಿ ಈ ಗುಣ ಕೊಡುವ ತೊಂದರೆಗಿಂತ ಅದರ ಅಬ್ಬರವೇ ಹೆಚ್ಚು ತೊಂದರೆ ಮಾಡುತ್ತದೆ. ಇದಕ್ಕೆ ’ಏಡ್ಸ್’ ಅತ್ಯಂತ ಸೂಕ್ತ ಉದಾಹರಣೆ. (ನನಗೆ ಖಾಯಿಲೆ ಅನ್ನುವುದಕ್ಕಿಂತ ಗುಣ ಪದವೇ ಸೂಕ್ತವೆನಿಸುತ್ತದೆ)<br />೭. ಇದೆಲ್ಲಕ್ಕಿಂತ ಮುಖ್ಯವಾಗಿ, ಚೆನ್ನಾಗಿ ಓದುವ ಬರೆಯುವ ಮಕ್ಕಳು, ಗ್ರಹಣ ಶಕ್ತಿ ಚೆನ್ನಾಗಿರುವವರೇ ಆಗಿರಬೇಕೆಂದಿಲ್ಲ. ಪರೀಕ್ಷೆಯನ್ನು ಹೇಗೆ ಗೆಲ್ಲಬೇಕೆಂಬ ರೀತಿ ಅವರಿಗೆ ಗೊತ್ತಿದ್ದರೆ ಸಾಕು. ಉದಾಹರಣೆಗೆ, ಮುಖ್ಯ ಪ್ರಶ್ನೆಗಳನ್ನು ಓದಿಕೊಳ್ಳುವುದು, ಅರ್ಥವಾಗದಿದ್ದರೂ ರಟ್ ಮಾಡಿ ಬರೆಯುವುದು, ಹೀಗೆ. <br /> <br />ಚಂದ್ರಕಾಂತರವರು ಕೇಳಿರುವ ಪ್ರಶ್ನೆಗೆ ಉತ್ತರ ಇಲ್ಲಿದೆ - ನನ್ನ ಪ್ರಕಾರ ರಾಜರಾಮನಿಗೆ ಓದಲು ಅಮ್ಮನಿಂದ ಯಾವ ರೀತಿಯ ಒತ್ತಾಯವಿರಲಿಲ್ಲ. ಆದರೆ, ’ಅಪ್ಪ ಏನಾದರು ಹೇಳಿಕೊಂಡು ಹೋಗಲಿ’, ಎನ್ನುವ ಮೊಂಡು ಹಠ, ಅವನನ್ನು ರಕ್ಷಿಸಿತು. ಯಾರನ್ನೂ ಮೆಚ್ಚಿಸುವ ಹಂಗಿಲ್ಲದೇ ಇರುವುದೂ ಅವನಿಗೆ ಇದರಿಂದ ಬಂದಿತು. ಮೊಂಡನೇ ನನಗಿಲ್ಲಿ ನಾಯಕ, ಜವಾಬ್ದಾರಿಯ ಅರಿವಾದ ಮೇಲೆ ನಮಗೆ ಕಾಣುವ ರಾಜಾರಾಂ ಬೇರೆ. <br /><br />ಇನ್ನು, ಸಾಗರ ಬದಲಾಗುವ ವಿಷಯ, ಅದು ಕಥೆ ಸಾಗುವಾಗ ಹಾಗೆ ತಲೆಗೆ ಬಂದದ್ದು. ಅದರ ಸರಿ ತಪ್ಪುಗಳನ್ನು ಈಗ ನಾನೇ ಪರೀಕ್ಷೆ ಮಾಡುತ್ತಿದ್ದೇನೆ!<br /><br />ಒಟ್ಟಾರೆ ನನ್ನ ಗ್ರಹಿಕೆ ಇದ್ದದ್ದು ಇಷ್ಟೇ - ಮಕ್ಕಳು ಏನಾದರೂ ಮಾಡಿಕೊಳ್ಳಲಿ, ಅವರು ಜೀವನದಲ್ಲಿ ಗೆಲ್ಲಬೇಕಾದರೆ ಅವರಿಗೆ ಬೇಕಾದ್ದು ಆತ್ಮವಿಶ್ವಾಸ ಮತ್ತು ನಿರ್ವಂಚನೆಯ ಸಪೋರ್ಟ್ (ನನ್ನ ಮಗ ತಪ್ಪು ಮಾಡಿದನೋ ಇಲ್ಲವೋ ಆಮೇಲಿರಲಿ, ಮೊದಲು ಅವನು ಊಟ ಮಾಡಲಿ ಎನ್ನುವ ತಾಯಿಯ ರೀತಿ). ಅದನ್ನೇ ಇಲ್ಲಿ ನಾನು ಹೇಳಹೊರಟಿದ್ದು ಮತ್ತು ಅದಕ್ಕೇ ನಾನು ಸುಧಾ ಆಸ್ಪತ್ರೆಗೆ ಹೋಗದೇ ನಿಲ್ಲುತ್ತಾಳೆ ಎಂದು ಅಂತ್ಯ ಮಾಡಿದ್ದು!ಮುತ್ತುಮಣಿhttp://www.blogger.com/profile/02071788886580605152noreply@blogger.com7tag:blogger.com,1999:blog-4527995432766899913.post-4382683005618865602009-02-12T22:34:00.002+05:302009-02-14T12:29:56.802+05:30ಸಾಗರಪ್ರಪಂಚ ಇನ್ನು ಮುಂದಕ್ಕೆ ಹೋಗುವುದೇ ಇಲ್ಲವೇನೋ ಎನ್ನುವ ಹಾಗೆ, ದಿವಾನದ ಮೇಲೆ ಯೋಚಿಸುತ್ತಾ ಕುಳಿತಿದ್ದಳು ಸುಧಾ. ಅವಳ ಮಗನ ಭವಿಷ್ಯದ ಚಿಂತೆ ತಲೆಯ ತುಂಬಾ ತುಂಬಿಕೊಂಡುಬಿಟ್ಟಿತ್ತು. ಇವತ್ತು ಬೆಳಿಗ್ಗೆ ತಾನೆ ಮಗ ಸಾಗರನ ಶಾಲೆಯಲ್ಲಿ ಮಾರ್ಕ್ಸ್ ಕಾರ್ಡ್ ಕೊಟ್ಟು ಕಳಿಸಿದ್ದರು. ಗಣಿತ ವಿಜ್ಞಾನದಲ್ಲಿ ಫೇಲು. ಹತ್ತನೇ ತರಗತಿ ಪರೀಕ್ಷೆ ಹತ್ತಿರ ಹತ್ತಿರ ಬರುತ್ತಿದ್ದಂತೆ ಫೇಲಾಗುವುದು ಜಾಸ್ತಿ ಆಗ್ತಿದೆ! ಮಿಡ್ ಟರ್ಮ್ ತಾನೆ ಎಂದು ಸಮಾಧಾನ ಮಾಡಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳ ತಲೆಯಲ್ಲಿ ಹೊರಡುತ್ತಿದ್ದ ನೂರೆಂಟು ಯೋಚನೆಗಳ ನಡುವೆ ದಾರಿ ಮಾಡಿಕೊಂಡೋ ಅನ್ನುವ ಹಾಗೆ, ಕಣ್ಣ ಅಂಚಿನಿಂದ ಸಣ್ಣಗೆ ನೀರು ಸುರಿಯುತ್ತಿತ್ತು. ಆ ಕಣ್ಣ ಹನಿಯನ್ನು ತಡೆಯುತ್ತೇನೆ ಎನ್ನುವ ಹಾಗೆ ಇವಳು, ನಿಧಾನವಾಗಿ ರೆಪ್ಪೆಯನ್ನು ಮುಚ್ಚಿದಳು. <br /><br /> * * * <br /><br />ಮೊನ್ನೆ ತಾನೆ ಪೇಪರಿನಲ್ಲಿ ನ್ಯೂಸ್ ಬಂದಿದೆ. ಕೆಲವೊಬ್ಬ ಮಕ್ಕಳಿಗೆ ಹುಟ್ಟಿನಿಂದಲೇ ಓದು ಬರಹ ತಲೆಗೆ ಹತ್ತುವುದಿಲ್ಲವಂತೆ. ಅವರು ಬೇರೆ ಮಕ್ಕಳ ಹಾಗೆ ಇರುವುದು ಸಾಧ್ಯವಿಲ್ಲವಂತೆ, ಕೆಲವರಿಗೆ ಅಕ್ಷರಗಳು ಸರಿಯಾಗಿ ಕಾಣಿಸದಿದ್ದರೆ, ಮತ್ತೆ ಕೆಲವರಿಗೆ ಚಿತ್ರಗಳನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಇವರ ಮೆದುಳಿನಲ್ಲಿ ತೊಂದರೆಯಿರುತ್ತದೆಯಂತೆ. ಡಿಸ್ಲೆಕ್ಸಿಯಾ, ಡಿಸ್ಗ್ರಾಫಿಯಾ ಹೀಗೆ ಏನೇನೋ...<br /><br />ಆಫೀಸಿನಲ್ಲಿ ಕುಳಿತು ಯೋಚಿಸುತ್ತಿರುವಾಗ, ಪಕ್ಕದ ಸ್ಕ್ವಾಯರ್ನಲ್ಲಿ ಕೂತ ಪಂಕಜ ಸಲಹೆಕೊಡುತ್ತಾಳೆ "ಇದಕ್ಕೆಲ್ಲ, ಈಗ ಯೋಚಿಸುವ ಅಗತ್ಯವಿಲ್ಲ. ಸೈಕಾಲಜಿಸ್ಟರು ಪರಿಹಾರ ಕೊಡ್ತಾರೆ. ಮಗುವನ್ನು ಕರೆದುಕೊಂಡು ಅವರ ಹತ್ರ ಹೋದರೆ ಡಯ್ಗ್ನೋಸ್ ಮಾಡಿ ಟ್ರೀಟ್ಮೆಂಟ್ ಮಾಡ್ತಾರೆ" ಅವಳು ಅಷ್ಟೇ ಹೇಳಿದ್ದರೆ ಸುಧಾಗೆ ಸ್ವಲ್ಪ ಸಮಾಧಾನವಾಗುತ್ತಿತ್ತೋ ಏನೋ? ಅವಳು ಮುಂದುವರಿದು, "ನೀನು ಹೀಗೆ ಯೋಚಿಸುವುದರ ಬದಲು ಮಗುವನ್ನು ಆದಷ್ಟು ಬೇಗ ಡಾಕ್ಟರರ ಬಳಿಗೆ ಕರೆದುಕೊಂಡು ಹೋಗುವುದು ಒಳ್ಳೇದು" ಎನ್ನುತ್ತಾಳೆ. ಈ ಮಾತುಗಳಂತೂ ಅವಳ ಮನಸ್ಸಿನ ದುಗುಡವನ್ನು ಮತ್ತೂ ಹೆಚ್ಚಿಸುತ್ತದೆ. <br /><br />ಸಾಗರನನ್ನು ಡಾಕ್ಟರ್ ಶಾಪಿಗೆ ಹೋಗುವ ಬಾ ಎಂದಾಗ ಅಮ್ಮನಿಗೆ ಹುಷಾರಿಲ್ಲವೇನೋ ಎಂದೇ ತಿಳಿಯುತ್ತಾನೆ. ಡಾಕ್ಟರು ಇವನನ್ನೇ ಪ್ರಶ್ನೆ ಕೇಳಲು ಶುರುಮಾಡುತ್ತಾರೆ. ಇಂಗ್ಲೀಷ್ ಅಕ್ಷರಗಳನ್ನು ಓದಲು ಹೇಳುತ್ತಾರೆ. ಚಿತ್ರಗಳನ್ನು ಬರೆದು ಹಾಗೆಯೇ ಬರೆಯಲು ಹೇಳುತ್ತಾರೆ. ಮತ್ತೆ, ಒಬ್ಬನನ್ನೇ ಬೇರೊಂದು ರೂಮಿಗೆ ಕರೆದುಕೊಂಡು ಹೋಗಿ ಮಾತನಾಡುತ್ತಾರೆ. ತನ್ನ ಮಾರ್ಕ್ಸ್ ಕಾರ್ಡಿಗಾಗಿಯೇ ಇವೆಲ್ಲಾ ತಾಲೀಮು ಎಂದು ತಿಳಿದುಕೊಳ್ಳಲು ಅವನಿಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಅಮ್ಮ ಈ ರೀತಿ ಮಾಡಿದ್ದು ಅವನಿಗೆ ಕೋಪ ಬರಿಸುತ್ತದೆ, ಸ್ವಲ್ಪ ಬೇಸರವೂ ಆಗುತ್ತದೆ. ಆದರೆ, ಅದನ್ನು ಅಮ್ಮನ ಮುಂದೆ ತೋರಿಸಿಕೊಳ್ಳಲಿಲ್ಲ. ತನ್ನ ಮನಸನ್ನು ಬಚ್ಚಿಟ್ಟುಕೊಳ್ಳುವಷ್ಟು ದೊಡ್ಡವನಾಗಿ ಬೆಳೆದುಬಿಟ್ಟಿದ್ದಾನೆ?<br /><br />ಮನೆಗೆ ಬಂದವನೇ ತನ್ನಷ್ಟಕ್ಕೆ ತಾನು ರೂಮಿನಲ್ಲಿ ಕೂರುತ್ತಾನೆ. ಅವನಾಯಿತು ಅವನ ಪುಸ್ತಕಗಳಾಯಿತು. ಸಂಜೆ ಅಪ್ಪ ರಾಜೀವ ಎಂದಿನಂತೆ ಮನೆಗೆ ಬರುತ್ತಾನೆ. ಮನೆಯಲ್ಲಿ ಏನೋ ಒಂದು ಬಿಗಿಯಾದ ವಾತಾವರಣವಿದೆ. ಸಾಗರ ತನ್ನಷ್ಟಕ್ಕೆ ತಾನು ಕೂತಿದ್ದಾನೆ. ಸಾಗರನ ಈ ರೀತಿ ನೋಡಿ, ಸುಧಾಗೆ ತಾನು ಮಾಡಿದ್ದು ಸರಿಯೋ ತಪ್ಪೋ ಎಂಬ ಆಲೋಚನೆಯೂ ಬಂದು ಹೋಗುತ್ತದೆ. ರಾಜೀವನಿಗೋ ಏನೂ ಅರ್ಥವಾಗದ ಸ್ಥಿತಿ. ವಿಷಯ ತಿಳಿದ ಮೇಲೆ ಮಗನನ್ನು ಪ್ರೀತಿಯಿಂದ ಮಾತನಾಡಿಸಿ ಅವನ ಕೋಪವನ್ನು ಕಡಿಮೆ ಮಾಡಿದರಾಯಿತು ಎಂದು ಯೋಚಿಸುತ್ತಾನೆ. "ಏನ್ಮಾಡ್ತಿದ್ದೀ ಸಾಗರ?", ಅವರು ಅವನನ್ನು ಆ ರೀತಿ ಎಂದೂ ಮಾತನಾಡಿಸಿದ್ದೇ ಇಲ್ಲವೇನೋ? ಸಾಗರನ ಉತ್ತರ ಇನ್ನೂ ಬೆಚ್ಚಿಬೀಳಿಸುವ ಹಾಗಿರುತ್ತದೆ - "ಏನಿಲ್ಲಪ್ಪ, ನನ್ನ ಕೆಲಸ ನಾನು ಮಾಡ್ತಿದ್ದೀನಿ, ನಿಮ್ಮ ಕೆಲಸ ಹೇಗೆ ನಡೀತಿದೆಯಪ್ಪಾ?". ಮಗ ಇಷ್ಟು ದೊಡ್ಡವನು ಯಾವಾಗ ಆದ ಎಂದು ರಾಜೀವನಿಗೆ ತಿಳಿಯದೆ ಹೋಗುತ್ತದೆ. ಮಾತು ಮುಂದುವರಿಸಲಾಗದೆ, ಅಲ್ಲಿಂದ ಎದ್ದು ಹೊರಡುತ್ತಾನೆ. <br /><br />ಸುಧಾಳ ದ್ವಂದ್ವ ಕೇಳಿ ರಾಜೀವನಿಗೆ ಒಂದು ರೀತಿ ನಗೆಯೇ ಬಂದುಬಿಡುತ್ತದೆ. "ಅವನು ಎಷ್ಟು ದೊಡ್ಡವನಾಗಿದ್ದಾನೆ ಎಂದು ನಿನಗೆ ಗೊತ್ತಿಲ್ಲ. ಹೀಗೇ ಅವನನ್ನು ಆಗ್ಗಾಗ್ಗೆ ಡಾಕ್ಟರ ಬಳಿ ಕರೆದುಕೊಂಡು ಹೋಗುತ್ತಿರು". <br /><br />ಸಾಗರನ ಜೀವನ ದಿನೇ ದಿನೇ ಬದಲಾಗುತ್ತದೆ. ಅವನು ಹೆಚ್ಚು ಹೆಚ್ಚು ಗಂಭೀರವಾಗುತ್ತಾನೆ. ಚಿಕ್ಕ ಮಕ್ಕಳ ಹಾಗೆ ಆಟವಾಡುವುದೂ ಈಗ ಅವನಿಗೆ ರುಚಿಸುವುದಿಲ್ಲ. ಅಪ್ಪ ಅಮ್ಮನ ಬಳಿ ಒಂದು ರೀತಿಯ ಗೌರವದಿಂದ ಮಾತನಾಡುತ್ತಾನೆ. ಆದರೆ, ಇದು ಮನೆಯ ಹಿರಿಯರೊಡನೆ ಮಾತನಾಡುವ ರೀತಿಯಲ್ಲ, ಗೊತ್ತಿಲ್ಲದ ಅತಿಥಿಗಳು ಏನು ತಿಳಿದುಕೊಳ್ಳುತ್ತಾರೋ ಎನ್ನುವ ಭಯದಿಂದ ಕೂಡಿರುವ ಮಾತಿನ ಹಾಗೆ. ಅಷ್ಟೇ ಅಲ್ಲ, ಅವನ ಮಾರ್ಕ್ಸ್ ಕಾರ್ಡ್ ಕೂಡ ಹೆತ್ತವರಿಗೆ ಖುಷಿ ಕೊಡುವಷ್ಟು ಸುಧಾರಿಸಿಬಿಡುತ್ತದೆ. ರಾಜೀವನಿಗೆ ದಿನೇ ದಿನೇ ಸಂತೋಷವೇ ಆಗುತ್ತದೆ. ಮಗನ ಓದು, <em>ಸೆಲ್ಫ್ ಡಿಸಿಪ್ಲೀನ್</em>, <em>ಎಕ್ಸ್ ಪೆಕ್ಟೇಷನ್ ರೀಚ್ </em>ಮಾಡುವ ರೀತಿ ಎಲ್ಲಾ ಅವನಿಗೆ ಸಮಾಧಾನ ತರುತ್ತದೆ. ಅವನ ಭವಿಷ್ಯದ ಚಿಂತೆ ಈಗ ದೂರವಾಗಿದೆ. ಸುಧಾಳಿಗೆ ಒಬ್ಬಳೇ ಇದ್ದಾಗ ಗೊಂದಲವಾದರೆ, ರಾಜೀವ ಮನೆಗೆ ಬರುತ್ತಲೆ ಸಮಸ್ಯೆ ನಿವಾರಣೆಯಾದಂತೆ ಕಾಣುತ್ತದೆ.<br /><br />ಈ ದಿನ ಸ್ಕೂಲಿನಲ್ಲಿ ಹೋಮ್ ವರ್ಕ್ ಏನೂ ಕೊಟ್ಟಿಲ್ಲ. ಸಾಗರನ ಸ್ನೇಹಿತರು ಅವನನ್ನು ಕರೆಯಲು ಬರುತ್ತಾರೆ. ಅವನು ನಯವಾಗಿ ಏನೋ ಕಾರಣ ಹೇಳುತ್ತಾನೆ. ಸುಧಾ ಮಧ್ಯೆ ಬಾಯಿ ಹಾಕುತ್ತಾಳೆ. ಅಮ್ಮನ ಬಲವಂತಕ್ಕೆ ಸಾಗರ ಆಚೆಗೆ ಹೊರಡುತ್ತಾನೆ. ಅವನು ಏನು ಮಾಡುತ್ತಾನೆಯೋ ಎಂಬ ಕೆಟ್ಟ ಕುತೂಹಲವೊಂದು ಸುಧಾಳನ್ನು ಕಾಡಲು ಶುರುಮಾಡುತ್ತದೆ. ಅವನ ಹಿಂದೆಯೇ ಹೊರಟು ಸ್ವಲ್ಪ ದೂರದಲ್ಲಿ ನಿಲ್ಲುತ್ತಾಳೆ. ಸಾಗರನೂ ತನ್ನ ಸ್ನೇಹಿತರನ್ನು ನಿಲ್ಲಿಸುತ್ತಾನೆ.<br /><br />"ಏ ನನ್ನ ಬಿಟ್ಟುಬಿಡಿ. ನೀವು ಬೇಕಾದ್ರೆ ಹೋಗಿ ಆಟ ಆಡಿಕೊಳ್ಳಿ". <br /><br />"ಏ ನೀನು ಆಟ ಆಡಲು ಬಂದು ಎಷ್ಟೊಂದು ದಿನ ಆಯ್ತು. ಯಾಕೋ ನೀನು ಬರೋದಿಲ್ಲ?" <br /><br />"ಏ ಈ ಆಟ ಆಡೋದೆಲ್ಲ ಸುಮ್ನೆ ವೇಷ್ಟು. ಇದೆಲ್ಲಾ ಅಪ್ಪ ಅಮ್ಮನಿಗೆ ಇಷ್ಟ ಇಲ್ಲ. ನಾವು ಜಾಸ್ತಿ ಮಾರ್ಕ್ಸು ತಗೊಳ್ಳದೆ ಇದ್ದರೆ, ಅವರು ನಮ್ಮನ್ನು ಆಸ್ಪತ್ರೆಗೆ ಕರಕೊಂಡು ಹೋಗ್ತಾರೆ. ಆ ಡಾಕ್ಟರು ಏನೇನೋ ಹೇಳ್ತಾರೆ ಗೊತ್ತಾ? ನನಗೆ ಭಯ ಆಗುತ್ತೆ. ಸಾಕು ಇನ್ನು ನನ್ನ ಬಿಟ್ಟಿಬಿಡಿ". <br /><br />ಸಾಗರ ಮಾತುಮುಗಿಸುವ ಮುಂಚೆಯೇ ಸುಧಾ ಅಳು ತಡೆಯಲಾರದೆ, ಮನೆಗೆ ಓಡಿ ಬಂದು ಕುಸಿಯುತ್ತಾಳೆ. <br /><br />ಸಾಗರ ಹಿಂದೆ ಬಂದವನು, ತನ್ನ ಪಾಡಿಗೆ ತಾನು ರೂಮಿನೊಳಕ್ಕೆ ಹೋಗುತ್ತಾನೆ. ಸುಧಾಳ ಎದೆ ಎಂದೂ ಇಲ್ಲದಂತೆ ಹೊಡೆದುಕೊಳ್ಳುತ್ತದೆ. ಈಗಲೇ ಈ ಕ್ಷಣವೇ ತನ್ನ ಪ್ರಾಣ ಹೊರಟು ಹೋಗಬಾರದೆ ಎನ್ನಿಸುತ್ತದೆ. ಅರೆ! ಹೊರಗೆ ಬಾಗಿಲು ಶಬ್ಧವಾಗುತ್ತದೆ. ತೆಗೆದೇ ಇದ್ದ ಬಾಗಿಲನ್ನು ಯಾರು ತಟ್ಟುವುದು? ಸುಧಾ ಒಮ್ಮೆಗೇ ತನ್ನ ಮನಸ್ಸನ್ನು ಸ್ಥಿಮಿತಕ್ಕೆ ತೆಗೆದುಕೊಂಡು ಹೊರಕ್ಕೆ ನಡೆಯುತ್ತಾಳೆ. <br /><br />ರಾಜಾರಾಂ ಬಾಗಿಲ ಬಳಿಯಲ್ಲಿ ನಗುತ್ತಾ ನಿಂತಿದ್ದಾನೆ. ಅವನು ರಾಗಿಣಿಯ ಕಡೆಯ ತಮ್ಮ, ಸುಮಾರು ಎಂಟು ವರ್ಷ ವ್ಯತ್ಯಾಸ ಇಬ್ಬರಿಗೂ. <br />"ಏನೋ ಹೇಳದೇ ಕೇಳದೇ ಬಂದುಬಿಟ್ಟೆ?" <br /><br />"ಮತ್ತೆ ನಿನ್ನ ಪರ್ಮಿಷನ್ ಯಾರು ಕೇಳುತ್ತಾರೆ?" <br /><br />"ಬಾ ಒಳಗೆ" <br /><br />"ಮತ್ತೆ?"<br /><br />ರಾಜಾರಾಂ ಸ್ವಲ್ಪ ಬಿರುಸಿನಿಂದಲೇ ಒಳಕ್ಕೆ ನಡೆದ. ತುಂಬಾ ಖುಷಿಯಲ್ಲಿ ಇದ್ದ ಹಾಗೆ ಕಾಣುತ್ತಾನೆ ರಾಜಾರಾಂ. <br />"ಏನು ಸಮಾಚಾರ?" <br /><br />"ಏನಿಲ್ಲ ಇಂಟರ್ವ್ಯೂ ಇತ್ತು" <br /><br />"ನಿನ್ನನ್ಯಾರೋ ಸೆಲೆಕ್ಟ್ ಮಾಡ್ದೋರು" <br /><br />"ಮತ್ತೆ, ತಗೋ ಸ್ವೀಟು" <br /><br />"ಕಂಗ್ರಾಟ್ಸ್" <br /><br />"ಸಾಗರ ಇದ್ದಾನ?" <br /><br />"ಇದ್ದಾನೆ"<br /><br />ಸುಧಾ ಸಾಗರನನ್ನು ತನ್ನ ಮಾವನನ್ನು ಮಾತನಾಡಿಸಲು ಕರೆಯುತ್ತಾಳೆ. ಸಾಗರ ಮತ್ತೆ ಅದೇ ಗಾಂಭೀರ್ಯದಿಂದ ಹೊರಗೆ ಬರುತ್ತಾನೆ. ಮಾವನ ಜೊತೆ ಮತ್ತೆ ಅದೇ ಸಲಿಗೆಯಿಲ್ಲದ, ಮರ್ಯಾದೆಯ ಮಾತು. ಮಾವನಿಗೂ ಸ್ವಲ್ಪ ಬದಲಾವಣೆ ಎನಿಸಿದರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಅದು ಅವನ ಜಾಯಮಾನದಲ್ಲೇ ಇಲ್ಲ. <br /><br />"ಅಕ್ಕ ಒಂದು ಇಂಟರೆಸ್ಟಿಂಗ್ ವಿಷಯ ಹೇಳ್ತೀನಿ ಕೇಳು. ಇವತ್ತು ಅಮ್ಮ ಯಾಕೋ ತುಂಬಾ ನೆನಪಿಗೆ ಬಂದುಬಿಟ್ಟಳು." <br /><br />"ಏನಾಯ್ತು?" <br /><br />"ಏನಿಲ್ಲ ಆ ಇಂಟರ್ವ್ಯೂ ಮಾಡ್ತಿದ್ದವ ಒಳ್ಳೆ ತಲೆಕೆಟ್ಟ ಹುಲಿ ಹಾಗೆ ಆಡ್ತಿದ್ದ. ನನಗೆ ಏನನ್ನಿಸಿತು ಗೊತ್ತಾ? ಇವನು ಏನಾದರು ಅಂದುಕೊಳ್ಳಲಿ ನನಗೆ ಸರಿ ಅನ್ನಿಸಿದ್ದನ್ನು ನಾನು ಮಾಡುತ್ತೇನೆ."<br /><br />"ಅದಕ್ಕೆ ಅಮ್ಮ ನೆನಪಾದ್ರೆ?"<br /><br />"ಮತ್ತೆ, ನಾನು ಸಣ್ಣವನಾಗಿದ್ದಾಗ ಮಾಡುತ್ತಿದ್ದ ತರಲೆಗೆ, ತರುತ್ತಿದ್ದ ಮಾರ್ಕ್ಸಿಗೆ, ಅಥವಾ ತರದೇ ಇದ್ದ ಮಾರ್ಕ್ಸಿಗೆ ಎಷ್ಟು ಬೈತಿದ್ರೂ ಅಪ್ಪ. ಒಂಥರಾ ಇನ್ಫೀರಿಯಾರಿಟಿ ಅನ್ನಿಸ್ತಿತ್ತು."<br /><br />"ನೀನು ಸರಿಯಾಗಿ ಯಾವತ್ತಪ್ಪ ಓದಿದ್ದೀಯಾ?" <br /><br />" ಹಯ್ಯೋ, ಓದೋಕೆ ಆದ್ರೆ ತಾನೆ? ಪುಸ್ತಕ ನೋಡ್ತಾ ಇದ್ರೆ ಅಕ್ಷರಗಳೆಲ್ಲ ತಲೆಕೆಳಗಾದ ಹಾಗೆ ಕಾಣ್ತಿತ್ತು ಹ ಹ... ಆದರೆ, ಅಮ್ಮ ನನಗೆ ಕೇರ್ ಮಾಡೋದು ನೋಡಿದ್ರೆ, ಒಂಥರಾ ಸ್ವಾಭಿಮಾನ ಬರ್ತಿತ್ತು. ಅಮ್ಮ ಹಾಗೆ ಮಾಡದೇ ಹೋಗಿದ್ದಿದ್ದರೆ ನಾನು ಇವತ್ತು ಇಲ್ಲಿರ್ತಿರಲಿಲ್ಲ ಬಿಡು. ಎಲ್ಲಾದರೂ ಸ್ಯಾಡಿಸ್ಟ್ ಆಗೋಗ್ತಿದ್ದೆ. ಹ ಹ ಹ . . . " ತನ್ನ ಮನಸ್ಸಿನ ಭಾವವನ್ನು ತಾನೇ ಮರೆಮಾಡಿಕೊಳ್ಳಲೇನೋ ಎಂಬಂತೆ ಬರುತ್ತದೆ ಆ ನಗು.<br /><br />"... ಕಡೆಯಲ್ಲಿ ಅವನು ಏನು ಹೇಳಿದ ಗೊತ್ತಾ?"<br /><br />"ಏನು ಹೇಳಿದ?"<br /><br />"ಯೂ ಆರ್ ಕ್ವಯ್ಟ್ ಕಾನ್ಫಿಂಡೆಟ್ ಅಂಡ್ ಕಲೆಕ್ಟಿವ್ ಅಂಡ್ ಯೂ ಟೇಕ್ ಇಂಡಿಪೆಂಡೆಂಟ್ ಡಿಸಿಷನ್ಸ್. ನಾನು ಹ ಹ ಹ"<br /><br /> * * *<br /><br />ಯಾವುದೋ ಪಾತಾಳದಿಂದ ದಢಕ್ಕನೆ ಎದ್ದು ಆಚೆಗೆ ಬಂದಂತೆ ಭಾಸವಾಯಿತು ಸುಧಾಳಿಗೆ. ಕಣ್ಣು ಬಿಡುತ್ತಿದ್ದಂತೆಯೇ, ತನಗೇ ಅರಿಯದಂತೆ ಮುಖದ ಮೇಲೊಂದು ಸಣ್ಣನೆ ನಗೆ ಮೂಡಿತು. ಮನಸ್ಸು ಹಗುರವಾಯಿತು. ದಿವಾನದಿಂದ ಎದ್ದು ಹೊರಗೆ ನಡೆದಳು. ಆಟವಾಡುತ್ತಿದ್ದ ಸಾಗರನನ್ನು ಕರೆದು, ಒಳಗೆ ಹಾಲು ಬಿಸಿ ಮಾಡಲು ಹೊರಟಳು. ಅವನು ದೊಡ್ಡವನಾದ ಮೇಲೆ ಏನಾಗುತ್ತಾನೋ ಅವನನ್ನೇ ಕೇಳಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕಿದಳು.ಮುತ್ತುಮಣಿhttp://www.blogger.com/profile/02071788886580605152noreply@blogger.com7