ಸೋಮವಾರ, ಮಾರ್ಚ್ 2, 2009

ನನ್ನ ಉತ್ತರ!

ಕಥೆಯು ಅಸ್ಪಷ್ಟ,
ಎಂಬುದೀಗ ಸ್ಪಷ್ಟ!

ಉತ್ತರವು ಬಹಳಾನೆ ಉದ್ದ ಬೆಳೆಯಿತು,
ವಾರೆಆಲೋಚನೆಯೊಂದು ಹೊಳೆಯಿತು

ಇದೇ ಒಂದು ಪೋಸ್ಟಾದರೆ ಹೇಗೆ?
ಹೇಳಿಬಿಡಬಹುದಲ್ಲ ನಾನಂದುಕೊಂಡದ್ದನ್ನೆಲ್ಲಾ ಹಾಗೆ,

ನೋಡಿ, ಇದೂ ಒಂದು ಪೋಸ್ಟು,
ಇದಕ್ಕೂ ದಯಪಾಲಿಸಿ ನಿಮ್ಮ ಕ್ರಿಟಿಕ್ಕು ಕಮೆಂಟು



@ ಚಂದ್ರಕಾಂತ
ಉತ್ತರ ಕೊಡಲು ತಡಮಾಡಿದ್ದಕ್ಕೆ ಕ್ಷಮೆಯಿರಲಿ. ಕೆಲಸ ಹೆಚ್ಚೆನಿಸುವಷ್ಟು ಜಾಸ್ತಿಯಾಗಿತ್ತು! ನಿನ್ನೆ ನಿಮ್ಮ ಬ್ಲಾಗಿನಲ್ಲಿ ಬರೆದು ಇಲ್ಲಿಗೆ ಬರುವಷ್ಟರಲ್ಲಿ ಸಿಸ್ಟಮ್ ಕೈಕೊಟ್ಟುಬಿಟ್ಟಿತು!

ಮತ್ತು ಸುಧೇಶ್,

ನಿಮ್ಮಿಬ್ಬರ ಕ್ರಿಟಿಕ್ಸ್ ನನಗೆ ಬಹಳಷ್ಟು ತಿಳುವಳಿಕೆ ನೀಡಿವೆ, ಕಥೆ ಬರೆಯುವ ವಿಷಯದಲ್ಲಿ.

ಇನ್ನು ತಡಮಾಡದೆ ನನ್ನ ಕಥೆಯ ಹಿಂದಿನ ಕಥೆಯನ್ನ ಹೇಳಿಬಿಡುತ್ತೇನೆ...

ಈ ಡಿಸ್ಲೆಕ್ಸಿಯ ವಿಷಯದ ಬಗೆಗೆ ತುಂಬಾ ಚರ್ಚೆ ನಡೆಯುತ್ತಿದ್ದಾಗ, ನಾನೂ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಯಿತು. ಅದರಿಂದ ತಿಳಿದ ಕೆಲವು ವಿಷಯಗಳು ಹೀಗಿವೆ:

೧. ಇಂಥದೊಂದು ಗುಣವು ಖಾಯಿಲೆಯೇ ಅಲ್ಲವೇ ಎಂಬುದು ಮೂಲ ಪ್ರಶ್ನೆ (ನನಗೆ!).
೨. ಈ ಗುಣವು ಹಿಂದಿನಿಂದಲೂ ಮನುಷ್ಯರಲ್ಲಿ ಕಾಣುವುದನ್ನು ನಾವು ಗಮನಿಸಬಹುದು.
೩. ಕೆಲ ’ಅತಿ ಬುದ್ಧಿವಂತರು’, ಅಂದರೆ ಐನ್ ಸ್ಟೈನ್ ಮುಂತಾದವರು ಹೀಗಿದ್ದರು ಎಂದರೆ, ಸಾಮಾನ್ಯರಿಗೆ ಅದು ಇರಲಿಲ್ಲವೆಂದಲ್ಲ.
೪. ಈಚೆಗೆ, ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳುವ ಸಲುವಾಗಿ, ದೊಡ್ದ ಹುದ್ದೆಯಲ್ಲಿರುವವರೊಬ್ಬರು ಈ ಪರೀಕ್ಷೆ ತೆಗೆದುಕೊಂಡಾಗ ’ನಿಮಗೆ ಡಿಸ್ಲೆಕ್ಸಿಯಾ ಇದೆ, ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಉತ್ತರ ಬಂತು!
೫. ಭಾರತದಂಥ ದೇಶದಲ್ಲಿ ಒಂದು ತರಗತಿಯನ್ನು ನೀವು ತೆಗೆದುಕೊಂಡರೆ ಸುಮಾರು ಅರ್ಧದಷ್ಟು ಮಕ್ಕಳು, ಓದಲು ಬರೆಯಲು ಕಷ್ಟಪಡುವುದನ್ನು ನೀವು ನೋಡಬಹುದು(ಅರ್ಧಕ್ಕಿಂತ ಕೊಂಚ ಕಡಿಮೆ ಎನಿಸುತ್ತದೆ.)ಅದರರ್ಥ ಅವರು ಹೇಳುವುದನ್ನು ಗ್ರಹಿಸಿಲ್ಲ ಎಂದಲ್ಲ.
೬. ನಾನು ಭೇಟಿಮಾಡಿದ ಒಬ್ಬ ಮನೋವೈದ್ಯರ ಪ್ರಕಾರ, ಭಾರತದಂತಹ ದೇಶದಲ್ಲಿ ಈ ಗುಣ ಕೊಡುವ ತೊಂದರೆಗಿಂತ ಅದರ ಅಬ್ಬರವೇ ಹೆಚ್ಚು ತೊಂದರೆ ಮಾಡುತ್ತದೆ. ಇದಕ್ಕೆ ’ಏಡ್ಸ್’ ಅತ್ಯಂತ ಸೂಕ್ತ ಉದಾಹರಣೆ. (ನನಗೆ ಖಾಯಿಲೆ ಅನ್ನುವುದಕ್ಕಿಂತ ಗುಣ ಪದವೇ ಸೂಕ್ತವೆನಿಸುತ್ತದೆ)
೭. ಇದೆಲ್ಲಕ್ಕಿಂತ ಮುಖ್ಯವಾಗಿ, ಚೆನ್ನಾಗಿ ಓದುವ ಬರೆಯುವ ಮಕ್ಕಳು, ಗ್ರಹಣ ಶಕ್ತಿ ಚೆನ್ನಾಗಿರುವವರೇ ಆಗಿರಬೇಕೆಂದಿಲ್ಲ. ಪರೀಕ್ಷೆಯನ್ನು ಹೇಗೆ ಗೆಲ್ಲಬೇಕೆಂಬ ರೀತಿ ಅವರಿಗೆ ಗೊತ್ತಿದ್ದರೆ ಸಾಕು. ಉದಾಹರಣೆಗೆ, ಮುಖ್ಯ ಪ್ರಶ್ನೆಗಳನ್ನು ಓದಿಕೊಳ್ಳುವುದು, ಅರ್ಥವಾಗದಿದ್ದರೂ ರಟ್ ಮಾಡಿ ಬರೆಯುವುದು, ಹೀಗೆ.

ಚಂದ್ರಕಾಂತರವರು ಕೇಳಿರುವ ಪ್ರಶ್ನೆಗೆ ಉತ್ತರ ಇಲ್ಲಿದೆ - ನನ್ನ ಪ್ರಕಾರ ರಾಜರಾಮನಿಗೆ ಓದಲು ಅಮ್ಮನಿಂದ ಯಾವ ರೀತಿಯ ಒತ್ತಾಯವಿರಲಿಲ್ಲ. ಆದರೆ, ’ಅಪ್ಪ ಏನಾದರು ಹೇಳಿಕೊಂಡು ಹೋಗಲಿ’, ಎನ್ನುವ ಮೊಂಡು ಹಠ, ಅವನನ್ನು ರಕ್ಷಿಸಿತು. ಯಾರನ್ನೂ ಮೆಚ್ಚಿಸುವ ಹಂಗಿಲ್ಲದೇ ಇರುವುದೂ ಅವನಿಗೆ ಇದರಿಂದ ಬಂದಿತು. ಮೊಂಡನೇ ನನಗಿಲ್ಲಿ ನಾಯಕ, ಜವಾಬ್ದಾರಿಯ ಅರಿವಾದ ಮೇಲೆ ನಮಗೆ ಕಾಣುವ ರಾಜಾರಾಂ ಬೇರೆ.

ಇನ್ನು, ಸಾಗರ ಬದಲಾಗುವ ವಿಷಯ, ಅದು ಕಥೆ ಸಾಗುವಾಗ ಹಾಗೆ ತಲೆಗೆ ಬಂದದ್ದು. ಅದರ ಸರಿ ತಪ್ಪುಗಳನ್ನು ಈಗ ನಾನೇ ಪರೀಕ್ಷೆ ಮಾಡುತ್ತಿದ್ದೇನೆ!

ಒಟ್ಟಾರೆ ನನ್ನ ಗ್ರಹಿಕೆ ಇದ್ದದ್ದು ಇಷ್ಟೇ - ಮಕ್ಕಳು ಏನಾದರೂ ಮಾಡಿಕೊಳ್ಳಲಿ, ಅವರು ಜೀವನದಲ್ಲಿ ಗೆಲ್ಲಬೇಕಾದರೆ ಅವರಿಗೆ ಬೇಕಾದ್ದು ಆತ್ಮವಿಶ್ವಾಸ ಮತ್ತು ನಿರ್ವಂಚನೆಯ ಸಪೋರ್ಟ್ (ನನ್ನ ಮಗ ತಪ್ಪು ಮಾಡಿದನೋ ಇಲ್ಲವೋ ಆಮೇಲಿರಲಿ, ಮೊದಲು ಅವನು ಊಟ ಮಾಡಲಿ ಎನ್ನುವ ತಾಯಿಯ ರೀತಿ). ಅದನ್ನೇ ಇಲ್ಲಿ ನಾನು ಹೇಳಹೊರಟಿದ್ದು ಮತ್ತು ಅದಕ್ಕೇ ನಾನು ಸುಧಾ ಆಸ್ಪತ್ರೆಗೆ ಹೋಗದೇ ನಿಲ್ಲುತ್ತಾಳೆ ಎಂದು ಅಂತ್ಯ ಮಾಡಿದ್ದು!

7 ಕಾಮೆಂಟ್‌ಗಳು:

  1. ಮುತ್ತುಮಣಿ...

    ನಿಮ್ಮ "ಸಾಗರ" ಕಥೆಗೆ ಪ್ರತಿಕ್ರಿಯೆ ಕೊಟ್ಟಮೇಲೆ ಈಗ ಬರುತ್ತಿರುವೆ..
    ಇಷ್ಟೆಲ್ಲ ನಡೆದದ್ದು ನನಗೆ ಗೊತ್ತೇ ಆಗಲಿಲ್ಲ..

    ಎಲ್ಲವನ್ನೂ ಮತ್ತೊಮ್ಮೆ ಓದಿದೆ..

    ಈಗ ಸರಿಯಾಯಿತು..ಎಂದು ನನಗನ್ನಿಸುತ್ತದೆ..
    ನೀವು ಸಂಗ್ರಹಿಸಿದ ವಿಷಯ, ಮಾಹಿತಿ ಆಸಕ್ತಿಪೂರ್ಣವಾಗಿದೆ..
    ನಿಮ್ಮ ಆಸ್ಥೆ ನನಗೆ ಇಷ್ಟವಾಯಿತು..

    ಇನ್ನಷ್ಟು ಬರೆಯಿರಿ..

    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  2. ಹೇಮಾ
    ಮೊಟ್ಟಮೊದಲಿಗೆ ನಾನೊಂದು ವಿಷಯ ಸ್ಪಷ್ಟಪಡಿಸುವೆ.ಇಲ್ಲದಿದ್ದರೆ ಆತ್ಮವಂಚನೆಯಾದೀತು. ಅದನ್ನೂ ವಿವರವಾಗಿ ಬರೆದರೆ ನಿನ್ನ ಉತ್ತರದ ಹಾಗೆ ಮತ್ತೊಂದು ಪೋಸ್ಟ್ ಆಗುತ್ತದೆ

    ಆ ದಿನ ನಿನ್ನ ಹಾಗೂ ಗೀತಳ ಪೋಸ್ಟ್ಗಳನ್ನು ಓದುವಾಗ ನನ್ನ ಮನಸ್ಥಿತಿ ಒಂದು ರೀತಿ ಯಾರನ್ನಾದರೂ ಬೈಯ್ಯುವಂತಹ ಸ್ಥಿತಿಯಲ್ಲಿತ್ತು. ಕಾರಣಗಳೇನೂ ಇಲ್ಲ. ನನಗೇ ಗೊತ್ತಾಗುತ್ತಿತ್ತು ನಾನು ಮಾಡುತ್ತಿರುವುದು ತಪ್ಪೆಂದು,ಆದರೆ ಮನಸು ನನ್ನ ಮಾತು ಕೇಳಲಿಲ್ಲ.ನಮಗೆ ಯಾರ ಮೇಲೆ ಹೆಚ್ಚು ಇಷ್ಟವಿರುತ್ತದೋ ಅವರನ್ನೇ ಬೈಯ್ಯುತ್ತೇವಲ್ಲವೇ ? ಹಾಗೆ.

    ಅದಕ್ಕೆ ನೀವಿಬ್ಬರೂ ನನಗೆ ಭಯಂಕರ ಕ್ತಿಟಿಕ್ ಎಂಬ ಬಿರುದು ಕೊಟ್ಟಿದ್ದೀರಿ :)) ಪರವಾಗಿಲ್ಲ.

    ಇದನ್ನು ಬರೆದ ಮೇಲೆ ಮನಸ್ಸು ಹಗುರವಾಯಿತು.

    ನಿಜಕ್ಕೂ ಸಾಗರ- ಕಥೆ ಮತ್ತು ಅದು ಬೆಳೆದಿರುವ ರೀತಿ ಬಹಳ ಚೆನ್ನಾಗ್ದೆ.

    ಪ್ರತ್ಯುತ್ತರಅಳಿಸಿ
  3. ಹೇಮಾ ಅವರೇ...

    ಸ್ಪಷ್ಟನೆಗಾಗಿ ಬರೆದ ಈ ಲೇಖನ ತು೦ಬಾ ಇಷ್ಟವಾಯಿತು.

    ಕ್ರಿಟಿಕ್ಸ ಅನ್ನು ತು೦ಬಾ ಸೀರಿಯಸ್ ಆಗಿ ತಗೋಬೇಡಿ:)

    ಮು೦ದಿನ ಕಥೆ ಯಾವಾಗ? ಕ್ರಿಟಿಕಿಸಲು ತಯಾರಾಗಿದ್ದೇನೆ:)

    ಪ್ರತ್ಯುತ್ತರಅಳಿಸಿ
  4. ಹೇ ಬೈ ದ ವೇ..ಮೊದಲು ಬರೆದಿರೋ ಪದ್ಯಾನು ಚೆನ್ನಾಗಿದೆ...ಪ್ರಾಸ-ಗೀಸ ಏಲ್ಲಾ ಮಾಡಿ ಬರ್ದಿದ್ಯಾ...ಇಲ್ಲ ಅದ್ರಷ್ಟಕ್ಕೆ ಅದೆ ಪ್ರಾಸ ಆಗಿಬಿಡ್ತೋ ಹೇಗೆ?!

    ಪ್ರತ್ಯುತ್ತರಅಳಿಸಿ
  5. ಕಥೆಗಿಂತ ಸ್ಪಷ್ಟನೆನೆ ತುಂಬ ಸ್ಪಷ್ಟವಾಗಿದೆ!!

    ಇದೇನಾದ್ರು ನಿಮ್ಮ ಸ್ಕೂಲ್ ಚರ್ಚಾ ಸ್ಪರ್ಧೆ ಅಗಿದ್ದಿದ್ರೆ, ನಾನೇನಾದ್ರು ತೀರ್ಪುಗಾರಳಾಗಿ ಆಗಮಿಸಿದ್ದಿದ್ರೆ, ನನ್ನ ತೀರ್ಪು............"ಉತ್ತಮವಾದ ಮಾಹಿತಿ ಸಂಗ್ರಹಣೆ, ವಿಷಯದ ಬಗ್ಗೆ ಅಧ್ಯಯನ, ವಾದ ಮಂಡಿಸುವ ಶೈಲಿ, ಹಾಗೆ ವಿಷಯದಲ್ಲಿರುವ ರಂಧ್ರಗಳ ಬಗ್ಗೆ ತಿಳುವಳಿಕೆ (awareness of the loopholes in the subject...ಹಿಹಿ) ಇವುಗಳನ್ನು ಗಮನಿಸಿ ಇಂದಿನ ಶ್ರೀ"----?----" ಸ್ಮಾರಕ ಪ್ರಥಮ ಬಹುಮಾನವನ್ನು ಹೇಮಾ ಅವರಿಗೆ ನೀಡುತ್ತಿದ್ದೇವೆ...;)

    ಪ್ರತ್ಯುತ್ತರಅಳಿಸಿ
  6. ಮುತ್ತುಮಣಿ ಮೇಡಮ್,

    ನಿಮಗೆ " women's day" ಶುಭಾಶಯಗಳು.....

    ಈ ದಿನ ನಿಮ್ಮದಾಗಲಿ ಅಂತ ನನಗೆ ಆರೈಸಲು ಇಷ್ಟವಾಗುವುದಿಲ್ಲ....ಏಕೆಂದರೆ ಇದೊಂದೇ ದಿನ ನಿಮ್ಮದಲ್ಲ.....ಪ್ರತಿಕ್ಷಣ, ನಿಮಿಷ, ಗಂಟೆ, ದಿನ, ತಿಂಗಳು, ವರ್ಷಗಳು...ಎಲ್ಲಾ ನಿಮ್ಮವೇ....ನಿಮಗಿಷ್ಟ ಪಟ್ಟಂತೆ ಇರಲು ಇವೆ.. ಪ್ರತಿಕ್ಷಣ ಪ್ರೀತಿಯಿಂದ ಇರಿ.... ಅದರ ನೆಪದಲ್ಲಿ ಪ್ರೀತಿಸಿ.....ಪ್ರೀತಿ ಹಂಚಿ...ನಿಮ್ಮನ್ನು ಪ್ರೀತಿಸಿಕೊಳ್ಳಿ......[ಇದರಲ್ಲಿ ನಮ್ಮ ಸ್ವಾರ್ಥವಿದೆ. ನೀವು ಚೆನ್ನಾಗಿದ್ದರೆ ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೀರಿ.....ತಾಯಿ, ಅಕ್ಕ-ತಂಗಿ, ಪುಟ್ಟ ಮಗುವಿನ ಹಾಗೆ ನಮನ್ನೂ ಪ್ರೀತಿಸುತ್ತೀರಿ...] ನಿಮ್ಮ ಪತಿ-ಮಕ್ಕಳನ್ನು... ಭಂದು ಭಾಂದವರವನ್ನು ಪ್ರೀತಿಸಿ...ಗೆಳೆಯರನ್ನು ಪ್ರೀತಿಸಿ...ಸಮಯವಿದ್ದರೆ ನಮ್ಮೆಡೆಗೂ ಒಂದಿಡಿ ಪ್ರೀತಿ...ತೋರಿಸಿ.....

    ಮತ್ತೊಮ್ಮೆ ಅಭಿನಂದನೆಗಳು.....

    ಪ್ರತಿಕ್ಷಣದಲ್ಲೂ ಪ್ರೀತಿಯಿಂದ....

    ಶಿವು.....

    ಮತ್ತೆ ನನ್ನ ಬ್ಲಾಗಿನ ಕಡೆ ನೀವು ಬರುತ್ತಿಲ್ಲ....ಬಹುಶಃ ನನ್ನ ಬ್ಲಾಗಿನ ಲೇಖನ ಮತ್ತು ಫೋಟೊ... ನಿಮಗಿಷ್ಟವಾಗಿಲ್ಲವೇನೋ.....ನೋಡೋಣ ಇನ್ನೂ ಚೆನ್ನಾಗಿ ಹೊಸದನ್ನು ಕೊಡಲು ಸಾದ್ಯವ ಪ್ರಯತ್ನಿಸುತ್ತೇನೆ....

    ಪ್ರತ್ಯುತ್ತರಅಳಿಸಿ
  7. ಇಷ್ಟು ಹೊತ್ತಿಗೆ ನಿಮಗೆಲ್ಲಾ ನನ್ನನ್ನು ಕ್ಷಮಿಸಿವುದು ಅಭ್ಯಾಸವಾಗಿ ಹೋಗಿದೆ ಎಂದುಕೊಳ್ಳುತ್ತೇನೆ :) ಹೇಗಾದರೂ ಆಗಲಿ ಒಂದು ಸಾರಿ ಕೇಳಿಯೇಬಿಡುತ್ತೇನೆ. ಸಾರಿ ಫಾರ್ ದ ಡಿಲೇ...

    ಪ್ರಕಾಶ್ ಅವರೆ,
    ನಿಮ್ಮ ಪ್ರೋತ್ಸಾಹ ಹೀಗೆ ಇರಲಿ :)

    @ ಚಂದ್ರಕಾಂತ,

    ನೀವು ಕೋಪದಲ್ಲಿ ಬರೆದಿರಬಹುದೆಂದು ನನಗೇನು ಅನ್ನಿಸಲಿಲ್ಲ. ಕೋಪದಲ್ಲಿ ಸ್ವಲ್ಪ ಸತ್ಯಾಂಶವೂ ಹೊರಗೆ ಬರುತ್ತದೆಂದು ನನ್ನ ನಂಬಿಕೆ :)

    @ ಸುಧೇಶ್,

    ಏನು ಸುಧೇಶ್ ಹೀಗೆ ಹೇಳಿಬಿಟ್ಟಿದ್ದೀರ... ಒಂದು ಜೋಕೆ ಆಗಲಿ ಸಿರಿಯಸ್ಸಾಗಿ ತಗೊಳ್ಳಲೇಬೇಕು, ’ಇದು ಜೋಕಾ?’ ಎಂದು ತಾತ್ಸಾರ ಮಾಡಿದರೆ ನಗು ಬರುತ್ತದೆಯೆ? ಹ್ಹ ಹ್ಹ ಹ್ಹ

    @ ಗೀತಾ,

    ಕಥೆಗೆ ಯಾಕೋ ಏನು ಬರೆಯಲಿಲ್ಲ ಅಂದುಕೊಂಡೆ... ಇಲ್ಲಿ ಬಂದ್ಯಾ ಮೂಗು ತೂರಿಸಕ್ಕೆ...

    @ ಶಿವು,

    ಧನ್ಯವಾದಗಳು ಶಿವು, ನಿಮ್ಮ ಬ್ಲಾಗನ್ನು ನಾನು ರೆಗ್ಯುಲರ್ರಾಗಿ ನೋಡುತ್ತೇನೆ. ಸಂಶಯವೇ ಇಲ್ಲ. ಕಾಮೆಂಟ್ ಬರೆಯಲು ಸ್ವಲ್ಪ ಸೋಮಾರಿ ಅಷ್ಟೆ. ಇನ್ನು ಮೇಲೆ ಕ್ರಿಟಿಕ್ಸ್-ಕಾಮೆಂಟ್ಸ್ ಗ್ಯಾರಂಟಿ. ಹಾಗೇ ನೀವು ಮಾಡಬೇಕಷ್ಟೇ!

    ಪ್ರತ್ಯುತ್ತರಅಳಿಸಿ