<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-4527995432766899913</id><updated>2012-02-17T05:14:49.670+05:30</updated><category term='story'/><category term='ಜೀವನ'/><category term='poem'/><category term='ಕುಟುಂಬ'/><category term='ದೇವಸ್ಥಾನ'/><category term='translation'/><category term='ಮನಸ್ಸು'/><category term='ಅನುವಾದ'/><category term='ಹಳ್ಳಿ'/><category term='ಜನಜೀವನ'/><category term='ಹಾಸ್ಯ'/><category term='life'/><category term='ಗೆಲುವು'/><category term='ಪದ್ಯ'/><category term='ರಾತ್ರಿ'/><category term='ಕಥೆ'/><category term='ಮನುಷ್ಯ'/><category term='welcome'/><category term='ನಕ್ಷತ್ರ'/><category term='ಬದುಕು'/><category term='ಶಿಶುಪ್ರಾಸ'/><category term='ಕಾವ್ಯ'/><category term='ವೈಕುಂಠ ಏಕಾದಶಿ'/><category term='ಮಕ್ಕಳು'/><category term='ಡಿಸ್ಲೆಕ್ಸಿಯಾ'/><category term='ಪ್ರಕೃತಿ'/><title type='text'>ಬರೆಯೋ ಆಸೆ...</title><subtitle type='html'>ಒಂದು ಸುಂದರವಾದ ಬರಹ ಉತ್ತಮವಾದ ಚಿತ್ರಪಟದಂತೆ...ಪ್ರಕೃತಿಯ ಒಂದು ರಮ್ಯ ದೃಶ್ಯದಂತೆ... ಬಲ್ಲವನೇ ಬಲ್ಲ ಬೆಲ್ಲದ ಸವಿಯ. 

ಓದಿನಿಂದ ದೊರೆತ ರೋಮಾಂಚನವೇ ಬರೆಯಲು ಸ್ಫೂರ್ತಿ...

ಬರೆಯೋದಕ್ಕೇನೋ ಪ್ರಾರಂಭಿಸಿಬಿಟ್ಟಿದ್ದೇನೆ, ಇನ್ನು ತಲೆನೋವು ಓದುಗರಿಗೆ ಬಿಟ್ಟಿದ್ದು  :)</subtitle><link rel='http://schemas.google.com/g/2005#feed' type='application/atom+xml' href='http://muttumani.blogspot.com/feeds/posts/default'/><link rel='self' type='application/atom+xml' href='http://www.blogger.com/feeds/4527995432766899913/posts/default?max-results=100'/><link rel='alternate' type='text/html' href='http://muttumani.blogspot.com/'/><link rel='hub' href='http://pubsubhubbub.appspot.com/'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><generator version='7.00' uri='http://www.blogger.com'>Blogger</generator><openSearch:totalResults>31</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-4527995432766899913.post-2535651610786970255</id><published>2010-03-19T22:21:00.002+05:30</published><updated>2010-03-19T22:24:33.692+05:30</updated><category scheme='http://www.blogger.com/atom/ns#' term='ರಾತ್ರಿ'/><category scheme='http://www.blogger.com/atom/ns#' term='ನಕ್ಷತ್ರ'/><title type='text'>ಒಂದು ಹೆಸರಿಡದ ಕವನ</title><content type='html'>ಸಾಲು ದೀಪಗಳ ಹಚ್ಚುತಿದೆ&lt;br /&gt;ಕಾಣದ ಸುಂದರ ಕೈಯೊಂದು&lt;br /&gt;ರಂಗವಲ್ಲಿಯ ಚುಕ್ಕೆಗಳನಿಡುತಿದೆ;&lt;br /&gt;ತನ್ನ ಚಂಚಲ ನಡಿಗೆಯ &lt;br /&gt;ಹೆಜ್ಜೆಹೆಜ್ಜೆಯನು ಮೂಡಿಸುತಿದೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-2535651610786970255?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/2535651610786970255/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2010/03/blog-post_19.html#comment-form' title='11 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/2535651610786970255'/><link rel='self' type='application/atom+xml' href='http://www.blogger.com/feeds/4527995432766899913/posts/default/2535651610786970255'/><link rel='alternate' type='text/html' href='http://muttumani.blogspot.com/2010/03/blog-post_19.html' title='ಒಂದು ಹೆಸರಿಡದ ಕವನ'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>11</thr:total></entry><entry><id>tag:blogger.com,1999:blog-4527995432766899913.post-4663904846585896951</id><published>2010-03-05T12:54:00.002+05:30</published><updated>2010-03-05T12:57:07.503+05:30</updated><category scheme='http://www.blogger.com/atom/ns#' term='ಜೀವನ'/><category scheme='http://www.blogger.com/atom/ns#' term='ಮನುಷ್ಯ'/><category scheme='http://www.blogger.com/atom/ns#' term='ಗೆಲುವು'/><category scheme='http://www.blogger.com/atom/ns#' term='ಪ್ರಕೃತಿ'/><title type='text'>ಅತಿ ಜಾಣ</title><content type='html'>ರುಕ್ಮಿಣಿ ಏನು ಮಾಡಿದರೂ ಎದ್ದು ಹೊರಡಲಿಲ್ಲ! ಬಹಳ ದಿನಗಳಾದ್ದರಿಂದ ಆ ಮೂಡ್‌ ಸಹ ಹೋಗಿಬಿಟ್ಟಿದೆ. ಸದ್ಯಕ್ಕೆ ಹಳೆಯದೊಂದು ಕವನ, ನಿಮ್ಮ ಮುಂದೆ...&lt;br /&gt;&lt;br /&gt;ಹ್ಞೂ ತಳ್ಳು! ಇನ್ನೊಂದು ಸ್ವಲ್ಪ&lt;br /&gt;ಹ್ಞಾ ಹಾಗೇ! ಪರವಾಗಿಲ್ಲಪ್ಪ&lt;br /&gt;&lt;br /&gt;ನಾನು ಅಂದುಕೊಂಡ ಹಾಗೆ ಸಾಗುತ್ತಿದೆ &lt;br /&gt;ಎಲ್ಲಾ, ಈ ಗೋಡೆ ಬಿದ್ದು ಹೋಗಲು, &lt;br /&gt;ಎಷ್ಟು ಲೆಕ್ಕ ಹಾಕಿದ್ದೇನೆ ನಾನು?&lt;br /&gt;&lt;br /&gt;ಇಟ್ಟಿಗೆಗಳೆಷ್ಟು? ಮರಳೆಷ್ಟು?&lt;br /&gt;ನೀರೆಷ್ಟು?&lt;br /&gt;ಎತ್ತರ, ಆಳ, ಅಗಲ &lt;br /&gt;ಎಲ್ಲವನ್ನು ಅರಿದು ಕುಡಿದು ಬಿಟ್ಟಿದ್ದೇನೆ...&lt;br /&gt;&lt;br /&gt;ಅದರ ಮುಂದೆ ನನ್ನ ಶಕ್ತಿ ಎಷ್ಟು?&lt;br /&gt;ಹೆಂಗಸರಿಗೆಷ್ಟು? ಗಂಡಸರಿಗೆಷ್ಟು?&lt;br /&gt;ತಳ್ಳಲು ಬೇಕಾದ ಶಕ್ತಿಯೆಷ್ಟು?&lt;br /&gt;ದಿನೇ ದಿನೇ ನನ್ನಲ್ಲಿ ಕುಗ್ಗುವ ಶಕ್ತಿಯೆಷ್ಟು?&lt;br /&gt;ಅದನ್ನು ಸರಿಪಡಿಸಲು ಬೇಕಾದ ಆಳುಗಳೆಷ್ಟು?&lt;br /&gt;ಹ್ಞಾ! ಆಯ್ತು. ಈ ವರುಷ ಮೂರು&lt;br /&gt;ಮಕ್ಕಳು! ಇನ್ನು ಈ ಗೋಡೆ&lt;br /&gt;ನಮ್ಮೆಲ್ಲರ ಕೈ ಭಾರಕ್ಕೆ ಅದರಿ ನೆಲಕ್ಕುರುಳುವುದೇ!&lt;br /&gt;&lt;br /&gt;ಹ್ಹ ಹ್ಹ ಹ್ಹ&lt;br /&gt;&lt;br /&gt;ಬಂದಿದ್ದ ಒಬ್ಬ ಹಾರೆ ಗುದ್ದಲಿ ಹಿಡಿದು&lt;br /&gt;ಗೋಡೆಯನ್ನು ಬೀಳಿಸುತ್ತೇನೆಂದು&lt;br /&gt;ಅಳೆದು ಸುರಿದು ನೋಡಿ ಪರಕಿ ಹೇಳಿಬಿಟ್ಟೆ&lt;br /&gt;ನಿನ್ನ ಬಡಕಲು ಕೊಡಲಿಯೆಲ್ಲಿ? ಈ ದೊಡ್ಡ ಗೋಡೆಯೆಲ್ಲಿ?&lt;br /&gt;ಬಯ್ದು ಓಡಿಸಿಬಿಟ್ಟೆ, ದಡ್ಡನನ್ನ...&lt;br /&gt;&lt;br /&gt;ಹ್ಞೂ ತಳ್ಳಿ! ಇನ್ನೊಂದು ಸ್ವಲ್ಪ&lt;br /&gt;ಹ್ಞಾ ಹಾಗೇ! ಇನ್ನೇನು ಬಿದ್ದೇ ಬಿಡುತ್ತದೆ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-4663904846585896951?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/4663904846585896951/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2010/03/blog-post.html#comment-form' title='9 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/4663904846585896951'/><link rel='self' type='application/atom+xml' href='http://www.blogger.com/feeds/4527995432766899913/posts/default/4663904846585896951'/><link rel='alternate' type='text/html' href='http://muttumani.blogspot.com/2010/03/blog-post.html' title='ಅತಿ ಜಾಣ'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>9</thr:total></entry><entry><id>tag:blogger.com,1999:blog-4527995432766899913.post-9066465735995326837</id><published>2009-12-19T13:00:00.024+05:30</published><updated>2009-12-19T13:53:05.177+05:30</updated><title type='text'></title><content type='html'>ಇದನ್ನು ಸಣ್ಣ ಕಥೆ ಎನ್ನಬಹುದೋ, ’ಒಂದು ಪ್ರಸಂಗ’ ಎನ್ನಬಹುದೋ ನನಗೆ ತಿಳಿಯುತ್ತಿಲ್ಲ. ನಾನು ಮನಸ್ಸಿನಲ್ಲಿ ಅಂದುಕೊಂಡಂತೆ ಪೇಪರಿನ ಮೇಲೆ ಬರಲಿಲ್ಲವಾದ್ದರಿಂದ ಇದಕ್ಕೊಂದು ಟೈಟಲ್‌ ಕೊಡುವ ಗೋಜಿಗೂ ಹೋಗಲಿಲ್ಲ. ಏನೇ ಬರೆದರೂ, ಹಾಳು-ಮೂಳಾದರೂ ಬ್ಲಾಗಿನಲ್ಲಿ ಹಾಕಲೇಬೇಕಂದುಕೊಂಡಿದ್ದೇನೆ, ಏನಾದರೂ ಪ್ರತಿಕ್ರಿಯೆ ಸಿಗುತ್ತದೆಂಬ ಕಾರಣಕ್ಕೆ. ಹಾಗಾಗಿ ಇದನ್ನೂ ಹಾಕುತ್ತಿದ್ದೇನೆ .&lt;br /&gt;&lt;br /&gt;                                       -------                     &lt;br /&gt;&lt;br /&gt;"ಹೌ ಟು ಇಂಪ್ರೆಸ್‌ ಯುವರ್ ಬಾಸ್?" (ನಿಮ್ಮ ಬಾಸ್‌ ಮನವೊಲಿಸುವುದು ಹೇಗೆ?) ಪುಸ್ತಕವನ್ನು ಓದುತ್ತಿದ್ದ ಭಾವನಾಗೆ ಇದ್ದಕ್ಕಿದ್ದ ಹಾಗೆ ಅತ್ತೆ ತನ್ನನ್ನು ಕರೆಯುತ್ತಿರುವುದು ಕೇಳಿಸಿ ಸಿಡಿಮಿಡಿಯಾಯಿತು. ಎದ್ದು ಹೋಗಿ ಅವರ ಮುಂದೆ ನಿಂತುಕೊಂಡಳು, ಮಾತಾಡದೆ. ಅವರ ಠೀವಿಯೇನು ಕಡಿಮೆಯೇ? ಅವಳು ಬಂದುದನ್ನು ಗಮನಿಸಿದರೂ, ಅವಳ ಕಡೆ ತಿರುಗದಂತೆ, ಅಲ್ಲಿದ್ದ  ತುರೆಮಣೆಯನ್ನೂ, ಕೆಳಕ್ಕೊಂದು ತಟ್ಟೆಯನ್ನೂ ಅವಳ ಕಡೆಗೆ ಸರಿಸಿ "ಈ ಒಪ್ಪು ತುರಿದಿಡು" ಎಂದರು. &lt;br /&gt;"ನನಗೆ ಈ ರೀತಿ ಕೊಬ್ಬರಿ ತುರಿಯೋಕೆ ಬರೋಲ್ಲ ಅತ್ತೆ!"&lt;br /&gt;"ಇದನ್ನ ಮೂರು ತಿಂಗಳಿಂದ ಹೇಳ್ತಿದ್ದೀಯಲ್ಲಾ?" ಅತ್ತೆಯ ಸ್ವರ ಸ್ವಲ್ಪ ಜೋರಾಯಿತು. ಭಾವನಾ ಜಗ್ಗದೇ ನಿಂತಿದ್ದಳು. ಅತ್ತೆ ಅವಳ ಕಡೆ ನೋಡದೆ ಮಾತನಾಡುತ್ತಿದ್ದದ್ದು ಅವಳಿಗೆ ಅಡ್ವಾಂಟೇಜೇ ಆಗಿತ್ತು. "ಸರಿ, ಅದೇನು ಮಾಡ್ಕೋತಿದ್ಯೋ ಮಾಡ್ಕೋ ಹೋಗು" ಅಂದರು ಅತ್ತೆ. ಇವಳು ಅಷ್ಟೇ ಸಾಕೆಂದು, ಮತ್ತೆ ರೂಮಿಗೆ ಬಂದು ತನ್ನ ಪುಸ್ತಕದಲ್ಲಿ ಮುಳುಗಿದಳು. "ಕೊಬ್ಬರಿ ತುರಿಯೋಕೆ ಬರದಿದ್ಮೇಲೆ, ಈ ಮನೇಗೆ ಕಾಯಿ ಯಾಕೆ ತರ್ತೀರಿ? ಒಣಕಲು ಬ್ರೆಡ್ಡು, ಸುಡುಗಾಡು ಸಾಸನ್ನೇ ಮೂರು ಹೊತ್ತೂ ಮುಕ್ರಿ" ಎಂದು ಅತ್ತೆ ಇನ್ನೊಂದಿಷ್ಟು ಬಡಬಡಿಸಿದರು. ನಿಧನಿಧಾನವಾಗಿ ಅವರ ಬೈಗುಳ ಮನಸ್ಸಿನಲ್ಲೇ ನಡೆಯತೊಡಗಿತು. &lt;br /&gt;&lt;br /&gt;ಅದಾಗಲೇ, ಮೇಲೆ ಹೋಗಿ ತನ್ನ ರೂಮಿನಲ್ಲಿ ಕೂತ ಭಾವನಾಗೇ ಇದ್ಯಾವುದೂ ಕೇಳಿಸಲಿಲ್ಲ. ಅವಳ ಮನಸಿನಲ್ಲಿ ತರಾವರಿ ಬೈಗುಳಗಳು ಮೇಲೇಳುತ್ತಿದ್ದವು. "ಇವರಿಗೆ ನಾನು ಆರಾಮಾಗಿದ್ದರೆ ಸಂಕಟ", "ವಾರಾಪೂರ್ತಿ ದುಡಿತೇನೆಂಬುದು ಮನಸ್ಸಿಗೆ ನಾಟುವುದೇ ಇಲ್ಲ"... ಸುಮಾರು ಹೊತ್ತು ಬುಸುಬುಸು ಎನ್ನುತ್ತಿದ್ದ ಮನಸ್ಸು ಕ್ರಮೇಣ ನಿರಾಳವಾಯಿತು. ಪುಸ್ತಕದಲ್ಲಿ ನಾಲ್ಕನೇ ಅಧ್ಯಾಯ ಮುಗಿಯಿತಾದ್ದರಿಂದ, ಐದನೇ ಅಧ್ಯಾಯವನ್ನು ಶುರುಮಾಡಿ ಅರ್ಧ ಮಾಡುವುದು ಬೇಡವೆಂದು ಅಷ್ಟಕ್ಕೇ ಮುಚ್ಚಿಟ್ಟು ಸ್ನಾನಕ್ಕೆ ನಡೆದಳು. &lt;br /&gt;&lt;br /&gt;                                          ***&lt;br /&gt;&lt;br /&gt;ಗೌರಿ, ನೆನ್ನೆ ತಾನೆ ನಾನು ಕಾಯಿ ತಂದಿದ್ದು? ಗೌರಿ... ಗೌರಿ... ಅಡುಗೆಮನೆಯಿಂದ ಯಾವ ಉತ್ತರವೂ ಬರದಿದ್ದರಿಂದ ಕೃಷ್ಣಪ್ಪನವರು ಕೊಂಚ ಹೊತ್ತು ಸುಮ್ಮನಿದ್ದರು. ’ಬೆಳಗ್ಗೇನೆ ಅಲ್ಲವೇ ಕಾಯಿ ಒಡೆದ  ಶಬ್ದ ಕೇಳಿಸಿದ್ದು ನನಗೆ?’ ಎಂದು ನೆನೆಪಿಸಿಕೊಂಡು ಮತ್ತೆ ಕೂಗಿದರು. ಗೌರೀ... ಅಡುಗೆಮನೆಯಿಂದ ಉತ್ತರ ಬರಲಿಲ್ಲ. ಅಷ್ಟರಲ್ಲಿ ಕೆಳಗೆ ಬಂದ ಭಾವನಾಳನ್ನು ಕೇಳಿದರು ,"ಇವತ್ತು ಬೆಳಗ್ಗೆ ಕಾಯಿ ಒಡೆದ್ರೀ ಅಲ್ಲವೇ?", "ಹೌದು ಮಾವ, ಒಡೆದ ಹಾಗೆ ಶಬ್ದ ಕೇಳಿಸ್ತು" ಎಂದಷ್ಟೇ ಹೇಳಿ ಹೊರಕ್ಕೆ ನಡೆದಳು ಭಾವನಾ. ಅಡುಗೆಮನೆಯಿಂದ ಬಿರುಗಾಳಿಯಂತೆ ನುಗ್ಗಿ ಅತ್ತೆ, "ಹೌದು, ಕಾಯಿ ಒಡೆದೆ. ಇವತ್ತು ಹಾಕಲಿಲ್ಲ. ಒಂದಿನಕ್ಕೇನು ಪರವಾಗಿಲ್ಲ, ತಿನ್ನಿ" ಎಂದು ಹೋದರು. ಕೊಬ್ಬರಿತುರಿಯಿಲ್ಲದೇ ತಟ್ಟೆಯಲ್ಲಿದ್ದ ಉಪ್ಪಿಟ್ಟು ಹರಳು-ಹರಳಾಗಿ ಹೋಗಿತ್ತು. ಸವೆದುಹೋದ ಹಲ್ಲನ್ನಿಟ್ಟುಕೊಂಡು, ಅದನ್ನು ಖಾಲಿಮಾಡುವುದು ಹೇಗೆಂಬುದೇ ಈಗ ದೊಡ್ಡ ಸಮಸ್ಯೆಯಾಯಿತು. &lt;br /&gt;&lt;br /&gt;ಮತ್ತೆರಡು ಕ್ಷಣಕ್ಕೇ ಅತ್ತೆಗೆ ತನ್ನ ಪತಿದೇವರ ಕಷ್ಟ ನೆನಪಾಯಿತು. "ಮಜ್ಜಿಗೆ ಇವತ್ತು ಚೆನ್ನಾಗಿ ಹೆಪ್ಪುಕೊಂಡಿದೆ, ಇದನ್ನೇ ಹಾಕ್ತೀನಿ" ಎಂದುಕೊಡು ಬಂದ ಅತ್ತೆ ತಲೆಯೆತ್ತದೆ ಒಂದೆರಡು ಸೌಟು ಗಟ್ಟಿ ಮೊಸರನ್ನು ಬಡಿಸಿದರು. ನೀರು ತುಂಬಿದ ಕಣ್ಣುಗಳನ್ನು ಮೇಲೆತ್ತಲಾರದೆ ಪುನಃ ಅಡುಗೆಮನೆಯೊಳಕ್ಕೆ ಸೇರಿಕೊಂಡರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-9066465735995326837?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/9066465735995326837/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/12/blog-post.html#comment-form' title='17 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/9066465735995326837'/><link rel='self' type='application/atom+xml' href='http://www.blogger.com/feeds/4527995432766899913/posts/default/9066465735995326837'/><link rel='alternate' type='text/html' href='http://muttumani.blogspot.com/2009/12/blog-post.html' title=''/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>17</thr:total></entry><entry><id>tag:blogger.com,1999:blog-4527995432766899913.post-6811509088835357471</id><published>2009-11-15T18:09:00.030+05:30</published><updated>2009-11-21T23:03:44.995+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ - ೧೧</title><content type='html'>ಅತ್ತೆ ಪಟಕ್ಕನೆ, "ನಮ್ಮ ರುಕ್ಕೂ ಮಾಡದ ಕೆಲಸವೇ ಇಲ್ಲ, ಕೈ ಇಟ್ಟರೆ ಮುಗೀತು, ಮುಗಿಸಿಯೇ ತೀರೋದು. ನೀನು ಹೊರಡು. ತಲೆನೋವು ಅಂತಿದ್ದೆಯಲ್ಲಾ" ಎಂದರು. ರುಕ್ಕೂಗೆ ಸುಳಿಯಲ್ಲಿ ಸಿಕ್ಕ ಅನುಭವವಾಗತೊಡಗಿತು. &lt;br /&gt;&lt;br /&gt;"ಎಲ್ಲಿದೆ ಅತ್ತೆ ಒರಳು?" ಎಂದು ಕೇಳಿಕೊಂಡು, ಕೆಲಸಕ್ಕೆ ಹಚ್ಚಿಕೊಂಡಳು. ಆ ಒರಳು ತೊಳೆದು ಎಷ್ಟು ದಿನವಾಯ್ತೋ? ರುಬ್ಬುವುದಕ್ಕೆ ಶುರುಮಾಡುವ ಮೊದಲೇ ರುಕ್ಕೂಗೆ ಬೆನ್ನುನೋವು ಬರತೊಡಗಿತ್ತು. "ಅತ್ತೇ, ದಿನಾ ಸೋಫಾ ಮೇಲೆ ಕೂತು ಕೂತು ಜಡ್ಡು ಹಿಡಿದುಹೋಗಿತ್ತು. ಈಗ ಒಳ್ಳೆ ಎಕ್ಸಸೈಸ್ ಆಗ್ತಿದೆ" ಎಂದಳು. ಅತ್ತೆ "ನೀವು ಬಿಡಮ್ಮಾ" ಅಂದದ್ದಕ್ಕೆ ಏನು ಅರ್ಥವೋ ತಿಳಿಯದೇ ಕಕ್ಕಾಬಿಕ್ಕಿಯಾದಳು.&lt;br /&gt;&lt;br /&gt;"ಅಡಿಗೆ ಆಗಿದ್ಯಂತಾ ರುಕ್ಕೂ?" ಕೊಟ್ಟಿಗೆಯಿಂದ ಅಜ್ಜಿಯ ದನಿ ಕೇಳಿಸಿತು. ರುಕ್ಕೂ ಬಾಯಿಬಿಡುವ ಮೊದಲೇ ಅತ್ತೆ, "ಆಗತ್ತೆ ಇರಿ ನಿಧಾನಕ್ಕೆ, ಅವರಿನ್ನೂ ಬಂದಿಲ್ಲವಲ್ಲಾ?" ಎಂದರು. ರುಕ್ಕೂ ವಿಧಿಯಿಲ್ಲದೇ ಬಾಯಿಮುಚ್ಚಿಕೊಂಡಳು.&lt;br /&gt;&lt;br /&gt;ರುಬ್ಬಿ ಮುಗಿಸಿ, ಒರಳು ತೊಳೆದು ಮೇಲೇಳುವ ಹೊತ್ತಿಗೆ ಬೆನ್ನು ಸ್ವಲ್ಪ ಸಡಿಲವಾದಂತೆ ತೋರಿತು. ರುಕ್ಕೂಗೆ ಖುಷಿಯಾಯಿತು. ಅತ್ತೆ "ನೀವು ಪಲಾವು ಮಾಡಿಕೊಳ್ಳಿ, ರಾಗಿ ಹಿಟ್ಟು ಇದೆಯಾ" ಎಂದಳು. ಮತ್ತೇಕೋ ಬೇಡವೆನಿಸಿ, "ರಾತ್ರಿಗೆ ನಾನೇ ಮುದ್ದೆ ಮಾಡ್ತೀನಿ" ಎಂದು ಅಲ್ಲಿಂದ ಹೊರಟಳು. "ಮತ್ತೆ ಕೊಟ್ಟಿಗೆಗಾ?" ಎಂಬ ಪ್ರಶ್ನೆಗೆ "ಇಲ್ಲಾ ಅತ್ತೆ, ನನ್ನ ಹಳೇ ಫ್ರೆಂಡುಗಳನ್ನೆಲ್ಲಾ ನೋಡಿಕೊಂಡು ಬರ್ತೀನಿ" ಎಂದಳು. "ಲಲಿತಾ ಹಾಗೇ ಒಂದು ರೌಂಡು ಹೋಗಿ ಬರೋಣ ಬರ್ತೀಯಾ?" ಎಂದಳು. ಏನೂ ಉತ್ತರ ಬರಲಿಲ್ಲ, ಅತ್ತಿತ್ತ ತಿರುಗಿದ ಮೇಲೆ, ಲಲಿತಾ ರೂಮಲ್ಲಿ ಮಲಗಿದ್ದಿದ್ದು ಕಾಣಿಸಿತು. ಪಟ್ಟು ಬಿಡದೇ ಎಬ್ಬಿಸಿಕೊಂಡು ಹೊರಟಳು. "ಗುಣಾ ಎಲ್ಲೇ?" ಎಂದು ಕೂಗಿಡುತ್ತಾ ಅವಳನ್ನೂ ಸೇರಿಸಿಕೊಂಡಳು. ಗುಣಾಗೆ ಇವಳು ಕರೆದದ್ದಕ್ಕೆ ಅಲ್ಪ ಸ್ವಲ್ಪ ಖುಷಿಯೂ ಆಯಿತು. ಅಕ್ಕನ ಜೊತೆ ಹೋಗುವಾಗ ತಾನೇನು ಮಾಡಬಹುದು ಎಂದು ಯೋಚಿಸುತ್ತಾ ಹೆಜ್ಜೆ ಹಾಕಿದಳು.&lt;br /&gt;&lt;br /&gt;ಇವರು ರಸ್ತೆಗೆ ಹೋಗುತ್ತಲೇ, ಲಿಂಗಾಯಿತರ ಪಾರ್ವತಿ ದರ್ಶನವಾಯಿತು. ಒಳ್ಳೆಯ ಹೆಂಗಸು. ನೋಡುತ್ತಲೇ ಸಣ್ಣಗೆ ನಕ್ಕಳು. ಈಯಮ್ಮ ಆವತ್ತಿನಿಂದ ಮಾತು ಕಡಿಮೆ ಎಂದು ನೆನಪು ಮಾಡಿಕೊಂಡು ರುಕ್ಮಿಣಿಯೇ ಮಾತನಾಡಿಸಿದಳು. ಇವಳ ದನಿ ಕೇಳುತ್ತಲೇ ಪಾರ್ವತಿ ’ನಮ್ಮ ಕಮಲೀ ಮಗಳಲ್ವಾ ನೀನು?’ ಎಂದು ಇದ್ದಕ್ಕಿದಂತೆ ಹಳೆಯ ಫೋಟೋ ಒಂದನ್ನು ನೋಡಿ ಸಂತೋಷಪಡುವ ಹಾಗೆ ಸಂತೋಷಪಟ್ಟಳು. ’ಚೆನ್ನಾಗಿದ್ದೀಯಾ?’ ’ಅಮ್ಮಾ ಚೆನ್ನಾಗಿದ್ದಾರಾ?’, ’ಓದು ಮುಗೀತಾ?’, ’ಕೆಲಸ ಆಯ್ತಾ?’ ಎಂದು ವಿಚಾರಿಸಿದರು. ಇವಳು ಕೆಲಸ ಮಾಡುತ್ತಿರುವ ವಿಚಾರ ಕೇಳಿ ’ಹಾಗಿರಬೇಕು. ಅವರಿವರನ್ನ ನಂಬ್ಕೋಬೇಡಿ, ನಿಮ್ಮ ದುಡ್ಡು ನೀವು ದುಡೀರಿ’ ಎಂದು ಕಿವಿ ಮಾತು ಹೇಳಿದರು. ರುಕ್ಕೂಗೆ ಏಕೋ ಮನಸ್ಸು ತುಂಬಿ ಬಂತು. ಅವಳ ಮಗಳಿಗೆ ಅಳಿಯ ಕೊಡಬಾರದ ಕಷ್ಟ ಕೊಡುತ್ತಿದ್ದಾನೆಂಬುದನ್ನು ಗುಣಾ, ಲಲಿತಾ ಹೇಳಿದರು. ಓದಿಲ್ಲದ ಕಾರಣ ಅವಳು ಈಗಲೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳಂತೆ.&lt;br /&gt;&lt;br /&gt;ಅಲ್ಲಿಂದ ಮುಂದಕ್ಕೆ ಸಂಕಮ್ಮನ ಮನೆ. ರುಕ್ಮಿಣಿ ಅವರ ಮನೆಗೇ ಹೋಗಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿಕೊಳ್ಳುತ್ತಿದ್ದಳು. ಅಷ್ಟರಲ್ಲೇ ಯಾರೋ ಮಾತನಾಡುವುದು ಕೇಳಿಸಿತು, &lt;br /&gt;’ಏ ಆ ಹುಡುಗಿ ನೋಡಿದ್ದೀಯಾ? ರುಕ್ಮಿಣಿ ಅಂತ ಅವಳ ಹೆಸರು’. &lt;br /&gt;’ಅವಳ? ಯಾರೇ?’ &lt;br /&gt;’ಯೇ, ಕಮಲಕ್ಕನ ಮಗಳು. ರಜಾಕ್ಕೆ ಬಂದಾಗಲೆಲ್ಲಾ ಎಮ್ಮೆ ಮೇಯ್ಸೋದೇ ಅವಳ ಕೆಲ್ಸ. ನಾನಂತೂ ಅವಳಿಗೆ ಎಮ್ಮೆ ಅಂತಲೇ ಹೆಸರಿಟ್ಟಿದ್ದೆ.’ ’ಹಾಗಾದ್ರೇ, ಕರೆಯಮ್ಮ ನೋಡೋಣ’ &lt;br /&gt;’ಅಯ್ಯಪ್ಪಾ, ಅವಳನ್ನ ಯಾವತ್ತೂ ಕರ್ದಿಲ್ಲಪ್ಪಾ’ ತನ್ನ ಬಗ್ಗೆ ಇಷ್ಟೊಂದು ಸ್ವಾರಸ್ಯಕರ ಕಥೆ ಇದೆಯೆಂದು ಅವಳಿಗೇ ತಿಳಿದಿರಲಿಲ್ಲ. ತಿರುಗಿ ನೋಡಿದ ಕೂಡಲೇ ಮುಖಪರಿಚಯ ಸಿಕ್ಕಿತು. ಸ್ವಲ್ಪ ಕಿಚಾಯಿಸೋಣವೆಂದು ’ಏನು ನಿರ್ಮಲ? ಚೆನ್ನಾಗಿದ್ದೀಯಾ’ ಎಂದಳು. ಆ ಹುಡುಗಿ ಪಾಪ ತಡವರಿಸಿಕೊಂಡು ’ಚೆನ್ನಾಗಿದ್ದೀನಕ್ಕಾ’ ಎಂದಳು. ಅಷ್ಟಕ್ಕೇ ಸಮಾಧಾನವಾಗದೇ, "ದೊಡ್ಡ ದೊಡ್ಡವೆರಡು ಎತ್ತುಗಳಿದ್ವಲ್ಲಾ ಎಲ್ಲಿ?" ಅಂದಳು. ಆ ಹುಡುಗಿ ಮತ್ತೂ ತಡವರಿಸಿ ’ಒಂದು ಸತ್ತುಹೋಯಿತು, ಇನ್ನೊಂದನ್ನು ಮಾರಿಹಾಕಿದೆವು’ಎಂದಳು. &lt;br /&gt;’ಎಮ್ಮೆಗಳು ನಿಮ್ಮವೇನಾ? ನೀವು ಡೈರಿಗೆ ಹಾಲು ಹಾಕ್ತೀರಾ?’&lt;br /&gt;’ಊನಕ್ಕಾ, ಹಾಕ್ತೀವಿ. ಎರಡರಿಂದ ಎಂಟೊಂಬತ್ತು ಲೀಟರ್ ಆಗತ್ತೆ’&lt;br /&gt;’ನೀವೂ ಜೋಳ ಬೆಳೆಯೋದೇನಾ?’&lt;br /&gt;’ಎಲ್ಲಾರೂ ಅದೇ ತಾನೆ?’&lt;br /&gt;’ನಿಮ್ಮ ತೋಟ ಯಾವುದೇಳು, ಕೆರೆ ಪಕ್ಕದಲ್ಲೇ ಇತ್ತಲ್ಲಾ ಅದಲ್ವಾ?’&lt;br /&gt;’ಊ ಅದೇ’ &lt;br /&gt;’ರಜಾ ಇತ್ತು ಅದಕ್ಕೇ ಊರಿಗೆ ಬಂದಿದ್ದೆ. ಸುಮ್ಮನೆ ಊರೆಲ್ಲಾ ಒಂದು ರೌಂಡು ಹಾಕಣ ಅಂತ ಬಂದೆ, ಬರ್ತೀನಿ’ ಎಂದು ಮುಕ್ತಾಯ ಹಾಡಿ ಹೊರಟಳು. ನಿರ್ಮಲಾಗಂತು ಹೀಗೆ ಹಟಾತ್ತನೆ ಮೈಮೇಲೆ ಎರಗಿದ ಅಪಾಯದಿಂದ ಗಾಬರಿಯಾಗಿಬಿಟ್ಟಿತ್ತು. ಆದರೆ, ಮಾತು ಮುಗಿಯುವಷ್ಟರಲ್ಲಿ ರುಕ್ಮಿಣಿಯ ಬಗ್ಗೆ ಪ್ರಶಂಸೆ ಮೂಡಿತ್ತು. ರುಕ್ಮಿಣಿಗಂತೂ ಒಳಗೊಳಗೆ ಹೆಮ್ಮೆಯಾಗುತ್ತಿತ್ತು. ಜೊತೆಗೇ ಸಣ್ಣಗೆ ಮಜಾ ತೆಗೆದುಕೊಳ್ಳುತ್ತಿದ್ದಳು.  &lt;br /&gt;&lt;br /&gt;ಎರಡು ಹೆಜ್ಜೆ ಮುಂದಕ್ಕೆ ಹೋಗುತ್ತಲೇ, ಚಿನ್ನಮ್ಮ ಎದುರಿಗೆ ಬಂದಳು. ಚಿನ್ನಮ್ಮನನ್ನು ನೋಡಿದ್ದೇ ರುಕ್ಮಿಣಿ ’ನೀವು ಕೊಟ್ಟ ನಾಲ್ಕೂ ಜೋಳ ನಾನೆ ತಿಂದೆ’ ಎಂದು ಖುಷಿಯಿಂದ ಕಿರುಚಿದಳು. ಗುಣಾ, ಲಲಿತಾ ಗಂಭೀರವಾಗಿ ’ಅಕ್ಕಾ, ನಾವು ಸಂಕಮ್ಮನ ಮನೇಲಿರ್ತೀವಿ, ಬನ್ನಿ’ ಎಂದು ಮುಂದಕ್ಕೆ ಹೊರಟರು. ಚಿನ್ನಮ್ಮ ಏನೋ ಗ್ರಹಿಸಿದವಳಂತೆ ’ಒಂದು ನಿಮಿಷ ಮನೆಗೆ ಬಂದು ಹೋಗಮ್ಮಾ’ ಅಂದಳು. ರುಕ್ಮಿಣಿ ಮರುಮಾತಾಡದೆ ಅವಳ ಹಿಂದೆ ಹೊರಟಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-6811509088835357471?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/6811509088835357471/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/11/blog-post.html#comment-form' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/6811509088835357471'/><link rel='self' type='application/atom+xml' href='http://www.blogger.com/feeds/4527995432766899913/posts/default/6811509088835357471'/><link rel='alternate' type='text/html' href='http://muttumani.blogspot.com/2009/11/blog-post.html' title='ರುಕ್ಮಿಣಿಯ ಅಜ್ಜಿ ಮನೆ - ೧೧'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>3</thr:total></entry><entry><id>tag:blogger.com,1999:blog-4527995432766899913.post-2110141415088281124</id><published>2009-09-18T14:55:00.042+05:30</published><updated>2009-09-18T23:29:12.316+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ - ೧೦</title><content type='html'>ರುಕ್ಕೂ ಒಳಗೆ ಹೋಗುತ್ತಿದ್ದಂತೆಯೇ ಯಾರೋ ಅವಸರವಾಗಿ ರೂಮಿನೊಳಕ್ಕೆ ಹೋದ ಹಾಗಾಯಿತು. ನನಗೇಕೆ ಎಂದುಕೊಂಡು ಸುಮ್ಮನಾದಳು. ಅತ್ತೆ! ಅತ್ತೆ! ಎಂದು ಒಂದೆರಡು ಸಲ ಕೂಗಿಟ್ಟಳು, ಆ ಕಡೆಯಿಂದ ಉತ್ತರ ಬರಲಿಲ್ಲ. ಒಂದು ಕ್ಷಣ ಕೊಟ್ಟಿಗೆಗೆ ವಾಪಾಸು ಹೋಗಿಬಿಡುವ ಎನಿಸಿತು. ಮತ್ತೆ ಯಾಕೆ ರಂಪ-ರಾಮಾಯಣ ಎಂದು ಅಡಿಗೆ ಮನೆಗೇ ಹೊರಟಳು.&lt;br /&gt;&lt;br /&gt;’ಏನತ್ತೆ ಮಾಡ್ತಾ ಇದ್ದೀರ?’ ಎಂದು ರಾಗವಾಗಿ ಕೇಳುತ್ತಾ ತಾನು ಕೂರುವುದಕ್ಕೆ ಒಂದು ಜಾಗವನ್ನು ಹುಡುಕತೊಡಗಿದಳು. ಅತ್ತೆ ಒಲೆಯ ಕಡೆಗೆ ತಿರುಗಿಕೊಂಡೇ ’ಆಯ್ತಾ, ಅಜ್ಜಿ ಜೊತೆ ಹರಟಿದ್ದು?’ ಎಂದರು. ’ಹ್ಞೂ ಮತ್ತೆ, ದೊಡ್ಡವರಿಂದ ಶುರುಮಾಡ್ಕೊಂಡು ಒಬ್ಬೊಬ್ಬರನ್ನಾಗಿ ವಿಚಾರಿಸಿಕೊಳ್ತಾ ಇದ್ದೀನಿ’ ಎಂದಳು ಬರುತ್ತಿದ್ದ ಸಿಟ್ಟನ್ನು ತಡೆದುಕೊಳ್ಳುತ್ತ. ’ಆಹಾಹಾ ಬಲೆ ಮಾತು ನೀವು ಬೆಂಗಳೂರಿನವರು’ ಎಂದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದರು ಅತ್ತೆ. &lt;br /&gt;’ಹೌದು ಮತ್ತೆ, ನಾನು ನಿತ್ಯ ಆಫೀಸಿನಲ್ಲಿ ಹೀಗೆ ಮಾತಾಡೋದಕ್ಕೆ, ನನಗೆ ಸಂಬಳ ಕೊಡೋದು’&lt;br /&gt;’ನಿಮ್ಮದು ಏನಾದ್ರೂ ಆರಾಮ್ ಕೆಲಸ ಬಿಡು’&lt;br /&gt;’ಆ ಮನೇಲಿ ಅಡಿಗೆ ಮನೆ ಎಷ್ಟು ದೊಡ್ಡದಾಗಿತ್ತತ್ತೆ, ಅಲ್ಲೇ ಕೂತ್ಕೊಂಡು ಊಟ ಮಾಡ್ತಾ ಇರ್ಲಿಲ್ವಾ?’&lt;br /&gt;’ನೀನೆ ಹಿಂಗಂತೀಯಲ್ಲಾ? ಹಾಳು, ಈಗೆಲ್ಲಾ ಅಡಿಗೆ ಮನೇಲಿ ಯಾರು ಊಟ ಮಾಡ್ತಾರೆ’&lt;br /&gt;&lt;br /&gt;’ಈ ಮನೆಯಲ್ಲಿ ಒಬ್ಬೊಬ್ಬರದು ಒಂದೊಂದು ವರಸೆ ಆಗಿದೆಯಲ್ಲಾ’ ಎಂದುಕೊಂಡು, ತರಕಾರಿಗಳನ್ನೆಲ್ಲಾ ಒತ್ತಟ್ಟಿಗೆ ಸರಿಸಿ ತಾನು ಕೂರಲು ಜಾಗ ಮಾಡಿಕೊಂಡಳು. ಅತ್ತೆ ಇವಳು ಕೂತದ್ದನ್ನು ಓರೆ ನೋಟದಲ್ಲಿ ನೋಡಿ ಅತ್ತಕಡೆಗೆ ತಿರುಗಿಬಿಟ್ಟಳು. ಅದು ಇವಳ ಗಮನಕ್ಕೂ ಬಂತು. &lt;br /&gt;ಸುಮ್ಮನಿರಬರದೆಂದು ಮಾತಿಗೆ ಹಚ್ಚಿದಳು. &lt;br /&gt;’ಏನು ಕೆಲಸ ಅತ್ತೆ ಈವಾಗ? ತರಕಾರಿ ಏನಾರು ಎಚ್ಲಾ ಹೇಳಿ.’&lt;br /&gt;’ಅದ್ಯಾಕೆ, ನೀನು ನಮ್ಮ ಮನೆಯ ನೆಂಟಳು. ನೆಂಟರನ್ನ ಹಾಗಲ್ಲ ನಾವು ನೋಡಿಕೊಳ್ಳೋದು.’ &lt;br /&gt;’ಏನು ಅಡಿಗೆ ಇವತ್ತು, ಹುಳ್ಸೊಪ್ಪು ಇದೆಯಾ ಅಥವಾ ಕಾಳು ಹುಳೀನಾ?’ &lt;br /&gt;’ಅವೆಲ್ಲಾ ಯಾತಕ್ಕೆ, ಇವತ್ತು ಪಲಾವು ಮಾಡ್ತಾ ಇದ್ದೀನಿ. ನಮ್ಮೆನೇಗೆ ಬಂದಿದ್ದೀಯ ನೀನು, ನಿನಗೆ ಯಾವ ಸ್ವೀಟು ಬೇಕು ಹೇಳು. ಅದನ್ನೆ ಮಾಡ್ತೀನಿ.’&lt;br /&gt;&lt;br /&gt;ರುಕ್ಕೂಗೆ ಈಗ ಅಳು ಬರುವುದೊಂದೆ ಬಾಕಿಯಾಗಿತ್ತು. ಇದಕ್ಕಿಂತ ಹಳೆಯ ಸಿಡುಗುಟ್ಟುವ ಅತ್ತೆಯೇ ವಾಸಿಯಾಗಿತ್ತಲ್ಲ ಎನ್ನಿಸಿತು. ನಮ್ಮಜ್ಜಿ ಮನೆಗೆ ನಾನು ಬಂದರೆ, ಇವರ ನೆಂಟರ್ಯಾಕಾಗ್ತೀನಿ ಎಂದು ತಲೆಚಚ್ಚಿಕೊಳ್ಳುವಂತಾಯಿತು. ಇಲ್ಲದ ಉತ್ಸಾಹ ಬರಿಸಿಕೊಂಡು ಮತ್ತೆ ಮಾತಿಗೆ ತೆಗೆದಳು. &lt;br /&gt;  &lt;br /&gt;’ಪಲಾವಾ, ಮಾವನಿಗೆ ನಿತ್ಯ  ಮುದ್ದೆ ತಿಂದು ಅಭ್ಯಾಸ ಅಲ್ವಾ ಅತ್ತೆ?’&lt;br /&gt;’ಎರಡೊತ್ತು ಮುದ್ದೆ ಯಾರು ತಿಂತಾರೆ? ಬೇಜಾರು’ &lt;br /&gt;&lt;br /&gt;ರುಕ್ಕೂ ಮನಸ್ಸಿನಲ್ಲೇ ಹುಬ್ಬೇರಿಸಿದಳು. ಗುಣಾಳ ತಂಗಿ ಲಲಿತ ರೂಮಿನಿಂದ ಅಡಿಗೆ ಮನೆಗೆ ಬಂದಳು, ’ಏನು ಅಕ್ಕಾ, ಇಲ್ಲಿ ಕೂತಿದ್ದೀಯಾ?’ಎಂದುಕೊಂಡು. ಹಾಹೂ ಎಂದಾದ ಮೇಲೆ, ಲಲಿತ ಅವಳಮ್ಮನನ್ನು ಕುರಿತು ’ರುಬ್ಬಿಕೊಂಡು ಆಯ್ತೇನಮ್ಮ ಕರೆಂಟು ಹೊರ್ಟೋಗತ್ತೆ’ ಎಂದಳು. ಏನೋ ದೊಡ್ಡ ತಪ್ಪು ನಡೆದ ಹಾಗೆ ಅತ್ತೆ, ’ಅಯ್ಯೋ ಇಲ್ಲವೇ, ಒಂದು ನಿಮಿಷ ಕೈ ಆಡಿಸಿ ಬಿಡ್ತೀನಿ ಇರು, ರುಬ್ಬಿಟ್ಟುಬಿಡು. ಮಿಕ್ಸಿ ಕೆಳಗಿಟ್ಟುಕೋ’ ಎಂದಳು. &lt;br /&gt;&lt;br /&gt;ಲಲಿತ ಮಿಕ್ಸಿ ಸರಿಮಾಡಲು ಅಡಿಗೆಮನೆಯಲ್ಲಿ ಅಂತಿಂದಿತ್ತ ಓಡಾಡತೊಡಗಿದಳು. ಅವಳು ಸಾಮಾನು ತೆಗೆಯಲು ರುಕ್ಕೂ ಒಂದು ಸಾರಿ ಹಿಂದಕ್ಕೆ, ಇನ್ನೊಂದು ಸಾರಿ ಮುಂದಕ್ಕೆ ವಾಲಬೇಕಾಯಿತು. ಕಡೆಗೆ ಲಲಿತ ’ಅಕ್ಕ ಮುಚ್ಚಳ ನಿನ್ನ ಹಿಂದೆ ಇದೆ’ ಎನ್ನಲು, ’ನಾನು ಹಾಲಲ್ಲಿ ಕೂತ್ಕೋತೀನಿ ತಡಿ’ ಎಂದು ಎದ್ದಳು. ಇವರ ತರಾತುರಿಗೆ ತಡೆಯದೇ ಕರೆಂಟು ಹೊರಟೇ ಹೋಗಿತ್ತು. &lt;br /&gt;&lt;br /&gt;ಅಡಿಗೆ ಮನೆಯಲ್ಲಿ ಚಡಪಡಿಕೆ ಎಷ್ಟು ಹೊತ್ತಿಗೂ ನಿಲ್ಲದ್ದಕ್ಕೆ ರುಕ್ಕೂ ತಿರುಗೀ ಎದ್ದು ಬಂದು ಬಗ್ಗಿ ನೋಡಿದಳು. ’ಕರೆಂಟು ಹೊರಟೇ ಹೋಯಿತು, ಇನ್ನು ಆರು ಗಂಟೇಕಾಲ ಬರಲ್ಲ’ ಎಂದಳು ಲಲಿತ. ’ಆರುಗಂಟೇಗೆ ಬರುತ್ತಾ, ಆಗೆಲ್ಲಾ ಹನ್ನೆರಡು ಗಂಟೆ, ಹನ್ನೆರಡು ಗಂಟೆಗಲ್ವಾ ಕೊಡ್ತಾ ಇದ್ದದ್ದು’ ಎಂದ ರುಕ್ಕೂಗೆ ಒಂದು ರೀತಿ ಸಂತೋಷವೇ ಆಗಿತ್ತು. ’ರಾತ್ರಿ ಮಾಡೋಣ ಬಿಡು’ ಎಂದು ಅವರಿಬ್ಬರು ಪ್ಲಾನು ಹಾಕುತ್ತಿರುವಾಗ, ’ರುಬ್ಬುಗುಂಡು ಇದೆಯಲ್ಲಾ, ಒಂದು ಸುತ್ತು ತಿರುಗಿಸಿಬಿಡಿ’ ಎಂದಳು ಉತ್ಸಾಹದಿಂದ. ’ಓ, ಈಯಕ್ಕಾ ಇದನ್ನೂ ಮಾಡಿದೆ ಅಂತ ಕಾಣತ್ತೆ’ ಎಂದಳು ಲಲಿತ ಬೇಸರಗೊಂಡು.    &lt;br /&gt;&lt;br /&gt;’ಹೋ ಅದೇನು ದೊಡ್ಡ ವಿಷಯ, ಅಜ್ಜೀನ ಕೇಳ್ನೋಡು, ಒಬ್ಬಟ್ಟಿಗೆ ಬೇಳೆ ರುಬ್ಬುತ್ತಿದ್ದೆ’ ಎಂದಳು ರುಕ್ಕೂ. ’ಹಾಗಾದ್ರೆ, ಇವತ್ತು ರುಬ್ಬೇ ರುಬ್ತಿ ಅನ್ನು’ ಎಂದು ಲಲಿತ ಅನ್ನುವ ಹೊತ್ತಿಗೆ ರುಕ್ಕೂ ಪಾತ್ರೆಯನ್ನು ಅವಳ ಕೈಯಿಂದ ತೆಗೆದುಕೊಂಡಾಗಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-2110141415088281124?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/2110141415088281124/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/09/blog-post_18.html#comment-form' title='12 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/2110141415088281124'/><link rel='self' type='application/atom+xml' href='http://www.blogger.com/feeds/4527995432766899913/posts/default/2110141415088281124'/><link rel='alternate' type='text/html' href='http://muttumani.blogspot.com/2009/09/blog-post_18.html' title='ರುಕ್ಮಿಣಿಯ ಅಜ್ಜಿ ಮನೆ - ೧೦'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>12</thr:total></entry><entry><id>tag:blogger.com,1999:blog-4527995432766899913.post-6734346654306902804</id><published>2009-09-11T19:51:00.038+05:30</published><updated>2009-09-14T10:57:09.700+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ - ೯</title><content type='html'>ರುಕ್ಕೂ ಸೀದಾ ಹೋಗಿ ಅಜ್ಜಿಯ ಜೊತೆ ಕೊಟ್ಟಿಗೆಯಲ್ಲೇ ಕೂತಳು. ’ಏನಜ್ಜಿ ಇದು ಅಧ್ವಾನ?’ ಎಂದಳು ಮೆತ್ತಗೆ. ಅಜ್ಜಿ ನೆಟ್ಟನೋಟದಲ್ಲೇ ಕೂತಿದ್ದು ನೋಡಿ ವಯಸ್ಸಾಯಿತಲ್ಲಾ, ಇನ್ನು ಕಿವಿಗೇನು ಗ್ಯಾರಂಟಿ ಎಂದುಕೊಂಡು ಸುಮ್ಮನಾದಳು. &lt;br /&gt;&lt;br /&gt;ಇವಳು ಬಂದದ್ದನ್ನು ಗಮನಿಸಿದ ಅಜ್ಜಿ ’ಏನು ನಿನಗೂ ದೊಡ್ಡ ಕಂಪನಿಲೇ ಕೆಲ್ಸಾನಾ?’ ಎಂದು ಮಾತಿಗೆ ಹಚ್ಚಿದರು. &lt;br /&gt;ರುಕ್ಕೂ ’ಹ್ಞೂ. ಅಲ್ಲಿ ನಂಗೇನು ಕೆಲ್ಸ ಗೊತ್ತಾ ಅಜ್ಜಿ, ಎಲ್ಲಾರ್ಗೂ ಫೋನು ಮಾಡಿ ನಮ್ಮ ಕಂಪನೀಗೆ ಕೆಲ್ಸಕ್ಕೆ ಸೇರ್ಕೊಳಿ, ನಮ್ಮ ಕಂಪನಿಗೆ ಕೆಲ್ಸಕ್ಕೆ ಸೇರ್ಕೊಳಿ ಅನ್ನೋದು’ ಎಂದು ನಕ್ಕಳು. &lt;br /&gt;’ಹ್ಞೂ, ಏನಾರು ಒಂದು ಮಾಡ್ಲೇಬೇಕಲ್ಲಮ್ಮ. ನಿನಗೂ ಹೋಗ್ತಾನೆ ಹತ್ತಾ?’&lt;br /&gt;ಈ ಅಜ್ಜಿಗೆ ಗೊತ್ತಿಲ್ಲದೇ ಇರೋ ವಿಷಯಾನೇ ಇಲ್ಲ ಎಂದುಕೊಂಡು ಮಾತು ಮುಂದುವರೆಸಿದಳು. &lt;br /&gt;’ಹ್ಞೂ, ಕೊಡ್ತಾರಜ್ಜಿ. ಬೇರೆ ದೇಶದೋರು ನಮಗೆ ಸಂಬಳ ಕೊಡೋದು. ಅವರಿಗೆ ಅದು ಇನ್ನೂರೋ ಮುನ್ನೂರೋ, ನಮಗೆ ಹತ್ತು ಸಾವಿರ ಅಂತ ಲೆಕ್ಕ’   &lt;br /&gt;’ಹೌದಮ್ಮಾ, ಸಾಕಮ್ಮನ ನೆಂಟರೋನು ಇದ್ದ ಒಬ್ಬ ಹುಡುಗ. ಅವನೂ ಈಗ ಬೆಂಗಳೂರಲ್ಲೇ ಇದ್ದಾನೆ. ಈವಾಗೇನು ಅವನಿಗೆ ಮೂವತ್ತೋ,ನಲ್ವತ್ತೋ ಆಗೋಗಿರತ್ತೆ. ‘ರಾತ್ರಿ ಹೋಗಿ ಹಗಲು ಬರೋದು’ ಅಂತ ಕೆಲಸಕ್ಕಾ ನೀನು ಹೋಗೋದು?’&lt;br /&gt;’ನಂದು ಆ ಥರಾ ಕೆಲಸ ಅಲ್ಲಾ ಅಜ್ಜಿ’&lt;br /&gt;’ಹ್ಞೂ, ಹುಡುಗ್ರು ಬೇಕಾದ್ರೆ ಯಾವಾಗ ಬೇಕಾದ್ರೂ ಹೋಗ್ಲಿ, ಬರ್ಲಿ. ನೀವುಗಳು ಹೋಗ್ಬೇಡಿ ಅಂತ ಕೆಲಸಕ್ಕೆ’&lt;br /&gt;ರುಕ್ಕೂಗೆ ನಗು ಬಂದರು ತಡೆದು ’ಆಯ್ತಜ್ಜಿ’ ಅಂದಳು. &lt;br /&gt;&lt;br /&gt;ಊರ ಹಳೆಯ ಸುದ್ದಿಯನ್ನೆಲ್ಲಾ ನೆನಪಿಸಿಕೊಳ್ಳುತ್ತಾ ಅಜ್ಜಿಯ ಜೊತೆ ಚೆನ್ನಾಗಿ ಹರಟಿದಳು. ಮಾತು ಮಾತಿಗೂ ಇಬ್ಬರಿಗೂ ತಡೆಯಲಾರದಷ್ಟು ನಗು ಬರುತ್ತಿತ್ತು. ಅಜ್ಜಿ ಮುಂಚಿನಂತೆಯೇ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಕೆಲವರನ್ನು ಹೊಗಳುತ್ತಾ, ಕೆಲವರನ್ನು ಬೈಯುತ್ತಾ ಮಾತು ಮುಂದುವರೆಸಿದರು. ರುಕ್ಕೂಗೆ ಮಾತ್ರ ಯಾವುದೋ ಕಣ್ಣುಗಳು ತನ್ನನ್ನೂ, ತನ್ನ ಅಜ್ಜಿಯನ್ನೂ ಸುತ್ತುತ್ತಿರುವಂತೆ ಅನ್ನಿಸುತ್ತಿತ್ತು. ಮಾತು ಮುಂದುವರೆಸುತ್ತಾ ’ಅಜ್ಜಿ ನೀನು ಈವಾಗ ಗೌಡರ ಮನೆಗೆ, ಸಾಕಮ್ಮನ ಮನೆಗೆ ಹೋಗಲ್ವಾ ಹರಟೆ ಹೊಡೆಯೋಕೆ’ ಎಂದು ಕೇಳಿದಳು. ’ಇಲ್ಲಮ್ಮಾ ನನಗೆ ಕಾಲಾಗದು. ಇನ್ನು ಮೇಲೆ ನನ್ನದೇನಿದ್ರೂ ಮನೆಯಿಂದ ಬಾಗಿಲಿಗೆ, ಬಾಗಿಲಿಂದ ಮನೆಗೆ ’ ಎಂದರು ಅಜ್ಜಿ. ಮಧ್ಯಾಹ್ನಕ್ಕೆ ಮೇವು ಹಾಕ್ತೀರ ಹಸೂಗೆ ಎಂದು ಕೇಳಿಕೊಂಡು ಜೋಳದ ಕಡ್ಡಿಗಳನ್ನು ಎಳೆದುಕೊಂಡು ಬಂದು ಹಸುಗಳ ಮುಂದೆ ಸುರಿದಳು.  &lt;br /&gt;&lt;br /&gt;’ತೋಟಕ್ಕಾದರೂ ಹೋಗೋಣ ಅಂದ್ರೆ, ಗುಣಾ ಏನೂ ಹಾಕಿಲ್ಲ ಅಂದ್ಳು. ಹ್ಞೂ, ಈ ಊರಲ್ಲಿ ಯಾರೂ ತೋಟ ಮಾಡಿದ ಹಾಗೆ ಕಾಣಿಸಲಿಲ್ಲ ನನಗೆ, ಚಿಕ್ಕ ಮಾವ ಅವರುಗಳೇನಾದ್ರೂ ಹಾಕಿರ್ತಾರೇನೋ...’ ಎಂದುಕೊಂಡು ಊರಿಗೇ ಕೇಳಿಸುವ ಹಾಗೆ ತನಗೆ ತಾನೇ ಮಾತಾಡಿಕೊಳ್ಳುತ್ತಿದ್ದಳು. &lt;br /&gt;’ಈ ಊರಲ್ಲಿ ನೀರಿಲ್ಲ ನಿಡಿಯಿಲ್ಲ, ನಿನಗೆ ತೋಟ ಯಾರು ಮಾಡ್ತಾರೆ? ಭೂಮಿತಾಯಿ ಎಷ್ಟು ಬೇಕೋ ಅಷ್ಟನ್ನೆಲ್ಲಾ ನುಂಗಲಿ’ ಎಂದು ಅಜ್ಜಿ ಸ್ವಲ್ಪ ಸ್ವಲ್ಪವೇ ಧ್ವನಿಯೇರಿಸುತ್ತಿದರು. &lt;br /&gt;’ಅದೇನು? ಕೆರೆಲಾದ್ರೂ ನೀರಿರಲೇಬೇಕಲ್ಲಾ? ನಾನು ಒಂದ್ಸಾರಿ ಹೋಗಿ ಬಟ್ಟೆ ಒಕ್ಕೊಂಡು ಬಂದಿದ್ದೆ’.&lt;br /&gt;’ಕೆರೆಯೆಲ್ಲಾ, ಬತ್ತೋಗಿದೆ ಈವಾಗ. ಈ ಊರಿಗೆ ಮಳೆ ಬಂದು ಮೂರು ವರ್ಷ ಆಯ್ತು.’&lt;br /&gt;’ಮೂರು ವರ್ಷದಿಂದ ಮಳೆ ಇಲ್ವಾ? ಎಂದು ಆಶ್ಚರ್ಯಪಡುತ್ತಿದ್ದವಳಿಗೆ ಥಟ್ಟನೆ ಕಾಣೆಯಾಗಿದ್ದ ಸರ್ವೇ ತೋಪು ನೆನಪಿಗೆ ಬಂತು. &lt;br /&gt;’ಅಯ್ಯೋ ಇರ್ಲಿ ಬಿಡಜ್ಜಿ. ಒಂದ್ಸಾರಿ ಐದು ವರ್ಷ ಮಳೆ ಬಂದಿರ್ಲಿಲ್ಲವಂತೆ, ಅಮ್ಮ ಹೇಳ್ತಿದ್ರು. ಗುಣಾ ಹೇಳಿದ್ದಾಳಲ್ಲಾ ಮುಂದಿನ ಸಾರಿ ರಾಗಿ, ಭತ್ತ ಹಾಕಿ ಹೊಲ ಮಾಡ್ತಾರಂತೆ, ನೋಡಣ ಬಿಡಿ’.&lt;br /&gt;’ಹೊಲ ಮಾಡ್ತಾರಂತಾ, ಹೊಲ ಮಾಡಕ್ಕೆ ಇವರಿಗೆ...’ ಎಂದು ಅಜ್ಜಿ ಮತ್ತೆ ಧ್ವನಿಯೇರಿಸತೊಡಗಿದರು. &lt;br /&gt;’ಶ್ರೀ ರಾಮನ ಮನೆ ನೆಲ್ಲಿಕಾಯಿ ಮರ ಹಾಗೇ ಇದ್ಯೇನಜ್ಜಿ, ಹೋಗಿ ಒಂದಷ್ಟು ಕಿತ್ತುಕೊಂಡು ಬರ್ತೀನಿ’ ಎಂದು ಜೋರಾಗಿ ಮಾತನಾಡಿ ಅಜ್ಜಿಯ ಧ್ವನಿಯನ್ನು ಉಡುಗಿಸಿದಳು.&lt;br /&gt;’ಹೋ ನೆಲ್ಲಿಕಾಯಿ ಮರನಾ? ಇರಬೋದೇನೋಮ್ಮ? ಊಟಕ್ಕೇನಾದ್ರೂ ಏಳ್ತಾರೇನೋ ನೋಡೋಗು, ಮಧ್ಯಾಹ್ನ ಆಗ್ತಾ ಬಂತು’ ಎಂದರು. ತನ್ನ ಅತ್ತೆ ಆಗಲೇ ಗೊಣಗುಟ್ಟಿದ್ದನ್ನು ನೆನಪಿಸಿಕೊಂಡು ರುಕ್ಕೂ ಒಳಕ್ಕೆ ಹೊರಟಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-6734346654306902804?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/6734346654306902804/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/09/blog-post_11.html#comment-form' title='6 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/6734346654306902804'/><link rel='self' type='application/atom+xml' href='http://www.blogger.com/feeds/4527995432766899913/posts/default/6734346654306902804'/><link rel='alternate' type='text/html' href='http://muttumani.blogspot.com/2009/09/blog-post_11.html' title='ರುಕ್ಮಿಣಿಯ ಅಜ್ಜಿ ಮನೆ - ೯'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>6</thr:total></entry><entry><id>tag:blogger.com,1999:blog-4527995432766899913.post-6603404138572117624</id><published>2009-09-02T15:43:00.030+05:30</published><updated>2009-09-03T14:52:51.563+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ - ೮</title><content type='html'>ಅಜ್ಜಿ ದನಗಳ ಕೊಟ್ಟಿಗೆಯಲ್ಲಿ ಕೂತಿದ್ದರು. ಎಲೆ ಅಡಿಕೆ ಮೆಲ್ಲುತ್ತಾ. ಅಜ್ಜೀ ಎಂದು ಊರಿಗೇ ಅರಚುವಂತೆ ಕೂಗಿಟ್ಟಳು. ’ಯೋಯ್, ಬಂದ್ಬಿಟ್ಯೇನು?’ ಎಂದರು. ಅಜ್ಜಿಗೆ ಸ್ವಲ್ಪ ಖುಷಿಯಾಗಿದ್ದ ಹಾಗೆ ಕಾಣಿಸಿತು. ’ಏನಜ್ಜಿ ಇಲ್ಲಿ ಕೂತ್ಕೊಂಡಿದ್ದೀರಾ’ಎಂದದಕ್ಕೆ ’ಇಲ್ಲೇ ತಣ್ಣಗಿದೆ’ ಎನ್ನುವ ಉತ್ತರ ಬಂತು. ಒಂದು ಕೆಂಚಗಿನ ಹಸು, ಒಂದು ಕಪ್ಪು ಬಿಳುಪಿನದು, ಪಕ್ಕದಲ್ಲಿ ಅದರ ಕರುವೋ ಏನೋ, ಪುಟಾಣಿದೊಂದು ಕರು ನಿಂತಿತ್ತು. ಎಮ್ಮೆಗಳೆಲ್ಲಾ ಎಲ್ಲೋದ್ವು ಅಜ್ಜಿ ಎಂದಳು? ಏನೋ ಕಳೆದುಕೊಂಡವಳಂತೆ. ’ಸರಿ, ಅವಕ್ಕೆ ವಯಸ್ಸಾಯ್ತು ಹೋಯ್ತು’ ಎಂದರು ಅಜ್ಜಿ. ಅದನ್ನು ಅಷ್ಟಕ್ಕೆ ಬಿಡದೆ, ಚಿಕ್ಕದೊಂದಿತ್ತಲ್ಲ ಇನ್ನೊಂದು ಇನ್ನೂ ಹಾಲು ಕೊಡುತ್ತಿತ್ತಲ್ಲ, ಹಣೆ ಮೇಲೆ ಬಿಳಿ ಮಚ್ಚೆ ಇತ್ತಲ್ಲ, ಎಂದು ಒಂದೊಂದರ ಪ್ರವರವನ್ನೂ ಬಿಡದೆ ಅಜ್ಜಿಯ ಬಾಯಿಂದ ಹೇಳಿಸಿದಳು. &lt;br /&gt;&lt;br /&gt;’ಅಕ್ಕ ಯಾವಾಗ ಬಂದ್ರಿ’ ಎಂದು ಹಿಂದುಗಡೆಯಿಂದ ಧ್ವನಿಯೊಂದು ಬಂತು. ಹಸುವಿನ ಮೇವಿಗೆ ಜೋಳದ ಕಡ್ಡಿಗಳನ್ನು ತಂದಿದ್ದಳು ರುಕ್ಕೂ ಅತ್ತೆಯ ದೊಡ್ಡಮಗಳು ಗುಣಶೀಲ. ’ಈವಾಗ್ಲೇ ಬಂದಿದ್ದು, ಹುಲ್ಲು ತರಲ್ವೇನೆ ಹಸೂಗೆ?’ಎಂದಳು ರುಕ್ಕೂ. ಈಗ ಕಕ್ಕಾಬಿಕ್ಕಿಯಾಗುವ ಸರದಿ ಗುಣಾಗೆ ಬಂತು. ಎಲ್ಲಾ ಬಿಟ್ಟು ಹುಲ್ಲಿನ ಬಗ್ಗೆ ಕೇಳಿದಳಲ್ಲಾ ಎಂದು ಬೇಸರವೂ ಆಯಿತು. ’ಹುಲ್ಲು ಯಾತಕ್ಕೆ. ಇದರಲ್ಲೇ ಹಾಲು ಚೆನ್ನಾಗಿ ಬರುತ್ತೆ. ಅದನ್ನ ಒರಕೊಂಡು ಕೂತ್ಕೊಳ್ಳೋರು ಯಾರಕ್ಕ. ನಮ್ಮ ಮನೆ ಒರವಾರಿ ಅಟ್ಟದ ಮೇಲೆ ಹೋಗಿಬಿಟ್ಟಿದೆ’ ಎಂದಳು ಗುಣ. ಅವಳ ಮಾತಿನಲ್ಲಿ ಅರ್ಧಂಬರ್ಧ ಹೆಮ್ಮೆಯೂ ಸೇರಿದ್ದು ರುಕ್ಕೂಗೆ ಗೊತ್ತಾಯಿತಾದರೂ ಯಾತಕ್ಕೆಂದು ಅರ್ಥವಾಗಲಿಲ್ಲ. ಒಟ್ಟು ರುಕ್ಕೂ ಬೇರೆ ಮಾತೆತ್ತಿದಳು. ’ಈಗ ಕಾಲೇಜಿಗೆ ಹೋಗ್ತೀಯಲ್ವಾ ನೀನು?’ ಅವಳು ಇನ್ನೂ ಹೆಮ್ಮೆಯಿಂದ ’ಹೌದು, ಪೇಟೇಗೆ ಹೋಗ್ತೀನಿ’. ಇಲ್ಲಿ ಮೇನ್ ರೋಡಲ್ಲಿ ದೊಡ್ಡ ರೆಸಾರ್ಟ್ ಮಾಡಿದ್ದಾರೆ ನೋಡಿ, ಆ ದಾರಿಲೇ ನಾನು ದಿನಾಲು ಹೋಗೋದು’ ಎಂದಳು. ’ನೀನು ಅಲ್ಲೇ ಇಳ್ಕೊಂಡು ಬಂದಿರ್ತೀ ಅಲ್ವೇನಕ್ಕಾ?’ ಎಂಬ ಮರುಪ್ರಶ್ನೆ ಬಂತು. &lt;br /&gt;&lt;br /&gt;’ಹ್ಞೂ, ಹ್ಞೂ, ತುಂಬಾ ದೊಡ್ಡದಾಗಿ ಕಟ್ಟಿದ್ದಾರೆ. ರೆಸಾರ್ಟಾ ಅದು? ಇದೇನು ಇಲ್ಲೆಲ್ಲಾ ಇಷ್ಟೊಂದು ಹುಲ್ಲು ಬೆಳೆದುಕೊಂಡಿದೆ?’ ಕೊಟ್ಟಿಗೆ ಪಕ್ಕದ ಹತ್ತಿಪ್ಪತು ಅಡಿ ಜಾಗದಲ್ಲಿ ಮೂರು ಮೂರು ಅಡಿ ಹುಲ್ಲು ಬೆಳೆದಿದ್ದು ನೋಡಿ ರುಕ್ಕೂ ಬೆರಗಾದಳು. &lt;br /&gt;&lt;br /&gt;’ಹುಲ್ಲೇನು ಎಲ್ಲಾ ಕಡೆ ಬೆಳೆದುಕೊಳ್ಳತ್ತೆ, ಆ ರೆಸಾರ್ಟಲ್ಲಿ ಛತ್ರ, ಸ್ವಿಮಿಂಗ್ ಫೂಲ್ ಎಲ್ಲಾ ಇದೆ’&lt;br /&gt;’ಅಷ್ಟು ದೊಡ್ಡ ಜಾಗ ಇದ್ಯೆಲ್ಲಾ, ಈ ಕರುನಾ ಈ ಕಡೆ ಬಿಟ್ಬಿಡ್ಲಾ, ಹುಲ್ಲನ್ನೆಲ್ಲಾ ತಿನ್ನತ್ತೆ’&lt;br /&gt;’ಅಯ್ಯೋ ಬೇಡ, ನಾನು ಹಾಕಿರೋ ಗಿಡಾನೆಲ್ಲಾ, ಅದು ತಿಂಧಾಕತ್ತೆ. ಅಲ್ಲಿರೋ ಪಾರ್ಕು ಎಂಥಾ ಚೆನ್ನಾಗಿದೆ ಗೊತ್ತಾ?’&lt;br /&gt;’ಏ ಕರು ಏನು ಹಾಳು ಮಾಡತ್ತೆ? ಹೋಗ್ಲಿ ಬಿಡು. ನಿಮ್ಮ ಕಾಲೇಜಲ್ಲಿ ಪಾಠ ಎಲ್ಲಾ ಚೆನ್ನಾಗಿದೆಯಾ?’&lt;br /&gt;’ಹ್ಞೂ, ನಮಗೇನು ಗೈಡು ಇದೆಯಲ್ಲಾ, ಪಾಸಾದ್ರೆ ಸಾಕು ’. &lt;br /&gt;’ಏ ಗೈಡ್ ಎಲ್ಲಾ ಒದ್ಬೇಡ. ಟೆಕ್ಸ್ಟ್ ತಗೊಂಡು ಓದೋದೆ ಒಳ್ಳೇದು. ತೋಟದಲ್ಲಿ ಏನಾಕಿದ್ದೀರಾ?&lt;br /&gt;’ಸದ್ಯಕ್ಕೆ ಏನು ಇಲ್ಲ, ಈ ಸಾರಿ ಭತ್ತ, ರಾಗಿ ಹಾಕಿ ಹೊಲ ಮಾಡ್ತೀವಿ. ಅಕ್ಕ ಸಾಯಂಕಾಲಕ್ಕೆ ರೆಸಾರ್ಟ್ಗೆ ಹೋಗಿ ಬರಣ್ವಾ’&lt;br /&gt;&lt;br /&gt;ಅವರ ಮಾತು ಎಲ್ಲಿಗೂ ನಿಲ್ಲದೇ ಗಿರಕಿ ಹೊಡೆಯುತ್ತಿದ್ದದ್ದು ಈಗಾಗಲೇ ರುಕ್ಕೂಗೆ ತಿಳಿದುಹೋಗಿತ್ತು. ’ಸಾಯಂಕಾಲನಾ?’ ಎಂದಷ್ಟೇ ಹೇಳೀ ಮುಂದಕ್ಕೆ ಏನು ಮಾತನಾಡಲೆಂದು ಯೋಚಿಸುತ್ತಿದ್ದಳು. ಗುಣಾ ಈ ಕರೂಗೆ ಏನು ಹೆಸರಿಟ್ಟಿದ್ದೀರೆ? ಎಂದಳು ಆಸೆಯಿಂದ. ’ಹೋ, ಅದೆಲ್ಲಾ ಪಟ್ಟಣದಲ್ಲಿ ಆರಾಮಾಗಿ ಇರೋರ್ಗೆ ನಮಗಲ್ಲಾ’ ಎಂದಳು ಗುಣಾ. ’ಗೌರಿ ಅಂತಾ ಹೆಸರಿಡಿ’ ಎಂದಳು. ’ಏನಮಾ, ಊರು ನೆನಪಾಯ್ತ?’ ಎಂದು ಮಾವನ ಕೀರಲು ಧ್ವನಿ ಕೇಳಿಸಿತು. ’ಹೋ, ಏನೋ ಬರಣ ಅಂತ ಬಂದ್ರೆ, ನೀವು ಒಂದ್ಸಾರಿನಾದ್ರೂ ನಮ್ಮೂರಿಗೆ ಬಂದಿದ್ದೀರಾ?’ ಎಂದು ದಬಾಯಿಸಿದಳು. ’ಹ್ಞೂ, ಆಯ್ತು. ಈವಾಗ ಸಾಯಂಕಾಲಕ್ಕೆ ಏನು ಪ್ರೋಗ್ರಾಮ್ ಹಾಕಣ ನಿಮಗೇ....’, ಹಳೇ ಮಾವನಿಗೆ ಇನ್ನೂ ಯಾವುದಕ್ಕೂ ಸೀರಿಯಸ್ನೆಸ್ ಬಂದಿಲ್ಲಾ ಅಂದುಕೊಂಡು, ’ಸಾಯಂಕಾಲಕ್ಕೆ’ ಎಂದು ಶುರುಮಾಡಿದಳು. ’ಅದನ್ನೇ ನಾನು ಹೇಳ್ತಿದ್ದೆ ಅಪ್ಪಾ, ಸಾಯಂಕಾಲಕ್ಕೆ ಅಕ್ಕನ್ನ ಕರಕೊಂಡು ರೆಸಾರ್ಟ್ ನೋಡಿಸಿಕೊಂಡು ಬರ್ತೀವು. ನಾನು ಲಕ್ಷ್ಮೀ ಹೋಗಿ’, ಎಂದು ಮಧ್ಯೆ ಬಾಯಿ ಹಾಕಿದಳು. ’ಹ್ಞೂ, ಬೆಂಗಳೂರಿಂದ ಬರೋರ್ಗೆ ಅದೇ ಸರಿ. ಸಾಯಂಕಾಲಕ್ಕೆ ಇವನ್ನೂ ಕರಕೊಂಡು, ಈ ಕಡೆಯಿಂದ ಹೋಗಿ...’ ಎಂದು ಮಾವ ರಾಗ ತೆಗೆದರು. ’ಮಾವ, ನಂಗದೆಲ್ಲಾ ಗೊತ್ತಿಲ್ಲ. ಬೆಂಗಳೂರಲ್ಲಿ ನಾನು ರೆಸಾರ್ಟ್ ನೋಡೇ ಇರ್ತೀನಿ. ಅದಕ್ಕೆ, ನೀವು ನನಗೆ ಹೊಲ, ಗದ್ದೆ, ತೋಪು ಇಂಥಾದ್ದನ್ನೆಲ್ಲಾ ತೋರಿಸ್ಬೇಕು, ತಾನೆ’ ಎಂದಳು. ಉಕ್ಕಿ ಬರುತ್ತಿದ್ದ ಕೋಪವನ್ನು ಅದುಮಿಕೊಳ್ಳುತ್ತಾ. ಮಾವ ಮತ್ತೆ ರಾಗವಾಗಿ ’ಹ್ಞೂ, ನೀನೆಂಗೇಳದ್ರೇ ಅಂಗೆ’ ಎಂದು, ತೆಪ್ಪಗೆ ಎದ್ದು ಹೊರಟರು. ಗುಣಾ, ’ಅಕ್ಕಾ, ಒಳಗ್ಬನ್ನಿ ಮನೆ ತೋರಿಸ್ತೀನಿ’ ಎಂದಳು. ಮನೆಯೆಲ್ಲಾ ಸುತ್ತುಹಾಕಿದಮೇಲೆ, ’ಏನೇ ಹೇಳು ಗುಣಾ, ಆ ಮನೇನೆ ಎನೋ ಒಂಥರಾ ಇಷ್ಟ ನಂಗೆ’ ಅಂದದಕ್ಕೆ ’ಆ ಮನೇನಾ, ಸದ್ಯ ಯಾವಾಗ ಬಿಡ್ತೀವೋ ಅನ್ಸಿತ್ತು. ಆ ಮನೇಗೆ ಸಗಣಿ ಬಳ್ದೂ ಬಳ್ದೂ ನಮ್ಮ ಕೈಯೇ ಸೇದು ಹೋಗ್ತಿತ್ತು’ ಎಂದಳು ಗುಣಾ. ’ಸಗಣಿ ಬಳೀತಿದ್ದಿದ್ದು ನಮ್ಮಜ್ಜಿ’ ಎಂದು ಬಾಯಿಗೆ ಬಂದರೂ, ಎತ್ತಗೋ ತಿರುಗುವಂತೆ ನಟಿಸಿದಳು.       &lt;br /&gt;&lt;br /&gt;ಅತ್ತಿತ್ತ ತಿರುಗಿ, ಮತ್ತೆ ದನದ ಕೊಟ್ಟಿಗೇ ಕಡೇನೆ ರುಕ್ಕೂ ಹೊರಟಳು. ’ಇಲ್ಲೇ ಕೂತ್ಕೋ’ ಎಂದು ಕರೆದ ಗುಣಾಗೆ ’ಅಜ್ಜೀ ಜೊತೆ ಸ್ವಲ್ಪ ಹೊತ್ತು ಕೂತ್ಕೋತೀನಿ’ ಎಂದಳು. ’ಆಯ್ತು’ ಎಂದು ಹಿಂದಕ್ಕೆ ತಿರುಗಿದ ಮೇಲೆ, ’ಯಾರು ಮನೇಗೆ ಬಂದರೂ, ದನದ ಕೊಟ್ಟಿಗೇಲಿ ಕೂತ್ಕೊಳ್ಳೊ ಹಾಗೆ ಮಾಡುತ್ತೆ ಇದು’ ಎಂದು ಒದರಿದ್ದು ರುಕ್ಕೂಗೂ ಕೇಳಿಸಿತು. ಅಡುಗೆ ಮನೆಯಲ್ಲಿ ಅತ್ತೆ ’ನಮ್ಮನ್ನ ನೋಡೋಕೆ ಯಾರು ಬರ್ತಾರೆ?’ ಎಂದು ಗೊಣಗಿದ್ದೂ ಕೇಳಿಸಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-6603404138572117624?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/6603404138572117624/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/09/blog-post.html#comment-form' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/6603404138572117624'/><link rel='self' type='application/atom+xml' href='http://www.blogger.com/feeds/4527995432766899913/posts/default/6603404138572117624'/><link rel='alternate' type='text/html' href='http://muttumani.blogspot.com/2009/09/blog-post.html' title='ರುಕ್ಮಿಣಿಯ ಅಜ್ಜಿ ಮನೆ - ೮'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>7</thr:total></entry><entry><id>tag:blogger.com,1999:blog-4527995432766899913.post-3085455971622407061</id><published>2009-07-29T18:36:00.044+05:30</published><updated>2009-07-29T20:55:16.427+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ - ೭</title><content type='html'>ರುಕ್ಮಿಣಿ ಊರ ಹೊಲ ತೋಟಗಳನ್ನೆಲ್ಲಾ ದಾಟಿ ಅಜ್ಜಿ ಮನೆಯ ಬೀದಿಗೆ ಬಂದಳು. ಅಯ್ಯೋ! ಹಳೇ ಮನೆಯ ಬೀದಿಗೆ ಬಂದುಬಿಟ್ಟಿದ್ದಳು. ಖಾಲಿ ಜಾಗವನ್ನು ನೋಡಿ ಒಂದು ಕ್ಷಣ ಅವಳ ಎದೆ ಧಸಕ್ ಎಂದರೂ, ಒಮ್ಮೆಗೇ ಅವಳ ಬುದ್ಧಿ ಕೆಲಸಮಾಡಿ, ಹೊಸಮನೆ ಆಗಿದೆಯೆಂಬುದನ್ನು ನೆನಪು ಮಾಡಿಕೊಟ್ಟಿತು. ಸರಿ, ಅಲ್ಲಿಂದ ಹೊಸಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದಳು. ಇಷ್ಟೆಲ್ಲಾ ಆದರೂ ಇನ್ನೂ ರುಕ್ಮಿಣಿಯ ಮನಸ್ಸಿಗೆ ತೃಪ್ತಿಯಾಗಲಿಲ್ಲ. ಅವಳ ಕಣ್ಣು ಮನಸ್ಸು ಬೇರೆ ಏನನ್ನೋ ಹುಡುಕುತ್ತಿತ್ತು. &lt;br /&gt;&lt;br /&gt;ಹಾದು ಬಂದ ಹೊಲಗಳೆಲ್ಲಾ ಬಾಯಿ ಬಿಟ್ಟುಕೊಂಡು ಬಿಕೋ ಎನ್ನುತ್ತಿತ್ತು. ಅಲ್ಲಿ ಇಲ್ಲಿ ಎರಡೆರಡು ಸಾಲು ಫಾರಮ್ ಜೋಳ ಹಾಕಿದ್ದಾರೆ. ಅದೂ ಹಸುವಿನ ಮೇವಿಗೆ. ಅದೇ ಈಗ ಪ್ರಾಫಿಟೆಬಲ್  ಬಿಸಿನೆಸ್ ಅಲ್ಲವೇ? ಪಳ್ಳಿಗರ ಹೊಲವನ್ನು ನೋಡಿಯಂತೂ ರುಕ್ಕೂಗೆ ತಡೆಯಲಾರದಷ್ಟು ನಗು ಬಂದು ಬಿಟ್ಟಿತು. ಅವರ ಬೋರಿನಲ್ಲಿ ದೇವರ ದಯೆಯಿಂದ ನೀರು ಚೆನ್ನಾಗಿ ಬರುತ್ತಿದೆಯಂತೆ, ಅದಕ್ಕೆ ಅವರು ತೋಟದ ತುಂಬಾ ಕೊತ್ತಂಬರಿಸೊಪ್ಪಿನ ಬೆಳೆ ಬೆಳೆಯುತ್ತಿದ್ದಾರೆ! ಕೊತ್ತಂಬರಿಸೊಪ್ಪು ಒಂದು ಬೆಳೆಯೇ? ಬಿದ್ದ ಮಳೆಗೆ ಮೇಲೇಳುತ್ತಿದ್ದ ಕಡ್ಡಿಗಳು. &lt;br /&gt;&lt;br /&gt;ತನ್ನ ಹಳೆಯ ದಿನಗಳು ನೆನಪಿಗೆ ಬಂದವು ಅವಳಿಗೆ. ಒಂದು ದಿನ ಮಧ್ಯಾಹ್ನ ಅಜ್ಜಿ ಮಾಡಿಕೊಡುತ್ತಿದ್ದ ಮಣಿಪಾಯಸಕ್ಕಾಗಿ ಕಾದುಕೊಂಡು ಅಡಿಗೆಮನೆಯಲ್ಲಿ ಕೂತಿದ್ದಳು. ಮನೆಯಲ್ಲಿ ಯಾರು ಇಲ್ಲದ್ದನ್ನು ಖಾತರಿ ಮಾಡಿಕೊಂಡು ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿದ್ದ ದೊಡ್ಡದೊಂದು ನೋಟು ಕೊಟ್ಟರು. "ಇದು ಎಷ್ಟು ರೂಪಾಯಿ ನೋಟು ನೋಡು? ಅಲ್ಲಿ ಚಪ್ಪರದ ಪಕ್ಕ ಇಷ್ಟು ಜಾಗ ಇತ್ತಲ್ಲ, ಅಲ್ಲಿ ಚೆಲ್ಲಿದ್ದೆ ನಾಲ್ಕು ಧನಿಯಾ. ಕಾಯಿ ಕೊಂಡುಕ್ಕೊಳ್ಳಕ್ಕೆ ಬಂದಿದ್ನಲ್ಲಾ ಸಾಹೇಬ, ಅಜ್ಜಿ ಈ ನೋಟು ನಿನ್ನ ಕೊತ್ತಂಬರಿ ಸೊಪ್ಪಿಗೆ ಅಂದ್ನೇ. ಕಿತ್ಕೊಂಡು ಹೋದ್ರು, ಒಂದಷ್ಟು ಸೊಪ್ಪು" ಎಂದು ಉಸಿರು ನಿಲ್ಲಿಸದೇ ಹೇಳಿದರು. ರುಕ್ಕೂಗೆ ಏನು ಹೇಳಬೇಕೋ ತಿಳಿಯಲಿಲ್ಲ. ಮೆತ್ತಗೆ "ಅಜ್ಜಿ ಇದು ನೂರು ರೂಪಾಯಿ ನೋಟು" ಎಂದಿದ್ದಳು. ಅಷ್ಟಕ್ಕೇ ಅಜ್ಜಿ ಚೇಳು ಕಡಿದವರಂತೆ "ಹೌದೇನೆ, ತಗೊಂಡೋಗಿ ನಿಮ್ಮ ತಾತನಿಗೆ ಕೊಟ್ಟುಬಿಡು ಹೋಗು, ನೂರು ರೂಪಾಯಿಯಲ್ಲಿ ನನಗೇನು ಕೆಲಸ. ಹತ್ತೋ ಇಪ್ಪತ್ತೋ ಆಗಿದ್ದರೆ ನಿನಗೆ ಬಳೆ ತೆಗೆಯುವ ಅಂತಿದ್ದೆ" ಎಂದರು. &lt;br /&gt;&lt;br /&gt;ಆವತ್ತಿನ ಆ ನೆನಪಿಗೆ ರುಕ್ಕೂ ತನ್ನಷ್ಟಕ್ಕೆ ತಾನೆ ನಕ್ಕಳು. ಇದೇನು ಹೊಲದ ತುಂಬಾ ಕೊತ್ತಂಬರಿ ಬೆಳೆದಿದ್ದೀರಾ ಎಂದು ಕೇಳಿದ್ದಕ್ಕೆ, ಈಗ ಇದಕ್ಕೇ ತುಂಬಾ ಡಿಮ್ಯಾಂಡು ಎಂಬ ಉತ್ತರ ಬಂತು. ಅದರಲ್ಲಿ ಶಾಲೆಗೆ ಹೋದವನಂತೆ ಕಾಣುತ್ತಿದ್ದ ಈ ತಲೆಮಾರಿನ ಹುಡುಗನೊಬ್ಬ "ಅಕ್ಕ, ನೀವು ಬೆಂಗಳೂರಲ್ಲಿ ಹೋಟೇಲ್ಲಿಗೆ ಹೋಗಿ ದಿನಾ ದಿನಾ ತಿನ್ನಲ್ವೇ? ಎಷ್ಟು ಕೊತ್ತಂಬರಿ ಬೆಳೆದು ಕಳಿಸಿದರೂ ನಿಮ್ಮವರಿಗೆ ಸಾಲದು" ಎಂದನು. ರುಕ್ಕೂಗೆ ಮುಖದ ಮೇಲೆ ಕಬ್ಬಿಣ ಕಾಸಿ ಬರೆ ಎಳೆದಂತಾಯ್ತು. "ಅವರು ಹೊಸ ಹೊಸ ರುಚಿ ತೋರಿಸ್ತಾರೆ, ನಾವು ಹೋಗಿ ಹೋಗಿ ತಿಂತೀವಿ" ಎಂದಂದು ಮುಂದಕ್ಕೆ ನಡೆದುಬಿಟ್ಟಿದ್ದಳು.         &lt;br /&gt;&lt;br /&gt;ಅಂತೂ ಮನೆಗೆ ಸೇರಿದ ರುಕ್ಕೂ ತಾನು ಅಂದುಕೊಂಡಂತೆ ಎಲ್ಲರಿಗೂ ’ಸರ್ಪ್ರೈಸ್’ ಕೊಟ್ಟಳು. ಆದರೆ, ಅವರಿಗಂತೂ ಅದು ’ಶಾಕ್’ ಆಗಿಹೋಯಿತು. "ಇದೇನಕ್ಕ ಹಾಗೇ ಬಂದುಬಿಡೋದಾ?" ಎಂದು ಅತ್ತೆಯ ದೊಡ್ಡಮಗ ಕೇಳಿದ್ದಕ್ಕೆ, "ಹೋಗೋ, ಹೋಗೋ, ನಮ್ಮಜ್ಜಿ ಮನೆಗೆ ನಾನು ಬರಕ್ಕೆ ನಿನ್ನ ಪರ್ಮಿಷನ್ ಕೇಳಬೇಕಿತ್ತೇನೋ?" ಎಂದು ಜೋರುಮಾಡಿದಳು. "ಅಲ್ಲಾ, ರೋಡಲ್ಲಿಳಿದು ಫೋನು ಮಾಡೀದ್ರೆ ಗಾಡಿ ತರ್ತಿದ್ದೆ?" ಎಂದ ಮುಖ ಸಣ್ಣಗೆ ಮಾಡಿಕೊಂಡು. ತನ್ನ ಹೊಸ ಗಾಡಿಯ ಚಮಕನ್ನು ಬೆಂಗಳೂರಿಂದ ಬರುವ ಅಕ್ಕನಿಗೆ ತೋರಿಸುವ ಅವನ ಆಸೆಗೆ ಮಣ್ಣು ಬಿದ್ದಿತ್ತು. "ಗೊತ್ತು, ಗೊತ್ತು, ಅದಕ್ಕೇ ನಾನು ಫೋನು ಮಾಡ್ಲಿಲ್ಲ. ಏ ಪಳ್ಳಿಗರ ತೋಟ ನೋಡಿದೆನೋ. ಜಬರದಸ್ತಾಗಿ ಕೊತ್ತಂಬರಿಸೊಪ್ಪು ಬೆಳೆದಿದ್ದಾರೆ!" ಎಂದಳು ಕೊಂಕಾಗಿ. ಇವಳ ಕೊಂಕು ಅವನಿಗೆ ಅರ್ಥವಾಯಿತೋ ಇಲ್ಲವೋ? "ಹೌದಕ್ಕ, ಅವರ ಬೋರಲ್ಲಿ ನೀರು ಚೆನ್ನಾಗಿದೆ. ಇದ್ದಿದ್ದರೆ ನಾವು ಬೆಳೀಬೋದಾಗಿತ್ತು". ಇವಳಿಗೆ ಸಿಟ್ಟು ಬಂದು "ಅದು ಸರಿ" ಎಂದಳು. ತಕ್ಷಣ ನೆನಪಿಗೆ ಬಂದು ಬ್ಯಾಗಿಂದ ಉಳಿದಿದ್ದ ಮೂರು ಎಳೇ ಜೋಳಗಳನ್ನು ತೆಗೆದು ಅವನ ಕೈಗಿಟ್ಟಳು. "ಚಿನ್ನಮ್ಮ ಸಿಕ್ಕಿದ್ದಳೋ, ಅವರ ತೋಟದ್ದೇ" ಎಂದಳು. "ಅಜ್ಜಿ ಎಲ್ಲೋ?" ಎಂದು ಕೂಗಿಡುತ್ತಾ, ಅವನ ಉತ್ತರಕ್ಕೂ ಕಾಯದೇ ಹಿತ್ತಲಿಗೇ ಓಡಿದಳು. ಅತ್ತೆ, ಮಾವ ಅವರ ಮಕ್ಕಳು ಇವಳ ಈ ಪರಿಯನ್ನು ಕಂಡು ಮುಖ ಮುಖ ನೋಡಿಕೊಂಡರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-3085455971622407061?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/3085455971622407061/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/07/blog-post_29.html#comment-form' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/3085455971622407061'/><link rel='self' type='application/atom+xml' href='http://www.blogger.com/feeds/4527995432766899913/posts/default/3085455971622407061'/><link rel='alternate' type='text/html' href='http://muttumani.blogspot.com/2009/07/blog-post_29.html' title='ರುಕ್ಮಿಣಿಯ ಅಜ್ಜಿ ಮನೆ - ೭'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>5</thr:total></entry><entry><id>tag:blogger.com,1999:blog-4527995432766899913.post-2057306386949442767</id><published>2009-07-09T15:45:00.031+05:30</published><updated>2009-07-10T19:27:28.227+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ -  ೬</title><content type='html'>ರುಕ್ಕೂ ಎನ್ನಬಹುದೋ ಅಥವಾ ಮಿಸ್.ರುಕ್ಮಿಣಿ ಎನ್ನಬೇಕೋ? ಅವಳೀಗ ಬಿ.ಇ., ಎಂ.ಬಿ.ಎ., ಎಚ್.ಆರ್.ಎಕ್ಸಿಕ್ಯೂಟಿವ್. ಈಗ್ಗೆ ರುಕ್ಕೂ ಅಜ್ಜಿ ಮನೆಗೆ ಹೋಗಿ ಏಳೆಂಟು ವರ್ಷಗಳೇ ಆದುವೇನೋ? ಹೈಸ್ಕೂಲು, ಕಾಲೇಜು ಎಂದೆಲ್ಲಾ ಬೆಳೆಯುತ್ತಿದ್ದಂತೆ ಅವಳಿಗೆ ಅಲ್ಲಿಲ್ಲಿ ಹೋಗಿ ವಾರ-ತಿಂಗಳು ಇರುವುದು ಸಾಧ್ಯವಾಗದೇ ಹೋಯಿತು. ಕರೆದುಕೊಂಡು ಹೋಗಿ ಬಂದು ಮಾಡುತ್ತಿದ್ದ ತಾತನಿಗೂ ವಯಸ್ಸಾಗಿಬಿಟ್ಟಿದೆ. ಅಜ್ಜಿ ಆಕ್ಸಿಡೆಂಟ್ನಲ್ಲಿ ಕಾಲು ಮುರಿದುಕೊಂಡಿದ್ದಾರೆ. &lt;br /&gt;&lt;br /&gt;ಪೇಟೆಯಲ್ಲಿ ಬಸ್ಸು ಹತ್ತಲು ಹೋಗಿದ್ದಾರೆ. ಇವರು ಹತ್ತುವಷ್ಟರಲ್ಲಿ ಬಸ್ಸು ಮುಂದಕ್ಕೆ ಹೋಗಿಬಿಟ್ಟಿದೆ. ಕೆಳಕ್ಕೆ ಬಿದ್ದು ಸೊಂಟದ ಮೂಳೆ ಮುರಿದು ಹೋಗಿದೆ. ಈಗ ಅಜ್ಜಿ ಮೊದಲಿನ ಚಟುವಟಿಕೆಯ ಅಜ್ಜಿಯಾಗಿ ಉಳಿದಿಲ್ಲ. ಕೋಲು ಹಿಡಿದುಕೊಂಡು ಓಡಾಡುತ್ತಾರೆ. ಆಗ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಅಜ್ಜಿಯನ್ನು ನೋಡಲು ಊರಿಗೆ ಹೋಗಿದ್ದಳು ರುಕ್ಕೂ. ಆಮೇಲೆ, ಎಷ್ಟೊಂದು ಸುದ್ದಿಗಳು ಊರ ಬಗ್ಗೆ? ಮೊದಲಿನ ಮಣ್ಣಿನ ಮನೆಯ ’ಹಸುಗಳ ಮನೆ’ ಗೋಡೆ ಬಿದ್ದು ಹೋಯಿತಂತೆ.  ಗೋಡೆ ರಿಪೇರಿ ಮಾಡಿಸುವ ಗೋಜು ಏಕೆಂದು ಹಿರೀಮಗ ತೋಟಕ್ಕೆ ಹತ್ತಿರವಾಗಿದ್ದ ಜಾಗದಲ್ಲಿ ಹೊಸಮನೆಯನ್ನೇ ಕಟ್ಟುತ್ತೇನೆಂದು ಪ್ಲಾನು ಹಾಕಿದ. ಇವನು ದುಡ್ಡುಹಾಕಿ ಮನೆ ಕಟ್ಟಿದರೆ ನಮಗೇನು ಲಾಭವೆಂದು, ಉಳಿದವರು ಮೊದಲು ಆಸ್ತಿ ಪಾಲಾಗಲಿ ಎಂದರು. ಸರಿ, ಊರುದ್ದ ಇದ್ದ ಆಸ್ತಿ ಮೂರು ಪಾಲಾಯಿತು. ಒಬ್ಬೊಬ್ಬರೂ ಒಂದೊಂದು ಮನೆ ಕಟ್ಟುವ ತೀರ್ಮಾನ ಮಾಡಿದರು. ತಾನೇ ಬಹಳ ಬುದ್ಧಿವಂತೆ ಎಂದುಕೊಂಡಿದ್ದ ಹಿರೀಸೊಸೆಗೆ ಆಶ್ಚರ್ಯವೋ ಆಶ್ಚರ್ಯ; ಸಿಮೆಂಟು ಮರಳಿಗೆ ದುಡ್ಡು ಸಾಲದೆ ತನ್ನ ಗಂಡ ಅತ್ತಿತ್ತ ಅಲೆದಾಡುತ್ತಿದ್ದರೆ, ಚಿಕ್ಕವರಿಬ್ಬರೂ ಆರಾಮಾಗಿ ತಾರಸಿ ಹಾಕಿಸಿ ಗೃಹಪ್ರವೇಶವನ್ನು ಮಾಡಿಸಿಬಿಟ್ಟರು. ಇನ್ನು ಅವರ ಮುಂದೆ ಮನೆಕಟ್ಟಿಸದೇ ಇರುವುದಕ್ಕಿಂತ ಮೇಲೆಂದು ಆಸ್ತಿ ಮಾರಿ, ಸಾಲ ಸೋಲ ಮಾಡಿ ಮನೆ ಕಟ್ಟಿಸಿದರಂತೆ, ಕಡೆಗೆ ಇವರಿಗೆ ಉಳಿದದ್ದು ಹತ್ತು ಗುಂಟೆ ನೆಲ, ಆ ಮನೆಯಿದ್ದ ಜಾಗವಷ್ಟೆ. &lt;br /&gt;&lt;br /&gt;ಆಗಾಗ, ಅಮ್ಮ ಫೋನಿನಲ್ಲಿ ಅಜ್ಜಿಯೊಡನೆ ಮಾತಾಡುತ್ತಿದ್ದರು, "ವಾಮೆಯನ್ನು ಮಾರಿಬಿಟ್ಟನೇ? ಹಳೇ ಮನೇನೂ ಹೋಯ್ತೆ? ಹೋಗಲೀ ಸಾಲವಾದರೂ ತೀರಿತಾ? ಐದು ತೆಂಗಿನ ಮರ ಇತ್ತೇ ಅಲ್ಲಿ?" ಇನ್ನೂ ಮುಂತಾದ ಮಾತುಗಳನ್ನು ಕೇಳಿಯೇ ರುಕ್ಕೂ ತನ್ನ ಅಜ್ಜಿ ಮನೆಯ ಪರಿಸ್ಥಿತಿ ಏನಾಗಬಹುದೆಂದು ಊಹಿಸುತ್ತಿದ್ದಳು. ತನ್ನ ಕನಸಿನ ಅರಮನೆ ಬಿರುಗಾಳಿಗೆ ಸಿಲುಕಿ ಹುಚ್ಚೆದ್ದು ಹಾಳಾಗುತ್ತಿರುವಂತೆ ಅವಳಿಗೆ ಭಾಸವಾಗುತ್ತಿತ್ತು. &lt;br /&gt;&lt;br /&gt;ಡಿಸೆಂಬರ್ ೨೫ರ ಕ್ರಿಸ್ಮಸ್ ಹಬ್ಬ ಈ ಸಾರಿ ಶುಕ್ರವಾರ ಬಿದ್ದು, ಒಟ್ಟಿಗೇ ಮೂರುದಿನಗಳ ರಜೆಯ ಯೋಗದಿಂದ ರುಕ್ಮಿಣಿಯ ತಪಸ್ಸು ಫಲಿಸಿತ್ತು. ಅವಳು ಮತ್ತೆ ಊರಿಗೆ ಹೋಗುವ ಆಸೆ ಸಿದ್ಧಿಸಿತ್ತು. ಅವಳ ಹಿರೀ ಅತ್ತೆ ಬೇರೆ ಫೋನಿನಲ್ಲಿ, "ರುಕ್ಕೂ, ನೀನು ಊರಿಗೆ ಬಂದು ಎಷ್ಟು ದಿನ ಆಯ್ತು? ನೀನು ಸಬ್ಬಕ್ಕಿ ಪಾಯಸವನ್ನು ’ಮಣಿಪಾಯಸ’ ಅನ್ನುತ್ತಿದ್ದುದನ್ನು ಈಗಲೂ ನೆನೆಸಿಕೊಳ್ಳುತ್ತೇನೆ. ಎರಡು ದಿನ ಇದ್ದು ಹೋಗುವಂತೆ, ಬಾ" ಎಂದಿದ್ದಳು! ಇದ್ದಕ್ಕಿದಂತೆ ತನ್ನ ಅತ್ತೆ ಇಷ್ಟೊಂದು ಬದಲಾಗಿರುವುದನ್ನು ಅವಳಿಗೆ ನಂಬಲಿಕ್ಕೇ ಆಗಲಿಲ್ಲ. ಹೋಗಲೀ, ಈಗಲಾದರೂ ಸರಿಹೋಯಿತಲ್ಲಾ ಎಂದು ಖುಷಿಪಟ್ಟಳು. ಇಂತಹವು ಎಷ್ಟೋ ಚಿದಂಬರ ರಹಸ್ಯಗಳು ಅವಳ ಮನಸ್ಸಿನಲ್ಲಿತ್ತು. ಹಿಂದೆ ಅತ್ತೆಯೇ ಆಗಲೀ,ಬೇರೆ ಯಾರೆ ಆಗಲೀ ಹೀಗೆ ಇದ್ದರು, ಹೀಗೀಗೆ ಅಂದರು ಎಂದು ಅವಳು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಹಾಗಾಗಿ, ಈಗ ಏನಾಗಿದೆಯೆಂಬುದನ್ನು ಹೇಳುವ ಪ್ರಮೇಯವೂ ಅವಳಿಗೆ ಬರಲಿಲ್ಲ. &lt;br /&gt;&lt;br /&gt;ಬಸ್ಸು ಕಮ್ಮನಳ್ಳಿಗೆ ಬಂದು ತಲುಪಿತು. ಮತ್ತೆ ತನ್ನ ನೀರಿಗೆ ಬಿಟ್ಟ ಹಾಗೆ ಖುಷಿಯಿಂದ ಹೆಜ್ಜೆ ಹಾಕಿದ ಅವಳನ್ನು ಟಾರು ರೋಡು ಎದುರುಗೊಂಡಿತು. ಪಿಚ್ಚೆನಿಸಿತು. ಹಾಗೇ ರಸ್ತೆಯ ಒಂದು ಪಕ್ಕಕ್ಕೆ ಗಮನಿಸುತ್ತಾ ನಡೆದಳು. ಕಾಲುದಾರಿಯ ಆಚೀಚೆ ಬೆಳೆಯುತ್ತಿದ್ದ ’ತಲೆ ತೆಗೆಯುವ’ ಗಿಡಗಳು, ಮುಟ್ಟಿದರೆಮುನಿ ಸೊಪ್ಪು ಟಾರಿಗೂ ಗೆನಿಮೆಗೂ ಮಧ್ಯೆ ಸ್ವಲ್ಪ ಉಸಿರಾಡುತ್ತಿತ್ತು. ಇವಳೂ ಸಮಾಧಾನದ ನಿಟ್ಟುಸಿರುಬಿಟ್ಟಳು. ಊರಿಗೆ ಕಾಲಿಡುತ್ತಿದ್ದಂತೆಯೇ ಕಾಣಬಾಕಾಗಿದ್ದದ್ದು ಸರ್ವೇ ತೋಪು. "ಅಲ್ಲವೇ?" ಎಂದು ನೆನಪಿಸಿಕೊಂಡು ಥಟ್ಟನೆ ಹಿಂದಕ್ಕೆ ತಿರುಗಿ ನೋಡಿದಳು. ಎಲ್ಲಿದೆ ಸರ್ವೇ ತೋಪು? ಬಟಾಬಯಲು ಕಾಣಿಸಿತು ಬೆನ್ನ ಹಿಂದೆ. ಮುಂದಕ್ಕೆ ಮುಖ ಹಾಕಿ ಸುಮ್ಮನೆ ಅತ್ತಿತ್ತ ನೋಡುತ್ತಾ ಮನೆ ಕಡೆ ಕಾಲು ಹಾಕಿದಳು. &lt;br /&gt;&lt;br /&gt;ಸರ್ವೇತೋಪು ಆದ ಕೂಡಲೇ ಚಿನ್ನಮ್ಮನ ತೋಟ, ಅದಾದ ಮೇಲೆ ಸೊಣ್ಣಮ್ಮನದ್ದು. ಅಷ್ಟು ದೂರದಲ್ಲಿ ಚಿನ್ನಮ್ಮ ಕಾಣಿಸಿದಳು. ಈಯಮ್ಮನಿಗೆ ಆಗಲೇ ವಯಸ್ಸಾಗಿ ಹೋಗಿರಬೇಕಿತ್ತಲ್ಲ ಎಂದುಕೊಂಡಳು. ’ಯಾರಮ್ಮೋ?’, ಚಿನ್ನಮ್ಮನ ಕಂಚಿನ ಕಂಠ ಇನ್ನೂ ಹಾಗೆ ಇದೆ! "ನಾನಮ್ಮೋ! ರುಕ್ಕೂ ರಾಮಪ್ಪನೋರ ಮನೆಗೆ", ರುಕ್ಕೂ ಬಾಯಿಂದ ಅನಾಯಾಸವಾಗಿ ಮಾತು ಹೊರಟಿತ್ತು. ತನ್ನ ಹಳೆಯ ಗಂಧ ಇನ್ನು ತನ್ನೊಳಗೆ ಉಳಿದುಕೊಂಡಿರುವುದು ಅವಳ ಗಮನಕ್ಕೂ ಬಂತು. "ರುಕ್ಕೂನಾ? ಓಹೋಹೋ, ಏನು ನಿನ್ನ ಎಮ್ಮೆಗಳು ಈಗ ನೆನಪಾದುವಾ?" ಎಂದುಕೊಂಡು ಚಿನ್ನಮ್ಮ ಮುಂದಕ್ಕೆ ಬಂದಳು. ರುಕ್ಕೂಗೂ ಉತ್ಸಾಹ ಬಂದು ತೋಟದೊಳಕ್ಕೆ ಧುಮುಕಿ ಚಿನ್ನಮ್ಮನ ಕಡೆಗೆ ನಡೆದಳು. ರುಕ್ಕೂ ಅಮ್ಮನ ಕ್ಷೇಮಸಮಾಚಾರ, ಅದೂ ಇದೂ ಎಲ್ಲಾ ಮಾತಾಡಿ ಆದ ಮೇಲೆ, "ಆಯ್ತು, ಊರಿಗೆ ಹೋಗಾಕ್ ಮುಂಚೆ ಮನೇಗ್ ಒಂದ್ ಸಾರಿ ಬಾ" ಎಂದು ಚಿನ್ನಮ್ಮ ಹೇಳುವಲ್ಲಿಗೆ ಅವರ ಮಾತುಕಥೆ ಮುಗಿಯಿತು. ತನ್ನ ಪಕ್ಕದಲ್ಲಿ ನಿಂತಿದ್ದ ಜೋಳದ ಗಿಡಗಳು ಆಗಲೇ ಅವಳ ಗಮನಕ್ಕೆ ಬಂದಿದ್ದು. &lt;br /&gt;"ಎಳೇ ಕಾಯಿ ಇದೆಯಾ?"&lt;br /&gt;"ಅಯ್ಯೋ, ಎಳೇದೇನು, ಬಲ್ತಿತೋರೋದೇ ತಗೊಂಡೋಗು, ಬೇಯಿಸ್ಬೋದು"&lt;br /&gt;"ಬೇಡಪ್ಪಾ, ಬಲ್ತಿರೋದು ಊರಿಗೋಗೋವಾಗ ತಂಗೊಂಡು ಹೋಗ್ತೀನಿ. ಈಗ ಎಳೇದು ಒಂದೇ ಒಂದು ಸಾಕು" ಎಂದು ರುಕ್ಕೂ ಗಿಡದಲ್ಲಿ ಹುಡುಕತೊಡಗಿದಳು. ಅಷ್ಟರಲ್ಲಿ ಚಿನ್ನಮ್ಮ ನಾಲ್ಕು ಎಳೇ ಕಾಯಿ ಕಿತ್ತು ಅವಳ ಕೈಗಿತ್ತಳು. "ಬರ್ತೀನಮ್ಮೋ" ಎಂದು ರುಕ್ಕೂ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದಳು.&lt;br /&gt;&lt;br /&gt;ಎಳೇ ಜೋಳ ಕಡೆಯುತ್ತಾ ನಡೆಯುತ್ತಿದ್ದ ಹಾಗೇ, ಮೆಲ್ಲಮೆಲ್ಲಗೆ ಶುರುವಾಗಿ ಜೋರಾಗತೊಡಗಿತು ಯಾವುದೋ ಧ್ವನಿ, "ಯಾರ್ದೇನು ಅಕ್ಕಿ ತಂದು ನಾವು ತಿಂತಿಲ್ಲ....ಲಾಯ್ರಿನ ಕರೆಸಿ ಪಾಲು ಮಾಡ್ಲಿಲ್ವ? ನನ್ನ ಮನೆ ಮುಂದೆ ಬರಲಿ ನೋಡ್ಕೋತೀನಿ..." ಇನ್ನೂ ಏನೇನೋ. ಅರೇ, ಅವಳು ಸೊಣ್ಣಮ್ಮನ ಹಿರೀಸೊಸೆ! ಅಲ್ಲಿಗೆ ಸೊಣ್ಣಮ್ಮನ ಮನೆಯೂ ಪಾಲಾಗಿದೆಯೆಂಬುದು ಖಚಿತವಾಯಿತು. ಅದು ಪಾಲಾಗಿದ್ದೇಕೆಂಬುದಕ್ಕೆ ಸಾಕ್ಷಿಯೂ ರುಕ್ಕೂ ಕಣ್ಣಮುಂದೆಯೇ ನಿಂತಿತ್ತು. ಥಳ ಥಳ ಹೊಳೆಯುವ ಕಡಪಾಕಲ್ಲಿನಲ್ಲಿ ಚೌಕಟ್ಟು ಕಟ್ಟಿದ್ದರು. "ಶ್ರೀಮತಿ ಸೊಣ್ಣಮ್ಮನವರು, ಜನನ - ೧೯೨೫, ಮರಣ - ೨೦೦೭" ಎಂದು ಅದರ ಮೇಲೆ ನಮೂದಿಸಿತ್ತು. ಅದರ ಪಕ್ಕದಲ್ಲೇ ಕಲ್ಲಿನಲ್ಲಿ ಕಟ್ಟಿದ್ದ ಸೊಣ್ಣಮ್ಮನ ಗಂಡ ಯಳಚಪ್ಪನ ಸಮಾಧಿ ಅದಾಗಲೇ ಹಳೆಯದಾಗಿ ಹೋಗಿತ್ತು. "ಎಂಥ ಗಟ್ಟಿಗಾತಿ ಸೊಣ್ಣಮ್ಮ! ಅವಳೊಂದು ಗದರು ಹಾಕಿದಳೆಂದರೆ ಮಕ್ಕಳೆಲ್ಲ ಮೂಲೆ ಸೇರಿಕೊಂಡುಬಿಡುತ್ತಿದ್ದರು. ರುಕ್ಕೂ ಇನ್ನೂ ಮುಂದಕ್ಕೆ ಹೆಜ್ಜೆ ಹಾಕಿದಳು.    &lt;br /&gt;&lt;br /&gt;ರಸ್ತೆಯಲ್ಲಿ ನಡೆದು ನಡೆದು ಸಾಕಾಗಿ, ಎಡಕ್ಕೆ ತಿರುಗುವ ಬದಲು ಎದುರಿಗಿದ್ದ ತೆಂಗಿನ ತೋಟದೊಳಕ್ಕೆ ನುಗ್ಗಿದಳು. ಮತ್ತೆ ’ಯಾರಮ್ಮೋ?’ ಎಂಬುದು ಕೇಳಿ ಬಂತು. ರುಕ್ಕೂ ತನ್ನ ಹಳೆಯ ಪ್ರವರವನ್ನೆಲ್ಲಾ ತಿರುಗೀ ಹೇಳಿಕೊಂಡಳು. "ಅಯ್ಯೋ, ರೋಡು ಮಾಡ್ಯವ್ರೇ. ಇತ್ತಾಗ್ಯಾಕ್ ಬಂದ್ರಿ? ರಮೇಶ ದಾರಿ ತೋರ್ಸು ಹೋಗೋ" ಎಂದು ಅವಳ ಸಹಾಯಕ್ಕೆ ನಿಂತರು. "ಅಯ್ಯೋ, ಬೇಡ ಬೇಡ, ರೋಡಲ್ಲಿ ಓಡಾಡಿ ಓಡಾಡಿ ಸಾಕಾಗಿದೆ, ಇಲ್ಲೇ ಗೆನಿಮೆ ಮೇಲೇ ನಡಕೊಂಡು ಹೋಗ್ತೀನಿ" ಎಂದು ಮುಂದುವರೆದಳು. "ಈ ಬೆಂಗಳೂರಿನವರು ಹುಡ್ಕೊಂಡು ಹುಡ್ಕೊಂಡು ಕಷ್ಟ ಪಡ್ತಾರೆ" ಎಂದು ಅವರು ಮಾತಾಡಿಕೊಂಡರು. ಅಲ್ಲಿಂದ ಒಂದೊಂದು ಗೆನಿಮೆ ದಾಟಿದಾಗಲೂ ಬೇರೆ ಬೇರೆಯವರು ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ರುಕ್ಕೂ ಅದೇ ಉತ್ತರಗಳನ್ನು ಕೊಟ್ಟುಕೊಂಡು ಮುಂದುವರೆಯುತ್ತಿದ್ದಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-2057306386949442767?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/2057306386949442767/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/07/blog-post_09.html#comment-form' title='11 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/2057306386949442767'/><link rel='self' type='application/atom+xml' href='http://www.blogger.com/feeds/4527995432766899913/posts/default/2057306386949442767'/><link rel='alternate' type='text/html' href='http://muttumani.blogspot.com/2009/07/blog-post_09.html' title='ರುಕ್ಮಿಣಿಯ ಅಜ್ಜಿ ಮನೆ -  ೬'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>11</thr:total></entry><entry><id>tag:blogger.com,1999:blog-4527995432766899913.post-4357722207506234829</id><published>2009-07-01T14:27:00.009+05:30</published><updated>2009-07-03T21:56:08.929+05:30</updated><title type='text'>ರುಕ್ಮಿಣಿಯ ಅಜ್ಜಿ ಮನೆ - ೫</title><content type='html'>ವೆಂಕಟರಾಜುವನ್ನು ಬೀಳ್ಕೊಂಡ ಮೇಲೆ ಅಜ್ಜಿಗೆ ಮತ್ತಿರಿಗಿ ಗೌಡರ ಕಾಫಿಯ ನೆನಪಾಯಿತು. ’ಬಾ ರುಕ್ಕೂ’ ಎಂದು ಕರೆದು ಅಜ್ಜಿ ಒಳಗೆ ನಡೆದರು. ಪೇಟೆಗೆ ಹೋಗಿದ್ದ ತಾತ ಮನೆಗೆ ಬರುವುದಕ್ಕೂ, ಗೌಡರು ಕಾಫಿಗೆ ಬರುವುದಕ್ಕೂ ಸರಿಯಾಯಿತು. ಇಬ್ಬರೂ ಸೇರಿ ಮನೆಯಲ್ಲಿ ಹೊಸದಾಗಿ ಬಂದಿದ್ದ ಟೀವಿಯನ್ನು ನೋಡುತ್ತಾ ಕುಳಿತರು. ಜೊತೆಗೆ ಅಜ್ಜಿ ರುಕ್ಕೂ ಕೈಲಿ ಕಳಿಸಿಕೊಟ್ಟ ಕಾಫಿಯನ್ನೂ ಹೀರಿದರು. ಮಳೆ, ಬೆಳೆ, ರಾಜಕಾರಣ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಮುಂಬರುವ ಎಲೆಕ್ಷನ್ನು ಹೀಗೆ ಟೀವಿಯಲ್ಲಿ ಒಂದೊಂದು ದೃಶ್ಯ ಬಂದಾಗಲೂ ಇವರ ಮಾತು ಹತ್ತಾರು ಕಡೆಗೆ ಹೊರಳಿಬರುತ್ತಿದ್ದವು. ಹೊರಗೆ ಹೋಗಿದ್ದ ಮಕ್ಕಳು ಸೊಸೆಯರೆಲ್ಲಾ ಒಬ್ಬೊಬ್ಬರಾಗಿ ಮನೆಗೆ ಬರತೊಡಗಿದರು. ರುಕ್ಕೂ ಅಡುಗೆ ಮನೆಗೂ ನಡುಮನೆಗೂ ಇದ್ದ ಬಾಗಿಲ ಮುಂದೆ ಕೂತು ಟೀವಿ ನೋಡತೊಡಗಿದಳು. ಆ ಜಾಗದಲ್ಲಿ ಕೂರುವುದರಿಂದ ಅವಳಿಗೆ ಅನುಕೂಲ ಏನಪ್ಪಾ ಅಂದರೆ, ಬಾಗಿಲ ಪಕ್ಕದಲ್ಲೇ ಹಾಕಿದ್ದ ದೊಡ್ಡ ಸೋಫಾ ಹೊರಗೆ ಕೂತವರನ್ನು ಮರೆಮಾಚುವುದಕ್ಕೆ ಸಹಾಯಕವಾಗಿತ್ತು. &lt;br /&gt;&lt;br /&gt;ಅಷ್ಟರಲ್ಲೇ, ಮನೆಯ ಮುಂದೆಯೇ ಇದ್ದ ಹಾಲಿನ ಡೈರಿಯವನು ಕೂಗು ಹಾಕಿದ, "ಅಜ್ಜಮ್ಮೋ, ಬೆಂಗಳೂರಿನಿಂದ ಫೋನ್ ಬಂದಿದೆ", ಬೆಂಗಳೂರಿನಿಂದ ಫೋನ್ ಬಂದಿದೆ ಎಂದ ಮೇಲೆ ಅದು ತನ್ನ ಮನೆಯಿಂದಲೇ ಇರಬೇಕು ಎಂದು ರುಕ್ಕೂಗೆ ಥಟ್ಟನೆ ಹೊಳೆಯಿತು. ಅಜ್ಜಿಯ ಹಿಂದೆ ಓಡಿಬಂದು ಫೋನ್ ಬೂತಿನಲ್ಲಿ ತಾನೂ ನಿಂತುಕೊಂಡಳು. ಮೊದಲು ಅಜ್ಜಿ ರುಕ್ಕೂವಿನ ಅಮ್ಮನೊಡನೆ ಮಾತನಾಡಿದರು. ತಾವು ಕಳಿಸಿದ್ದ ಹುಣಿಸೆಹಣ್ಣು, ಮಾವಿನಹಣ್ಣುಗಳ ಯೋಗಕ್ಷೇಮ ವಿಚಾರ ಆದಮೇಲೆ ಮಾತು ಹಪ್ಪಳ - ಸಂಡಿಗೆಗಳ ಕಡೆಗೆ ತಿರುಗಿತು. ಅಜ್ಜಿ ಕಳಿಸಿದ್ದ ಕುರುಕಲಿಗೆ ರುಕ್ಕೂ ಅಮ್ಮನ ನೆಂಟರ ಮನೆಯಿಂದ ಡಿಮ್ಯಾಂಡು ಬಂದಿದೆಯೆಂದು ಅವರಿಬ್ಬರ ಮಾತುಗಳಿಂದ ತಿಳಿಯಿತು. "ಆಗಲಿ ಬಿಡು, ಶುಕ್ರವಾರ ಕಳೀಲಿ, ಸೋಮವಾರಕ್ಕೆ ಕಳಿಸ್ತೀನಿ. ಅಷ್ಟೊತ್ತಿಗೆ ಸ್ವಲ್ಪ ರಾಗೀನು ಆಗಿರುತ್ತೆ" ಎಂದಾಗ, ಇದು ನನ್ನ ಬಗ್ಗೆಯೇ ಇರಬೇಕೆಂದು ರುಕ್ಕೂಗೆ ಸಣ್ಣಗೆ ಅನುಮಾನ ಶುರುವಾಯಿತು. ಅಷ್ಟರಲ್ಲಿ ಫೋನಿನಲ್ಲಿ ಮಾತನಾಡಬೇಕೆಂದೆನಿಸಿ, "ಅಜ್ಜೀ, ನಾನು" ಎಂದಳು. ಆಸೆಯಿಂದ ಫೋನ್ ತಗೊಂಡಿದೆಷ್ಟೋ ಅಷ್ಟೆ, ಏನೂ ಮಾತನಾಡಬೇಕೆಂದು ತೋಚಲಿಲ್ಲ. "ಹಲೋಓಓಓಓ, ಹ್ಞೂಊಊಊ" ಎಂದಳು. ಅಲ್ಲಿಂದ ಮುಂದಕ್ಕೆ ಬರೀ ಹ್ಞೂ, ಹ್ಞೂ, ಹ್ಞೂ ಎನ್ನುವುದೇ ಅವಳ ಕೆಲಸವಾಯಿತು. ಅಷ್ಟು ಹ್ಞೂಗುಟ್ಟಿದ್ದಕ್ಕೆ ಅವಳಿಗೆ ಗೊತ್ತಾದದ್ದಿಷ್ಟು. "೬ನೇ ಕ್ಲಾಸಿನ ರಿಸಲ್ಟ್ ಬಂದಿದೆ. ಏಳನೇ ಕ್ಲಾಸಿಗೆ ಸೇರಿಕೊಳ್ಳಬೇಕಾಗಿದೆ. ಬ್ಯಾಗು, ಬುಕ್ಕು, ಯೂನಿಫಾರಂಗಳನ್ನೆಲ್ಲಾ ಕೊಂಡುಕೊಳ್ಳಬೇಕಾಗಿದೆ. ಸೋಮವಾರ ತಾತನೊಡನೆ ಬೆಂಗಳೂರಿಗೆ ಬರಬೇಕಾಗಿದೆ". ರುಕ್ಕೂ ಫೋನಿಟ್ಟಳು. ಇಬ್ಬರೂ ಮನೆಗೆ ನಡೆದರು. &lt;br /&gt;&lt;br /&gt;ಕಾಫೀ ಸಮಾರಾಧನೆಯೆಲ್ಲಾ ಮುಗಿದು ಮನೆಯವರೆಲ್ಲಾ ಟೀವಿ ಮುಂದೆ ಕೂತಿದ್ದರು. ಗೌಡರು ಮನೆಗೆ ಹೊರಟುಹೋಗಿದ್ದರು. ಅತ್ತೆ ಹೊಸದಾಗಿ ತಂದಿದ್ದ ಮಿಕ್ಸಿಯಲ್ಲಿ ಹಿಟ್ಟು ರುಬ್ಬುತ್ತಿದ್ದರು. ಅಜ್ಜಿ ರಾತ್ರಿ ಊಟಕ್ಕೆ ಹೊಂಚಲು ಅಡುಗೆ ಮನೆಗೆ ಹೋದರು. ರುಕ್ಕೂ ಅತ್ತೆ ಬಳಿಗೆ ಹೋಗಿ, "ಹೊಸಾದ ಅತ್ತೆ ಮಿಕ್ಸಿ?" ಎಂದಳು. "ಹ್ಞೂ, ನೋಡು ಇನ್ನು ಮೇಲೆ ನಾವೂ ನಿಮ್ಮಂಗೇನೆ!" ಎಂದಳು ಅತ್ತೆ. ರುಕ್ಕೂ ಕಕ್ಕಾಬಿಕ್ಕಿಯಾಗಿ ಅಡುಗೆ ಮನೆಗೆ ನುಸುಳಿಕೊಂಡಳು. &lt;br /&gt;&lt;br /&gt;                                        * * * &lt;br /&gt;&lt;br /&gt;ಕಿಟಕಿಯಿಂದಾಚೆ ನೋಡುತ್ತಾ ಬಸ್ಸಿನಲ್ಲಿ ಹೋಗುತ್ತಿದ್ದ ರುಕ್ಕೂಗೆ ಒಮ್ಮೆಗೇ ನಗು ಉಕ್ಕಿ ಬಂದು, ಕಿಸಕ್ಕನೆ ನಕ್ಕಳು. ಈಗವಳು ನೆನಪಿಸಿಕೊಂಡದ್ದು ತನ್ನ ’ಎಮ್ಮೆ ಸಾಕುವ’ ಯೋಜನೆಯನ್ನು. ಅದರ ಹಿಂದೆಯೇ ಅಂಬುಜಮ್ಮನ ಮಾತು ನೆನೆಪಾಗಿ ಏನೋ ಒಂದು ಬೇಸರ ಮನಸ್ಸಿಗೆ ಬಂತು. ಬಸ್ಸು ಮುಂದಮುಂದಕ್ಕೆ ಕಮ್ಮನಳ್ಳಿಯ ಕಡೆ ಚಲಿಸುತ್ತಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-4357722207506234829?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/4357722207506234829/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/07/blog-post.html#comment-form' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/4357722207506234829'/><link rel='self' type='application/atom+xml' href='http://www.blogger.com/feeds/4527995432766899913/posts/default/4357722207506234829'/><link rel='alternate' type='text/html' href='http://muttumani.blogspot.com/2009/07/blog-post.html' title='ರುಕ್ಮಿಣಿಯ ಅಜ್ಜಿ ಮನೆ - ೫'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>5</thr:total></entry><entry><id>tag:blogger.com,1999:blog-4527995432766899913.post-6950521396336192750</id><published>2009-05-24T21:39:00.038+05:30</published><updated>2009-06-08T18:41:31.633+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ - ೪</title><content type='html'>ಇವಳ ಮಾತು ಕೇಳಿ ಅಜ್ಜಿ - ಅಂಬುಜಮ್ಮ ಒಬ್ಬರ ಮುಖ ಒಬ್ಬರು ನೋಡಿಕೊಂಡು ನಕ್ಕರೇ ವಿನಾ ಮರುಮಾತಾಡಲಿಲ್ಲ. ಅಜ್ಜಿ ಹಿಟ್ಟು ಬೀಸಿದ್ದು ಮುಗಿದ ಕೂಡಲೇ ಅಲ್ಲಿಂದ ಹೊರಟು ಬೇಗ ಬೇಗನೆ ಮನೆಗೆ ನಡೆಯುತ್ತಿದ್ದರು. ರುಕ್ಕೂಗೆ ಅವರ ಹೆಜ್ಜೆಗೆ ತಕ್ಕ ಹಾಗೆ ಹೆಜ್ಜೆ ಹಾಕುವುದು ಸ್ವಲ್ಪ ಕಷ್ಟವೇ ಆಯಿತು. ಹೆಚ್ಚು ಕಡಿಮೆ ಓಡಿಕೊಂಡೇ ಬರಿತ್ತಿದ್ದಳು. &lt;br /&gt;"ಇದೇನಜ್ಜಿ ಇಷ್ಟೊಂದು ಅರ್ಜೆಂಟಾಗಿ ಬರ್ತಾ ಇದ್ದೀರ?" &lt;br /&gt;"ಸ್ವಲ್ಪ, ಡಿಕಾಷ್ಕನ್ ಹಾಕಿ ಇಡಾಣ ನಡೆಯಮ್ಮೋ, ಇನ್ನು ಆಯಪ್ಪ ಬಂದರೆ ಕಾಯಿಸಬೇಕಾಗತ್ತೆ ಪಾಪ..." &lt;br /&gt;&lt;br /&gt;"ಯಾರು? ಮುನಿಶ್ಯಾಮಪ್ಪ ತಾತ ತಾನೆ? ನೀನ್ಯಾಕೆ ಅವರಿಗೆ ದಿನಾ ಕಾಫಿ ಮಾಡಿಕೊಡೋದು? ಅವರ ಮನೇಲಿ ಅವರು ಕುಡೀಬೇಕಪ್ಪ. ಬಂದ್ರೆ ಸ್ವಲ್ಪ ಕಾಯ್ಲಿ ಬಿಡು..." ದಿನನಿತ್ಯ ಅಜ್ಜಿ ಮುನಿಶ್ಯಾಮಪ್ಪ ತಾತ ಉರುಫ್ ಊರ ಗೌಡರಿಗೆ ಇಷ್ಟೇ ಕಳಕಳಿಯಿಂದ ಕಾಫಿ ಮಾಡಿಕೊಡುವುದು ನೋಡಿದರೆ, ರುಕ್ಕೂಗೆ ಸ್ವಲ್ಪ ಹೊಟ್ಟೆಕಿಚ್ಚು ಹುಟ್ಟುತ್ತಿತ್ತು. ತಿರುಗೀ ಅದೇ ಸುದ್ದಿ ಕೇಳಿ, ಅಜ್ಜಿ ಹಿಂದೆ ಓಡಿ ಬರೋದನ್ನು ನಿಲ್ಲಿಸಿ, ಮೂರಡಿ ಹಿಂದಕ್ಕೆ ನಿಧಾನವಾಗಿ ಹೆಜ್ಜೆ ಹಾಕತೊಡಗಿದಳು. &lt;br /&gt;&lt;br /&gt;"ಯೋಯ್, ಅಂಗಂತಾರಾ? ಓಹೋಹೋ, ಈ ಕಾಲದವರು ನೀವೆಲ್ಲಾ..." ಅಜ್ಜಿ ಸ್ವಲ್ಪ ಜೋರಾಗಿಯೇ ಗದರಿ ಮುಂದು ಮುಂದಕ್ಕೆ ನಡೆದರು.&lt;br /&gt;&lt;br /&gt;ರುಕ್ಕೂಗೆ ಈಗ ಕಣ್ಣನೀರು ಕೆನ್ನೆಮೇಲೆ ಬರುವುದೊಂದೇ ಬಾಕಿ. ತಾನು ಜೋರಾಗಿ ಮಾತನಾಡಿದ್ದು ನೆನಪಾಗಿ, ಅಜ್ಜಿ ಹಿಂದಕ್ಕೆ ತಿರುಗಿ, ಬಗ್ಗಿ ಮೆಲ್ಲಗೆ, ಬಾಯಿಯ ಅರ್ಧಭಾಗವನ್ನಷ್ಟೇ ಬಳಸಿಕೊಂಡು "ನಿಮ್ಮ ತಾತಂಗೆ ಬೇಕಬೇಕಾದ  ಪೈಸೆ ಎಣಿಸಿದ್ದಾರಮ್ಮ ಅವರು, ಬಾ, ಮಣಿಪಾಯಸ ಮಿಕ್ಕಿದ್ದರೆ ಬಿಸಿ ಮಾಡಿ ಕೊಡ್ತೀನಿ ನಿಂಗೆ" ಎಂದರು. ರುಕ್ಕೂ ಮುಂದೆ ಹೋಗಿ ಅಜ್ಜಿ ಕೈ ಹಿಡಿದು ಮತ್ತೆ ಓಡಲು ಶುರುಮಾಡಿದಳು.&lt;br /&gt;&lt;br /&gt;ಈಗ್ಗೆ ಇಪ್ಪತೈದು ವರ್ಷಗಳ ಹಿಂದಿನ ಮಾತು, ತಾತ ತನ್ನ ತಾಯಿಯ ತಿಥಿ ಮಾಡಬೇಕಿತ್ತು. ಐವತ್ತು ರೂಪಾಯಿಯನ್ನು ಜೇಬಿಗಿಟ್ಟುಕೊಂಡು ಹೊರಟಿದ್ದರು. ಪೇಟೆಗೆ ಹೋಗುವಷ್ಟರಲ್ಲಿ ನೋಟೇ ಪತ್ತೆ ಇಲ್ಲ. ನಡೆದುಕೊಂಡೇ ವಾಪಸ್ಸು ಬಂದವರು ಸೀದಾ ಹೋಗಿದ್ದು ಮುನಿಶ್ಯಾಮಪ್ಪ ಗೌಡನ ಮನೆಗೆ. ಹೀಗೆ ಹೀಗೆ ಎಂದು  ಹೇಳಿದರು. ಮುನಿಶ್ಯಾಮಪ್ಪ ಮರುಮಾತಾಡದೆ ಐವತ್ತು ರೂಪಾಯಿ ತೆಗೆದುಕೊಟ್ಟ. ಅಲ್ಲಿಗೆ ತಾತನ ಕಷ್ಟ ಪರಿಹಾರವಾಯಿತು. ಐವತ್ತು ರೂಪಾಯಿಯಲ್ಲಿ ತಿಥಿ ಮಾಡಬಹುದಾಗಿದ್ದ ಕಾಲವಾಗಿತ್ತೇನೋ ಅದು? ಇಷ್ಟೇ ಅಲ್ಲ, ತಾತನಿಗೆ ಆಗಾಗ ಇಂತಹ ’ಧನಸಹಾಯ’ ಇವರಿಂದ ಆಗುತ್ತಲೇ ಇರುತ್ತದೆ. ಬರಗಾಲ ಬಂದಾಗ ತಾತನ ಓಬಿರಾಯನ ಸಂಬಂಧಿಕರಿಗೆಲ್ಲಾ ಒಮ್ಮಿಂದೊಮ್ಮಿಗೇ ಇವರ ನೆನಪು ಬಂದು, ಹೆಂಡತಿ ಮಕ್ಕಳನ್ನು ಇಲ್ಲೇ ಬಿಟ್ಟಿದ್ದರು. ತಮ್ಮ ತವರೂರಿಗೆ ’ಅಪರೂಪಕ್ಕೆ’ ಬಂದಿಂದ ಹೆಣ್ಣುಮಕ್ಕಳನ್ನು ಯಾರೂ ಮಾತನಾಡಿಸುವ ಹಾಗೇ ಇರಲಿಲ್ಲ. ಹಾಗೆ ಅವರ ಮಕ್ಕಳಿಗೆ ಸೇವೆಯಲ್ಲಿ ಸ್ವಲ್ಪವೂ ಲೋಪವಾಗುವ ಹಾಗಿರಲಿಲ್ಲ. ಸರಿ ಸುಮಾರು ಇಪ್ಪತ್ತು ಮಕ್ಕಳಿದ್ದಿರಬಹುದು ಆ ಗ್ಯಾಂಗಿನಲ್ಲಿ. ಹೊತ್ತಿಗೊತ್ತಿಗೆ ಅಷ್ಟು ಜನಕ್ಕೆ ಮುದ್ದೆ ತೊಳಸಿ ಹಾಕುವುದೇ ಅಜ್ಜಿಗೊಂದು ಮಹಾಕಷ್ಟವಾಗಿತ್ತು. ಇಂತಹ ಸಮಯದಲ್ಲೂ ಮುನಿಶ್ಯಾಮಪ್ಪನೇ ತಾತನಿಗೆ ನೆರವಾಗಿದ್ದವನು.  &lt;br /&gt;&lt;br /&gt;ಗೌಡನಿಗೆ ತನ್ನ ಮನೆಯಲ್ಲಿ ಮಾಡುವ ಕಾಫಿ ಸರಿಬರುತ್ತಿರಲಿಲ್ಲ. ವರ್ಷಗಟ್ಟಲೆಯಿಂದ ಅಜ್ಜಿಯ ಮನೆಯಲ್ಲಿ ನಿತ್ಯ ಸಂಜೆ ಕಾಫಿ ಕುಡಿಯುವುದು ಅಭ್ಯಾಸವಾಗಿಬಿಟ್ಟಿತ್ತು. ಅವರು ಮಾಡಿದ ಸಹಾಯಕ್ಕೆ ಒಂದು ಲೋಟ ಕಾಫಿ ಏನು ಮಹಾ ಎಂದು ಇವರು, ಅವರು ಕೊಡುವ ’ಕಾಸ್ಟ್ಲಿ’ ಕಾಫಿಗೆ ನಾನು ಯಾವತ್ತೋ ಒಂದು ದಿನ ಕೊಡುವ ದುಡ್ಡು ಲೆಕ್ಕವೇ ಎಂದು ಈಯಪ್ಪ. ಅಂತೂ, ಮೊದಲು ’ಧನಸಹಾಯ’ ಶುರುವಾದ್ದೋ ಅಥವಾ ’ಕಾಫಿ’ ಶುರುವಾಯಿತೋ ಎಂಬುದು ಯಾರಿಗೂ ನೆನಪಿರಲಿಲ್ಲ, ಬೇಕಾಗಿಯೂ ಇರಲಿಲ್ಲ. &lt;br /&gt;&lt;br /&gt;ಅಜ್ಜಿ ರುಕ್ಕೂ ಇಬ್ಬರೂ ಅಂಗಳ ತಲುಪುತ್ತಿದ್ದಂತೆಯೇ, ಅಜ್ಜಿಯ ಹಿರಿಸೊಸೆ ತನ್ನ ಕೈಗಳಲ್ಲಿ ಮೂರು ಬಿಂದಿಗೆಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ಬರುತ್ತಿದ್ದಳು. ಅಜ್ಜಿ ಓಡಿಬರುತ್ತಿರುವುದನ್ನು ನೋಡಿ, "ಓಹೋಹೋ, ಸಾಕು ಬಾರಮ್ಮ ನೀನು ಓಡಿಬರೋ ನಾಟಕ, ಎಲ್ಲೋದ್ರೇ ಅಲ್ಲೇ ಕೂತ್ಕೊಂಬುಡು, ಡಿಕಾಕ್ಷನ್ ಹಾಕಿಟ್ಟಿದ್ದೀನಿ, ಕರೆಂಟ್ ಬಂದಿದೆ, ನಾನು ನೀರಿಗೋಗ್ತೀನಿ, ಇನ್ನು ಕರೆಂಟೊಂದು ಹೊರಟೋದ್ರೆ ನೀರಿಗೂ ಗತಿಯಿಲ್ಲ" ಎಂದು ಕೂಗಿಡುತ್ತಾ ಊರಿನಲ್ಲಿ ಹೊಸದಾಗಿ  ಹಾಕಿದ್ದ ನೀರಿನ ಟ್ಯಾಂಕಿನ ಕಡೆಗೆ ಹೊರಟುಬಿಟ್ಟಳು. &lt;br /&gt;&lt;br /&gt;ಈ ಮನೆಗೆ ಬಂದು ಬಹಳ ವರ್ಷಗಳಾಗಿದ್ದರಿಂದಲೋ ಏನೋ, ತನ್ನ ಅತ್ತೆಯ ಮೇಲೆ ಜೋರು ಮಾಡುವಷ್ಟು ಗೈರತ್ತು ಬಂದುಬಿಟ್ಟಿತ್ತು ಅವಳಿಗೆ. "ಹೋ, ಕಂಡಿದ್ದೀನಿ ಹೋಗ್ತಾಯಿ ನೀನು" ಎಂದು ಅಜ್ಜಿ ಗದರಿಕೊಂಡದ್ದು ಅವಳಿಗೇನು ಕೇಳಿಸಲಿಲ್ಲ. ಅಜ್ಜಿಯ ಮೇಲೆ ಸದಾ ರೇಗುತ್ತಿದ್ದ ಇವಳನ್ನು ಕಂಡರೆ ರುಕ್ಕೂಗೆ ಸರಿಬರುತ್ತಿರಲಿಲ್ಲ. ರುಕ್ಕೂನೇ ಆಗಲಿ ಅವಳೇನು ಪ್ರೀತಿಯಿಂದ ಮಾತಾಡಿಸಿದ್ದಿಲ್ಲ. ಯಾವಾಗಲೂ ಸಿಟ್ಟು. ಮನೆಯಿಂದ ಹೊರಗಿರಬೇಕಾದವರೆಲ್ಲಾ ಇಲ್ಲೇ ಬಂದು ವಕ್ಕರಿಸಿರುವುದು ಅವಳಿಗೆ ಸರಿಕಾಣುವುದಿಲ್ಲ. ಹಾಗೆ ವಕ್ಕರಿಸಿರೋದು ಯಾರು ಅಂದ್ರೆ ರುಕ್ಕೂನೇ. ಬೇಸಿಗೆ ರಜಾ ಬಂದೊಡನೆಯೇ, ತಾತನ ದೊಡ್ಡ ಸಂಸಾರದ ಮೊಮ್ಮಕ್ಕಳೆಲ್ಲಾ ಅಜ್ಜಿ ತಾತಾರನ್ನು ಕಾಣಲು ಬರುತ್ತಾರೆ. ಅವರೆಲ್ಲರಿಗೆ ಅಡಿಗೆ ಮಾಡಿಕ್ಕೋದು, ಅವರ ಬಟ್ಟೆ ಒಗೆಯೋದು ಇವೆಲ್ಲಾ ಅವಳಿಗೆ ಆಗುವುದಿಲ್ಲ. ಮಾಡುವುದೇನೋ ಅಜ್ಜೀನೇ, ಆದರೆ, ತಾನು ತನ್ನ ಗಂಡ ಹೊಲದಲ್ಲಿ ದುಡಿದ ಅಕ್ಕಿ ಬೇಳೆ ಖರ್ಚಾಗುವುದನ್ನು ಕಂಡರೆ ಅವಳಿಗೆ ಹೊಟ್ಟೆ ಉರಿಯುತ್ತಿತ್ತು. ಆ ಬೆಳೆಯಲ್ಲಿ ಉಳಿದ ಮಕ್ಕಳು ಸೊಸೆಯರ ಪಾಲೂ ಇದೆ ಎಂಬುದನ್ನು ನೆನೆಸಿಕೊಳ್ಳಲೂ ಅವಳಿಗೆ  ಇಷ್ಟವಿಲ್ಲ. &lt;br /&gt;&lt;br /&gt;ಒಂದು ದಿನ ರುಕ್ಕೂ ಮನೆಯಲ್ಲಿ ಒಬ್ಬಳೇ ಸಿಕ್ಕಾಗ ಈ ಹಿರೀಸೊಸೆ ಅವಳಿಗೂ ಹೇಳಿದ್ದಳು&lt;br /&gt;"ನಿಮ್ಮ ಅಜ್ಜಿ ಯಾರು ಹೇಳು?"&lt;br /&gt;"ಇನ್ಯಾರು? ಇಲ್ಲಿದ್ದಾರಲ್ಲ ಅವರೇ ಕಮ್ಮನಳ್ಳಿ ಅಜ್ಜಿ" ರುಕ್ಕೂಗೆ ಅವಳಜ್ಜಿಯ ಹೆಸರು ಗೊತ್ತಿಲ್ಲ. ಅವಳ ಪಾಲಿಗೆ ಅವರು ’ಕಮ್ಮನಳ್ಳಿ ಅಜ್ಜಿ’. &lt;br /&gt;"ಅಲ್ಲ, ನಿಮ್ಮಮ್ಮನ್ನ ಈ ಮನೆಯಿಂದ ಮದುವೆ ಮಾಡಿ, ನಿಮ್ಮಪ್ಪನ ಮನೆಗೆ ಕೊಟ್ಟಿದೆ. ಅವರು ಅಲ್ಲೇ ಇರಬೇಕು ಇಲ್ಲಿಗೆ ಬರಬಾರ್ದು".&lt;br /&gt;"ಅಂದ್ರೆ, ನಮ್ಮಜ್ಜಿ ಯಾರು?"&lt;br /&gt;"ಅಂದ್ರೆ, ನಿಮ್ಮಪ್ಪ ಅವರ ಅಮ್ಮ ಇದ್ದಾರಲ್ಲ , ಬೆಂಗಳೂರು ಅಜ್ಜಿ, ಅವರು ಮಾತ್ರಾನೇ ನಿಂಗೆ ಅಜ್ಜಿ. ಇವರಲ್ಲ. ಯಾತಕ್ಕೆ ಇವರ ಹಿಂದಿಟ್ಟುಕೊಂಡಿರ್ತೀಯ ಯಾವಾಗಲೂ?"&lt;br /&gt;ಈ ಮಾತನ್ನು ಕೇಳಿ ರುಕ್ಕೂಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ಇದನ್ನು ಯಾರೊಟ್ಟಿಗಾದರೂ ಹೇಳಿಕೊಳ್ಳಲೂ ಇಲ್ಲ. ತನ್ನಷ್ಟಕ್ಕೆ ತಾನು ಎಂದಿನಂತೆಯೆ ಇದ್ದುಬಿಟ್ಟಳು. ಅವರು ಏನು ಹೇಳುತ್ತಿದ್ದಾರೆಂಬುದನ್ನು ಮನಸ್ಸಿಗೆ ತಂದುಕೊಳ್ಳುವಷ್ಟು ಬುದ್ಧಿಯೂ ಅವಳಿಗೆ ಇರಲಿಲ್ಲ. &lt;br /&gt;&lt;br /&gt;ಬೆನ್ನಮೇಲೆ ಮೂಟೆಯೊಂದನ್ನು ಹೊತ್ತುಕೊಂಡು ತಮ್ಮ ಮನೆ ಕಡೆಗೇ ಬರುತ್ತಿದ್ದ ವೆಂಕಟರಾಜನನ್ನು ಗಮನಿಸಿದ  ರುಕ್ಕೂ, ಒಳಗೋಡುತ್ತಿದ್ದ ಅಜ್ಜಿಯನ್ನು ಕೂಗಿ ಕರೆದಳು. &lt;br /&gt;"ಹೋ, ಬಾಪ್ಪೋ, ಅದೇನು ಇಷ್ಟು ಬೇಗ..."&lt;br /&gt;"ಮೊದಲ್ ಮೂಟೆನಮ್ಮಾ, ಒಣಾಕ್ ಬುಡ್ತೀನಿ ಇಲ್ಲೇ"&lt;br /&gt;"ಬೇಡ ಬೇಡ, ಹೊತ್ತು ಮುಳುಗ್ತಾ ಇದೆ, ನಾಳೆ ನಾವೇ ಹಾಕ್ಕೊಳ್ತೇವೇಳು, ಅಗೋ ಆ ಮಡೂನಲ್ಲಿ ಇಟ್ಬುಡು ಹೋಗು".&lt;br /&gt;ಅಜ್ಜಿ ಏನೋ ಭಾರಿ ಖುಷಿಯಾದ ಹಾಗೆ ಇತ್ತು. ವೆಂಕಟರಾಜು ತಂದಿದ್ದು ಒಂದು ಮೂಟೆ ಭತ್ತವನ್ನು. ಅಂಗಳದಲ್ಲೇ ಸುರಿದು ಬಿಟ್ಟರೆ, ಮನೆಗೆ ಬರುತ್ತಿದ್ದಂತೆಯೇ ಅಜ್ಜಿಯ ಮಗನು ನೋಡುತ್ತಾನೆಂದು ಆಸೆ ಅವನಿಗೆ. ಅದು ಕೈಗೂಡಲಿಲ್ಲ. ಅವನಿಗೇನು ಅದರಿಂದ ಬೇಸರವಾಗಲಿಲ್ಲ.  &lt;br /&gt;&lt;br /&gt;ಬಿತ್ತನೆ ಮಾಡುವ ಹೊತ್ತಿಗೆ ಅವನ ಬಾವಿಯಲ್ಲಿ ನೀರು ಬತ್ತಿಹೋಗಿತ್ತು. ಊರಿಗೆ ವಿದ್ಯಾವಂತನಾದ ಅಜ್ಜಿಯ ಮಗನು ಆಗಲೇ ಕೊಳವೆ ಬಾವಿ ಕೊರೆಸಿದ್ದ. ಗಂಗಾದೇವಿಯು ಭಾಳ ಖುಷಿಗೊಂಡು, ಕೆಳಗಿಂದ ಮೇಲಕ್ಕೆ ಬೇಕುಬೇಕೆಂದಾಗಲೆಲ್ಲಾ ಚಿಮ್ಮುತ್ತಿದ್ದಳು. ಆ ಕಾಲಕ್ಕೆ ಅಜ್ಜಿಯ ಮಗ ಅವನ ತೋಟಕ್ಕೆ ನೀರು ಬಿಟ್ಟಿದ್ದಕ್ಕೆ, ಈಗ ಒಂದು ಮೂಟೆ ಭತ್ತ  ಇವರಿಗೆ ಬಂದು ಇಳಿದಿದ್ದು. ಇನ್ನು ಈ ಭತ್ತದಿಂದ ಅಜ್ಜಿಯ ಮಗ ಗದ್ದೆ ಮಾಡುವವನಿದ್ದ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-6950521396336192750?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/6950521396336192750/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/05/blog-post_24.html#comment-form' title='9 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/6950521396336192750'/><link rel='self' type='application/atom+xml' href='http://www.blogger.com/feeds/4527995432766899913/posts/default/6950521396336192750'/><link rel='alternate' type='text/html' href='http://muttumani.blogspot.com/2009/05/blog-post_24.html' title='ರುಕ್ಮಿಣಿಯ ಅಜ್ಜಿ ಮನೆ - ೪'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>9</thr:total></entry><entry><id>tag:blogger.com,1999:blog-4527995432766899913.post-8777993710644087229</id><published>2009-05-15T17:07:00.062+05:30</published><updated>2009-05-24T21:55:23.706+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ - ೩</title><content type='html'>ಬೇಸಿಗೆ ಕಾಲದಲ್ಲಿ ಗೌಡರ ಮನೆಯ ದೊಡ್ಡ ಅಂಗಳದಲ್ಲಿ ಸಾಲುಸಾಲಾಗಿ ಆಳುಗಳು  ಕೂತು ಹುಣಸೆಕಾಯಿ ಹೊಡೆಯುತ್ತಾರೆ. ಕೆಲವರು ಹುಣಸೆಕಾಯಿಯ ಸಿಪ್ಪೆ ಬಿಡಿಸಿ ಹಾಕುತ್ತಾರೆ, ಇನ್ನೂ ಕೆಲವರು ಸಿಪ್ಪೆ ತೆಗೆದ ಹುಣಸೆಹಣ್ಣುಗಳನ್ನು ಒಡೆದು ಬೀಜಗಳನ್ನು ಬೇರ್ಪಡಿಸುತ್ತಾರೆ. ಕಾಯನ್ನು ಒಂದು ಪಕ್ಕಕ್ಕೆ ಬಾಗಿರುವಂತೆ ನಿಲ್ಲಿಸಿ ಅದರ ಸೊಂಟದ ಮೇಲೆ ಸುತ್ತಿಗೆಯಿಂದ ಒಂದು ಏಟು ಕೊಡುವುದು. ಅದು ಎರಡು ಸೀಳಾಗುತ್ತಿದ್ದಂತೆಯೇ, ಬೀಜಗಳನ್ನು ಒಂದು ಪಕ್ಕಕ್ಕೆ ಹಣ್ಣನ್ನು ಇನ್ನೊಂದು ಪಕ್ಕಕ್ಕೆ ಹಾಕುವುದು. ಹೀಗೆ ಆ ಆಳುಗಳ ಬಲಗೈ ಮೇಲಕ್ಕೂ ಕೆಳಕ್ಕೂ, ಎಡಗೈ ಬಲಕ್ಕೂ ಎಡಕ್ಕೂ ಒಂದೇ ಸಮನೆ ಯಂತ್ರದ ರೀತಿ ಆಡುವುದನ್ನು ನೋಡುವುದೇ ರುಕ್ಕೂಗೆ ಒಂದು ರೀತಿಯ ಅನುಭವ.  &lt;br /&gt;&lt;br /&gt;ರುಕ್ಕೂ ಮೆಲ್ಲಗೆ ಹೋಗಿ ಅವರಲ್ಲೊಬ್ಬರ ಹತ್ತಿರ ’ಸೇಫ್ ಡಿಸ್ಟೆನ್ಸ್’ ಎನ್ನಿಸುವಷ್ಟು ದೂರದಲ್ಲಿ ಕುಳಿತುಕೊಂಡಳು. ಅವರ ಕಾರ್ಯವೈಖರಿಯದು ಒಂದು ರೀತಿಯಾದರೆ ಅವರ ವಾಕುವೈಖರಿ ಇನ್ನೊಂದು ಅಧ್ಬುತವೇ. ’ಅವನಿದ್ದಾನೇನೆ ಇನ್ನೂ ಊರಲ್ಲಿ?’ ಎಂದು ಈ ಮೂಲೆಯಿಂದ ಒಂದು ಧ್ವನಿ. ’ಅವನು’ ಯಾರು ಎಂದು ರುಕ್ಕೂ ಯೋಚಿಸುತ್ತಿರುವಷ್ಟರಲ್ಲೇ ’ಅತ್ತಕಡೆಯೋರು ಬಂದು ಕರಕೊಂಡು ಹೋದರಂತೆ’ ಎಂದು ಇನ್ನೊಂದು ಮೂಲೆಯಿಂದ ಧ್ವನಿ ಬಂದು ಹೋಗಿರುತ್ತದೆ. ’ಅತ್ತಕಡೆ’ ಯಾವುದು ಎಂದು ರುಕ್ಕೂ ಯೋಚಿಸುವಷ್ಟರಲ್ಲಿ ’ಈ ಯಮ್ಮಂದಾದರೂ ಸರಿ ಹೋದಿತೂ ಅಂತ ನಾವಿದ್ರೇ, ಇವರದ್ದು ದಿನಾ ದಿನಾ ರಗಳೆ ಜಾಸ್ತೀನೆ ಆಗ್ತಾ ಇದೆ’, ಅಷ್ಟರಲ್ಲಿ ಮತ್ತೊಂದು ಧ್ವನಿ. ರುಕ್ಕೂ, ಆ ವಿಷಯವನ್ನು ಅರ್ಥಮಾಡಿಕೊಳ್ಳುವ ಗೋಜೇ ಬೇಡ, ತಾನಾಯಿತು ತನ್ನ ಹುಣಿಸೆಬೀಜವಾಯಿತು ಎಂದು ಕುಳಿತುಕೊಂಡುಬಿಟ್ಟಳು. &lt;br /&gt;&lt;br /&gt;ಆದರೂ ಹೆಚ್ಚಿಗೆ ಹೊತ್ತು ಇವಳಿಗೆ ಸುಮ್ಮನಿರಲು ಸಾಧ್ಯವಿಲ್ಲ. ಆ ಹೆಂಗಸರಲ್ಲಿ ಎಷ್ಟೊಂದು ಜನ ಇವಳ ’ಫ್ರೆಂಡ್ಸ್’ ಬೇರೆ. ಮಾಮೂಲಾಗಿ ಇವಳ ಮಾತುಗಳು ಪ್ರಶ್ನೆಗಳಿಂದಲೇ ಆರಂಭವಾಗುತ್ತದೆ. &lt;br /&gt;&lt;br /&gt;ನೀವ್ಯಾಕೆ ಇವರ ಮನೇಲಿ ಬಂದು ಕೆಲಸ ಮಾಡುವುದು?   &lt;br /&gt;ಹೊಟ್ಟೆಗೆ ಬೇಕಲ್ಲಮ್ಮ...&lt;br /&gt;ನೀವೇ ಹುಣಿಸೆ ಮರ ಬೇಳೀಬೋದಲ್ಲ?&lt;br /&gt;ನಮಗೆಲ್ಲಮ್ಮ ಆ ತಾಕತ್ತು...&lt;br /&gt;ನಿಮ್ಮ ಹತ್ರ ತೋಟ ಇಲ್ಲವಾ?&lt;br /&gt;ಇದೆ ಎಲ್ಲೋ ಒಂದಷ್ಟು, ಅಂಗೈ ಅಗಲ ಅದರಲ್ಲೇನು ಬೇಳೆಯೋದು...&lt;br /&gt;ನೀವು ಏನು ಮಾಡಬೇಕು ಗೊತ್ತಾ? ಮೊದಲು ಒಂದು ಹುಣಿಸೆ ಮರ ನೆಡ್ರಿ, ಅದರಿಂದ ಬಂದ ಲಾಭದಲ್ಲಿ ಇನ್ನೊಂದು ಮರ ನೆಡ್ರಿ, ಹಾಗೇ ಮಾಡ್ತಾ ಇದ್ರೆ ನೀವು ದೊಡ್ಡ ಸಾಹುಕಾರರಾಗಬಹುದು...&lt;br /&gt;&lt;br /&gt;ರುಕ್ಕೂಳ ಈ ಮಾತಿಗೆ ಅವರೆಲ್ಲರೂ ಒಂದೇ ಸಾರಿಗೆ ನಕ್ಕುಬಿಟ್ಟರು. ರುಕ್ಕೂ ಕಣ್ಣಲ್ಲಿ ಮಾತ್ರ ಅಲ್ಲಿ ಕೂತಿದ್ದ ಮಂಗಮ್ಮ ಇನ್ನೊಂದೈದಾರು ವರ್ಷಗಳಲ್ಲಿ ಗೌಡತಿಯ ಹಾಗೆ ಒಡವೆ ವಸ್ತ್ರ ಹಾಕಿಕೊಂಡು ಮೆರೆಯುವ ದೃಶ್ಯ ಕಣ್ಣ ಮುಂದೆ ಬಂದು ನಿಂತಿತು. ತಿರುಗೀ ಅವಳ ಮಾತು ಶುರುವಾಯಿತು,&lt;br /&gt;&lt;br /&gt;ನಿಮ್ಮ ಮಕ್ಕಳನ್ನ ಯಾವ ಸ್ಕೂಲಿಗೆ ಸೇರಿಸ್ತೀರ?&lt;br /&gt;ಇರೋದೊಂದು ಇಸ್ಕೂಲು...&lt;br /&gt;ನೀವು ಇಲ್ಲಿ ಬಂದು ಕೆಲಸ ಮಾಡೋ ಥರ, ಗೌಡ್ರು ನಿಮ್ಮನೇಗೆ ಬಂದು ಕೆಲಸ ಮಾಡ್ತಾರ?&lt;br /&gt;ಮೆಲ್ಲಿಗೆ ಮಾತಾಡಮ್ಮೋ, ನೀನೊಳ್ಳೇ, ಒಪ್ಪೊತ್ತಿನೂಟಕ್ಕೂ ಕಲ್ಲ್ ಹಾಕಿಬಿಡ್ತೀಯ...&lt;br /&gt;ಅದ್ಯಾಕೆ, ನಾನು ಹೇಳ್ದಂಗೇ ನೀವು ಹುಣಿಸೆ ಮರ ಬೆಳಸ್ರೀ, ಆವಾಗ ನಾನೇಳ್ದಂಗ್ ಆಗ್ದೇ ಇದ್ರೆ ಕೇಳ್ರಿ...&lt;br /&gt;ಸರಿಯೋಯ್ತು ...&lt;br /&gt;ಮತ್ತೆ ಅವರೆಲ್ಲಾ ನಕ್ಕುಬಿಟ್ಟರು. ಮತ್ತೆ ಮಾತು ಶುರುವಾಯಿತು. &lt;br /&gt;&lt;br /&gt;"ಇವರಜ್ಜಿ ನೋಡಮ್ಮಾ, ನಮಗೆ ಊಟ ಹಾಕ್ತಾ ಇದ್ದದ್ದು"&lt;br /&gt;"ಮೊದಲು ತಿನ್ರೇ ಬಿಸಿಯಾಗಿರೋದ್ನಾ, ಆಮೇಲಿರಲೀ ನಿಮ್ಮ ಕೆಲಸ ಅನ್ನೋಳು ಮಹಾತಾಯಿ"&lt;br /&gt;&lt;br /&gt;ಅಷ್ಟರಲ್ಲಿ ಎಲ್ಲರೂ ಊಟಕ್ಕೆ ಏಳಬೇಕೆಂದು ಗೌಡರ ಮೊಮ್ಮಗನು ಬಂದು ಕರೆದನು. ನೂರು ನೂರಿಪ್ಪತ್ತು ಜನಕ್ಕೆ ಹೇಗೆ ಅಡಿಗೆಗಳನ್ನು ಮಾಡಿಹಾಕುತ್ತಾರೋ ಎಂಬ ಆಲೋಚನೆ ಹೀಗೆ ಬಂದು ಹಾಗೆ ಹೋಯಿತು, ರುಕ್ಕೂಗೆ. ಇನ್ನು ನಾನೊಬ್ಬಳು ಇಲ್ಲಿ ಕೂತಿರುವುದು ದಂಡ, ಎಲ್ಲಿಗೆ ಹೋಗುವುದೆಂದು ಯೋಚನೆ ಹತ್ತಿಕೊಂಡಿತು. ಅಜ್ಜಿ ಅವಳು ಕೂತಿದ್ದ ಆವರಣದ ಕಲ್ಲು ಕಾಪೌಂಡಿನ ಆ ಕಡೆಯ ಸೊಂದಿಯಲ್ಲಿ ತೂರಿ ಹೋಗುತ್ತಿರುವುದು ಕಾಣಿಸಿತು. ಮತ್ತೆ ಇವಳ ಕಣ್ಣು ತಪ್ಪಿಸಿ ಎಲ್ಲೋ ಹೋಗುತ್ತಿದ್ದಾರೆ. ಇನ್ನೆಲ್ಲಿ? ಸೊಂದಿಯಲ್ಲಿ ತೂರಿದರೆ ಅಂಬುಜಮ್ಮನ ಮನೆಯೇ. ಈಗಲೇ ಬೇಡವೆಂದು ಬೇಟೆಗಾಗಿ ಕಾಯುವ ಹುಲಿಯಂತೆ ಕೂತೆ ಇದ್ದಳು. ಅಜ್ಜಿ ಮನೆಯ ಒಳಕ್ಕೆ ಹೋಗಿದ್ದು ಖಾತ್ರಿಯಾದ ಮೇಲೆ, ತನ್ನ ಮನೆಗೆ ಓಡಿಹೋಗಿ ಹುಣಸೆಬೀಜಕ್ಕೆ ಒಂದು ನೆಲೆ ಕಾಣಿಸಿ, ಅಲ್ಲಿಂದ ಅಂಬುಜಮ್ಮನ ಮನೆ ಕಡೆ ದಾಪುಗಾಲು ಹಾಕಿದಳು.    &lt;br /&gt;&lt;br /&gt;ಇವಳು ಹೋಗುವಷ್ಟರಲ್ಲಿ ಅಜ್ಜಿ ತನ್ನ ಮುಂದಿನ ಕೆಲಸಕ್ಕೆ ಅಣಿಮಾಡಿಕೊಳ್ಳುತ್ತಿದ್ದರು. ಕೆಳಗಿನ ಕಲ್ಲನ್ನು - ಮೇಲಿನ ಕಲ್ಲನ್ನು ಸರಿಯಾಗಿ ಜೋಡಿಸಿ, ತೂತಿಗೆ ಒಂದು ಮರದ ಹಿಡಿಯನ್ನು ಜೋಡಿಸಿ, ಗುಂಡುಕಲ್ಲಿನಿಂದ ಅದರ ತಲೆ ಮೇಲೆ ಕುಟ್ಟಿ ಭದ್ರ ಮಾಡಿದರು. ಇವಳು ಇಲ್ಲಿಗೂ ಬಂದದ್ದು ನೋಡಿ ಅಜ್ಜಿಗೆ ಬಾಯಿಂದ ಮಾತೇ ಹೊರಡಲಿಲ್ಲ. "ನೋಡಮ್ಮೋ" ಎಂದಷ್ಟೇ ಹೇಳಿ ಅಂಬುಜಮ್ಮನ ಕಡೆಗೊಂದು ಸಾರಿ, ರುಕ್ಮಿಣಿಯ ಕಡೆಗೊಂದು ಸಾರಿ ನೋಡಿದರು. ಅಂಬುಜಮ್ಮನಿಗೆ ಈಗಷ್ಟೇ ಅಜ್ಜಿ ಅವಳ ಬಗ್ಗೆ ಹೇಳಿದ್ದ ಮಾತುಗಳು ನೆನಪಿಗೆ ಬಂದು ನಗು ತರಿಸಿಬಿಟ್ಟವು. ಈಗ ಅಜ್ಜಿಗೂ ಅಂಬುಜಮ್ಮನಿಗೂ ಮಾತುಕಥೆ ಶುರುವಾದವು. &lt;br /&gt;&lt;br /&gt;"ಎಷ್ಟು ಸೇರು ತಾಯಿ ನೀನು ಹೊಂಚುಹಾಕಿಟ್ಟಿರೋದು?"   &lt;br /&gt;"ಇನ್ನೂರೈವತ್ತು ಸೇರದೆ, ಗಟ್ಟಿಗಾತಿ ನೀನು, ಆಗಲ್ಲೇನು?"&lt;br /&gt;"ಹೌದೇಳಮ್ಮೋ, ಸತಿ ಸಕ್ಕೂಬಾಯಿ ನಾನು, ರಾತ್ರಿಯೆಲ್ಲಾ ನಿನ್ನ ಮನೇಲಿ ಕೂತು ಹಿಟ್ಟು ಬೀಸ್ತೀನಿ" ಅಜ್ಜಿ ಸ್ವಲ್ಪ ಹುಸಿ ಕೋಪವನ್ನು ತೋರಿದರು. &lt;br /&gt;ಅಂಬುಜಮ್ಮನಿಗೆ ನಗುವೇ ಬಂದುಬಿಟ್ಟಿತು. "ನನಗೊತ್ತಿಲ್ಲೇನು ನಿನ್ನ ಡ್ಯೂಟಿ, ನಾಲ್ಕು ಗಂಟೇಗೆ ಹೋಗಿ ಗೌಡ್ರಿಗೆ ಕಾಫಿ ಮಾಡ್ಕೊಡೋದು. ಒಂದು ಮೂವತೈದು ಸೇರದೆ ಹೇಗೋ ಮಾಡಿ ಇವ್ವತ್ತು ಬೀಸಿಟ್ಟುಕೊಂಡುಬಿಟ್ರೆ, ಇನ್ನೊಂದು ತಿಂಗಳು ಯೋಚನೆ ಇಲ್ಲ".&lt;br /&gt;&lt;br /&gt;ಅಂಬುಜಮ್ಮ ಮುಕ್ಕಾಲು ತುಂಬಿದ್ದ  ರಾಗಿ ಮೂಟೆಯೊಂದನ್ನು ತಂದು ಬೀಸೋಕಲ್ಲಿನ ಮುಂದೆ ಸುರಿದರು. ಇಬ್ಬರೂ ಸೇರಿ ಅದ್ಯಾವುದ್ಯಾದೋ ಪದ ಹೇಳುತ್ತಾ ರಾಗಿ ಬೀಸತೊಡಗಿದರು. ರುಕ್ಕೂಗೆ ಇಂಥವುದರ ಮುಂದೆ ಸುಮ್ಮನೆ ಕೂತಿರಲು ಸಾಧ್ಯವಿಲ್ಲ, ’ನಾನು’ ’ನಾನು’ ಎಂದುಕೊಳ್ಳುತ್ತಾ, ಮೇಲಿಂದ ಕಾಳು ಸುರಿಯುವುದು, ಬೀಸಿದ ಹಿಟ್ಟನ್ನು ಜರಡಿ ಹಿಡಿಯುವುದು ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕೈ ಹಾಕುತ್ತಿದ್ದಳು. ಆದರೆ, ಬೇರೆ ಮಕ್ಕಳಿಂದ ಆಗುವ ಹಾಗೆ ಇವಳಿಂದ ಒಂದಕ್ಕೆರಡು ಕೆಲಸವಾಗುವುದಿಲ್ಲ. ಅಲ್ಪ ಸ್ವಲ್ಪ ಮಾಡಿದರೂ ಸರಿಯಾಗೆ ಮಾಡುತ್ತಾಳೆ. ಹಾಗಾಗಿ, ಅವರಿಬ್ಬರೂ ಇವಳನ್ನು ತಡೆಯಲಿಲ್ಲ. ತಡೆಯಲಾಗದೇ ಅಂಬುಜಮ್ಮ ಹೇಳೇಬಿಟ್ಟರು. "ನಿನಗ್ಯಾಕಮ್ಮ ಬೆಂಗಳೂರು, ಇಲ್ಲೆ ಇದ್ಬುಡು ಎಮ್ಮೆಗಳ ಮೇಸ್ಕೊಂಡು, ಬೆಂಗಳೂರ್ನಲ್ಲಿ ನೀನ್ ದಂಡ’. ಎಲ್ಲಾ ಸರಿಯಾದರೂ ರುಕ್ಕೂ ಸ್ವಲ್ಪ ಮಂದ, ಚಾಲಾಕಿತನವಿಲ್ಲ. ಆದ್ದರಿಂದಲೇ, ಅಂಬುಜಮ್ಮ ’ಬೆಂಗಳೂರಿನಲ್ಲಿ ದಂಡ’ ಎಂದದ್ದು. ಅಂಬುಜಮ್ಮನ ಮಾತು ಕೇಳಿ ರುಕ್ಕೂಗೆ ಗಲಿಬಿಲಿ ಆಗಿಹೋಯ್ತು. ಇದೇನು ಹೊಗಳಿಕೆಯೋ ತೆಗಳಿಕೆಯೋ? ಎಲ್ಲಾ ಸರಿ, ಆದರೆ ’ದಂಡ’ ಅಂದದ್ದು ಏಕೆ? ಆದರೂ ಸೋಲೊಪ್ಪದೇ ’ಹ್ಞೂ, ಏಳನೇ ಕ್ಲಾಸಿಗೆ ಇಲ್ಲೇ ಸೇರ್ಕೋತಿನಿ. ಎರಡು ಎಮ್ಮೆ ಸಾಕ್ತೀನಿ.’ ಎಂದಳು. ತಕ್ಷಣವೇ ಅಮ್ಮನ ಕಿವಿಗೆ ಈ ಮಾತು ಬಿದ್ದರೆ ಏನು ಗತಿಯಪ್ಪಾ ಎಂದು ಚಿಂತೆಗಿಟ್ಟುಕೊಂಡಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-8777993710644087229?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/8777993710644087229/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/05/blog-post_15.html#comment-form' title='12 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/8777993710644087229'/><link rel='self' type='application/atom+xml' href='http://www.blogger.com/feeds/4527995432766899913/posts/default/8777993710644087229'/><link rel='alternate' type='text/html' href='http://muttumani.blogspot.com/2009/05/blog-post_15.html' title='ರುಕ್ಮಿಣಿಯ ಅಜ್ಜಿ ಮನೆ - ೩'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>12</thr:total></entry><entry><id>tag:blogger.com,1999:blog-4527995432766899913.post-8396524852591612719</id><published>2009-05-13T10:29:00.062+05:30</published><updated>2009-05-13T11:40:59.500+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ - ೨</title><content type='html'>ಹೊರಕ್ಕೆ ಓಡಿ ಬಂದವಳೇ ರಾಶಿಯಿಂದ ಹುಲ್ಲನ್ನು ಎಳೆದು ತಂದು ಎಮ್ಮೆಗಳ ಮುಂದಕ್ಕೆ ಹಾಕಿದಳು. ಹಾಗೆ ಅದರೊಟ್ಟಿಗೆ ಮಾತಾಡುತ್ತಾ, ಅದರ ಮೈ ನೇವರಿಸುತ್ತಾ ಕೂತಿದ್ದಳು. ದೊಡ್ಡವಳಾದ ಮೇಲೆ ಬೆಂಗಳೂರಿನಲ್ಲಿ ಎರಡು ಎಮ್ಮೆಗಳನ್ನು ಸಾಕಿದರೆ, ಹಾಲು ತರುವ ತೊಂದರೆಯೇ ಇರುವುದಿಲ್ಲವಲ್ಲ ಎಂದು ಆಗಾಗ ಅವಳು ಆಲೋಚಿಸುತ್ತಿರುತ್ತಾಳೆ. ಇದನ್ನು ತನ್ನ ಅಣ್ಣನ ಬಳಿ ಒಂದು ಸಾರಿ ಹೇಳಿದ್ದಳು. "ಹೌದು ಇಬ್ಬರೂ ಸೇರಿ ಸಾಕೋಣ, ಹಾಗೇ ಡೈರಿಗೂ ಎರಡು ಲೀಟರ್ ಹಾಲು ಹಾಕೋಣ, ಲಾಭ ಬರುತ್ತೆ"  ಎಂದು ಅವನು ಹೇಳಬಹುದೆಂದು ಇವಳು ಎಣಿಸಿದ್ದಳು. ಆದರೆ, ಅವನು ಅದನ್ನು ಕೇಳಿದೊಡನೆಯೇ ಜೋರಾಗಿ ನಕ್ಕುಬಿಟ್ಟ, "ಎಮ್ಮೆ ಸಾಕ್ತೀಯೇನೆ, ಎಲ್ಲಿ ಕಟ್ಟಿಹಾಕ್ತೀಯಾ? ಸಗಣಿ ಏನು ಮಾಡ್ತೀಯಾ, ಅಮ್ಮಾ ನೋಡಮ್ಮಾ ಇವಳು ಎಮ್ಮೆ ಸಾಕ್ತಾಳಂತೆ!" ಎಂದು ಅಣಕಿಸಿಬಿಟ್ಟ. ಆವತ್ತು ಅವನು ಮಾಡಿದ ಅವಮಾನಕ್ಕೆ ಸರಿಯಾಗಿ ಪಾಠ ಕಲಿಸಬೇಕು, ಎಮ್ಮೆಗಳನ್ನು ಸಾಕಿ ತೋರಿಸಲೇಬೇಕು ಎಂದು ಯೋಚಿಸುತ್ತಾ ಕೂತಿರುವಾಗಲೇ, ಅಜ್ಜಿ ಸಾಕಮ್ಮನ ಮನೆಯಿಂದ ಹೊರಕ್ಕೆ ಬಂದರು. "ನಡಿಯಮ್ಮೋ, ನಿಮ್ಮ ತಾತನಿಗೆ ಊಟಕ್ಕೆ ಹೊತ್ತಾಯಿತು " ಎಂದು ಹೊರಟರು. ಇವಳು ಅವರ ಹಿಂದೆಯೇ ಮನೆಗೆ ಬಂದಳು.    &lt;br /&gt;&lt;br /&gt;ಅಜ್ಜಿ ತಾತನಿಗೂ ರುಕ್ಕೂಗೂ ಊಟಬಡಿಸಿ, ತೋಟದಲ್ಲಿದ್ದವರಿಗೆ ಊಟ ತೆಗೆದುಕೊಂಡು ಹೋಗಲು ಬಂದಿದ್ದ ’ಚೌಟ’ನ ಕೈಯಲ್ಲಿ ಊಟ ಕಳಿಸಿದರು. ’ಚೌಟು’ ಎಂದರೆ ಕಿವಿ ಕೇಳದೇ, ಮಾತು ಬಾರದೇ ಇರುವುದು. ಆ ಮನುಷ್ಯನಿಗೆ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ, ಮಾತು ಸರಿಯಾಗಿ ಬರುತ್ತಿರಲಿಲ್ಲ, ಹಾಗಾಗಿ, ’ಚೌಟೋನು’ ಎಂಬ ಹೆಸರೇ ಅವನಿಗೆ ಖಾಯಂ ಆಗಿ ಹೋಗಿತ್ತು. ಚೌಟೋನು ಅತ್ತ ಹೋಗುತ್ತಲೇ, ಅಜ್ಜಿಗೆ ಇವತ್ತು ಅಡಿಗೆ ಸ್ವಲ್ಪ ಹೆಚ್ಚಿಗೆ ಮಿಕ್ಕಿ ಹೋಗಿರುವುದು ಗಮನಕ್ಕೆ ಬಂತು. ’ಏ ಕರಿಯೇ ಅವನ್ನ, ಇಲ್ಲೇ ಊಟ ಮಾಡ್ಲೀ’ ಎಂದು ಅಡುಗೆ ಮನೆಯಿಂದ ಹೊರಕ್ಕೆ ಓಡಿಬಂದರು. ರುಕ್ಕೂಗೆ ಅವನನ್ನು ಮಾತಾನಾಡಿಸುವುದು ಹೇಗೆಂದು ಇವತ್ತಿಗೂ ತಿಳಿದಿರಲಿಲ್ಲ. ಏನೂ ಮಾಡಲಾಗದೆ ಸುಮ್ಮನೆ ನೋಡುತ್ತಾ ನಿಂತುಬಿಟ್ಟಳು. ಹೊರಗೆ ಬಂದ ಅಜ್ಜಿ, ಬೀದಿಯಲ್ಲಿ ಹೋಗುತ್ತಿದ್ದ ಒಬ್ಬ ಹುಡುಗನನ್ನು ಕರೆದು ’ಗೋಪಿ,ಗೋಪಿ ಅವನಿಗೆ ಹೇಳೋ ನಮ್ಮ ಮನೇಗೆ ಊಟಕ್ಕೆ ಬರೋಕ್ಕೆ’ ಎಂದು  ಕೂಗಿದರು. ಗೋಪಿ ಓಡಿಹೋಗಿ ಚೌಟನನ್ನು ಹಿಡಿದು ಕೈಸನ್ನೆ ಬಾಯ್ಸನ್ನೆ ಮಾಡಿ ಹೇಳಿದ. ಚೌಟನು ತಿರುಗಿ ಹೂ ಎನ್ನುವಂತೆ ತಲೆಯಾಡಿಸಿ ಹೊರಟುಹೋದ. ಅಜ್ಜಿಗೆ ಈಗ ಒಂದು ರೀತಿ ಸಮಾಧಾನವಾದಂತಾಗಿ ಒಳಕ್ಕೆ ನಡೆದರು. &lt;br /&gt;&lt;br /&gt;ರುಕ್ಕು ಹೊರಗೆ ಜಗಲಿಯ ಮೇಲೆ ಕೂತಿದ್ದಳು. ಮಧ್ಯಾಹ್ನ ನಿದ್ದೆ ಮಾಡಬಾರದು ಎಂದು ಅವಳ ಶಪಥ. ಇವಳು ನಿದ್ದೆ ಮಾಡಿದಾಗಲೆಲ್ಲಾ, ಅಜ್ಜಿ, ತಾತ, ಕಡೆಗೆ ಅವಳ ಅಣ್ಣನೂ ಕೂಡ ಏನಾದರೊಂದು ತರಲೆ ಮಾಡಿಬಿಟ್ಟಿರುತ್ತಾರೆ. ಇವಳು ಕಟ್ಟಿದ್ದ ಮನೆಯನ್ನು ಬೀಳಿಸಿಬಿಡುವುದು. ಹುಡುಕಿಟ್ಟಿದ್ದ ’ರೇರ್’ ಬೀಜಗಳನ್ನು ಕಸಕ್ಕೆ ಎಸೆದು ಬಿಡುವುದು, ಹೀಗೆ ಏನೇನೋ. "ರುಕ್ಕೂ, ಒಂದು ಹೊತ್ತು ಹಾಗೆ ಉರುಳ್ಕೋಬಾರ್ದಾ" ದಿಂಬು ನೆಲದ ಮೇಲೆ ಹಾಕುತ್ತಾ, ಅಜ್ಜಿ ಕೂಗಿದರು. "ನೀನು ಮಲಕ್ಕೋ ಅಜ್ಜಿ, ಇಲ್ಲಿ ಕಟ್ಟಿರೋ ದೇವಸ್ಥಾನಾನ ಏನು ಮಾಡ್ಬೇಡ" ಎಂದು ಅಜ್ಜಿಗೆ ಕಟ್ಟಪ್ಪಣೆ ಹೊರೆಸಿ ಬೀದಿಗಿಳಿದಳು. ಇದು ಅವಳ ಫೇವರೆಟ್ ಕೆಲಸ. ಬೇಸಿಗೆ ಕಾಲವಾದ್ದರಿಂದ ಎಲ್ಲೆಲ್ಲೂ ಹುಣಸೇ ಹಣ್ಣು, ಹುಣಸೇ ಬೀಜದ ಮಳೆ. ಬೀದಿಯಲ್ಲಿ ಸುಮ್ಮನೆ ನಡಕೊಂಡು ಹೋಗುತ್ತಿದ್ದರೇ ಸಾಕು, ಕೈಯಿಗೊಂದು, ಕಾಲಿಗೆರಡು ಹುಣಸೇ ಬೀಜ ಸಿಗುತ್ತದೆ. ಒಂದೊಂದಾಗಿ ಬೀಜಗಳನ್ನು ಆರಿಸಿಕೊಳ್ಳುತ್ತಾ ತನ್ನ ಉದ್ದನೆಯ ಜಾಕೀಟಿಗೆ ಹಾಕಿಕೊಳ್ಳುತ್ತಾ ಮುಂದಕ್ಕೆ ನಡೆಯುತ್ತಿದ್ದಳು. ಒಂದಿನ್ನೂರು-ಮುನ್ನೂರು ಬೀಜ ಆಗಿಬಿಟ್ಟರೇ ಸಾಕು ಎಂದು ಅವಳ ಲೆಕ್ಕಾಚಾರ. ತನ್ನ ಊರಿಗೆ ಹೋದ ನಂತರ ’ಏಳುಗುಣಿ ಮನೆ’, ’ಸರಿ ಬೆಸ’, ’ಚೌಕಾಬಾರ’ ಆಟಗಳನ್ನು ಆಡಲು ಅವಳ ಈ ಸಿದ್ಧತೆ. ಹಿಂದೆ ಒಂದು ಸಾರಿ ಇದೇ ರಿತಿ ಬೇಕಾದಷ್ಟು ಬೀಜಗಳನ್ನು ಕೂಡಿಟ್ಟಿದ್ದಳು. ಅತೀ ಉತ್ಸಾಹದಿಂದ ಹುಣಸೇಬೀಜಗಳನ್ನು ನೀರಿನಲ್ಲಿ ತೊಳೆದು ಕವರಿಗೆ ಹಾಕಿಟ್ಟಿದ್ದಳು. ಆದರೆ, ನೀರು ಬಿದ್ದದ್ದೇ ಹುಣಸೇ ಸಿಪ್ಪೆಯೆಲ್ಲಾ ಎದ್ದು ಬಂದು ಅವಳ ಶ್ರಮವೆಲ್ಲಾ ಹಾಳಾಗಿ ಹೋಯಿತು. ಮತ್ತೆ ಅವಳು ಆ ಸಾಹಸಕ್ಕೆ ಕೈ ಹಾಕಲಿಲ್ಲ. &lt;br /&gt;&lt;br /&gt;ಮುಂದೆ ಮುಂದೆ ಸಾಗುತ್ತಾ ಮತ್ತೆ ಅವಳ ಸವಾರಿ ಗೌಡರ ಮನೆ ಕಡೆಗೆ ಬಂತು. ಈ ಸಾರಿ ಗೌಡರನ್ನು ನೋಡಲು ಅಲ್ಲ. ಅವರ ಮನೆಯಲ್ಲಿ ಹುಣಸೆಕಾಯಿ ಹೊಡೆಯುವ ಕೆಲಸಗಾರರನ್ನು ನೋಡಲು!&lt;br /&gt;&lt;br /&gt;(ಮುಂದುವರೆಯುತ್ತದೆ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-8396524852591612719?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/8396524852591612719/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/05/blog-post_13.html#comment-form' title='6 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/8396524852591612719'/><link rel='self' type='application/atom+xml' href='http://www.blogger.com/feeds/4527995432766899913/posts/default/8396524852591612719'/><link rel='alternate' type='text/html' href='http://muttumani.blogspot.com/2009/05/blog-post_13.html' title='ರುಕ್ಮಿಣಿಯ ಅಜ್ಜಿ ಮನೆ - ೨'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>6</thr:total></entry><entry><id>tag:blogger.com,1999:blog-4527995432766899913.post-296970576091593277</id><published>2009-05-10T14:07:00.079+05:30</published><updated>2009-05-13T11:41:52.712+05:30</updated><category scheme='http://www.blogger.com/atom/ns#' term='ಹಳ್ಳಿ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಬದುಕು'/><category scheme='http://www.blogger.com/atom/ns#' term='ಜನಜೀವನ'/><title type='text'>ರುಕ್ಮಿಣಿಯ ಅಜ್ಜಿ ಮನೆ - ೧</title><content type='html'>"ರುಕ್ಕೂ... ರುಕ್ಕಮ್ಮ ಮಣಿ ಪಾಯಸ ರೆಡಿ ಆಯ್ತು, ತಿನ್ನು ಬಾ", ಮನೆಯ ಮುಂದಿದ್ದ ಸುಂಕತ್ತಿ ಮರದ ಎಲೆಗಳು, ಕಡ್ಡಿಗಳಿಂದ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದ ರುಕ್ಮಿಣಿ ಒಂದೇ ಸಾರಿಗೆ ದೇವರನ್ನು ಮರೆತು ಅಡುಗೆ ಮನೆಗೆ ಓಡಿದಳು. ತನ್ನ ಮೆಚ್ಚಿನ ಸಬ್ಬಕ್ಕಿ ಪಾಯಸಕ್ಕೆ ಈ ಪುಟ್ಟುಹುಡುಗಿ ಇಟ್ಟಿದ್ದ ಹೆಸರು ’ಮಣಿ ಪಾಯಸ’. ಅಲ್ಲೇ ಹಜಾರದಲ್ಲಿ ಕೂತಿದ್ದ ತಾತ ಇವಳ ಓಟದ ಭರವನ್ನು ತಡೆಯಲಾರದೆ ಗುಡುಗಿದರು. "ಆಆಆಆಶಿಶೀ... ಹುಡುಗ್ರಿಗೇನು ಅಡಿಗೆ ಮನೇಲಿ ಕೆಲ್ಸ, ಬಾಮ್ಮ ಈಚೆಗೆ!". "ರೇಏಏಏ, ಸುಮ್ಮನಿರ್ತೀರ, ಪಾಯಸ ಕುಡಿಯಕ್ಕೆ ನಾನೇ ಕರ್ದಿದ್ದು". ತಾತನಿಂದ ಮರುಮಾತು ಬರದೇ ಇದ್ದ ಕಾರಣ, ರುಕ್ಮಿಣಿ ಧೈರ್ಯವಾಗಿ ಅಡುಗೆ ಮನೆಯಲ್ಲಿ ಹೋಗಿ ಕುಳಿತಳು. ಪಾಯಸದಿಂದ ಒಂದೊಂದೆ ಮಣಿಯನ್ನು ಸ್ಪೂನಿನಲ್ಲಿ ಆರಿಸಿ ಆರಿಸಿ ಒಂದು ಗಂಟೆ ಕಾಲ ತಿನ್ನುವುದು ಅವಳ ವಾಡಿಕೆ.&lt;br /&gt;&lt;br /&gt;ಬೆಳಿಗ್ಗೆಯೇ ಎದ್ದು ಮನೆ ಬಾಗಿಲು, ಹಿತ್ತಲು - ಮುಸುರೆ ಮುಗಿಸಿ, ಮಾರು ದೂರದ ಬೋರ್ವೆಲ್ನಿಂದ ಮಡಿನೀರು ತಂದಿದ್ದ ಅಜ್ಜಿ ಈಗ ಬೆಂಗಳೂರಿನಿಂದ ಬಂದಿದ್ದ ಮೊಮ್ಮಗಳ ಬೇಡಿಕೆಯನ್ನು ಈಡೇರಿಸಿದ್ದರು. ಒಂದು ಗಂಟೆ ಪಾಯಸವನ್ನು ತಿಂದು ಮುಗಿಸಿ, ಅಡುಗೆ ಮನೆಯಿಂದ ಹೊರಕ್ಕೆ ಬಂದಳು, ರುಕ್ಕು. ತಾತ ಅಂಗಳದಲ್ಲಿ ಸೌದೆ ಹೊಡೆಯುತ್ತಿದ್ದರು. ಅಜ್ಜಿ ಮನೆಯಲ್ಲಿಲ್ಲದೇ ಇರುವುದು ತಕ್ಷಣ ಅರಿವಾಯಿತು. ಒಂದೇ ಓಟಕ್ಕೆ ಊರ ಗೌಡರಾದ ಮುನಿಶ್ಯಾಮಪ್ಪನ ಮನೆಗೆ ಓಡಿದಳು. "ನಮ್ಮಜ್ಜಿ ಬಂದಿದ್ದಾರ?", ಸೀದಾ ಅಡಿಗೆ ಮನೆಗೇ ನುಗ್ಗುತ್ತಾ ಕೇಳಿದಳು. ’ಇತ್ತಾಗ್ ಬಂದಿಲ್ಲಮ್ಮೋ, ತಡಿ, ತಡಿ, ಎಳನೀರು ಕೊಚ್ಚುತವರೆ ಕುಡ್ಕೊಂಡು ಹೋಗು". ಊರಿನಲ್ಲಿ ಇಂಥ ಸೇವೆಗೇನು ಕಡಿಮೆಯಿಲ್ಲ. ಗೌಡರ ಮಗನ  ಕೈಯಲ್ಲಿ ಎರಡು ಎಳನೀರು ಒಡೆಸಿಕೊಂಡು ಕುಡಿದು, ಗಂಜಿಯನ್ನು ಕೈಯಲ್ಲಿಟ್ಟುಕೊಂಡು ಮೆಲ್ಲುತ್ತಾ ನಡೆದಳು. &lt;br /&gt;&lt;br /&gt;ಅವಳು ಈಗ ಅಟ್ಯಾಕ್ ಮಾಡಲು ಹೋಗಿದ್ದು ಸಂಕಮ್ಮನ ಮನೆಯನ್ನು. ಅವಳಿಗೆ ಗೊತ್ತು ಅಜ್ಜಿ ಇಲ್ಲಾ ಗೌಡರ ಮನೆಗೆ ಹೋಗಿ ಹರಟೆ ಹೊಡೆಯುತ್ತಾರೆ, ಇಲ್ಲಾ ಸಂಕಮ್ಮನ ಮನೆಯಲ್ಲಿ ಕೂರುತ್ತಾರೆ, ಇಲ್ಲದಿದ್ದರೆ ಸೊಣ್ಣಮ್ಮ, ಅದೂ ಹೋದ್ರೆ ಲಿಂಗಾಯಿತರ ಮನೆ. &lt;br /&gt;&lt;br /&gt;ಅಜ್ಜಿಗೆ ದಿನಾ ಮಧ್ಯಾಹ್ನ ಮಾಮೂಲಿ ಬಿಡುವು. ಆ ಸಮಯದಲ್ಲಿ ತನ್ನ ಸ್ನೇಹಿತೆಯರ ಮನೆಗೆ ಹೋಗಿ ಕೂರುತ್ತಿದ್ದರು. ಇಲ್ಲವೇ ಹಸುವನ್ನು ಮೇವಿಗೆ ಕರೆದುಕೊಂಡು ಹೋಗಿ ಕಟ್ಟುತ್ತಿದ್ದರು. ರುಕ್ಕು ಬೇಸಿಗೆ ರಜಕ್ಕೆ ಹೋದಾಗಲೆಲ್ಲಾ ಅಜ್ಜಿಯ ಜೊತೆಯೇ ಕಾಲ ಕಳೆಯುವುದು. ಅವರು ಹೀಗೆ ಆಚೀಚೆ ಕುಳಿತಾಗಲೆಲ್ಲಾ ಅದೆಷ್ಟೋ ವಿಷಯಗಳನ್ನು ಹೇಳುತ್ತಿದ್ದರು. ೪೦ ರೂಪಾಯಿಗೆ ಒಂದೇ ರೂಮಿದ್ದ ಮನೆಯೊಂದನ್ನು ಕೊಂಡುಕೊಂಡದ್ದು, ನಂತರ ತಾವೇ ಅದಕ್ಕೆ ಇಟ್ಟಿಗೆ ಮಣ್ಣು ಜೋಡಿಸಿ ದೊಡ್ಡ ಮನೆ ಮಾಡಿದ್ದು, ತನ್ನ ಗಂಡನ ಕಡೆಯ ೩೦ - ೪೦ ಜನಕ್ಕೆ ತಾವೇ ಮುದ್ದೆಗಳನ್ನು ತೊಳಸಿ ಹಾಕುತ್ತಿದ್ದುದು, ಆರೇಳು ಜನ ಹೆಣ್ಣುಮಕ್ಕಳ ಮದುವೆ ಮಾಡಿದ್ದು, ಒಂದು ವರ್ಷ ಹಾಲು ಹಾಕಿದ ರಾಧಮ್ಮನಿಗೆ ಚಿನ್ನದ  ಮೂಗುತಿ ಮಾಡಿಸಿಕೊಟ್ಟದ್ದು, ಕಾಸಿಗೆ ಕಾಸು ಸೇರಿಸಿ ಜಮೀನುಗಳನ್ನು ಮಾಡಿದ್ದು ಹೀಗೆ ಏನೇನೋ. ಆಮೇಲೆ, ಸರ್ಕಾರದ ರೂಲಿನ ಪ್ರಕಾರ ಹತ್ತರಲ್ಲಿ ಒಂದು ಭಾಗ ಭೂಮಿಯಷ್ಟೇ ಇವರ ಪಾಲಿಗೆ ಉಳಿದುಕೊಂಡಿತ್ತು. ಊರಿನಲ್ಲಿ ಸ್ಕೂಲಾಗಬೇಕೆಂಬ ವಿಷಯ ಮುಂದೆ ಬಂದಾಗ ತಾತನೇ ಉಳಿದಿದ್ದ ಜಾಗದಲ್ಲಿ ಒಂದಷ್ಟನ್ನು ಕೊಟ್ಟುಬಿಟ್ಟಿದ್ದರು. ಈ ಕಥೆಗಳನ್ನು ಹೇಳುವಾಗ ಅಜ್ಜಿಯ ಕೈಯಿಂದ ಕೆಲವರು ಬೈಸಿಕೊಂಡರೆ ಇನ್ನೂ ಕೆಲವರು ಹೊಗಳಿಸಿಕೊಳ್ಳುತ್ತಿದ್ದರು. &lt;br /&gt;&lt;br /&gt;ಮಕ್ಕಳು ಹೊರಗೆ ಕೆಲಸ ಮಾಡುತ್ತಿದ್ದರು, ಸೊಸೆಯಂದಿರು ತೋಟ ನೋಡಿಕೊಳ್ಳುತ್ತಿದ್ದರು, ಮನೆಯ ಕೆಲಸಗಳನ್ನೆಲ್ಲಾ ಇವರೇ ಮಾಡುತ್ತಿದ್ದುದು. ಅವರಿಗೆ ಅಂತಾ ವಯಸ್ಸೇನೂ ಆಗಿರಲಿಕ್ಕಿಲ್ಲ. ಬೇಗನೇ ಮದುವೆಯಾಗಿಬಿಟ್ಟಿರಬೇಕು, ಅದಕ್ಕೇ ಐವತ್ತು ವರ್ಷದಷ್ಟೊತ್ತಿಗೇ ಮೊಮ್ಮಗಳ ಮದುವೆಯನ್ನೂ ನೋಡಿಬಿಟ್ಟಿದ್ದರು.     &lt;br /&gt;&lt;br /&gt;ರುಕ್ಮಿಣಿಯ ಊಹೆ ಸರಿಯಾಯಿತು, ಅಜ್ಜಿ ಸಂಕಮ್ಮನ ಮನೆಯಲ್ಲಿ ಕೂತಿದ್ದರು. ಎಲೆ ಅಡಿಕೆ ಹಾಕುತ್ತಾ. ಸಂಕಮ್ಮ ಮನೆಯಲ್ಲಿ ಇವಳಿಗೆ ಏನೋ ಒಂದು ರೀತಿ ಅನುಭವವಾಗುತ್ತಿತ್ತು. ಸಂಕಮ್ಮ ಬೇರೆಯವರ ಹಾಗೆ ಜೋರಾಗಿ ಮಾತನಾಡುತ್ತಿರಲಿಲ್ಲ. ಸದಾ ಹಸನ್ಮುಖಿ. ಅವರ ಮನೆಯೂ ಕೂಡ ಸ್ವಲ್ಪ ಮಬ್ಬಾಗಿಯೇ ಇರುತ್ತಿತ್ತು. ಇನ್ನೂ ಒಂದು ವಿಷಯವಿತ್ತು, ಇವಳು ಹೋದಾಗಲೆಲ್ಲ ಸಂಕಮ್ಮ ಬೀರೂವಿನ ಡ್ರಾಯರಿನಲ್ಲಿಂದ ಎರಡು ಸಣ್ಣ ಸಣ್ಣ ಮಿಠಾಯಿ ತೆಗೆದು ಕೊಡುತ್ತಿದ್ದರು. ಅವು ತಿನ್ನಲು ಬಹಳ ರುಚಿ. ಆ ಬೀರೂವನ್ನು ಯಾವಾಗಲೂ ಬೀಗ ಹಾಕಿ ಇಟ್ಟಿರುತ್ತಿದ್ದರು. "ನೋಡು, ಬಿಸಿಲು ಮನೇಲಿರ್ಲಿ ಅಂತ ನಾನಿದ್ರೇ" ಅಜ್ಜಿ ರಾಗ ತೆಗೆಯುತ್ತಿದ್ದಂತೆಯೇ, ಸಂಕಮ್ಮ "ಬರ್ಲೇಳು, ಮನೇಲ್ ಕೂತು ಕೂತು ಅದಕ್ಕೆ ಬೇಜಾರಾಗಲ್ಲೇನು" ಎಂದರು. ರುಕ್ಕು ಅಜ್ಜಿಯ ತೊಡೆ ಮೇಲೆ ಕೈ ಹಾಕಿ ಕೂತಳು.   &lt;br /&gt;&lt;br /&gt;ಅವರಿಬ್ಬರ ಮಾತು ಎಲ್ಲಿಂದ ಎಲ್ಲೆಲ್ಲಿಗೋ ಸಾಗುತ್ತಿತ್ತು. ಸಂಕಮ್ಮನ ಚಿಕ್ಕ ಮಗಳು ಬಾಣಂತನಕ್ಕೆ ಬಂದಿದ್ದಾಳೆ. ಅವಳ ಆರೈಕೆ ಬಗ್ಗೆ  ಕೂಲಂಕುಷವಾಗಿ ತಿಳಿದುಕೊಳ್ಳುತ್ತಿದ್ದಾಳೆ ಸಂಕಮ್ಮ. ಮೊದಲ ಮಗಳ ಬಾಣಂತನವನ್ನು ಈಗಾಗಲೇ ಅವರು ಮಾಡಿದ್ದಾರೆ. ಆದರೂ ಅಜ್ಜಿಯ ಹತ್ತಿರ ಕೇಳುವುದು, ಆಗ ಹಾಗಾಯ್ತಲ್ಲ, ಅದಕ್ಕೇನು? ಇದಕ್ಕೇನು? ಈ ಮಗು ದೊಡ್ಡಮಗಳ ಮಗುವಿನಷ್ಟು ಗಟ್ಟಿ ಬಂದಿಲ್ಲವೇ? ಹೀಗೇ ಏನೇನೋ ಕೇಳುತ್ತಿದ್ದಾರೆ. ರುಕ್ಮಿಣಿಗೆ ಇದೊಂದು ಅರ್ಥವಾಗದು. ಅವಳು ಅವರ ಮನೆಯಲ್ಲಿ ನೇತು ಹಾಕಿರುವ ಬೇರೆ ಬೇರೆ ದೇವರ ಫೋಟೋಗಳನ್ನು ನೋಡುತ್ತಲಿದ್ದಾಳೆ. ಅವಳು ಹುಟ್ಟಿದಾಗಿನಿಂದ ಇವುಗಳನ್ನು ನೋಡುತ್ತಿದ್ದರೂ ಇನ್ನೂ ಮನದಣಿದಿಲ್ಲ. ಅದರಲ್ಲಿ ಒಂದು ಹಸುವಿನ ಫೋಟೋ ಇತ್ತು. ಅದಕ್ಕೆ ತಲೆಯಿಂದ ಹೊಟ್ಟೆಯವರೆಗೆ ಮಾನವ ಹೆಣ್ಣಿನ ದೇಹ, ಅಲ್ಲಿಂದ ಹಿಂದಕ್ಕೆ ಹಸುವಿನ ದೇಹ. ವಿಚಿತ್ರ ಕಲ್ಪನೆಯಾದರೂ ನೋಡಲು ಸುಂದರವಾಗಿತ್ತು. ನಂದಿನಿಯೋ ಇನ್ಯಾವುದೋ ಹಸು ಅದಾಗಿರಬೇಕು. ಇವಳು ಅದನ್ನೇನು ಕೇಳಲು ಹೋಗುತ್ತಿರಲಿಲ್ಲ. ಅಲ್ಲಿದ್ದ ಒರಳುಕಲ್ಲು, ಎತ್ತರವಾದ ರಾಗಿ ಕಣಜ ಇವುಗಳನ್ನು ಕುತೂಹಲದಿಂದ ನೋಡುತ್ತಾ ಕೂತಿದ್ದಳು. ಸಂಕಮ್ಮನ ಯಜಮಾನಪ್ಪನು ಮನೆಗೆ ಬಂದೊಡನೆಯೆ ಸಂಕಮ್ಮ ’ನೀರು ಕೊಡಲೆ?’ ಎಂದು ಕೇಳಿದರು. "ಅದೇ ನೋಡು, ಆಚೆಯಿಂದ ಬಂದೋರಿಗೆ ಕೇಳೋದೇನು? ನೀರು ತಂದು ಕೊಡಬಾರ್ದೇನು?" ಎಂದು ಅಜ್ಜಿ ಗುಟುರು ಹಾಕಿದರು. ಸಂಕಮ್ಮ - ಯಜಮಾನಪ್ಪ  ಇಬ್ಬರೂ ಮೆಲ್ಲಗೆ ನಕ್ಕರೆ ಹೊರತು ಮರುಮಾತಾಡಲಿಲ್ಲ. ಸಂಕಮ್ಮ ತಂದುಕೊಟ್ಟ ನೀರನ್ನು ಯಜಮಾನಪ್ಪ ಕುಡಿದನು. ಇದ್ದಕ್ಕಿದ್ದ ಹಾಗೆ ಎಮ್ಮೆ ಕೂಗಿದ್ದು ಕೇಳಿಸಿ, ’ನಾನು ಹಾಕಲಾ ಹುಲ್ಲು’ ಎಂದು ಪರ್ಮಿಷನ್ ಕೇಳಿಕೊಂಡು ರುಕ್ಕು ಆಚೆಗೆ ಬಂದಳು. "ನಿನಗ್ಯಾಕಮ್ಮ ಈ ಪಾಡೆಲ್ಲ" ಎಂದು ಸಂಕಮ್ಮ ಹೇಳಿದ್ದು ಅವಳ ಕಿವಿಗೆ ಬೀಳಲೇ ಇಲ್ಲ. ಎಮ್ಮೆಗಳನ್ನು ಮಾತನಾಡಿಸುವುದು, ಗದರಿಸುವುದು, ಮೇವು ಹಾಕುವುದು, ತೊಳೆಯುವುದು, ಸಗಣಿ ಸಾರಿಸುವುದು ಇವೆಲ್ಲಾ ಅವಳಿಗೆ ಕರಗತ. ಮೊದಮೊದಲು ಬೆಂಗಳೂರಿನವಳೆಂದು ಅಣಕಿಸಿದವರೂ ಈಗ ಸುಮ್ಮನಾಗಿದ್ದರು.&lt;br /&gt;&lt;br /&gt;(ಮುಂದುವರೆಯುತ್ತದೆ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-296970576091593277?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/296970576091593277/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/05/blog-post.html#comment-form' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/296970576091593277'/><link rel='self' type='application/atom+xml' href='http://www.blogger.com/feeds/4527995432766899913/posts/default/296970576091593277'/><link rel='alternate' type='text/html' href='http://muttumani.blogspot.com/2009/05/blog-post.html' title='ರುಕ್ಮಿಣಿಯ ಅಜ್ಜಿ ಮನೆ - ೧'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>4</thr:total></entry><entry><id>tag:blogger.com,1999:blog-4527995432766899913.post-150028330796542163</id><published>2009-04-03T22:15:00.052+05:30</published><updated>2009-04-09T14:38:33.831+05:30</updated><title type='text'>ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ...</title><content type='html'>ಮಕ್ಕಳ ಕ್ಷೇಯೋಭಿವೃದ್ಧಿಯ ಬಗೆಗೆ ಹಿಂದೆಂದಿಗಿಂತಲೂ ಈಗ ಚರ್ಚೆ ಹೆಚ್ಚು. ನಾನು ಕೆಲವು ದಿನಗಳು ಈ ಚರ್ಚೆಗಳಲ್ಲಿ ಭಾಗವಹಿಸಬೇಕಾಗಿ ಬಂದದ್ದರಿಂದ ಮತ್ತು ಆ ವಿಷಯಗಳು ಇನ್ನೂ ನನ್ನ ಮನಸ್ಸಿನಲ್ಲಿ ಗುಂಗುಡುತ್ತಿದೆಯಾದ್ದರಿಂದ, ನನ್ನ ಈ ಪೋಸ್ಟಿನ ವಿಷಯವೂ ಮಕ್ಕಳೇ ಆಗಿದ್ದಾರೆ. &lt;br /&gt;&lt;br /&gt;                                     * * *&lt;br /&gt; &lt;br /&gt;ಪಕ್ಕದ ಮನೆಯ ಪುಟ್ಟ ಎರಡು ವರ್ಷದ ಹೆಣ್ಣುಮಗುವಿಗೆ ದಿನಕ್ಕೆ ಎರಡು ಬಾರಿ ಸ್ನಾನ, ಮತ್ತೆ ಎರಡು ಸಾರಿಯೂ ನಾಲ್ಕೈದು ಕ್ರೀಮು. ಮಗು ಕಪ್ಪಗಿದೆಯಂತೆ, ದೊಡ್ಡವಳಾದ ಮೇಲೆ ಹುಡುಗರು ಮೆಚ್ಚುವುದಿಲ್ಲವೆಂದು ಈಗಿನಿಂದಲೇ ತಾಲೀಮು!&lt;br /&gt;&lt;br /&gt;ಮಗಳು ನಾಲ್ಕನೇ ಕ್ಲಾಸು. ಅವಳಿಗೆ ಹಾಡು ಕಲಿಯಲು ಇಷ್ಟ, ಆದರೆ ತಾಯಿ ಕಳಿಸುವುದಿಲ್ಲ. ಅದರಿಂದ ಏನು ಲಾಭ ಎಂಬ ಅಸಡ್ಡೆ ಅವರಿಗೆ. ತಾವು ಕೆಲಸ ಮಾಡುವ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರಿಗೆ ಸರ್ಕಾರೀ ಕೆಲಸ ಸಿಕ್ಕಿದೆ. ಈಗ ಮಗಳನ್ನು ಅವರ ಬಳಿ ಟ್ಯೂಷನ್ನಿಗೆ ಕಳುಹಿಸುತ್ತಿದ್ದಾರೆ. ಎಕ್ಸಾಮ್ ಪಾಸು ಮಾಡುವ ಬಗ್ಗೆ ಟ್ರೇನಿಂಗ್ ತೆಗೆದುಕೊಳ್ಳಲು, ಮುಂದಕ್ಕೆ ಉಪಯೋಗವಾಗಲಿ ಎಂದು!&lt;br /&gt;&lt;br /&gt;ದೀಪಾವಳಿ ಹಬ್ಬದ ದಿನ ತಾಯಿ ತನ್ನ ಒಂಭತ್ತು ತಿಂಗಳ ಮಗುವನ್ನು ಎತ್ತಿಕೊಂಡು ಹೊರಗೆ ಬೀದಿಯಲ್ಲಿ ನಿಂತಿದ್ದಾಳೆ. ಉಳಿದ ಮಕ್ಕಳು ಒಂದೇ ಸಮ ಆಟಂ ಬಾಂಬ್ ಹೊಡೆಯುತ್ತಿದ್ದಾರೆ. ಏಕೆ ಇಲ್ಲಿ ನಿಂತಿರುವುದೆಂದು ಅವರನ್ನೇ ಕೇಳಬೇಕು. ’ಮಗುವಿಗೆ ಧೈರ್ಯ ಬರಲಿ ಎಂದು!’  &lt;br /&gt;&lt;br /&gt;                                     * * *&lt;br /&gt;&lt;br /&gt;ಇಂತಹವು  ಈಗ ಸರ್ವೇಸಾಮಾನ್ಯ ಎನಿಸುತ್ತಿದೆ. ನಮ್ಮ ಮಕ್ಕಳು ಹೀಗೇ, ಇಂತಹವರೇ ಆಗಬೇಕೆಂದು ಡಿಸೈನ್ ಮಾಡಿ ಬೆಳೆಸುವುದು ಹಿಂದೆಂದೂ ಇರಲಿಲ್ಲವೆನಿಸುತ್ತದೆ. ತನ್ನ ಮಗನನ್ನು ಬದಲಾಯಿಸಲು ಪ್ರಯತ್ನಿಸಿದ ಹಿರಣ್ಯ ಕಶಿಪು ಇದಕ್ಕೊಂದು ಅಪವಾದ ಎಂದು ಬೇಕಾದರೆ ಹೇಳಬಹುದೇನೋ? ಆದರೆ, ಅವನೂ ಸೋತಿದ್ದು ನಿಜ ತಾನೆ? ನಮ್ಮ ಮಕ್ಕಳು ಬೇರೆ ಮಕ್ಕಳಿಗಿಂತ ಹಿಂದೆ ಉಳಿದುಬಿಡುತ್ತಾರೆ ಎಂದು ಭಯ ಕೆಲವರಿಗೆ. ಆದರೆ, ಹಿಂದುಳಿಯುವುದು ಎಂದರೇನು? ಅದೇ ಸ್ಪಷ್ಟವಾಗಿ ನಮಗೆ ತಿಳಿದಿಲ್ಲ.  &lt;br /&gt;&lt;br /&gt;ನಮ್ಮ ಪೋಷಕರ ಮನೋಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾದರೆ ಒಂದು ಜಾಹಿರಾತನ್ನು ನೆನಪಿಸಿಕೊಳ್ಳಬೇಕು. ಮಗನಿಗೆ ಅಬ್ದುಲ್ ಕಲಾಮರ ಹಾಗೆ ಆಗಬೇಕೆಂಬ ಮಹದಾಸೆ. ಅದಕ್ಕೆ ತಾಯಿ ಏನು ಮಾಡಬೇಕು? ಅದೆಂತದೆಂತದೋ ಹಾಕಿ ಮಾಡಿರುವ ’ಬ್ರೇನ್ ಫುಡ್’ ತಿನ್ನಿಸಬೇಕು! ಕಲಾಮ್ ಸರ್ ನಿಜವಾಗಲೂ ’ಅಮೇಜ್ ಬ್ರೇನ್ ಫುಡ್’ ತಿಂದೇ ಹಾಗಾಗಿದ್ದ? ಇದರ ಬದಲು ನಮ್ಮ ಮಕ್ಕಳಿಗೆ ಅವರು ಸಾಗಿ ಬಂದ ದಾರಿಯನ್ನು ಹೇಳಿ ಉತ್ತೇಜಿಸುವುದು ಹೆಚ್ಚು ಉಪಯುಕ್ತವಲ್ಲವೇ?    &lt;br /&gt;&lt;br /&gt;ಮುಸ್ಲಿಮ್ ಸಂತ ಕವಿ ಖಲೀಲ್ ಗಿಬ್ರನ್(ಮೂಲ ಉರ್ದು)ಬರೆದಿರುವ ಎರಡು ಪದ್ಯಗಳು ಈ ಆಲೋಚನೆಗಳಿಗೆಲ್ಲ ಉತ್ತರವೇನೋ ಎನ್ನುವಂತಿದೆ, ನೀವೂ ಓದಿ ನೋಡಿ:   &lt;br /&gt;&lt;br /&gt;ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ&lt;br /&gt;ಜೀವನದ ಸ್ವಪ್ರೇಮದ ಪುತ್ರಪುತ್ರಿಯರು ಅವರು&lt;br /&gt;ಅವರು ನಿಮ್ಮ ಜತೆಗೆ ಇರುವುದಾದರೂ &lt;br /&gt;ಅವರು ನಿಮಗೆ ಸೇರಿದವರಲ್ಲ.&lt;br /&gt;&lt;br /&gt;ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು&lt;br /&gt;ಆದರೆ ಆಲೋಚನೆಗಳನಲ್ಲ, ಅವರಂತಿರಲು &lt;br /&gt;ನೀವು ಪ್ರಯತ್ನಿಸಬಹುದು: ಆದರೆ,&lt;br /&gt;ಅವರನ್ನು ನಿಮ್ಮಂತೆ ನೋಡದಿರಿ,&lt;br /&gt;ಜೀವನ ಹಿಮ್ಮುಖವಾಗಿ ಹರಿಯದಿರಲಿ. &lt;br /&gt;&lt;br /&gt;(ಪದ್ಯಗಳನ್ನು ಒದಗಿಸಿದ ಚಂದ್ರಕಾಂತ ಮೇಡಮ್ ಗೆ ಧನ್ಯವಾದಗಳು)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-150028330796542163?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/150028330796542163/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/04/blog-post.html#comment-form' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/150028330796542163'/><link rel='self' type='application/atom+xml' href='http://www.blogger.com/feeds/4527995432766899913/posts/default/150028330796542163'/><link rel='alternate' type='text/html' href='http://muttumani.blogspot.com/2009/04/blog-post.html' title='ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ...'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>7</thr:total></entry><entry><id>tag:blogger.com,1999:blog-4527995432766899913.post-2435146863063047664</id><published>2009-03-02T19:22:00.002+05:30</published><updated>2009-03-02T20:06:15.023+05:30</updated><title type='text'>ನನ್ನ ಉತ್ತರ!</title><content type='html'>&lt;strong&gt;ಕಥೆಯು ಅಸ್ಪಷ್ಟ, &lt;br /&gt;ಎಂಬುದೀಗ ಸ್ಪಷ್ಟ!&lt;br /&gt;&lt;br /&gt;ಉತ್ತರವು ಬಹಳಾನೆ ಉದ್ದ ಬೆಳೆಯಿತು,&lt;br /&gt;ವಾರೆಆಲೋಚನೆಯೊಂದು ಹೊಳೆಯಿತು&lt;br /&gt;&lt;br /&gt;ಇದೇ ಒಂದು ಪೋಸ್ಟಾದರೆ ಹೇಗೆ? &lt;br /&gt;ಹೇಳಿಬಿಡಬಹುದಲ್ಲ ನಾನಂದುಕೊಂಡದ್ದನ್ನೆಲ್ಲಾ ಹಾಗೆ,&lt;br /&gt;&lt;br /&gt;ನೋಡಿ, ಇದೂ ಒಂದು ಪೋಸ್ಟು,&lt;br /&gt;ಇದಕ್ಕೂ ದಯಪಾಲಿಸಿ ನಿಮ್ಮ ಕ್ರಿಟಿಕ್ಕು ಕಮೆಂಟು&lt;/strong&gt;&lt;br /&gt;&lt;br /&gt;&lt;br /&gt;@ ಚಂದ್ರಕಾಂತ &lt;br /&gt;ಉತ್ತರ ಕೊಡಲು ತಡಮಾಡಿದ್ದಕ್ಕೆ ಕ್ಷಮೆಯಿರಲಿ. ಕೆಲಸ ಹೆಚ್ಚೆನಿಸುವಷ್ಟು ಜಾಸ್ತಿಯಾಗಿತ್ತು! ನಿನ್ನೆ ನಿಮ್ಮ ಬ್ಲಾಗಿನಲ್ಲಿ ಬರೆದು ಇಲ್ಲಿಗೆ ಬರುವಷ್ಟರಲ್ಲಿ ಸಿಸ್ಟಮ್ ಕೈಕೊಟ್ಟುಬಿಟ್ಟಿತು!&lt;br /&gt;&lt;br /&gt;ಮತ್ತು ಸುಧೇಶ್,&lt;br /&gt;&lt;br /&gt;ನಿಮ್ಮಿಬ್ಬರ ಕ್ರಿಟಿಕ್ಸ್ ನನಗೆ ಬಹಳಷ್ಟು ತಿಳುವಳಿಕೆ ನೀಡಿವೆ, ಕಥೆ ಬರೆಯುವ ವಿಷಯದಲ್ಲಿ.  &lt;br /&gt;&lt;br /&gt;ಇನ್ನು ತಡಮಾಡದೆ ನನ್ನ ಕಥೆಯ ಹಿಂದಿನ ಕಥೆಯನ್ನ ಹೇಳಿಬಿಡುತ್ತೇನೆ...&lt;br /&gt;&lt;br /&gt;ಈ ಡಿಸ್ಲೆಕ್ಸಿಯ ವಿಷಯದ ಬಗೆಗೆ ತುಂಬಾ ಚರ್ಚೆ ನಡೆಯುತ್ತಿದ್ದಾಗ, ನಾನೂ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಯಿತು. ಅದರಿಂದ ತಿಳಿದ ಕೆಲವು ವಿಷಯಗಳು ಹೀಗಿವೆ:&lt;br /&gt;&lt;br /&gt;೧. ಇಂಥದೊಂದು ಗುಣವು ಖಾಯಿಲೆಯೇ ಅಲ್ಲವೇ ಎಂಬುದು ಮೂಲ ಪ್ರಶ್ನೆ (ನನಗೆ!).&lt;br /&gt;೨. ಈ ಗುಣವು ಹಿಂದಿನಿಂದಲೂ  ಮನುಷ್ಯರಲ್ಲಿ ಕಾಣುವುದನ್ನು ನಾವು ಗಮನಿಸಬಹುದು. &lt;br /&gt;೩. ಕೆಲ ’ಅತಿ ಬುದ್ಧಿವಂತರು’, ಅಂದರೆ ಐನ್ ಸ್ಟೈನ್ ಮುಂತಾದವರು ಹೀಗಿದ್ದರು ಎಂದರೆ, ಸಾಮಾನ್ಯರಿಗೆ ಅದು ಇರಲಿಲ್ಲವೆಂದಲ್ಲ.&lt;br /&gt;೪. ಈಚೆಗೆ, ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳುವ ಸಲುವಾಗಿ, ದೊಡ್ದ ಹುದ್ದೆಯಲ್ಲಿರುವವರೊಬ್ಬರು ಈ ಪರೀಕ್ಷೆ ತೆಗೆದುಕೊಂಡಾಗ ’ನಿಮಗೆ ಡಿಸ್ಲೆಕ್ಸಿಯಾ ಇದೆ, ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಉತ್ತರ ಬಂತು! &lt;br /&gt;೫. ಭಾರತದಂಥ ದೇಶದಲ್ಲಿ ಒಂದು ತರಗತಿಯನ್ನು ನೀವು ತೆಗೆದುಕೊಂಡರೆ ಸುಮಾರು ಅರ್ಧದಷ್ಟು ಮಕ್ಕಳು, ಓದಲು ಬರೆಯಲು ಕಷ್ಟಪಡುವುದನ್ನು ನೀವು ನೋಡಬಹುದು(ಅರ್ಧಕ್ಕಿಂತ ಕೊಂಚ ಕಡಿಮೆ ಎನಿಸುತ್ತದೆ.)ಅದರರ್ಥ ಅವರು ಹೇಳುವುದನ್ನು ಗ್ರಹಿಸಿಲ್ಲ ಎಂದಲ್ಲ.&lt;br /&gt;೬. ನಾನು ಭೇಟಿಮಾಡಿದ ಒಬ್ಬ ಮನೋವೈದ್ಯರ ಪ್ರಕಾರ, ಭಾರತದಂತಹ ದೇಶದಲ್ಲಿ ಈ ಗುಣ ಕೊಡುವ ತೊಂದರೆಗಿಂತ ಅದರ ಅಬ್ಬರವೇ ಹೆಚ್ಚು ತೊಂದರೆ ಮಾಡುತ್ತದೆ. ಇದಕ್ಕೆ ’ಏಡ್ಸ್’ ಅತ್ಯಂತ ಸೂಕ್ತ ಉದಾಹರಣೆ. (ನನಗೆ ಖಾಯಿಲೆ ಅನ್ನುವುದಕ್ಕಿಂತ ಗುಣ ಪದವೇ ಸೂಕ್ತವೆನಿಸುತ್ತದೆ)&lt;br /&gt;೭. ಇದೆಲ್ಲಕ್ಕಿಂತ ಮುಖ್ಯವಾಗಿ, ಚೆನ್ನಾಗಿ ಓದುವ ಬರೆಯುವ ಮಕ್ಕಳು, ಗ್ರಹಣ ಶಕ್ತಿ ಚೆನ್ನಾಗಿರುವವರೇ ಆಗಿರಬೇಕೆಂದಿಲ್ಲ. ಪರೀಕ್ಷೆಯನ್ನು ಹೇಗೆ ಗೆಲ್ಲಬೇಕೆಂಬ ರೀತಿ ಅವರಿಗೆ ಗೊತ್ತಿದ್ದರೆ ಸಾಕು. ಉದಾಹರಣೆಗೆ, ಮುಖ್ಯ ಪ್ರಶ್ನೆಗಳನ್ನು ಓದಿಕೊಳ್ಳುವುದು, ಅರ್ಥವಾಗದಿದ್ದರೂ ರಟ್ ಮಾಡಿ ಬರೆಯುವುದು, ಹೀಗೆ. &lt;br /&gt;   &lt;br /&gt;ಚಂದ್ರಕಾಂತರವರು ಕೇಳಿರುವ ಪ್ರಶ್ನೆಗೆ ಉತ್ತರ ಇಲ್ಲಿದೆ - ನನ್ನ ಪ್ರಕಾರ ರಾಜರಾಮನಿಗೆ ಓದಲು ಅಮ್ಮನಿಂದ ಯಾವ ರೀತಿಯ ಒತ್ತಾಯವಿರಲಿಲ್ಲ. ಆದರೆ, ’ಅಪ್ಪ ಏನಾದರು ಹೇಳಿಕೊಂಡು ಹೋಗಲಿ’, ಎನ್ನುವ ಮೊಂಡು ಹಠ, ಅವನನ್ನು ರಕ್ಷಿಸಿತು. ಯಾರನ್ನೂ ಮೆಚ್ಚಿಸುವ ಹಂಗಿಲ್ಲದೇ ಇರುವುದೂ ಅವನಿಗೆ ಇದರಿಂದ ಬಂದಿತು. ಮೊಂಡನೇ ನನಗಿಲ್ಲಿ ನಾಯಕ, ಜವಾಬ್ದಾರಿಯ ಅರಿವಾದ ಮೇಲೆ ನಮಗೆ ಕಾಣುವ ರಾಜಾರಾಂ ಬೇರೆ. &lt;br /&gt;&lt;br /&gt;ಇನ್ನು, ಸಾಗರ ಬದಲಾಗುವ ವಿಷಯ, ಅದು ಕಥೆ ಸಾಗುವಾಗ ಹಾಗೆ ತಲೆಗೆ ಬಂದದ್ದು. ಅದರ ಸರಿ ತಪ್ಪುಗಳನ್ನು ಈಗ ನಾನೇ ಪರೀಕ್ಷೆ ಮಾಡುತ್ತಿದ್ದೇನೆ!&lt;br /&gt;&lt;br /&gt;ಒಟ್ಟಾರೆ ನನ್ನ ಗ್ರಹಿಕೆ ಇದ್ದದ್ದು ಇಷ್ಟೇ - ಮಕ್ಕಳು ಏನಾದರೂ ಮಾಡಿಕೊಳ್ಳಲಿ, ಅವರು ಜೀವನದಲ್ಲಿ ಗೆಲ್ಲಬೇಕಾದರೆ ಅವರಿಗೆ ಬೇಕಾದ್ದು ಆತ್ಮವಿಶ್ವಾಸ ಮತ್ತು ನಿರ್ವಂಚನೆಯ ಸಪೋರ್ಟ್ (ನನ್ನ ಮಗ ತಪ್ಪು ಮಾಡಿದನೋ ಇಲ್ಲವೋ ಆಮೇಲಿರಲಿ, ಮೊದಲು ಅವನು ಊಟ ಮಾಡಲಿ ಎನ್ನುವ ತಾಯಿಯ ರೀತಿ). ಅದನ್ನೇ ಇಲ್ಲಿ ನಾನು ಹೇಳಹೊರಟಿದ್ದು ಮತ್ತು ಅದಕ್ಕೇ ನಾನು ಸುಧಾ ಆಸ್ಪತ್ರೆಗೆ ಹೋಗದೇ ನಿಲ್ಲುತ್ತಾಳೆ ಎಂದು ಅಂತ್ಯ ಮಾಡಿದ್ದು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-2435146863063047664?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/2435146863063047664/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/03/blog-post.html#comment-form' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/2435146863063047664'/><link rel='self' type='application/atom+xml' href='http://www.blogger.com/feeds/4527995432766899913/posts/default/2435146863063047664'/><link rel='alternate' type='text/html' href='http://muttumani.blogspot.com/2009/03/blog-post.html' title='ನನ್ನ ಉತ್ತರ!'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>7</thr:total></entry><entry><id>tag:blogger.com,1999:blog-4527995432766899913.post-438268300561886560</id><published>2009-02-12T22:34:00.002+05:30</published><updated>2009-02-14T12:29:56.802+05:30</updated><category scheme='http://www.blogger.com/atom/ns#' term='ಡಿಸ್ಲೆಕ್ಸಿಯಾ'/><category scheme='http://www.blogger.com/atom/ns#' term='ಕುಟುಂಬ'/><category scheme='http://www.blogger.com/atom/ns#' term='ಮಕ್ಕಳು'/><category scheme='http://www.blogger.com/atom/ns#' term='ಮನಸ್ಸು'/><title type='text'>ಸಾಗರ</title><content type='html'>ಪ್ರಪಂಚ ಇನ್ನು ಮುಂದಕ್ಕೆ ಹೋಗುವುದೇ ಇಲ್ಲವೇನೋ ಎನ್ನುವ ಹಾಗೆ, ದಿವಾನದ ಮೇಲೆ ಯೋಚಿಸುತ್ತಾ ಕುಳಿತಿದ್ದಳು ಸುಧಾ. ಅವಳ ಮಗನ ಭವಿಷ್ಯದ ಚಿಂತೆ ತಲೆಯ ತುಂಬಾ ತುಂಬಿಕೊಂಡುಬಿಟ್ಟಿತ್ತು. ಇವತ್ತು ಬೆಳಿಗ್ಗೆ ತಾನೆ ಮಗ ಸಾಗರನ ಶಾಲೆಯಲ್ಲಿ ಮಾರ್ಕ್ಸ್ ಕಾರ್ಡ್ ಕೊಟ್ಟು ಕಳಿಸಿದ್ದರು. ಗಣಿತ ವಿಜ್ಞಾನದಲ್ಲಿ ಫೇಲು. ಹತ್ತನೇ ತರಗತಿ ಪರೀಕ್ಷೆ ಹತ್ತಿರ ಹತ್ತಿರ ಬರುತ್ತಿದ್ದಂತೆ ಫೇಲಾಗುವುದು ಜಾಸ್ತಿ ಆಗ್ತಿದೆ! ಮಿಡ್ ಟರ್ಮ್ ತಾನೆ ಎಂದು ಸಮಾಧಾನ ಮಾಡಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳ ತಲೆಯಲ್ಲಿ ಹೊರಡುತ್ತಿದ್ದ ನೂರೆಂಟು ಯೋಚನೆಗಳ ನಡುವೆ ದಾರಿ ಮಾಡಿಕೊಂಡೋ ಅನ್ನುವ ಹಾಗೆ, ಕಣ್ಣ ಅಂಚಿನಿಂದ ಸಣ್ಣಗೆ ನೀರು ಸುರಿಯುತ್ತಿತ್ತು. ಆ ಕಣ್ಣ ಹನಿಯನ್ನು ತಡೆಯುತ್ತೇನೆ ಎನ್ನುವ ಹಾಗೆ ಇವಳು, ನಿಧಾನವಾಗಿ ರೆಪ್ಪೆಯನ್ನು ಮುಚ್ಚಿದಳು. &lt;br /&gt;&lt;br /&gt;                                      * * * &lt;br /&gt;&lt;br /&gt;ಮೊನ್ನೆ ತಾನೆ ಪೇಪರಿನಲ್ಲಿ ನ್ಯೂಸ್ ಬಂದಿದೆ. ಕೆಲವೊಬ್ಬ ಮಕ್ಕಳಿಗೆ ಹುಟ್ಟಿನಿಂದಲೇ ಓದು ಬರಹ ತಲೆಗೆ ಹತ್ತುವುದಿಲ್ಲವಂತೆ. ಅವರು ಬೇರೆ ಮಕ್ಕಳ ಹಾಗೆ ಇರುವುದು ಸಾಧ್ಯವಿಲ್ಲವಂತೆ, ಕೆಲವರಿಗೆ ಅಕ್ಷರಗಳು ಸರಿಯಾಗಿ ಕಾಣಿಸದಿದ್ದರೆ, ಮತ್ತೆ ಕೆಲವರಿಗೆ ಚಿತ್ರಗಳನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಇವರ ಮೆದುಳಿನಲ್ಲಿ ತೊಂದರೆಯಿರುತ್ತದೆಯಂತೆ. ಡಿಸ್ಲೆಕ್ಸಿಯಾ, ಡಿಸ್ಗ್ರಾಫಿಯಾ ಹೀಗೆ ಏನೇನೋ...&lt;br /&gt;&lt;br /&gt;ಆಫೀಸಿನಲ್ಲಿ ಕುಳಿತು ಯೋಚಿಸುತ್ತಿರುವಾಗ, ಪಕ್ಕದ ಸ್ಕ್ವಾಯರ್ನಲ್ಲಿ ಕೂತ ಪಂಕಜ ಸಲಹೆಕೊಡುತ್ತಾಳೆ  "ಇದಕ್ಕೆಲ್ಲ, ಈಗ ಯೋಚಿಸುವ ಅಗತ್ಯವಿಲ್ಲ. ಸೈಕಾಲಜಿಸ್ಟರು ಪರಿಹಾರ ಕೊಡ್ತಾರೆ. ಮಗುವನ್ನು ಕರೆದುಕೊಂಡು ಅವರ ಹತ್ರ ಹೋದರೆ ಡಯ್ಗ್ನೋಸ್ ಮಾಡಿ ಟ್ರೀಟ್ಮೆಂಟ್ ಮಾಡ್ತಾರೆ" ಅವಳು ಅಷ್ಟೇ ಹೇಳಿದ್ದರೆ ಸುಧಾಗೆ ಸ್ವಲ್ಪ ಸಮಾಧಾನವಾಗುತ್ತಿತ್ತೋ ಏನೋ? ಅವಳು ಮುಂದುವರಿದು, "ನೀನು ಹೀಗೆ ಯೋಚಿಸುವುದರ ಬದಲು ಮಗುವನ್ನು ಆದಷ್ಟು ಬೇಗ ಡಾಕ್ಟರರ ಬಳಿಗೆ ಕರೆದುಕೊಂಡು ಹೋಗುವುದು ಒಳ್ಳೇದು" ಎನ್ನುತ್ತಾಳೆ. ಈ ಮಾತುಗಳಂತೂ ಅವಳ ಮನಸ್ಸಿನ ದುಗುಡವನ್ನು ಮತ್ತೂ ಹೆಚ್ಚಿಸುತ್ತದೆ. &lt;br /&gt;&lt;br /&gt;ಸಾಗರನನ್ನು ಡಾಕ್ಟರ್ ಶಾಪಿಗೆ ಹೋಗುವ ಬಾ ಎಂದಾಗ ಅಮ್ಮನಿಗೆ ಹುಷಾರಿಲ್ಲವೇನೋ ಎಂದೇ ತಿಳಿಯುತ್ತಾನೆ. ಡಾಕ್ಟರು ಇವನನ್ನೇ ಪ್ರಶ್ನೆ ಕೇಳಲು ಶುರುಮಾಡುತ್ತಾರೆ. ಇಂಗ್ಲೀಷ್ ಅಕ್ಷರಗಳನ್ನು ಓದಲು ಹೇಳುತ್ತಾರೆ. ಚಿತ್ರಗಳನ್ನು ಬರೆದು ಹಾಗೆಯೇ ಬರೆಯಲು ಹೇಳುತ್ತಾರೆ. ಮತ್ತೆ, ಒಬ್ಬನನ್ನೇ ಬೇರೊಂದು ರೂಮಿಗೆ ಕರೆದುಕೊಂಡು ಹೋಗಿ ಮಾತನಾಡುತ್ತಾರೆ. ತನ್ನ ಮಾರ್ಕ್ಸ್ ಕಾರ್ಡಿಗಾಗಿಯೇ ಇವೆಲ್ಲಾ ತಾಲೀಮು ಎಂದು ತಿಳಿದುಕೊಳ್ಳಲು ಅವನಿಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಅಮ್ಮ ಈ ರೀತಿ ಮಾಡಿದ್ದು ಅವನಿಗೆ ಕೋಪ ಬರಿಸುತ್ತದೆ, ಸ್ವಲ್ಪ ಬೇಸರವೂ ಆಗುತ್ತದೆ. ಆದರೆ, ಅದನ್ನು ಅಮ್ಮನ ಮುಂದೆ ತೋರಿಸಿಕೊಳ್ಳಲಿಲ್ಲ. ತನ್ನ ಮನಸನ್ನು ಬಚ್ಚಿಟ್ಟುಕೊಳ್ಳುವಷ್ಟು ದೊಡ್ಡವನಾಗಿ ಬೆಳೆದುಬಿಟ್ಟಿದ್ದಾನೆ?&lt;br /&gt;&lt;br /&gt;ಮನೆಗೆ ಬಂದವನೇ ತನ್ನಷ್ಟಕ್ಕೆ ತಾನು ರೂಮಿನಲ್ಲಿ ಕೂರುತ್ತಾನೆ. ಅವನಾಯಿತು ಅವನ ಪುಸ್ತಕಗಳಾಯಿತು. ಸಂಜೆ ಅಪ್ಪ ರಾಜೀವ ಎಂದಿನಂತೆ ಮನೆಗೆ ಬರುತ್ತಾನೆ. ಮನೆಯಲ್ಲಿ ಏನೋ ಒಂದು ಬಿಗಿಯಾದ ವಾತಾವರಣವಿದೆ. ಸಾಗರ ತನ್ನಷ್ಟಕ್ಕೆ ತಾನು ಕೂತಿದ್ದಾನೆ. ಸಾಗರನ ಈ ರೀತಿ ನೋಡಿ, ಸುಧಾಗೆ ತಾನು ಮಾಡಿದ್ದು ಸರಿಯೋ ತಪ್ಪೋ ಎಂಬ ಆಲೋಚನೆಯೂ ಬಂದು ಹೋಗುತ್ತದೆ. ರಾಜೀವನಿಗೋ ಏನೂ ಅರ್ಥವಾಗದ ಸ್ಥಿತಿ. ವಿಷಯ ತಿಳಿದ ಮೇಲೆ ಮಗನನ್ನು ಪ್ರೀತಿಯಿಂದ ಮಾತನಾಡಿಸಿ ಅವನ ಕೋಪವನ್ನು ಕಡಿಮೆ ಮಾಡಿದರಾಯಿತು ಎಂದು ಯೋಚಿಸುತ್ತಾನೆ. "ಏನ್ಮಾಡ್ತಿದ್ದೀ ಸಾಗರ?", ಅವರು ಅವನನ್ನು ಆ ರೀತಿ ಎಂದೂ ಮಾತನಾಡಿಸಿದ್ದೇ ಇಲ್ಲವೇನೋ? ಸಾಗರನ ಉತ್ತರ ಇನ್ನೂ ಬೆಚ್ಚಿಬೀಳಿಸುವ ಹಾಗಿರುತ್ತದೆ - "ಏನಿಲ್ಲಪ್ಪ, ನನ್ನ ಕೆಲಸ ನಾನು ಮಾಡ್ತಿದ್ದೀನಿ, ನಿಮ್ಮ ಕೆಲಸ ಹೇಗೆ ನಡೀತಿದೆಯಪ್ಪಾ?". ಮಗ ಇಷ್ಟು ದೊಡ್ಡವನು ಯಾವಾಗ ಆದ ಎಂದು ರಾಜೀವನಿಗೆ ತಿಳಿಯದೆ ಹೋಗುತ್ತದೆ. ಮಾತು ಮುಂದುವರಿಸಲಾಗದೆ, ಅಲ್ಲಿಂದ ಎದ್ದು ಹೊರಡುತ್ತಾನೆ. &lt;br /&gt;&lt;br /&gt;ಸುಧಾಳ ದ್ವಂದ್ವ ಕೇಳಿ ರಾಜೀವನಿಗೆ ಒಂದು ರೀತಿ ನಗೆಯೇ ಬಂದುಬಿಡುತ್ತದೆ. "ಅವನು ಎಷ್ಟು ದೊಡ್ಡವನಾಗಿದ್ದಾನೆ ಎಂದು ನಿನಗೆ ಗೊತ್ತಿಲ್ಲ. ಹೀಗೇ ಅವನನ್ನು ಆಗ್ಗಾಗ್ಗೆ ಡಾಕ್ಟರ ಬಳಿ ಕರೆದುಕೊಂಡು ಹೋಗುತ್ತಿರು". &lt;br /&gt;&lt;br /&gt;ಸಾಗರನ ಜೀವನ ದಿನೇ ದಿನೇ ಬದಲಾಗುತ್ತದೆ. ಅವನು ಹೆಚ್ಚು ಹೆಚ್ಚು ಗಂಭೀರವಾಗುತ್ತಾನೆ. ಚಿಕ್ಕ ಮಕ್ಕಳ ಹಾಗೆ ಆಟವಾಡುವುದೂ ಈಗ ಅವನಿಗೆ ರುಚಿಸುವುದಿಲ್ಲ. ಅಪ್ಪ ಅಮ್ಮನ ಬಳಿ ಒಂದು ರೀತಿಯ ಗೌರವದಿಂದ ಮಾತನಾಡುತ್ತಾನೆ. ಆದರೆ, ಇದು ಮನೆಯ ಹಿರಿಯರೊಡನೆ ಮಾತನಾಡುವ ರೀತಿಯಲ್ಲ, ಗೊತ್ತಿಲ್ಲದ ಅತಿಥಿಗಳು ಏನು ತಿಳಿದುಕೊಳ್ಳುತ್ತಾರೋ ಎನ್ನುವ ಭಯದಿಂದ ಕೂಡಿರುವ ಮಾತಿನ ಹಾಗೆ. ಅಷ್ಟೇ ಅಲ್ಲ, ಅವನ ಮಾರ್ಕ್ಸ್ ಕಾರ್ಡ್ ಕೂಡ ಹೆತ್ತವರಿಗೆ ಖುಷಿ ಕೊಡುವಷ್ಟು ಸುಧಾರಿಸಿಬಿಡುತ್ತದೆ. ರಾಜೀವನಿಗೆ ದಿನೇ ದಿನೇ ಸಂತೋಷವೇ ಆಗುತ್ತದೆ. ಮಗನ ಓದು, &lt;em&gt;ಸೆಲ್ಫ್ ಡಿಸಿಪ್ಲೀನ್&lt;/em&gt;, &lt;em&gt;ಎಕ್ಸ್ ಪೆಕ್ಟೇಷನ್ ರೀಚ್ &lt;/em&gt;ಮಾಡುವ  ರೀತಿ ಎಲ್ಲಾ ಅವನಿಗೆ ಸಮಾಧಾನ ತರುತ್ತದೆ. ಅವನ ಭವಿಷ್ಯದ ಚಿಂತೆ ಈಗ ದೂರವಾಗಿದೆ. ಸುಧಾಳಿಗೆ ಒಬ್ಬಳೇ ಇದ್ದಾಗ ಗೊಂದಲವಾದರೆ, ರಾಜೀವ ಮನೆಗೆ ಬರುತ್ತಲೆ ಸಮಸ್ಯೆ ನಿವಾರಣೆಯಾದಂತೆ ಕಾಣುತ್ತದೆ.&lt;br /&gt;&lt;br /&gt;ಈ ದಿನ ಸ್ಕೂಲಿನಲ್ಲಿ ಹೋಮ್ ವರ್ಕ್ ಏನೂ ಕೊಟ್ಟಿಲ್ಲ. ಸಾಗರನ ಸ್ನೇಹಿತರು ಅವನನ್ನು ಕರೆಯಲು ಬರುತ್ತಾರೆ. ಅವನು ನಯವಾಗಿ ಏನೋ ಕಾರಣ ಹೇಳುತ್ತಾನೆ. ಸುಧಾ ಮಧ್ಯೆ ಬಾಯಿ ಹಾಕುತ್ತಾಳೆ. ಅಮ್ಮನ ಬಲವಂತಕ್ಕೆ ಸಾಗರ ಆಚೆಗೆ ಹೊರಡುತ್ತಾನೆ. ಅವನು ಏನು ಮಾಡುತ್ತಾನೆಯೋ ಎಂಬ ಕೆಟ್ಟ ಕುತೂಹಲವೊಂದು ಸುಧಾಳನ್ನು ಕಾಡಲು ಶುರುಮಾಡುತ್ತದೆ. ಅವನ ಹಿಂದೆಯೇ ಹೊರಟು ಸ್ವಲ್ಪ ದೂರದಲ್ಲಿ ನಿಲ್ಲುತ್ತಾಳೆ. ಸಾಗರನೂ ತನ್ನ ಸ್ನೇಹಿತರನ್ನು ನಿಲ್ಲಿಸುತ್ತಾನೆ.&lt;br /&gt;&lt;br /&gt;"ಏ ನನ್ನ ಬಿಟ್ಟುಬಿಡಿ. ನೀವು ಬೇಕಾದ್ರೆ ಹೋಗಿ ಆಟ ಆಡಿಕೊಳ್ಳಿ". &lt;br /&gt;&lt;br /&gt;"ಏ ನೀನು ಆಟ ಆಡಲು ಬಂದು ಎಷ್ಟೊಂದು ದಿನ ಆಯ್ತು. ಯಾಕೋ ನೀನು ಬರೋದಿಲ್ಲ?" &lt;br /&gt;&lt;br /&gt;"ಏ ಈ ಆಟ ಆಡೋದೆಲ್ಲ ಸುಮ್ನೆ ವೇಷ್ಟು. ಇದೆಲ್ಲಾ ಅಪ್ಪ ಅಮ್ಮನಿಗೆ ಇಷ್ಟ ಇಲ್ಲ. ನಾವು ಜಾಸ್ತಿ ಮಾರ್ಕ್ಸು ತಗೊಳ್ಳದೆ ಇದ್ದರೆ, ಅವರು ನಮ್ಮನ್ನು ಆಸ್ಪತ್ರೆಗೆ ಕರಕೊಂಡು ಹೋಗ್ತಾರೆ. ಆ ಡಾಕ್ಟರು ಏನೇನೋ ಹೇಳ್ತಾರೆ ಗೊತ್ತಾ? ನನಗೆ ಭಯ ಆಗುತ್ತೆ. ಸಾಕು ಇನ್ನು ನನ್ನ ಬಿಟ್ಟಿಬಿಡಿ". &lt;br /&gt;&lt;br /&gt;ಸಾಗರ ಮಾತುಮುಗಿಸುವ ಮುಂಚೆಯೇ ಸುಧಾ ಅಳು ತಡೆಯಲಾರದೆ, ಮನೆಗೆ ಓಡಿ ಬಂದು ಕುಸಿಯುತ್ತಾಳೆ. &lt;br /&gt;&lt;br /&gt;ಸಾಗರ ಹಿಂದೆ ಬಂದವನು, ತನ್ನ ಪಾಡಿಗೆ ತಾನು ರೂಮಿನೊಳಕ್ಕೆ ಹೋಗುತ್ತಾನೆ. ಸುಧಾಳ ಎದೆ ಎಂದೂ ಇಲ್ಲದಂತೆ ಹೊಡೆದುಕೊಳ್ಳುತ್ತದೆ. ಈಗಲೇ ಈ ಕ್ಷಣವೇ ತನ್ನ ಪ್ರಾಣ ಹೊರಟು ಹೋಗಬಾರದೆ ಎನ್ನಿಸುತ್ತದೆ. ಅರೆ! ಹೊರಗೆ ಬಾಗಿಲು ಶಬ್ಧವಾಗುತ್ತದೆ. ತೆಗೆದೇ ಇದ್ದ ಬಾಗಿಲನ್ನು ಯಾರು ತಟ್ಟುವುದು? ಸುಧಾ ಒಮ್ಮೆಗೇ ತನ್ನ ಮನಸ್ಸನ್ನು ಸ್ಥಿಮಿತಕ್ಕೆ ತೆಗೆದುಕೊಂಡು ಹೊರಕ್ಕೆ ನಡೆಯುತ್ತಾಳೆ. &lt;br /&gt;&lt;br /&gt;ರಾಜಾರಾಂ ಬಾಗಿಲ ಬಳಿಯಲ್ಲಿ ನಗುತ್ತಾ ನಿಂತಿದ್ದಾನೆ. ಅವನು ರಾಗಿಣಿಯ ಕಡೆಯ ತಮ್ಮ, ಸುಮಾರು ಎಂಟು ವರ್ಷ ವ್ಯತ್ಯಾಸ ಇಬ್ಬರಿಗೂ. &lt;br /&gt;"ಏನೋ ಹೇಳದೇ ಕೇಳದೇ ಬಂದುಬಿಟ್ಟೆ?" &lt;br /&gt;&lt;br /&gt;"ಮತ್ತೆ ನಿನ್ನ ಪರ್ಮಿಷನ್ ಯಾರು ಕೇಳುತ್ತಾರೆ?" &lt;br /&gt;&lt;br /&gt;"ಬಾ ಒಳಗೆ" &lt;br /&gt;&lt;br /&gt;"ಮತ್ತೆ?"&lt;br /&gt;&lt;br /&gt;ರಾಜಾರಾಂ ಸ್ವಲ್ಪ ಬಿರುಸಿನಿಂದಲೇ ಒಳಕ್ಕೆ ನಡೆದ. ತುಂಬಾ ಖುಷಿಯಲ್ಲಿ ಇದ್ದ ಹಾಗೆ ಕಾಣುತ್ತಾನೆ ರಾಜಾರಾಂ. &lt;br /&gt;"ಏನು ಸಮಾಚಾರ?" &lt;br /&gt;&lt;br /&gt;"ಏನಿಲ್ಲ ಇಂಟರ್ವ್ಯೂ ಇತ್ತು" &lt;br /&gt;&lt;br /&gt;"ನಿನ್ನನ್ಯಾರೋ ಸೆಲೆಕ್ಟ್ ಮಾಡ್ದೋರು" &lt;br /&gt;&lt;br /&gt;"ಮತ್ತೆ, ತಗೋ ಸ್ವೀಟು" &lt;br /&gt;&lt;br /&gt;"ಕಂಗ್ರಾಟ್ಸ್" &lt;br /&gt;&lt;br /&gt;"ಸಾಗರ ಇದ್ದಾನ?" &lt;br /&gt;&lt;br /&gt;"ಇದ್ದಾನೆ"&lt;br /&gt;&lt;br /&gt;ಸುಧಾ ಸಾಗರನನ್ನು ತನ್ನ ಮಾವನನ್ನು ಮಾತನಾಡಿಸಲು ಕರೆಯುತ್ತಾಳೆ. ಸಾಗರ ಮತ್ತೆ ಅದೇ ಗಾಂಭೀರ್ಯದಿಂದ ಹೊರಗೆ ಬರುತ್ತಾನೆ. ಮಾವನ ಜೊತೆ ಮತ್ತೆ ಅದೇ ಸಲಿಗೆಯಿಲ್ಲದ, ಮರ್ಯಾದೆಯ ಮಾತು. ಮಾವನಿಗೂ ಸ್ವಲ್ಪ ಬದಲಾವಣೆ ಎನಿಸಿದರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಅದು ಅವನ ಜಾಯಮಾನದಲ್ಲೇ ಇಲ್ಲ. &lt;br /&gt;&lt;br /&gt;"ಅಕ್ಕ ಒಂದು ಇಂಟರೆಸ್ಟಿಂಗ್ ವಿಷಯ ಹೇಳ್ತೀನಿ ಕೇಳು. ಇವತ್ತು ಅಮ್ಮ ಯಾಕೋ ತುಂಬಾ ನೆನಪಿಗೆ ಬಂದುಬಿಟ್ಟಳು." &lt;br /&gt;&lt;br /&gt;"ಏನಾಯ್ತು?" &lt;br /&gt;&lt;br /&gt;"ಏನಿಲ್ಲ ಆ ಇಂಟರ್ವ್ಯೂ ಮಾಡ್ತಿದ್ದವ  ಒಳ್ಳೆ ತಲೆಕೆಟ್ಟ ಹುಲಿ ಹಾಗೆ ಆಡ್ತಿದ್ದ. ನನಗೆ ಏನನ್ನಿಸಿತು ಗೊತ್ತಾ? ಇವನು ಏನಾದರು ಅಂದುಕೊಳ್ಳಲಿ ನನಗೆ ಸರಿ ಅನ್ನಿಸಿದ್ದನ್ನು ನಾನು ಮಾಡುತ್ತೇನೆ."&lt;br /&gt;&lt;br /&gt;"ಅದಕ್ಕೆ ಅಮ್ಮ ನೆನಪಾದ್ರೆ?"&lt;br /&gt;&lt;br /&gt;"ಮತ್ತೆ, ನಾನು ಸಣ್ಣವನಾಗಿದ್ದಾಗ ಮಾಡುತ್ತಿದ್ದ ತರಲೆಗೆ, ತರುತ್ತಿದ್ದ ಮಾರ್ಕ್ಸಿಗೆ, ಅಥವಾ ತರದೇ ಇದ್ದ ಮಾರ್ಕ್ಸಿಗೆ ಎಷ್ಟು ಬೈತಿದ್ರೂ ಅಪ್ಪ. ಒಂಥರಾ ಇನ್ಫೀರಿಯಾರಿಟಿ ಅನ್ನಿಸ್ತಿತ್ತು."&lt;br /&gt;&lt;br /&gt;"ನೀನು ಸರಿಯಾಗಿ ಯಾವತ್ತಪ್ಪ ಓದಿದ್ದೀಯಾ?" &lt;br /&gt;&lt;br /&gt;" ಹಯ್ಯೋ, ಓದೋಕೆ ಆದ್ರೆ ತಾನೆ? ಪುಸ್ತಕ ನೋಡ್ತಾ ಇದ್ರೆ ಅಕ್ಷರಗಳೆಲ್ಲ ತಲೆಕೆಳಗಾದ ಹಾಗೆ ಕಾಣ್ತಿತ್ತು ಹ ಹ...  ಆದರೆ, ಅಮ್ಮ ನನಗೆ ಕೇರ್ ಮಾಡೋದು ನೋಡಿದ್ರೆ, ಒಂಥರಾ ಸ್ವಾಭಿಮಾನ ಬರ್ತಿತ್ತು. ಅಮ್ಮ ಹಾಗೆ ಮಾಡದೇ ಹೋಗಿದ್ದಿದ್ದರೆ ನಾನು ಇವತ್ತು ಇಲ್ಲಿರ್ತಿರಲಿಲ್ಲ ಬಿಡು. ಎಲ್ಲಾದರೂ ಸ್ಯಾಡಿಸ್ಟ್ ಆಗೋಗ್ತಿದ್ದೆ. ಹ ಹ ಹ . . . " ತನ್ನ ಮನಸ್ಸಿನ ಭಾವವನ್ನು ತಾನೇ ಮರೆಮಾಡಿಕೊಳ್ಳಲೇನೋ ಎಂಬಂತೆ ಬರುತ್ತದೆ ಆ ನಗು.&lt;br /&gt;&lt;br /&gt;"... ಕಡೆಯಲ್ಲಿ ಅವನು ಏನು ಹೇಳಿದ ಗೊತ್ತಾ?"&lt;br /&gt;&lt;br /&gt;"ಏನು ಹೇಳಿದ?"&lt;br /&gt;&lt;br /&gt;"ಯೂ ಆರ್ ಕ್ವಯ್ಟ್ ಕಾನ್ಫಿಂಡೆಟ್ ಅಂಡ್ ಕಲೆಕ್ಟಿವ್ ಅಂಡ್ ಯೂ ಟೇಕ್ ಇಂಡಿಪೆಂಡೆಂಟ್ ಡಿಸಿಷನ್ಸ್. ನಾನು ಹ ಹ ಹ"&lt;br /&gt;&lt;br /&gt;                                      * * *&lt;br /&gt;&lt;br /&gt;ಯಾವುದೋ ಪಾತಾಳದಿಂದ ದಢಕ್ಕನೆ ಎದ್ದು ಆಚೆಗೆ ಬಂದಂತೆ ಭಾಸವಾಯಿತು ಸುಧಾಳಿಗೆ. ಕಣ್ಣು ಬಿಡುತ್ತಿದ್ದಂತೆಯೇ, ತನಗೇ  ಅರಿಯದಂತೆ ಮುಖದ ಮೇಲೊಂದು ಸಣ್ಣನೆ ನಗೆ ಮೂಡಿತು. ಮನಸ್ಸು ಹಗುರವಾಯಿತು. ದಿವಾನದಿಂದ ಎದ್ದು ಹೊರಗೆ ನಡೆದಳು.  ಆಟವಾಡುತ್ತಿದ್ದ ಸಾಗರನನ್ನು ಕರೆದು, ಒಳಗೆ ಹಾಲು ಬಿಸಿ ಮಾಡಲು ಹೊರಟಳು. ಅವನು ದೊಡ್ಡವನಾದ ಮೇಲೆ ಏನಾಗುತ್ತಾನೋ ಅವನನ್ನೇ ಕೇಳಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕಿದಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-438268300561886560?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/438268300561886560/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/02/blog-post.html#comment-form' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/438268300561886560'/><link rel='self' type='application/atom+xml' href='http://www.blogger.com/feeds/4527995432766899913/posts/default/438268300561886560'/><link rel='alternate' type='text/html' href='http://muttumani.blogspot.com/2009/02/blog-post.html' title='ಸಾಗರ'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>7</thr:total></entry><entry><id>tag:blogger.com,1999:blog-4527995432766899913.post-7687004312325522606</id><published>2009-01-25T19:21:00.014+05:30</published><updated>2009-01-31T15:33:42.881+05:30</updated><title type='text'>ಮುಕ್ತ - ಮುಕ್ತ!</title><content type='html'>&lt;em&gt;ಭೂಮಿಕಾ ಸಂಸ್ಥೆಯವರು, ಆಸಕ್ತರನ್ನು ’ಸ್ಕ್ರೀನ್ ಟೆಸ್ಟಿಗೆ’ ಕರೆದ ಹಿನ್ನೆಲೆಯಲ್ಲಿ ಬರೆದದ್ದು...&lt;/em&gt;&lt;br /&gt;&lt;br /&gt;ನಾನು ಒಬ್ಬ ಸಾಮಾನ್ಯ ಮನುಷ್ಯ; ಹೆಸರು ವಸಂತ. ಪತ್ನೀ, ಪುತ್ರ ಸಮೇತರಾಗಿ ಬೆಂಗಳೂರಿನಲ್ಲಿ, ಒಂದು ಸಣ್ಣ ನೌಕರಿ ಹಿಡಿದು, ಬಾಡಿಗೆ ಮನೆಯಲ್ಲಿ ಸಂಸಾರ ಮಾಡುತ್ತಿದ್ದೇನೆ ಎಂದರೆ, ನನ್ನ ಪ್ರಪಂಚವೆಲ್ಲಾ ನಿಮ್ಮ ಕಣ್ಮುಂದೆ ಬರುತ್ತದೆಯಲ್ಲವೇ? ಇವೆಲ್ಲಾ ಅತ್ತಗಿರಲಿ.&lt;br /&gt;&lt;br /&gt;ಹಾಗೆ ನೋಡಿದರೆ ನಾನೂ ’ಮುಕ್ತ’ ಭಕ್ತನಾಗಿದ್ದೆ. ನಮ್ಮ ಮನೆಮಕ್ಕಳು, ಅತ್ತೆ ಮಾವ ಅಕ್ಕ ತಂಗಿಯರಿಗಿಂತ ಅರು, ಸ್ವಾಮೀಜಿ,ಸಿಎಸ್ಬಿ, ಇವರೇ ನಮ್ಮ ಕುಟುಂಬವಾಗಿಬಿಟ್ಟಿದ್ದರು. ನನ್ನ ಹೆಂಡತಿಗೆ ಬೆಳಗ್ಗಿನಿಂದಲೇ ಚಿಂತೆ, ಯಾರ್ಯಾರಿಗೆ ಎಷ್ಟು ಕಷ್ಟ ಬಂದುಬಿಡುತ್ತದೋ ಎಂದು. ರಾತ್ರಿಯಾದರೆ ಸ್ವಲ್ಪ ನಿಶ್ಚಿಂತೆ ಕಣ್ತುಂಬ ನೋಡಿ ಸಮಾಧಾನಪಡಬಹುದಲ್ಲ? ಒಂದು ಎಪಿಸೋಡಿನಲ್ಲಿ, ಒಂದು ಪಾತ್ರಾವಾದರೂ ಬರದೆ ಹೋಗಲಿ, ಅವರಿಗೆ ಬೀಳುತ್ತಿದ್ದ ಬೈಗುಳ ಅಷ್ಟಿಷ್ಟಲ್ಲ, ಆವತ್ತು ನನ್ನ ಹೊಟ್ಟೆಗೂ ತಣ್ಣೀರು ಬಟ್ಟೆ!&lt;br /&gt;&lt;br /&gt;ಇಷ್ಟೆಲ್ಲಾ ಆದ ಮೇಲೆಯೂ ನನ್ನ ಕರುಳು ಚುರುಕ್ ಅನ್ನದೇ ಇರುತ್ತದೆಯೇ? ಈ ಕಷ್ಟವನ್ನೆಲ್ಲಾ ನೋಡುವುದರಿಂದ ತಪ್ಪಿಸಿಕೊಳ್ಳಲು, ಓಟಿ ಮಾಡಿಕೊಂಡು ಒಂಭತ್ತೂವರೆ ಗಂಟೆಗೆ ಬರುವುದೆಂದುನಿರ್ಧರಿಸಿದೆ. ನನಗೆ ಕಥೆ ಗೊತ್ತಾಗುತ್ತಿಲ್ಲವಲ್ಲ ಅಂತ ಇವಳಿಗೆ ಸಂಕಟ ಶುರುವಾಯಿತು. ರಾತ್ರಿಯೆಲ್ಲಾ ಚಿತ್ರಕಥೆ -ಸಂಭಾಷಣೆಯೊಂದಿಗೆ ’ಇಮ್ಯಾಜಿನರಿ ಸೀರಿಯಲ್ಲು’! ’ಇದಕ್ಕಿಂತ ಅದೇ ವಾಸಿ’ ಎಂದು ಓಟಿ ಮಾಡುವುದನ್ನು ಬಿಟ್ಟುಬಿಟ್ಟೆ.&lt;br /&gt;&lt;br /&gt;ಒಂದು ವಾರ ಕೆಲಸದ ಮೇಲೆ ಎಂದು ದಿಲ್ಲಿಯಲ್ಲಿ ಇರಬೇಕಾಯಿತು. ನಾನು ಅಲ್ಲಿದ್ದಾಗಲೇ ’ಮುಕ್ತ’ ಮುಗಿಯಿತೆಂದು ಕೇಳಿ, ನನ್ನ ಹೆಂಡತಿಯ ಪಾಡು ನೆನೆಸಿಕೊಂಡು ದುಃಖಪಟ್ಟೆ, ಇನ್ನು ವಾಪಾಸಾದ ಮೇಲೆ ನನಗೆ ಬರುವ ಪಾಡನ್ನು ನೆನೆಸಿಕೊಂಡು ಅಳುವೇ ಬಂದು ಬಿಟ್ಟಿತು. &lt;br /&gt;&lt;br /&gt;ಒಂದು ವಾರ ಮುಗಿದೇ ಹೋಯಿತಾದ್ದರಿಂದ ಮನೆಗೆ ವಾಪಾಸು ಬರಲೇಬೇಕಾಯಿತು. ಏನಾಶ್ಚರ್ಯ? ನನ್ನ ಹೆಂಡತಿ ನನಗೇ ಕಾಯಿತ್ತಿರುವವಳ ಹಾಗೆ ಸಂಭ್ರಮಿಸಿದ್ದನು ನೋಡಿ ಬಾಯಿಂದ ಮಾತೇ ಹೊರಡಲಿಲ್ಲ. ಊಟ - ಉಪಚಾರವೆಲ್ಲಾ ಮುಗಿಯಿತು. ಇನ್ನೇನು ಮಲಗಬೇಕೆಂದು ಹೊರಡುವಷ್ಟರಲ್ಲಿ ಕಣ್ಣಿಗೆ ಬಿತ್ತು. ನಾನು ಕಾಲೇಜಿನಲ್ಲಿ ಡಂಬೋ ಆಗಿದ್ದಾಗ ಮಾಡಿದ ’ಕೋರ್ಟಿನಲ್ಲಿ ನಿಲ್ಲುವ ಗಾರ್ಡಿನ’ ಪಾರ್ಟಿನ ಫೋಟೊ ಟೇಬಲ್ ಮೇಲೆ ರಾರಾಜಿಸುತ್ತಿದೆ! ಏಕೋ? ಏನೋ? ಕೇಳಿ, ತಲೆ ಮೇಲೆ ಚಪ್ಪಡಿಕಲ್ಲು ಎಳೆದುಕೊಳ್ಳುವುದೇಕೆಂದು ಸುಮ್ಮನಾದೆ. &lt;br /&gt;&lt;br /&gt;ರೂಮಿಗೆ ಬಂದವಳೇ, ಫೋಟೋ ತೆಗೆದುಕೊಂಡು ಅಕ್ಕರೆಯಿಂದ ನೋಡುತ್ತಾ, ನಿಮಗೆ ಪಾರ್ಟು ಮಾಡೋದು ಬರುತ್ತಲ್ಲವೇ? ರಾಗಿಣಿ ರಾಗ ಎಳೆದಳು. ನನ್ನ ಸುತ್ತಲೂ ಯಾವುದೋ ಹೊಗೆ ಆಡುತ್ತಿದ್ದುದು ಗೊತ್ತಾಯಿತು. ಕಟ್ಟಿಕೊಂಡಿದ್ದು ಅಷ್ಟು ಸುಲಭವಾಗಿ ಬಿಟ್ಟೀತೆ? "ನಿಮಗೋಸ್ಕರ ಒಳ್ಳೇ ಚಾನ್ಸಿದೆ. ಈಗ ಆರಾಮಾಗಿ ಮಲಕ್ಕೊಳ್ಳೀ ಬೆಳಿಗ್ಗೆ ಹೇಳ್ತೀನಿ" ಎಂದು ಪಕ್ಕದಲ್ಲಿ ಪವಡಿಸಿದಳು. ನಾನು ರಾತ್ರಿಯೆಲ್ಲಾ ನಿದ್ದೆಗೆಟ್ಟೆ.&lt;br /&gt;&lt;br /&gt;ಬೆಳಿಗ್ಗೆ, ಇನ್ನೂ ಕಣ್ಣೇ ಬಿಟ್ಟಿರಲಿಲ್ಲ, ಆಗಲೇ ಮನೆಯಲ್ಲಿ ಗಿಜಿ-ಗಿಜಿ. "ಯಾವ ಕಡೆ ಸರಿಹೋಗುತ್ತೆ?... ಇಲ್ಲ... ಅವರು ಸರಿಯಾಗಿ ಕಾಣಬೇಕಲ್ಲಾ?... ಇಷ್ಟೇ ಜನ ಸಾಕ?... ಅವರೆಲ್ಲಾ ಸ್ವಲ್ಪ ಬೆಳ್ಳಗೆ ಇದಾರಲ್ಲ?..." ರಾಗಿಣಿಯ ಧ್ವನಿ? "ನೀವು ಯೋಚನೆ ಮಾಡಬೇಡಿ ಮ್ಯಾಡಮ್, ಒಂದಲ್ಲದಿದ್ದರೆ ನಾಲ್ಕು ಯಾಂಗಲ್ಲಲ್ಲಿ ತೆಗೆಯೋಣ, ಸೀನ್ ತೆಗೆಯೋ ಹೊತ್ತಿಗೆ ಜಾಸ್ತಿ ಜನ ಬರ್ತಾರೆ ಬಿಡಿ" ಇದ್ಯಾವ ಧ್ವನಿ ಎಂದು ಗ್ಗೊತ್ತಾಗಲಿಲ್ಲ. &lt;br /&gt;&lt;br /&gt;ಇದ್ದ ಹಾಗೆ ಹೊರಗೆ ಹೊರಟೆರೆ, ಸರಿಯಿರಲಿಕ್ಕಿಲ್ಲ ಎಂದು ಸ್ನಾನಕ್ಕೆ ಹೊರಟೆ. ಏನು ಮಾಯವೋ? ನಾನು ಸ್ನಾನ ಮುಗಿಸಿ ಬರುವಷ್ಟರಲ್ಲಿ ಹಾಸಿಗೆ ಮೇಲೆ ಒಂದು ಲಾಯರ್ ಡ್ರೆಸ್ಸು, ಒಂದು ಸ್ವಾಮೀಜಿ ವೇಷ, ಗಡ್ಡ, ಗುಂಗುರು ಕೂದುಲು... ತಲೆ ಎತ್ತುವಷ್ಟರಲ್ಲಿ ಇವಳು ಪ್ರತ್ಯಕ್ಷ. "ರೀ ನಾನು ನೆನ್ನೆ ಹೇಳಲಿಲ್ಲವಾ? ಸೀತಾರಾಮ್ ಅವರು ಹೊಸ ನಟರು ಬೇಕು, ಅಪ್ಲೈ ಮಾಡಿ ಅಂದಿದ್ದಾರೆ. ಮೂರು ಯಾಂಗಲ್ಲಲ್ಲಿ ಫೋಟೋ ತೆಗೆದು ಕಳಿಸಬೇಕು. ನೀವು ಬೇಗ ರೆಡಿ ಆಗಿ ತಿಂಡಿ ತಿನ್ನಿ, ಇವತ್ತು ನೀವು ಎಲ್ಲೂ ಹೋಗ್ಬಾರ್ದು". ನಾನು ಮೈ ಒದ್ದೆಯಲ್ಲಿ ತಣ್ಣಗೆ ನಿಂತಿದ್ದೆ.&lt;br /&gt;&lt;br /&gt;ನನ್ನ ಅಭಿನಯ ಹಾವಭಾವಗಳನ್ನು ನೋಡಿದ ಮೇಲೆಯೇ, ಮೇಷ್ಟ್ರು ನನಗೆ ಯಾವ ಡೈಲಾಗೂ ಇಲ್ಲದ ’ಗಾರ್ಡ್’ ಪಾರ್ಟು ಕೊಟ್ಟಿದ್ದು ಎಂಬುದನ್ನು ಸಮಜಾಯಿಸಲು ಹೋಗಿ ಸೋತೆ. ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದೇನೆಂದೆ ಅವಳ ನಂಬಿಕೆ. ’ಒಂದು ನಿಮಿಷ ಇರಿ, ಎಂದು ಆಚೆ ಹೋದಳು. &lt;br /&gt;"ಇಷ್ಟು ಜನಕ್ಕೆ ಯಾವ ಸೀನು ಆಗುತ್ತೆ? ಅಜ್ಜಿ ತಾತ ಹೇಗಿದ್ರೂ ಇದ್ದಾರೆ, ನಂಜುಂಡನ ಮನೆ ಸೀನು ಮೊದಲು ಆಗೋಗ್ಲಿ" ಎಲ್ಲಾ ಇವಳೇ ಮಾತಾಡುತ್ತಿದ್ದಳು. ಈ ಸೀನಿನಲ್ಲಿ, ನನ್ನ ಹೆಂಡತಿ ನನಗೆ ನಾದಿನಿಯೊ ಎಂತದ್ದೊ ಆದಳು!&lt;br /&gt;&lt;br /&gt;ಸರಿ ನಾನು ಆ ಅಜ್ಜಿ ತಾತನ ಜೊತೆ ಕೂತು ಮಾತನಾಡಿ, ನಂಜುಂಡನ ಮನೆಯ ಸೀನು ಮುಗಿಸಿದೆ. ನೋಡುನೋಡುತ್ತಿದ್ದಂತೆಯೇ, ಮನೆ ಕೋರ್ಟ್ ಆಯಿತು. ಈ ಸಾರಿ ಇನ್ ಸ್ಪೆಕ್ಟರ್ ಲೇಟು. ನನ್ನೊಬ್ಬನನ್ನು ಬಿಟ್ಟು ಉಳಿದವರೆಲ್ಲಾ ಹರಟೆ ಹೊಡೆಯಲು ಶುರುಮಾಡಿದರು. ನನ್ನ ಇಂಗು ತಿಂದ ಮಂಗನ ಮುಖವನ್ನು ನೋಡಿಯೋ ಏನೋ, ಇವಳು ಅಡುಗೆ ಮನೆಗೆ ಕರೆದು, ಒಂದು ಚೌಕವಾದ ಚಾಪೆ ತೋರಿಸಿ, ಇಲ್ಲಿ ಕೂತಿರಿ ಆಮೇಲೆ ಬರುವಿರಂತೆ ಎಂದಳು. ನಾನು ಆ ಚಾಪೆಯ ಮೇಲೆ ಕೂತು ಹಾಗೆ ಗೋಡೆಗೆ ತಲೆ ಒರಗಿಸಿದೆ. ಅಲ್ಲೋ, ಭಕ್ಷ್ಯ- ಭೋಜನೆಗಳ ವಾಸನೆ. ನನಗೆ ಹೂ ಮಾರುವ, ಮೀನು ಮಾರುವ ಹೆಂಗಸರ ಕಥೆ ನೆನಪಾಗ ತೊಡಗಿತು. &lt;br /&gt;&lt;br /&gt;ಕಣ್ಣು ಬಿಟ್ಟು ನೋಡುವಷ್ಟರಲ್ಲಿ, ಎಲ್ಲರೂ ಬಾಳೆ ಎಲೆ ಊಟ ಜಡಿದು, ತಾಂಬೂಲ ಮೆಲ್ಲುತ್ತಿದ್ದಾರೆ. ಏನು ಜನ? ಎಷ್ಟು ಲಾಯರ್ರುಗಳು? ನನ್ನ ಹೆಂಡತಿ ಮಾತ್ರ ಅದೆಂಥದ್ದೋ ಸೀರೆ ಉಟ್ಟು... ಗುರುತೇ ಸಿಗಲ್ಲಿಲ್ಲ. ’ಎದ್ದಿರಾ? ಬನ್ನಿ. ನೀವು ಇನ್ನು ಯಾವಾಗ ಊಟ ಮಾಡುವುದು? ಇರಲಿ ಇದನ್ನ ತಿನ್ನಿ ಎಂದು, ಒಂದು ಸಣ್ಣ ತಿಂಡಿ ತಟ್ಟೆಯೊಂದನ್ನು ನನ್ನ ಮುಂದಕ್ಕಿಡಿದಳು. ಉಳಿದ್ದಿದ್ದ ಕೋಸಂಬರಿ, ಚೂರು ಚಿತ್ರಾನ್ನ ಮಾತ್ರ ನನಗೆ. ಕೊಟ್ಟಿದ್ದನ್ನು ನುಂಗಿ ಬರುವಷ್ಟರಲ್ಲಿ, ಏನು ಕೋರ್ಟಿನಲ್ಲಿ ಕೇಸು ಶುರುವಾಗಿಬಿಟ್ಟಿದೆ? ನಾನು ಲಾಯರನ ವೇಷದಲ್ಲಿ ಕೈದಿಯ ಹಾಗೆ ಹೆದರುತ್ತಾ ಹೋಗಿ ನಿಂತೆ, ನನ್ನ ರಾಗಿಣಿ ಈ ಸೀನಿನಲ್ಲಿ ಕೈದಿ. &lt;br /&gt;&lt;br /&gt;ಆ ಜಡ್ಜ್ ತಾತಾಗೆ ಕೆಮ್ಮು ಬಂದು ಅರ್ಧ ಗಂಟೆ ನಿಲ್ಲಲೇ ಇಲ್ಲ. ಅಷ್ಟರಲ್ಲಿ, ಅಜ್ಜಿಗೆ ಮೈ ಕೈ ನೋವು, ’ಒಂದವರ್ ರೆಸ್ಟು’. ಎಲ್ಲರೂ ಅಲ್ಲಲ್ಲೇ ತೂಕಡಿಸ ತೊಡಗಿದರು, ನಾನು ಅಲ್ಲಿಯೇ ಇದ್ದ ಪೇಪರ್ ತೆಗೆದುಕೊಂಡು  ಕಣ್ಣಾಡಿಸತೊಡಗಿದೆ. ಮಧ್ಯಾಹ್ನ ಮೂರು ಗಂಟೆಗೆ ಮತ್ತೆ ಸೆಟ್ಟೇರಿತು. ಅಂತೂ ಕೋರ್ಟಿನ ಸೀನು ಕ್ಲಿಕ್ಕಿಸಿದ್ದಾಯಿತು. ಸ್ವಾಮೀಜಿ ಸೀನಿಗೆ ಬೇಕಾಗಿದ್ದು ನಾಲ್ಕು ಜನ ಮಾತ್ರ ಆದ್ದರಿಂದ ಎಲ್ಲರಿಗೂ ಒಂದೊಂದು ಗಾಂಧೀ ಫೋಟೋ(ಅಂದರೆ ನೂರು ರೂಪಾಯಿ ನೋಟು!) ಕೊಟ್ಟು ಕಳಿಸಿದಳು.&lt;br /&gt;&lt;br /&gt;"ಮೇಡಮ್, ಆ ಸೀನು ಮಬ್ಬಾಗಿದ್ದರೆ ಸ್ವಲ್ಪ ಚೆನ್ನಾಗಿರುತ್ತೆ, ಸಂಜೆ ತೆಗೆಯೋಣ ಅಲ್ಲವೇ?", ಈಗ ಮಲಗಬೇಕು ಅಂತ ಹೇಳೋದಕ್ಕೆ ಅವನದು ಇಷ್ಟು ತಾಲೀಮು. ನಾನೂ ಎಲ್ಲಿ ಜಾರಿಕೊಳ್ಳುತ್ತೇನೋ ಎಂದು ರಾಗಿಣಿ ಮನೆ ಸ್ವಚ್ಛಮಾಡಲು ನನ್ನನ್ನು ಎಳೆದಳು. ಸಂಜೆಯಾಗುತ್ತಲೇ, ’ಸ್ವಾಮೀಜಿಯಾಗಿ ನಾನು , ನನ್ನ ಪರಮಭಕ್ತೆಯಾಗಿ ಇವಳೂ, ನನ್ನ ಹಿಂದೆ ಇನ್ನಿಬ್ಬರೂ ಚಿಕ್ಕ ಸಂನ್ಯಾಸಿಗಳೂ’ ಎನ್ನುವೊಂದು ಸೀನು ತೆಗೆದ್ದದ್ದಾಯಿತು. ಮನೆಗೆ ಬಂದ ಮಕ್ಕಳಿಗೆ ಐಸ್ಕ್ರೀಮ್ ಕೊಡಿಸುತ್ತೇನೆಂದು ನಾನು ಹೊರಕ್ಕೆ ನೆಡೆದೆ.  ಇವಳು "ರೀ, ಇನ್ನು ನನ್ನಿಂದಾಗೋದಿಲ್ಲ, ಹೋಟೆಲಿಂದ ಏನಾದರೂ ತಂದುಬಿಡಿ"&lt;br /&gt;ಎಂದು ಮಂಚದ ಮೇಲೆ ಕುಸಿದುಬಿದ್ದಳು. &lt;br /&gt;&lt;br /&gt;                                                                                 * * * &lt;br /&gt;ಎಂದಿನಂತೆ ಆಫೀಸಿನಿಂದ ಬಂದ ನನಗೆ ಆಶ್ಶ್ಚರ್ಯ! ಒಳಗೊಳಗೇ ಸಂತೋಷವೂ ಆಯಿತು. ’ರೀ ನೇವು ಸೆಲೆಕ್ಟ್ ಆದಿರಿ. ನಾಳೆ ಸ್ಕ್ರೀನ್ ಟೆಸ್ಟಿಗೆ ಹೋಗಬೇಕು!’, ಇವಳಂತೂ ಭೂಮಿಯ ಮೇಲೆ ಇರಲಿಲ್ಲ.&lt;br /&gt;&lt;br /&gt;ಬೆಳಿಗ್ಗೆಯೇ ಇಬ್ಬರೂ ಮಕ್ಕಳನ್ನು ಶಾಲೆಗೆ ಸಾಗಹಾಕಿ ಸ್ಕ್ರೀನ್ ಟೆಸ್ಟಿಗೆ ಹೊರಟೆವು. ನನಗೋ ಹೆಮ್ಮೆಪಡಬೇಕೋ? ನಾಚಿಕೊಳ್ಳಬೇಕೋ? ತಪ್ಪಿಸಿಕೊಳ್ಳಬೇಕೋ? ಒಂದೂ ಗೊತ್ತಾಗಲಿಲ್ಲ. ಹೋಗಿ ಇಳಿದರೆ ಏನು ಜನ? ಮಕ್ಕಳನ್ನು ಅಪ್ಪ ಅಮ್ಮ ಸಿ.ಇ.ಟಿ.ಗೆ ರೆಡಿ ಮಾಡುವ ಹಾಗೆ ಮಾಡುತ್ತಿದ್ದಾರೆ. ಒಬ್ಬೊಬ್ಬರೂ, ಕೈಯಲ್ಲಿ ಒಂದು ಪೇಪರ್ ಇಟ್ಟುಕೊಂಡು, ಬಡಬಡಿಸುತ್ತಿದ್ದಾರೆ. ನೋಡಿ ದಂಗಾದೆ. ನನ್ನ ರಾಗಿಣಿ, ಮಾರು ದೂರ ನಿಂತು, ’ಹೋಗಿ ವಿಚಾರಿಸಿಕೊಂಡು ಬನ್ನಿ’ ಎಂದಳು.  &lt;br /&gt;&lt;br /&gt;ನಾನು ಹೋಗಿ ’ಸರ್, ವಸಂತ ಅಂತ ಅಪ್ಲಿಕೆಂಟು’ ಎಂದೆ. "ಹ್ಞಾ ಹ್ಞಾ ಕರ್ಕೊಂಡು ಬನ್ನಿ, ಕರ್ಕೊಂಡು ಬನ್ನಿ", ನನ್ನ ಹೆಂಡತಿ ಮಾರುದೂರ ನಿಂತಿದ್ದು ಇವನಿಗೆ ಹೇಗೆ ಗೊತ್ತಾಯಿತೋ ತಿಳಿಯಲಿಲ್ಲ. ಸರಿ, ಹೋಗಿ ಅವಳನ್ನು ಎಳಕೊಂಡು ಬಂದೆ. "ನೋಡಿ, ನಿಮ್ಮ ಫೋಟೋ ಇಟ್ಕೊಳ್ಳಿ. ಹೆಂಗಸರಿಗೆ ಅಲ್ಲಿ ಡೈಲಾಗ್ ಕೊಡ್ತಾರೆ. ಇಸ್ಕೊಳ್ಳಿ. ಸ್ವಲ್ಪ ಪ್ರಾಕ್ಟೀಸ್ ಮಾಡ್ಕೊಳ್ಳೀ, ಕರೀತಾರೆ!’. ಇಬ್ಬರೂ ಮುಖ ಮುಖ ನೋಡಿಕೊಂಡೆವು, ಹಿಂದೆಂದಾದರೂ ಹಾಗೆ ನೋಡಿಕೊಂಡಿದ್ದೇವೋ ಇಲ್ಲವೋ? ಫೋಟೋಗಳಲ್ಲಿ ನನ್ನ ಹೆಂಡತಿಯ ಮುಖಕ್ಕೆ ರೌಂಡ್ ಮಾರ್ಕ್ ಹಾಕಿ ಇಟ್ಟಿದ್ದರು. "ನಿಮ್ಮ ಹೆಸರು ವಸಂತ ಅಲ್ಲವಾ? ನಿಮ್ಮ ಹೆಸರು ಏನು ಸಾರ್?"   ಪ್ರಶ್ನೆ ಬಂದಾಗ, ಆ ಹೆಸರು ಇಟ್ಟವರ ಮೇಲೆ ಕೋಪ ಬರದೆ ಇರಲಿಲ್ಲ. &lt;br /&gt;&lt;br /&gt;ಅಂತೂ ನಾನು ’ಮುಕ್ತ’ನಾದೆ, ರಾಗಿಣಿ ಅವಾಕ್ಕಾದಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-7687004312325522606?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/7687004312325522606/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2009/01/blog-post.html#comment-form' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/7687004312325522606'/><link rel='self' type='application/atom+xml' href='http://www.blogger.com/feeds/4527995432766899913/posts/default/7687004312325522606'/><link rel='alternate' type='text/html' href='http://muttumani.blogspot.com/2009/01/blog-post.html' title='ಮುಕ್ತ - ಮುಕ್ತ!'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>4</thr:total></entry><entry><id>tag:blogger.com,1999:blog-4527995432766899913.post-4153194364288068453</id><published>2008-12-25T18:26:00.014+05:30</published><updated>2008-12-25T20:20:42.175+05:30</updated><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ದೇವಸ್ಥಾನ'/><category scheme='http://www.blogger.com/atom/ns#' term='ವೈಕುಂಠ ಏಕಾದಶಿ'/><title type='text'>’ಕ್ಯಾಮರಾ ದರ್ಶನ!’</title><content type='html'>ನಾನು ಚಿಕ್ಕವಳಿದ್ದಾಗ ಲೈನೆಂಬೋ ಕ್ಯೂನಲ್ಲಿ ನಿಂತು,ನೂಕು ನುಗ್ಗಲಿನಲ್ಲಿ ಸಿಕ್ಕಿ, ಬೆವರಿ ಸುಸ್ತಾಗಿ ಬಿದ್ದು, ಕಾಲುಳುಕಿ ಅವಸ್ಥೆ ಪಟ್ಟಾಗಿನಿಂದ ನಮ್ಮಮ್ಮ ನನ್ನನ್ನು ’ದೇವಸ್ಥಾನಕ್ಕೆ ಹೋಗು’ ಅಂತ ಬಲವಂತ ಮಾಡುವುದನ್ನು ಬಿಟ್ಟುಬಿಟ್ಟಿದ್ದರು. ಬಾಯಿತಪ್ಪಿ ಕನಸಿನಲ್ಲಿ ವೆಂಕಟರಮಣ ಬಂದಿದ್ದ ಎಂದು ಹೇಳಿದಾಗಿನಿಂದ, ಮುಂದಿನ ತಿಂಗಳು ಬರುತ್ತಿದ್ದ ವೈಕುಂಠ ಏಕಾದಶಿಯನ್ನೇ ಎದುರು ನೋಡಲು ಶುರು ಮಾಡಿದರು.&lt;br /&gt;&lt;br /&gt;ಆ ದಿನ ಬಂದದ್ದೇ ತಡ, ಬೆಳಿಗ್ಗೆಯೇ ’ದರ್ಶನ ಮಾಡ್ಕೊಂಡು ಬಾ’ ಎಂದು ಅಡುಗೆ ಮನೆಯಿಂದ ಆಜ್ಞೆ ಹೊರಡಿತು. ಹಾಲ್ ಟಿಕೆಟನ್ನು ಗಣೇಶನ ಹತ್ತಿರ, ಪೆನ್ ಬಾಕ್ಸನ್ನು ಸರಸ್ವತಿ ಹತ್ತಿರ ಇಟ್ಟು ಪೂಜೆ ಮಾಡಿಸಿಕೊಂಡು, ಅರಿಶಿನ ಕುಂಕುಮ ಮೆತ್ತಿಸಿಕೊಂಡ ಅವುಗಳನ್ನೂ, ಪ್ರಸಾದವನ್ನೂ, ತರುತ್ತಿದ್ದ ನನ್ನ ಸ್ನೇಹಿತೆಯರು ಇದ್ದಕ್ಕಿದ್ದ ಹಾಗೆ ನೆನಪಾಗಿಬಿಟ್ಟರು. ನಾನೂ ಹಾಗೆ ಮಾಡಬೇಕೆಂಬ ಆಸೆಯನ್ನು ತಾಳಲಾರದೆ, ಹಳೆಯದೊಂದು ಚಪ್ಪಲಿ ಏರಿಸಿ, ಒಂದೆರೆಡು ಕಾಯಿನ್ನುಗಳನ್ನು ದಕ್ಷಿಣೆಗೆ ಹಿಡಿದು, ದರಬರ ದೇವಸ್ಥಾನದ ಕಡೆಗೆ ನಡೆದೆ. ಇಂಥ ಮಹತ್ತರ ಕಾರ್ಯ ಕೈಗೊಳ್ಳಲು ಇನ್ನೂ ಒಂದು ಮುಖ್ಯ ಕಾರಣ ಇತ್ತು. ದೇವಸ್ಥಾನದಲ್ಲಿ ಈ ವರ್ಷ ಕ್ಯಾಮರ ಇಟ್ಟಿದ್ದಾರೆ, ಲೋಕಲ್ ಕೇಬಲ್ಲಿನಲ್ಲಿ ಲೈವ್ ಟೆಲಿಕಾಸ್ಟ್! ಅಂತೂ ವೈಕುಂಠ ಏಕಾದಶಿದಿನ ವೈಕುಂಠ ದ್ವಾರವನ್ನು ಹೊಕ್ಕಲು ವೆಂಕಠರಮಣ ನನ್ನನ್ನೂ ಪ್ರೇರೆಪಿಸಿದ್ದ!&lt;br /&gt;&lt;br /&gt;ನಾನು ದೇವಸ್ಥಾನದ ರೋಡಿಗೆ ನಡೆಯಲೇ ಬೇಕಾಗಲಿಲ್ಲ, ಕ್ಯೂ ಮೂರನೇ ರೋಡಿಗೆ ಬಂದು ಬಿಟ್ಟಿತ್ತು. ನಾನು ನಿಂತು ನಿಂತು ಮುಂದಕ್ಕೆ ಹೋಗಲು ಶುರುಮಾಡಿದೆ. ಇನ್ನೇನು ದೇವಸ್ಥಾನದ ರಾಜಗೋಪುರ ಕಾಣಿಸುತ್ತಿದೆ ಅಂದುಕೊಳ್ಳುವಷ್ಟರಲ್ಲಿ, ’ಮೈಸೂರು ಸಿಲ್ಕ್ಸ್ ಅಂಡ್ ಸ್ಯಾರೀಸ್’ ’ಕೋಲ್ಗೇಟ್ ನಿಮ್ಮ ಹಲ್ಲುಗಳಿಗೆ’ ಅಂದುಕೊಂಡು ಫಲಕಗಳು ರಾಜಗೋಪುರದ ಮೇಲೆ ರಾರಾಜಿಸುವುದನ್ನು ಕಂಡು ಒಂದು ನಿಮಿಷ ದಿಗ್ಭ್ರಮೆಗೊಂಡೆ. ಹಾ! ದಿಗ್ಭ್ರಮೆ ಪಟ್ಟುಕೊಳ್ಳುವುದಕ್ಕೆ ಸಮಯವೆಲ್ಲಿ? ನನ್ನ ಹಿಂದೆ ನಿಂತಿದ್ದ ದಢೂತಿ ಹೆಂಗಸೊಬ್ಬಳು ’ಜಾಗ ಆಗ್ಲಿಲ್ವಾ? ನಡಿಯಮ್ಮ ಮುಂದಕ್ಕೆ’ ಎಂದು ತಳ್ಳುತ್ತಲೇ ಎಚ್ಚರವಾಯಿತು. &lt;br /&gt;&lt;br /&gt;ಒಳಗೇ ಹೋಗುತ್ತಲೇ ಆಯಮ್ಮನಿಗೆ ತುಂಬಾ ಬೇಜಾರಾಗಿರಬೇಕು... ಕ್ಯಾಮರಾವನ್ನು ನೋಡಿದ ಕೂಡಲೇ ಹಿಂದಕ್ಕೆ ತಿರುಗಿ ಹುಳ್ಳಗೆ ನಕ್ಕು, ’ಹೆ... ಹೆ... ನೀವು ನಡೀರಿ ಮುಂದೆ’ ಎಂದು ತನ್ನ ಹಿಂದೆ ನಿಂತಿದ್ದವರಿಗೆ ಕೈ ತೋರಿಸಿದಳು. ಹಾಗೂ ಹೀಗೂ ಸಣ್ಣಗಿದ್ದ ಇಬ್ಬರು ಮೂವರು, ಹಗ್ಗಕ್ಕೂ ಆಯಮ್ಮನ ದೇಹಕ್ಕೂ ಇದ್ದ ಸಣ್ಣ ಗ್ಯಾಪಿನಲ್ಲಿ ತೂರಿಕೊಂಡು ಮುಂದಕ್ಕೆ ಹೋದರು. ಆಯಮ್ಮನ ಮೇಕಪ್ಪಿಗೆ ಟೈಮ್ ಸಿಕ್ಕಿತು. &lt;br /&gt;&lt;br /&gt;ಅಷ್ಟರಲ್ಲೇ ಅಲ್ಲಿದ್ದ ಚಿಲ್ಟಾರಿಯೊಂದು, ’ಏ ಏನ್ಗೊತ್ತಾ, ಅಲ್ನೋಡು ಕ್ಯಾಮರ ಇಟ್ಟುಕೊಂಡಿದ್ದಾರೆ, ಇಲ್ಲಿ ಟೀವಿ ಇಟ್ಟಿರ್ತಾರೆ, ನೀನು ಹೋಗಿ ಟೀವಿ ನೋಡು, ನಾನು ಕಾಣಿಸ್ತೀನಿ, ಆಮೇಲೇ ನಾನು ನೋಡ್ತೀನಿ ನೀನು ನಿಂತ್ಕೋ’ ಅಂತ ತನ್ನ ವಿದ್ಯೇನೆಲ್ಲ ಇನ್ನೊಂದಕ್ಕೆ ಧಾರೆಯೆರೆಯಿತು. ಅವರ ಈ ಸರದಿ ಮೇಲಿನ ಸರದಿ ಆಟ, ಒಬ್ಬ ಶಾಸ್ತ್ರೀ ಆವಾಜ್ ಹಾಕುತ್ತಲೇ ನಿಂತು ಹೋಯಿತು.&lt;br /&gt;&lt;br /&gt;ಈ ಕ್ಯಾಮರ ಚಳಕ ಇಲ್ಲಿಗೆ ನಿಲ್ಲಲಿಲ್ಲ. ಮೌನ ಗೌರಿಯ ಹಾಗೆ ಕೈ ಮುಗಿದು ಬರುತ್ತಿದ್ದ ಹೆಂಗಸೊಬ್ಬಳು, ಇದ್ದಕ್ಕಿಂದ ಹಾಗೆ ನೈವೇದ್ಯ ಮಾಡುವಂತೆ ಕೈ ಆಡಿಸುತ್ತಾ, ವೆಂಕಟರಮಣನನ್ನು ಹಾಡಿ ಹೊಗಳಲು ಶುರುಮಾಡಿಬಿಟ್ಟಳು. ಇನ್ನೊಬ್ಬಾತ, ಸಾಷ್ಟಾಂಗ ನಮಸ್ಕಾರ ಮಾಡಲು ಹೋಗಿ ಶಾಸ್ತ್ರಿಗಳ ಹತ್ತಿರ ಬೈಸಿಕೊಳ್ಳುವ ಹಾಗಾಯಿತು, ಪಾಪ!&lt;br /&gt;&lt;br /&gt;ಹಾಗೂ ಹೀಗೂ ಎರಡೂ ಪಕ್ಕ ಕಟ್ಟಿದ್ದ ಮರದ ಕಟ್ಟಿಗೆಗಳಿಂದ ತಪ್ಪಿಸಿಕೊಂಡು ಹೊರಗಿನ ಆವರಣಕ್ಕೆ ಬಂದೆವು. ಇನ್ನೇನು ಹೋಗೋದು ತಾನೆ ಎಂದು ಯೋಚಿಸುತ್ತಿರುವಾಗಲೇ, ಪಕ್ಕದಲ್ಲಿದ್ದ ಅಜ್ಜಿ ಮೇಲೆ ಕೂತಿದ್ದ ವೆಂಕಟರಮಣನನ್ನು ತೋರಿಸುತ್ತಾ, ’ನಡೆಯಮ್ಮ ವೈಕುಂಠ ದ್ವಾರಕ್ಕೇ’ ಎಂದರು. ’ನನಗೆ ಅರ್ಜೆಂಟಿಲ್ಲಾ, ನೀವು ಹೋಗಿ’ ಎಂದು ಹೇಳಲು ಧೈರ್ಯ ಸಾಲದೇ ಸುಮ್ಮನೇ ಅವರ ಹಿಂದೆ ಹೊರಟೆ.&lt;br /&gt;&lt;br /&gt;ಇಲ್ಲಿ ನೋಡಿದರೆ ಇನ್ನೊಂದು ಕ್ಯಾಮರಾ... &lt;br /&gt;&lt;br /&gt;ಬಹುಶಃ ಜೊತೆಗೆ ಬಂದಿದ್ದ ಒಂದು ಜೋಡಿ ಬೇರೆ ಬೇರೆ ಆಗಿಬಿಟ್ಟಿತ್ತು ಎಂದು ಕಾಣುತ್ತದೆ. ನನ್ನ ಪಕ್ಕದಲ್ಲಿ ನಿಂತಿದ್ದ ಗಂಡಿಗೆ ತಕ್ಷಣವೇ ಒಂದು ಉಪಾಯ ಹೊಳೆಯಿತು. ಮೊಬೈಲ್ನಿಂದ ಕಾಲು ಮಾಡಿ ’ವೇರ್ ಆರ್ ಯೂ?’ ಎಂದು ಕೇಳಿದ. ಆ ಧ್ವನಿ ಏನು ಹೇಳೀತೋ ಏನೋ ’ವೇರ್?’ ವೇರ್?’ ಎನ್ನುತ್ತಾ ಸುತ್ತಲೂ ಕಣ್ಣಾಡಿಸಿದ. ಅವನ ಕಣ್ಣು ಅಲ್ಲಿಯೇ ನಿಂತಿದ್ದ ಟೀವಿ ಸ್ಕ್ರೀನನ್ನು ಸ್ಕ್ಯಾನ್ ಮಾಡಲು ತೊಡಗಿತು. ಕಡೆಗೇ ಆ ಹುಡುಗಿ, ಕ್ಯಾಮರ ಮುಂದೆ ಬಂದು ’ಐ ಯಾಮ್ ಹಿಯರ್’ ಎಂದಿತು. ಇವನು ಆ ಜಾಗವನ್ನು ಟ್ರೇಸ್ ಮಾಡಿಕೊಂಡು ಹೋದ. ಜೋಡಿ ಒಂದಾಯಿತು.&lt;br /&gt;&lt;br /&gt;ಇನ್ನು ಕ್ಯಾಮರದಲ್ಲಿ ಬರಲು ’ವೆಂಕಟರಮಣ’ನ ಸರದಿ. ’ಇಲ್ಲಿ ಚೆನ್ನಾಗಿ ಕಾಣ್ತಿದೆ. ನಿಂತ್ಕೊಂಡು ಸ್ವಲ್ಪೊತ್ತು ನೋಡಿ’ ಆ ಅಜ್ಜಿಯ ಇನ್ನೊಂಡು ಸಲಹೆ. ಎಲ್ಲರಿಗೂ ಸೂಚನೆ ಸರಿಯೆನಿಸಿತು. ಆವಾಗಲೇ ನನಗೂ ಹೊಳೆದಿದ್ದು, ಕ್ಯಾಮರ ಬೆಳಕಿಗೆ ಕಣ್ಣು ಮುಚ್ಚಿದ್ದ ನಾನು ದೇವರ ದರ್ಶನವನ್ನೇ ಮಾಡಿಲ್ಲ. ನಮ್ಮ ’ಶ್ರೀ ವೆಂಕಟರಮಣ ’ ಡೆಕೊರೆಟಿವ್ ಹೂಗಳನ್ನು ಏರಿಸಿಕೊಂಡು ಟಿಪ್ ಟಾಪ್ ಆಗಿಬಿಟ್ಟಿದ್ದ. ತನ್ನ ಮುಂಬಾಗಿಲು ಎಲ್ಲವನ್ನೂ ಆ ಹೂಗಳಿಂದಲೇ ಅಲಂಕರಿಸಿಕೊಂಡಿದ್ದ. ಕನಕಾಂಬರ, ಸೇವಂತಿಗೆ ಎಲ್ಲಾ ಬೇಜಾರಾಗಿತ್ತೋ ಏನೋ? ಅಂತೂ ಕ್ಯಾಮರದಲ್ಲಿ ದರ್ಶನ ಮುಗಿಸಿಕೊಂಡು ಮನೆಗೆ ಬಂದೆ.  &lt;br /&gt; &lt;br /&gt;ನಾನು ಬರುತ್ತಿದ್ದಂತೆಯೇ, ಮನೆಯಲ್ಲಿ ಲೋಕಲ್ ಚ್ಯಾನಲ್ ನೋಡುತ್ತಿದ್ದ  ಎಲ್ಲರಿಗೂ ಮುಸಿಮುಸಿ ನಗು, ’ಏನು ಒಂದು ಕ್ಯಾಮರ ಬೆಳಕು ತಡೆಯೋದಕ್ಕೆ ಆಗಲಿಲ್ಲವಾ? ಅದಕ್ಕೆ ಹೇಳೋದು ನಿನಗೆ ಗೂಬೆ ಕಣ್ಣು...’ ಎಂದು ಜೋರಾಗಿ ನಗು. ನನಗೂ ಯಾಕೋ ಕೋಪ ತಡೆಯಲಾಗಲಿಲ್ಲ. ’ತಿರುಗಿ ನನ್ನನ್ನು ದೇವಸ್ಥಾನಕ್ಕೆ ಹೋಗು ಎನ್ನಬೇಡ ಅಮ್ಮಾ...’ ಎಂದು ಕಿರುಚಿ ರೂಮಿನ ಬಾಗಿಲು ದಢಾರನೆ ಹಾಕಿದೆ. ಬಿಸಿ ಬಿಸಿ ಪುಳಿಯೋಗರೆ ಪೂರ್ತಿ ನನ್ನ ಪಾಲಿಗೇ ಉಳಿದಿದ್ದಕ್ಕೆ ಒಂದು ಥರ ಖುಷಿ ಆಗ ತೊಡಗಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-4153194364288068453?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/4153194364288068453/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/12/blog-post.html#comment-form' title='24 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/4153194364288068453'/><link rel='self' type='application/atom+xml' href='http://www.blogger.com/feeds/4527995432766899913/posts/default/4153194364288068453'/><link rel='alternate' type='text/html' href='http://muttumani.blogspot.com/2008/12/blog-post.html' title='’ಕ್ಯಾಮರಾ ದರ್ಶನ!’'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>24</thr:total></entry><entry><id>tag:blogger.com,1999:blog-4527995432766899913.post-7230709918083652419</id><published>2008-11-11T22:22:00.002+05:30</published><updated>2008-11-20T16:21:50.517+05:30</updated><title type='text'>ಸಯಾರಿಗಿ ಓರಿದಿ!</title><content type='html'>ಓವುದುದು ಹೇಗೆ? ಯಾತ್ತಾದವರು ಯೋದ್ದೀಸಿಚಿರ? ಇಲ್ಲಿ ಕೈಗಿತಪ್ಪಾದೆ ಎಂದು ಖಂಡಿತ ಭಾಸಬೇವಿಡಿ. ಮುಂದೆ ಓದದಿರೆ ಸಯಾರಿಗಿ ತಿಯುತ್ತಳಿದೆ!&lt;br /&gt;&lt;br /&gt;ಬ್ರಿನ್ನಿಟನ್ನ ಯೂಯೊಂವನಿದಟಿರ್ಸಿರ ಸಂಯಿಂಧಶೋನೆದ ಈ ವಿಷಯ ಬೆಕಿಳಗೆ ಬಂದಿದೆ. ಒಂದು ಪದದಲ್ಲಿ ಅರಗಳಕ್ಷನ್ನು ಯಾವ ರೀಯತಿಲ್ಲಿ ಜೋದ್ದಾಸಿಡಿರೆ ಎಂಬುದು ಮುವಖ್ಯಲ್ಲ. ಮೊಲಿದನ - ಕೊನೆಯ ಅಗರಕ್ಷಳು ಸ್ವಲ್ಲಿದಸ್ಥಾದ್ದನರೆ ಸರಿ. ಮದಲ್ಲಿಧ್ಯನ ಅರಗಕ್ಷಳು ಚೆಲ್ಲಿದಲ್ಲಾಯಾಪಿರೂ ಚಿಂಯಿತೆಲ್ಲ. ಯಾದಕೆಂರೆ ಓವಾದುಗ ಒಂದು ಪವದನ್ನು ಇಯಾಡಿಗಿ ಓವೆದುತ್ತೇಯೆ ಹೊರತು ಅರಕ್ಷದ ನಂತರ ಅರವಕ್ಷಲ್ಲ.&lt;br /&gt;&lt;br /&gt;&lt;span style="color:#ff0000;"&gt;ಇಂಗ್ಲೀಷಿನ ಮೂಲ ಇಲ್ಲಿದೆ:&lt;br /&gt;This is quite amazing! really.&lt;br /&gt;&lt;br /&gt;Aoccdrnig to a rscheearch at an Elingsh uinervtisy, it deosn't mttaer in waht oredr the ltteers in a wrod are, the olny iprmoetnt tihng is taht frist and lsat ltteer is at the rghit pclae. The rset can be a toatl mses and you can sitll raed it wouthit porbelm. Tihs is bcuseae we do not raed ervey lteter by itslef but the wrod as a wlohe. &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-7230709918083652419?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/7230709918083652419/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/11/blog-post.html#comment-form' title='24 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/7230709918083652419'/><link rel='self' type='application/atom+xml' href='http://www.blogger.com/feeds/4527995432766899913/posts/default/7230709918083652419'/><link rel='alternate' type='text/html' href='http://muttumani.blogspot.com/2008/11/blog-post.html' title='ಸಯಾರಿಗಿ ಓರಿದಿ!'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>24</thr:total></entry><entry><id>tag:blogger.com,1999:blog-4527995432766899913.post-8705310258368005990</id><published>2008-10-27T19:58:00.003+05:30</published><updated>2008-11-11T22:39:36.329+05:30</updated><title type='text'>ನಗರದ ರಾತ್ರಿ</title><content type='html'>ಕಾಲೇಜಿಗೆ ಹೋಗುತ್ತಿದ್ದಾಗ ಬರೆದಿದ್ದು. ಹೀಗೆ, ಕಸ ತೆಗೆಯುವಾಗ ಕೈಗೆ ಸಿಕ್ಕಿ ನಗು ಬರಿಸಿಬಿಟ್ಟಿತು. ನೀವೂ ಓದಿ ನೋಡಿ.&lt;br /&gt;&lt;br /&gt;ರಜಿನಿ,&lt;br /&gt;ನಿನ್ನ ಒಡಲಲ್ಲಿ,&lt;br /&gt;ಮೇಲೊಂದು ಚುಕ್ಕಿ,&lt;br /&gt;ಕೆಳಗೊಂದು ಚುಕ್ಕಿ,&lt;br /&gt;ಮೇಲೆ ಮತ್ತೊಂದು,&lt;br /&gt;ಕೆಳಗೆ ಅದಕೊಂದು,&lt;br /&gt;ವಿಶ್ವಾಮಿತ್ರಾ ಹುಟ್ಟಿಸಿದನೇನು ಅಣಕ?&lt;br /&gt;ಊಹೂಂ, ಇದು ಸ್ವಯಂಕೃತಾಪರಾಧ!&lt;br /&gt;&lt;br /&gt;ಇಲ್ಲಿ ಒಬ್ಬೊಬ್ಬನೂ ತ್ರಿಶಂಕು,&lt;br /&gt;ಏಕೆ ನಾನು?&lt;br /&gt;ಎಲ್ಲಿಗೆ ನಾನು?&lt;br /&gt;ಏನು ನಾನು?&lt;br /&gt;ಆಮೇಲೇನು?&lt;br /&gt;ಯಾರಿಗೂ ಗೊತ್ತಿಲ್ಲ&lt;br /&gt;ಬೇಕೆ? ಅದೂ ಇಲ್ಲ&lt;br /&gt;ತಿಳಕೊಳ್ಳಲು ಸಮಯವಿಲ್ಲ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-8705310258368005990?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/8705310258368005990/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/10/blog-post.html#comment-form' title='16 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/8705310258368005990'/><link rel='self' type='application/atom+xml' href='http://www.blogger.com/feeds/4527995432766899913/posts/default/8705310258368005990'/><link rel='alternate' type='text/html' href='http://muttumani.blogspot.com/2008/10/blog-post.html' title='ನಗರದ ರಾತ್ರಿ'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>16</thr:total></entry><entry><id>tag:blogger.com,1999:blog-4527995432766899913.post-6754791000288632650</id><published>2008-09-28T20:53:00.000+05:30</published><updated>2008-09-29T23:22:26.500+05:30</updated><category scheme='http://www.blogger.com/atom/ns#' term='ಜೀವನ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='life'/><category scheme='http://www.blogger.com/atom/ns#' term='story'/><title type='text'>ಸವಿತಾ</title><content type='html'>ಗಂಡಸರಿಗೆ ನಿಮ್ಮ ಸಂದೇಶವೇನು?... &lt;br /&gt;&lt;br /&gt;ಸುಂದರಾಂಗನಾದ ಸುಬ್ಬಯ್ಯನನ್ನು ಬಿಡುಗಣ್ಣಿನಿಂದ ನೋಡುತ್ತಾ ತಾಳಿ ಕಟ್ಟಿಸಿಕೊಂಡಾಗ, ತಾನು ಈ ರೀತಿ ಪ್ರಶ್ನೆಯನ್ನು ಎದುರಿಸಬೇಕಾಗಬಹುದೆಂದು ಸವಿತಾಗೆ ಅನ್ನಿಸಿರಲಿಲ್ಲ. ಮೈಕನ್ನು ಹಿಡಿದ ನವೀನ ಇನ್ನೊಂದು ಸಾರಿ ಕೇಳಿದನು, ’ಭಯವಿಲ್ಲ ಹೇಳಿ’. ಸವಿತಾ ಉತ್ತರ ಕೊಡುವುದಕ್ಕೆ ಇನ್ನೂ ಒಂದು ಕ್ಷಣ ತಡೆಯಬೇಕಾಯಿತು.&lt;br /&gt;&lt;br /&gt;ಸುಬ್ಬಯ್ಯ ಯಾವ ರೀತಿಯಿಂದಲೂ ಯಾರೂ ದೂಷಿಸುವುದಕ್ಕೆ ಕಾರಣನಾದ ವ್ಯಕ್ತಿಯೇ ಅಲ್ಲ. ಅವನ ಮನೆಯಲ್ಲೂ ಅಷ್ಟೆ, ಹಾದಿ - ಬೀದಿಯಲ್ಲೂ ಅಷ್ಟೆ. ತಾನಾಯಿತು ತನ್ನ ಕೆಲಸವಾಯಿತು. ಉಳಿದ ಅಣ್ಣ - ತಮ್ಮಂದಿರು ಸಣ್ಣ ಸಣ್ಣ ವಿಷಯಗಳಿಂದ ಹಿಡಿದು, ಆಸ್ತಿ ಮನೆ ಮಠಗಳವರೆಗೆ ಏನು ಕಿತ್ತಾಡಿದರೂ ಇವನು ಚಕಾರ ಎತ್ತಿದವನಲ್ಲ. ಅದನ್ನು ಸರಿಪಡಿಸಲು ತನ್ನಿಂದ ಆಗಬಹುದೇ ಎಂದು ಯೋಚಿಸಲೂ ಹೋಗಿರಲಿಲ್ಲ. ಮದುವೆಯಾಗುವಷ್ಟರಲ್ಲಿ ಮೂವತ್ತು ಕಳೆದಿದ್ದಿರಬಹುದು. ಆದರೆ, ಅವನೇನು ಹಾಗೆ ಕಾಣುತ್ತಿರಲಿಲ್ಲ. &lt;br /&gt;&lt;br /&gt;ಸವಿತಾ ಮನೆಗೆ ’ನೋಡಲು’ ಬಂದ ಮೊದಲ ಗಂಡು ಇವನೇ. ಹತ್ತೊಂಭತ್ತು ತುಂಬಿದರೂ ಇನ್ನೂ ಯಾವ ಜಾತಕವೂ ಹೊಂದಿಕೆಯಾಗದಿದ್ದದ್ದು ಮನೆಯಲ್ಲಿ ಭಾರಿ ಗೊಂದಲ ಉಂಟುಮಾಡಿತ್ತು. ಅವಳ ಅಜ್ಜಿಯಂತೂ, ’ಹತ್ತೊಂಭತ್ತು ಅಂದರೆ ಸರ್ಕಾರ ಕೊಟ್ಟಿರೋದಕ್ಕಿಂತ ಒಂದು ವರ್ಷ ಹೆಚ್ಚಂತೆ’ ಎಂದು ದಿನಕ್ಕೆ ನೂರು ಬಾರಿ ಹೇಳಿ, ಸರ್ಕಾರದ ರೂಲನ್ನೆ ತಲೆಕೆಳಗು ಮಾಡುತ್ತಿದ್ದಳು. ಅಷ್ಟಾದರೂ, ಹೀಗೆ ದಿಢೀರಂತ ಒಂದು ಗಂಡಿನ ಜಾತಕ ಹೊಂದಿಕೊಂಡು, ’ಮುಂದಿನ ಒಂದೆರಡು ತಿಂಗಳಲ್ಲಿ ಮದುವೆ ಮುಗಿದು ಹೋಗಲಿ, ಆಮೇಲೆ ಆಷಾಢ’ ಎಂದು ಗಂಡಿನ ಕಡೆಯವರು ದುಂಬಾಲು ಬಿದ್ದಾಗ, ಅಜ್ಜಿಯನ್ನೂ ಸೇರಿಸಿ ಎಲ್ಲರಿಗೂ ನಾವು ಅಷ್ಟು ಅವಸರ ಮಾಡಬಾರದಿತ್ತು ಅನಿಸದೆ ಇರಲಿಲ್ಲ. &lt;br /&gt;&lt;br /&gt;ಮದುವೆಯಾದ ಮೇಲೂ ಸುಬ್ಬಯ್ಯನ ಜೀವನದಲ್ಲಿ ಅಂತಹ ಬದಲಾವಣೆಯೇನೂ ಕಾಣಲಿಲ್ಲ. ಅವನು ಹಾಗೆ ಬದಲಾಗಬೇಕಾದ ಅಗತ್ಯವೂ ಇರಲಿಲ್ಲ. ಸವಿತಾಳಿಗೂ ಅಷ್ಟೆ. ಲೋಕಾರೂಢಿಯಲ್ಲಿ ಹೇಳುವುದಾದರೆ ಅವನು ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ದುಡಿದು ತಂದು ಹಾಕುತ್ತಿದ್ದ. ಸೀರೆ - ಹೂವು ತಂದು ಕೊಡುತ್ತಿದ್ದ. ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದ. ಊರಿನವರಿಗೆ ಬೇಕಾದ ಸಣ್ಣ ಪುಟ್ಟ ಸಹಾಯಗಳನ್ನು ಮಾಡುತ್ತಿದ್ದ. ಯಾವ ದುಶ್ಚಟವೂ ಇರಲಿಲ್ಲ. ಕಾಲಕ್ರಮೇಣ ಅವನಿಗೆ ಇಬ್ಬರು ಮಕ್ಕಳೂ ಆದರು. ಲಿಂಗ ಯಾವುದು ಎಂಬುದು ಈಗ್ಗೆ ಮುಖ್ಯವಲ್ಲ. ಅವೂ ಶಾಲೆಗೆ ಹೋಗಲು ಶುರುವಿಟ್ಟುಕೊಂಡವು. ಒಟ್ಟಿನಲ್ಲಿ, ಯಾರೂ ಬಾಯಿಬಿಡದಿದ್ದರೂ ಅವನೊಬ್ಬ ದೇವರಂತ ಮನುಷ್ಯ ಎಂಬ ಭಾವನೆ ಊರಿನವರಲ್ಲೆಲ್ಲಾ ಬೇರೂರಿಬಿಟ್ಟಿತ್ತು. ಸವಿತಾಗೆ ಅದರ ಬಗ್ಗೆ ಯೋಚಿಸುವ ಅಗತ್ಯವೂ ಇರಲಿಲ್ಲ. ಅಷ್ಟೇ ಏಕೆ, ತನ್ನ ಒಳ್ಳೆಯತವನ್ನು ಕಂಡು ಸುಬ್ಬಯ್ಯನಿಗೇ ಒಮ್ಮೊಮ್ಮೆ ಹುಬ್ಬೇರಿಸುವಂತಾಗುತ್ತಿತ್ತು.&lt;br /&gt;&lt;br /&gt;ಆದರೆ, ಜೀವನ ಅಷ್ಟರಿಂದಲೇ ತೃಪ್ತಿಪಟ್ಟುಕೊಳ್ಳುವಂತಹುದ್ದಾಗಿರಲಿಲ್ಲ. ಮಕ್ಕಳು ಏನೇ ಕಿತ್ತಾಡಿದರೂ ಗಟ್ಟಿಯಾಗಿ ನಿಂತು ನೆಲೆ - ಬೆಲೆಯನ್ನು ಹುಷಾರು ಮಾಡಿಕೊಂಡಿದ್ದ ತಂದೆಯೂ ಒಂದೊಮ್ಮೆ ಇಲ್ಲವಾಗಲೇಬೇಕಾಯಿತು. ಇಷ್ಟು ದಿನ ಕೋಳಿ ಜಗಳವಾಡಿ ಸುಮ್ಮನಾಗುತ್ತಿದ್ದ ಅಣ್ಣ - ತಮ್ಮಂದಿರು ನಾಯಿ ನರಿಗಳಾದರು. ತಾಯಿ ಮೂಲೆ ಪಾಲಾದಳು. ಇಷ್ಟು ದಿನ ಸುಮ್ಮನಿದ್ದದ್ದು ಸರಿಯೇ, ಇನ್ನು ಮುಂದೆ ಹೀಗಾದರೆ ಉಳಿಗಾಲವಿಲ್ಲ ಎಂದು ಸುಬ್ಬಯ್ಯನಿಗೆ ಕಿವಿಮಾತು ಬರಲಾರಂಭಿಸಿತು. ಆದರೆ, ಅವನು ಏನು ಮಾಡಲು ಹೋದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಜನ ಊರಿನಲ್ಲಿ ಇರಲಿಲ್ಲ. ಅಣ್ಣ - ತಮ್ಮಂದಿರಿಗಂತೂ ಈ ಗುಬ್ಬಚ್ಚಿಯ ಮಾತು ಕೇಳುವುದರಲ್ಲಿ ಯಾವ ಪ್ರಯೋಜನವೂ ಕಾಣಲಿಲ್ಲ. ಇವನನ್ನು ಹತ್ತಿಕ್ಕುವುದು ಅವರಿಗೇನು ಕಷ್ಟದ ಕೆಲಸವಾಗಲಿಲ್ಲ. ದಾಂಢಿಗರಾಗಿದ್ದ ತಾವೆಲ್ಲಾ ಸೇರಿ ಹೇಗಾದರೂ ಪರಿಹಾರ ಹುಡುಕುವುದು ಅವರ ಗುರಿಯಾಗಿತ್ತೇ ಹೊರತು, ನ್ಯಾಯ ನೀತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಯಾರಿಗೂ ಸಮಯವಿರಲಿಲ್ಲ. ಇದರಲ್ಲಿ, ತಮ್ಮ ಹೆಂಡತಿ ಮಕ್ಕಳ ಕ್ಷೇಮ - ಭವಿಷ್ಯಗಳು ಮುಖ್ಯವಾಗಿತ್ತೆ ಹೊರತು, ಸ್ವಾರ್ಥವೇನು ಇರಲಿಲ್ಲ. &lt;br /&gt;&lt;br /&gt;ತನ್ನ ಗಂಡನ ಮೌನ ಇತ್ತೀಚೆಗೆ ಸವಿತಾಳಿಗೆ ಕೋಪ ಬರಿಸಲು ಶುರು ಮಾಡಿತ್ತು. ಅವಳು ಈಗೇನು ಸುಂದರವಾದ,ಮುಗ್ಧ ,ಹೆಂಗಳೆಯಾಗಿ ಉಳಿದಿರಲಿಲ್ಲ. ಊರಿನವರಿಗೂ ಅವನ ಈ ರೀತಿ ಸರಿ ಬರಲಿಲ್ಲ. ಸುಬ್ಬಯ್ಯ ಇಷ್ಟು ಹೆಣ್ಣು ಹೆಂಗಸಾಗಬಾರದಿತ್ತು ಎಂದು ಅವರ ಅನಿಸಿಕೆ! ಸುಬ್ಬಯ್ಯ ತನ್ನ ಕಷ್ಟವನ್ನು ತನ್ನ ತಾಯಿಯ ಬಳಿ ತೋಡಿಕೊಂಡ, ಪರಿಚಯದವರ ಬಳಿ ಹೇಳಿಕೊಂಡ, ತನ್ನ ಸೋದರರೆದುರು ನಿಂತು ತಾನು ಎಷ್ಟು ಒಳ್ಳೆಯತನದಿಂದ ಜೀವನ ನಡೆಸಿದ್ದೇನೆಂಬುದನ್ನು ಹೇಳಿದ್ದ. ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಅವನಿಗೆ ದೇವರ ಮೇಲೂ ಅನುಮಾನ ಶುರುವಾಗಲು ತೊಡಗಿತು. ಕಡೆಕಡೆಗೇ ಯಾರೂ ನನಗೆ ಅಯ್ಯೋ ಪಾಪ ಕೂಡ ಅನ್ನಲಿಲ್ಲವೇ ಎಂದು ಊರವರ ಮೇಲೆಯೆ ಸಿಟ್ಟು ಬರತೊಡಗಿತ್ತು. ಹೆಂಡತಿ ಕೋಪ ತಡೆಯಲಾರದೆ ಒಂದೆರಡು ಸಾರಿ ಮೂದಲಿಸಿದಳು. ಅವನಿಗೆ ಇದನ್ನಂತೂ ತಡೆಯಲು ಸಾಧ್ಯವೇ ಆಗಲಿಲ್ಲ. ತಾನು ಇಷ್ಟು ದಿನ ಮಾಡಿದ್ದೆಲ್ಲಾ ವ್ಯರ್ಥವೆನಿಸತೊಡಗಿತು. &lt;br /&gt;&lt;br /&gt;ಕಡೇ ಪ್ರಯತ್ನವೆಂದು, ಕೋರ್ಟಿನಲ್ಲಿ ಹಾಕಿದ್ದ ಕೇಸು ಇವನಿಗೇ ಉಲ್ಟಾ ಹೊಡೆಯಿತು. ಅಣ್ಣ - ತಮ್ಮಂದಿರ ಆಸ್ತಿಯೆಲ್ಲ ಅವರ ಸ್ವಯಾರ್ಜಿತವೆಂದೂ, ಅದರಲ್ಲಿ ಇವನಿಗೆ ಹಕ್ಕು ದೊರೆಯುವುದು ಸಾಧ್ಯವಿಲ್ಲವೆಂದೂ ಕೋರ್ಟು ತೀರ್ಪು ಕೊಟ್ಟಿತು. ಸುಬ್ಬಯ್ಯ ತನ್ನೊಳಗೇ ಒಂದು ನಿರ್ಧಾರಕ್ಕೆ ಬಂದ. ಇನ್ನು ರೀತಿಯ ಬಾಳು ಬಾಳಿ ಏನೂ ಸುಖವಿಲ್ಲ.   &lt;br /&gt;&lt;br /&gt;ಸವಿತಾ ಬಾಗಿಲು ತೆಗೆದಾಗ, ತಾನು ಕನಸು ಮನಸಿನಲ್ಲೂ ನೆನಸದ್ದನ್ನು ನೋಡಬೇಕಾಯಿತು. ಸುಬ್ಬಯ್ಯ ಕುಡಿದು ಬಂದಿದ್ದ. ಹೇಗೆ? ಇದಕ್ಕೆ ಊರವರೆಲ್ಲ ಕುಳಿತು ಯೋಚಿಸಿದರೂ ಉತ್ತರ ಸಿಗುವುದು ಸಾಧ್ಯವಿರಲಿಲ್ಲ. ಅಂತೂ ಸುಬ್ಬಯ್ಯ ಆವತ್ತು ಕುಡಿದು ಬಂದಿದ್ದ. ಅದನ್ನು ಹೇಗೆ ಸಂಭಾಳಿಸಬೇಕೆಂಬುದು ಅವನಿಗೇ ತಿಳಿದಿರಲಿಲ್ಲ, ದಢಕ್ಕನೆ ನೆಲಕ್ಕೆ ಉರುಳಿದ. ಸವಿತಾಗೂ ಒಂದು ಕ್ಷಣ ಕರುಳು ಚುರುಕ್ಕೆನಿಸಿತು. ಇನ್ನೊಂದು ದಿನ ಊರ ಗೌಡರಿಂದ ಕಂಪ್ಲೇಂಟು ಬಂತು. ಸುಬ್ಬಯ್ಯ ಕೆಲಸಕ್ಕೆ ಸರಿಯಾಗಿ ಹೋಗುತ್ತಿಲ್ಲವಂತೆ! ನಾಲ್ಕನೇ ದಿನ, ಸವಿತಾಳ ವಾರಗಿತ್ತಿಯೇ ಎದುರು ಬಂದಳು. ’ಏನು ತಾಯಿ, ಕುಡಿದು ಬಂದು ಗಲಾಟೆ ಮಾಡ್ತಾನಲ್ಲ? ಆಳುಗಳ ಕೈಲಿ ಕತ್ತಿನ ಪಟ್ಟಿ ಹಿಡಿದು ಆಚೆ ತಳ್ತಿದ್ದ್ರೆ ನನಗೂ ಒಂಥರಾ ಅನ್ಸಲ್ವಾ?’ ಇದಕ್ಕೆ, ಏನು ಉತ್ತರ ಕೊಡಬೇಕೆಂದು ಸವಿತಾಳಿಗೇ ತಿಳಿಯದೆ ಹೋಯಿತು. ಅಂತೂ ಮನೆಗೆ ಬರುವಷ್ಟರಲ್ಲಿ ಅವನನ್ನು ಬಾಗಿಲ ಬಳಿ ನೂಕಿ ಹೋಗಿದ್ದರು! ಸವಿತಾ ಅವನನ್ನು ಎಳೆದು ತಂದು ಒಳಗೆ ಮಲಗಿಸಬೇಕಾಯಿತು.&lt;br /&gt;&lt;br /&gt;ಇವತ್ತು, ನಾಳೆ, ಈಗ ಎಂದು ತನ್ನ ಗಂಡ ಕುಡಿತವನ್ನು ಬಿಡುವ ದಾರಿಯನ್ನೇ ನೋಡುತ್ತಿದ್ದಳು ಸವಿತಾ. ವಾರಕ್ಕೆ ಮೂರುದಿನವಾದರೂ ಕೆಲಸಕ್ಕೆ ಹೋಗುತ್ತಿದ್ದವ, ಈಗ ಅದನ್ನೂ ನಿಲ್ಲಿಸಿದ್ದ. ಎಷ್ಟು ದಿನ ಕುಡಿತಾನೆ ಎಂಬ ಧೈರ್ಯದ ಮೇಲೆ ಮಾಡಿದ ಸಣ್ಣ ಪುಟ್ಟ ಸಾಲಗಳನ್ನೂ ತೀರಿಸಲಾಗದ ಪರಿಸ್ಥಿತಿ ಬಂದು ಬಿಟ್ಟಿತು. ಎರಡು ದಿನ ಗಂಜಿ, ಒಂದು ದಿನ ಬರಿಯ ನೀರೇ ಗತಿಯಾಯಿತು. ಸವಿತಾಳ ಈ ಕಷ್ಟವನ್ನು ನೋಡಿ ಹಲವರು ಮರುಗಿದರು. ಊರಿನ ಹಿರಿಯರು ಅನ್ನಿಸಿಕೊಂಡವರಿಗಂತೂ ಹೇಳತೀರದ ಹಿಂಸೆ. ಹೆಂಗಸರಿಗೆ ಬರುವ ಇಂತಹ ಕಷ್ಟವನ್ನು ಸರಿಪಡಿಸುವುದಕ್ಕೆ ಅವರ ಬಳಿ ಯಾವ ಉಪಾಯವೂ ಇರಲಿಲ್ಲ. &lt;br /&gt; &lt;br /&gt;ಶಾಲೆಗೆ ಹೋಗುವ ತನ್ನ ಮಕ್ಕಳ ಮತ್ತು ತನ್ನ ಹೊಟ್ಟೆ - ಬಟ್ಟೆಗಾಗಿ ಸವಿತಾಳೇ ದಿನಗೂಲಿ ಮಾಡುವ ನಿರ್ಧಾರ ಮಾಡಿದಳು. ಊರಿಂದೂರಿಗೆ ಹೋಗಿ ಬರುತ್ತಿದ್ದಳು. ಏತನ್ಮಧ್ಯೆ, ಲಾರಿಯಲ್ಲಿ ಹೇಗೋ ಇಟ್ಟಿದ್ದ ಕಬ್ಬಿಣದ ಸರಳೊಂದು, ಬ್ರೇಕು ಹಾಕಿದಾಗ ಜಾರಿ ಬಿದ್ದು ಎಡದ ಅಂಗೈಯನ್ನು ಮುರಿದು ಹಾಕಿತು. ವಿಧಿಯಿಲ್ಲದೇ ಒಂದೇ ಕೈಯಲ್ಲಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿದಳು. ಜೀವನ ಮತ್ತೆ ಮುಂದುವರಿಯತೊಡಗಿತು. ಸುಬ್ಬಯ್ಯನನ್ನು ಹೇಗಾದರೂ ದಾರಿಗೆ ತರುವ ಪ್ರಯತ್ನ ಮಾಡತೊಡಗಿದಳು. ಯಾವುದಕ್ಕೂ ಅವನು ಬಗ್ಗುವ ಹಾಗೆ ಕಾಣಲಿಲ್ಲ. &lt;br /&gt;&lt;br /&gt;ಊರವರೆಲ್ಲ ಸಲಹೆ ಕೊಟ್ಟರೂ ತನ್ನ ತವರು ಮನೆಗೆ ಹೋಗುವ ಯೋಚನೆ ಮಾಡಲಿಲ್ಲ. ಪರಿಸ್ಥಿತಿ ದಿನದಿನಕ್ಕೆ ಇನ್ನೂ ಹದಗೆಡತೊಡಗಿತ್ತು.ತಾನಾಯಿತು ತನ್ನ ಕುಡಿತವಾಯಿತು ಎಂದು ಇರುತ್ತಿದ್ದವ ಈಗ ದುಡ್ಡಿಗಾಗಿ ಸವಿತಾಳನ್ನು ಪೀಡಿಸತೊಡಗಿದ್ದ. ಅಷ್ಟಿಷ್ಟು ರಂಪವಾಗಿ ನಿಲ್ಲುತ್ತಿದ್ದ ಜಗಳ ಒಂದು ದಿನ ತಾರಕಕ್ಕೇರಿತು. ಸುಬ್ಬಯ್ಯ ಮಚ್ಚು ಹಿಡಿದು ತೂರಾಡುತ್ತಿದ್ದ. ನಿನಗೆ ವರ್ಷಾನುಗಟ್ಟಲೇ ತಂದು ಹಾಕಿದ್ದೆಲ್ಲಾ ಮರೆತುಹೋಯಿತಾ? ಈಗ ತೀರಿಸು ಋಣಾನ... ಸವಿತಾ ಮತ್ತೆ ಅವನ ಕುಡಿತದ ವಿಷಯಕ್ಕೆ ತಲೆ ಹಾಕಲಿಲ್ಲ. ನಿತ್ಯ ಅವನಿಗೆ ಕುಡಿತಕ್ಕೆ ದುಡ್ಡು ಕೊಡಬೇಕಾದ್ದು ಅನಿವಾರ್ಯವಾಯಿತು.  &lt;br /&gt;&lt;br /&gt;ಸವಿತಾಳ ಬದುಕು ಇನ್ನೂ ಮುಂದಕ್ಕೆ ಹೋಗುತ್ತಲೇ ಇತ್ತು. ಮಕ್ಕಳು ಯಾರ ಮನೆಯ ನೆನ್ನೆಯ ಸಾರು, ಉಳಿದ ಅನ್ನಕ್ಕೂ ಕೈ ಚಾಚುವಂತಿರಲಿಲ್ಲ.   ಅಮ್ಮನಿಂದ ಬೀಳುತ್ತಿದ್ದ ಒದೆಯೆ ಅದಕ್ಕೆ ಕಾರಣವಾಗಿತ್ತು.  ಪ್ರೈಮರಿ ಪಾಸು ಮಾಡಿ ಮಿಡ್ಲಿ ಸ್ಕೂಲಿಗೆ ಬಂದರು. ಪಕ್ಕದೂರಿನ ಪ್ರೈವೇಟು ಶಾಲೆಗೇ ಹೋದರು. ಸರ್ಕಾರದ ಸಾಲದಲ್ಲಿ ಒಂದು ಜಮೀನು ಖರೀದಿ ಮಾಡಿದ್ದಾಳೆ ಎಂಬ ಬಿಸಿ ಬಿಸಿ ಸುದ್ದಿ ಊರೆಲ್ಲಾ ಹಬ್ಬಿತು. ಇದ್ಯಾಕೋ, ಮತ್ತೆ ಊರವರಿಗೆ ಸರಿಬೀಳಲಿಲ್ಲ. ಈ ಬಾರಿ ಅವರ ಯೋಚನೆ ಹೀಗಿತ್ತು - ಏನಾದರೂ ಹೆಣ್ಣಿಗೆ ಇಷ್ಟು ಗಂಡುಬೀರಿತನ ಇರಬಾರದು. &lt;br /&gt;&lt;br /&gt;ಇನ್ನು ಗಂಡೇ ಆಗಿದ್ದರೇ ಇನ್ನೇನೋ ಎಂದು ಕೆಲವರಿಗೆ ಚಿಂತೆಗಿಟ್ಟುಕೊಂಡಿತು. ಗಂಡಾಗಿದ್ದರೆ ನಮ್ಮ ಮನೆಯಲ್ಲೇ ಉಳಿಸಿಕೊಳ್ಳಬಹುದಿತ್ತಲ್ಲ ಎಂದು ತವರುಮನೆಯವರಿಗೂ ಅನಿಸಿತು. &lt;br /&gt;&lt;br /&gt;ಸವಿತಾಳಿಗೆ ಇದಕ್ಕೆ ಏನು ಹೇಳಬೇಕೆಂದು ನಿಜವಾಗಿಯೂ ತಿಳಿಯಲಿಲ್ಲ. ಉತ್ತರ ಕೊಡುವ ಚಪಲವೂ ಅವಳಿಗಿರಲಿಲ್ಲ. ಪಕ್ಕದೂರಿಗೆ ಹೋಗುತ್ತಿದ್ದ ಮಕ್ಕಳು ತಮ್ಮ ಮನೆಯ ವಿಶೇಷ ವಿಷಯಗಳನ್ನು ಚಾಚೂ ತಪ್ಪದೆ ತಮ್ಮ ಗೆಳೆಯರ ಬಳಿ ಹೇಳುತ್ತಿದ್ದರು. ಆ ಊರಿನ ಕೆಟ್ಟು ಹೋದ ಪಂಪು ಸೆಟ್ಟುಗಳ ಬಗ್ಗೆ ವರದಿ ಮಾಡಲು ಬಂದಿದ್ದ ಟೀವಿಯವರಿಗೆ ಈ  ಸುದ್ದಿ ಕೇಳಿದ್ದೇ ಎಲ್ಲಿಲ್ಲದ ಖುಷಿಯಾಯಿತು. ’ಗಂಡನ ಕುಡಿತಕ್ಕೆ ಹೆಂಡತಿಯೇ ಸ್ಪಾನ್ಸರರ್’ ವಿಶೇಷ ವರದಿ ಮುಂದಿನ ಸೋಮವಾರ ಹತ್ತು ಘಂಟೆಗೆ ಕ್ರೈಮ್ ಸ್ಟೋರಿಯಲ್ಲಿ ಪ್ರಸಾರವಾಗುವುದಿತ್ತು. &lt;br /&gt;&lt;br /&gt;ಅದಕ್ಕೆ, ನವೀನ ಟೀವಿ ಚಾನ್ನಲ್ಲಿನವರೊಂದಿಗೆ ಊರಿಗೆ ಬಂದಿದ್ದನು. ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡಾಗಿತ್ತು ಸವಿತಾ. ಇಂತಹ ಕೆಟ್ಟ ಸಮಾಜವನ್ನೂ, ಕೆಟ್ಟ ಗಂಡನನ್ನೂ, ಅವಳನ್ನು ಮದುವೆ ಮಾಡಿಕೊಟ್ಟ ತವರುಮನೆಯವರನ್ನೂ ನವೀನ ಸಾರಾಸಗಟಾಗಿ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದನು.ಅವನು ಮಾತನಾಡುತ್ತಿದ್ದ ರೀತಿಗೆ ಅಲ್ಲಿ ನಿಂತ ಜನರೇ ಅಸಹ್ಯಪಡುವಂತಾಯಿತು. ಇಂತಹ ಅನ್ಯಾಯದ ವಿರುದ್ಧ ಹೋರಾಡಿ, ಜಮೀನು ಸಂಪಾದಿಸಿರುವ ಸವಿತಾಳನ್ನು ಹಾಡಿ ಹೊಗಳಿದನು. ಆದಷ್ಟು ಬೇಗ ಅವಳಿಗೆ ಸುಬ್ಬಯ್ಯನಿಂದ ಬಿಡುಗಡೆ ಕೊಡಿಸಿ, ಸ್ವತಂತ್ರಳನ್ನಾಗಿ ಮಾಡಬೇಕಾದ ಅಗತ್ಯವನ್ನು ಸಾರಿದನು.    &lt;br /&gt;&lt;br /&gt;ಕಡೆಯದಾಗಿ ಒಂದು ಪ್ರಶ್ನೆ - ಗಂಡಸರಿಗೆ ನಿಮ್ಮ ಸಂದೇಶವೇನು? ಕೇಳಿದನು ನವೀನ. ’ಭಯವಿಲ್ಲ ಹೇಳಿ’ ಮತ್ತೆ ಕೇಳಿದ. ಕ್ಷಣ ತಡೆದು ಸವಿತಾ ಹೇಳಿದಳು, "ಗಂಡಸರಿಗೊಂದು, ಹೆಂಗಸರಿಗೊಂದು ಹೇಳವುದಕ್ಕೆ ನನಗೇನು ಗೊತ್ತಿಲ್ಲ. ನನಗೆ ಸುಖ ಹೇಗೆ ಸಿಕ್ಕಿತೋ ಹಾಗೆ ಕಷ್ಟವೂ ಸಿಕ್ಕಿದೆ. ಎರಡನ್ನೂ ಅನುಭವಿಸುತ್ತಿದ್ದೇನೆ. ಕಷ್ಟ ಬಂದರೆ ಎದುರಿಸಿ. ನಾನು ನನ್ನ ಮಕ್ಕಳ ಕ್ಷೇಮಕ್ಕಾಗಿ ಓಡಿಹೋದರೆ, ಜೊತೆಯಲ್ಲಿ ಇರ್ತೇನೆ ಎಂದು ಅವರಿಗೆ ಕೊಟ್ಟ ಮಾತಿಗೆಲ್ಲಿ ಬೆಲೆ? ನಮಗೆ ಕ್ಷೇಮವಾಗಿರುವ ಕಡೆಗೆಲ್ಲಾ ಹೋಗುತ್ತಿದ್ದರೆ ಜೀವನವನ್ನು ಎದುರಿಸಿದ್ದು ಯಾವಾಗ?..."&lt;br /&gt;&lt;br /&gt;ಸವಿತಾಳ ಮಾತು ನಿಂತ ಮೇಲೆ ನವೀನನ ಅಬ್ಬರ ಏಕೋ ಕಡಿಮೆಯಾದ ಹಾಗೆ ಕಾಣುತಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-6754791000288632650?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/6754791000288632650/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/09/blog-post_28.html#comment-form' title='15 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/6754791000288632650'/><link rel='self' type='application/atom+xml' href='http://www.blogger.com/feeds/4527995432766899913/posts/default/6754791000288632650'/><link rel='alternate' type='text/html' href='http://muttumani.blogspot.com/2008/09/blog-post_28.html' title='ಸವಿತಾ'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>15</thr:total></entry><entry><id>tag:blogger.com,1999:blog-4527995432766899913.post-1056531199887919247</id><published>2008-09-12T22:30:00.000+05:30</published><updated>2008-09-12T22:48:17.461+05:30</updated><category scheme='http://www.blogger.com/atom/ns#' term='ಪದ್ಯ'/><category scheme='http://www.blogger.com/atom/ns#' term='ಶಿಶುಪ್ರಾಸ'/><title type='text'>ಶಿಶು ಪ್ರಾಸ ಇರಬಹುದು.......</title><content type='html'>ಲಾಭ - ನಷ್ಟ, ಕಾಸ್ಟ್ ಪ್ರೈಸ್ - ಸೆಲ್ಲಿಂಗ್ ಪ್ರೈಸ್ ಬಗ್ಗೆ ನಾಲ್ಕನೆ ಕ್ಲಾಸಿನ ಮಕ್ಕಳಿಗೆ ಆಟಗಳ ಸಿಡಿಗಳನ್ನು ಮಾಡುವ ಪ್ರಾಜೆಕ್ಟನ್ನು ಕೈಗೆತ್ತಿಕೊಂಡಿದ್ದಾರೆ, ನಮ್ಮ ಕಂಪನಿಯವರು. ಸರಿ, ನನಗೆ ಸಿಡಿ ಟೈಟಲ್ ಸಾಂಗ್ ಬರೆಯುವ ಕೆಲಸ - ಇಂಗ್ಲೀಷಿನಲ್ಲಿ. ಆದರೆ, ಆಗಿದ್ದೇನೂಂದ್ರೆ...&lt;br /&gt;&lt;br /&gt;&lt;br /&gt;ಮೀಟೂನು ಕಿಟ್ಟುನೂ ಮಾಡ್ಬೇಕಂತೆ ಬಿಸಿನೆಸ್ &lt;br /&gt;ಯಾರಿಗೊತ್ತು? ಯಾರ್ಹೇಳ್ಕೊಡ್ತೀರ್? ಆಗ್ಲೆಬಾರ್ದು ಲಾಸಸ್ &lt;br /&gt;&lt;br /&gt;ಕಿಟ್ಟುಗಂತು ಅದೇ ಯೋಚ್ನೆ, ಎಷ್ಟೊಂದ್ ಜಾಸ್ತಿ ಕಾಸ್ಟು &lt;br /&gt;ಸೆಲ್ಲಿಂಗ್ ಪ್ರೈಸ್ ಜಾಸ್ತಿ ಆಗ್ಲೇಬೇಕು ಹೇಗಾದ್ರೂ ಅಟ್ ಲಾಸ್ಟು &lt;br /&gt;&lt;br /&gt;ಸೆಲ್ಲಿಂಗ್ಗಿಂತ ಕಾಸ್ಟ್ ಪ್ರೈಸೇ ಜಾಸ್ತಿ ಏನಾರ್ ಆದ್ರೆ &lt;br /&gt;ಕಿಟ್ಟೂಗ್ ಚಿಂತೆ ಲಾಸಾಗಿ ಬಿಸಿನೆಸ್ ಬಿದ್ಗಿದ್ ಹೋದ್ರೆ &lt;br /&gt;&lt;br /&gt;ಪರ್ಸೆಂಟ್ ಕಂಡು ಹಿಡಿಯೋದ್ರಲ್ಲಿ ಮೀಟು ಬಲು ಬಲು ಜಾಣ &lt;br /&gt;ಅಷ್ಟಕಿಷ್ಟು, ಇಷ್ಟಕಷ್ಟು, ಹಂಗಾರ್ ನೂರಕೆಷ್ಟು? ಅನ್ನೋದೆ ಅದರ ಪ್ರಾಣ &lt;br /&gt;&lt;br /&gt;ಅಂಗಡಿ ಕಟ್ಟಿ, ಸಾಮಾನ್ ತಂದು, ಕಿಟ್ಟು - ಮೀಟು ಜೋಡಿ &lt;br /&gt;ಬಿಸಿನೆಸ್ ಮಾಡಿ, ಪ್ರಾಫಿಟ್ ಅಂತು ಬಂತೇ ಬಂತು ನೋಡಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-1056531199887919247?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/1056531199887919247/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/09/blog-post.html#comment-form' title='20 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/1056531199887919247'/><link rel='self' type='application/atom+xml' href='http://www.blogger.com/feeds/4527995432766899913/posts/default/1056531199887919247'/><link rel='alternate' type='text/html' href='http://muttumani.blogspot.com/2008/09/blog-post.html' title='ಶಿಶು ಪ್ರಾಸ ಇರಬಹುದು.......'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>20</thr:total></entry><entry><id>tag:blogger.com,1999:blog-4527995432766899913.post-2853756649403830312</id><published>2008-08-15T19:34:00.001+05:30</published><updated>2008-09-04T22:00:43.562+05:30</updated><category scheme='http://www.blogger.com/atom/ns#' term='ಅನುವಾದ'/><category scheme='http://www.blogger.com/atom/ns#' term='ಮನಸ್ಸು'/><category scheme='http://www.blogger.com/atom/ns#' term='ಕಾವ್ಯ'/><category scheme='http://www.blogger.com/atom/ns#' term='poem'/><category scheme='http://www.blogger.com/atom/ns#' term='translation'/><title type='text'>ಅವಳ ಮನಸ್ಸು</title><content type='html'>ನನ್ನ ಅಕ್ಕ ಇಂಗ್ಲೀಷಿನಲ್ಲಿ ಬರೆದ ಪದ್ಯವನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಅವಳದ್ದೇ ಆರ್ಡರ್, ಅವಳೇ ಎಡಿಟರ್, ಡೈರೆಕ್ಟರ್ :).....&lt;br /&gt;&lt;br /&gt;&lt;br /&gt;ಅವಳ ಮನದ ಬಾಗಿಲು ಹಾಕಿತ್ತು&lt;br /&gt;ಬಹುದಿನಗಳಿಂದ&lt;br /&gt;ಭದ್ರಪಡಿಸಿದ್ದಳು ಬಾಗಿಲನ್ನು&lt;br /&gt;ಬಹುದೊಡ್ಡ ಬೀಗ ಹಾಕಿ&lt;br /&gt;&lt;br /&gt;&lt;br /&gt;ಒಳಗಡೆ ಇಣುಕಲು ,&lt;br /&gt;ಯಾರಿಗೂ ಸಾಧ್ಯವಾಗಿಲ್ಲ....&lt;br /&gt;ಅದರಾಚೆಗೆ ಏನಿತ್ತು?&lt;br /&gt;ಕತ್ತಲೆಯ ಮಡಿಲಲ್ಲಿ....&lt;br /&gt;ಕಾಣದ ಕಡಲಾಳದಲ್ಲಿ...&lt;br /&gt;ಮನದ ಸಾಮ್ರಾಜ್ಯದಲ್ಲಿ....&lt;br /&gt;ತೋರದ ಜಗತ್ತಿನಲ್ಲಿ....&lt;br /&gt;&lt;br /&gt;&lt;br /&gt;ಬೀಗದ ಕೈ ಕಳೆದು ಹೋಗಿತ್ತು&lt;br /&gt;ಒಂಟಿತನದ ತಳವಿರದ ಬಾವಿಯಲ್ಲಿ&lt;br /&gt;&lt;br /&gt;ಬೆಳ್ಳಿ ಮೀನುಗಳು ಹರಿದಾಡುತ್ತಿದ್ದವು&lt;br /&gt;ಅವಳ ಮನದ ಪುಟಗಳಲ್ಲಿ...&lt;br /&gt;ಯೋಚನೆಯ ಜೇಡವೊಂದು...&lt;br /&gt;ಬಲೆಗಳನು ಹೆಣೆದುಬಿಟ್ಟಿತ್ತು ಅವಳ ಎದೆಯ ನಾಕು ಕೋಣೆಯಲ್ಲಿ&lt;br /&gt;&lt;br /&gt;&lt;br /&gt;ಧೂಳು ಹಿಡಿದಿತ್ತು...ಪದರ...ಪದರವಾಗಿ&lt;br /&gt;ಮೃದು,ಮಧುರವಾದದ್ದೇನೂ ಒಳಗೆ ಬರಲಾಗದಂತೆ&lt;br /&gt;&lt;br /&gt;...ಬೆಚ್ಚಗಿನ ಸೂರ್ಯಕಿರಣಗಳು&lt;br /&gt;...ಮುತ್ತಿನ ಮಣಿಗಳ ಮಂಜು&lt;br /&gt;...ತಂಪಿನ ತಂಗಾಳಿ&lt;br /&gt;ಯಾವುದಕ್ಕೂ ಅಲ್ಲಿ ಪ್ರವೇಶವಿಲ್ಲ...&lt;br /&gt;&lt;br /&gt;ಗೆಳೆಯರು ಬಂದರು...&lt;br /&gt;ಬೀಗ ತೆಗೆದು ನೋಡಲು,ಮನಸು ಹಗುರ ಮಾಡಲು...&lt;br /&gt;ಏನೂ ಸುಖವಿಲ್ಲ...&lt;br /&gt;&lt;br /&gt;ಅಸೂಯೆ ಹುಟ್ಟಿ, ಅವಳ ದಾರಿ ತಪ್ಪಿಸಲು ಬಂದರು ಕೆಲವರು&lt;br /&gt;ಬಂದ ದಾರಿಗೆ ಸುಂಕವಿಲ್ಲ...&lt;br /&gt;&lt;br /&gt;ಆ ದಿನ , ಆಷಾಡದ ಶುಕ್ರವಾರ&lt;br /&gt;ಮುಳುಗಿದ್ದಳು ಅವಳು ಕಚೇರಿಯ ಕಡತ-ಡ್ರಾಯಿಂಗುಗಳಲ್ಲಿ,&lt;br /&gt;&lt;br /&gt;ಗಾಳಿಗೂ ತನ್ನ ಅದೃಷ್ಟದ ಪರೀಕ್ಷೆ ಮಾಡಬೇಕೆನಿಸಿರಬೇಕು&lt;br /&gt;………………ನವಿರಾಗಿ ಅವಳ ತಲೆಯ ಮೇಲೆ ಹಾಯ್ತು&lt;br /&gt;ತನ್ನ ತಲೆಗೆ ಸಿಕ್ಕ ಹೇರುಪಿನ್ನನ್ನು, ಮತ್ತೂ ಬಿಗಿಯಾಗಿಸಿದಳು&lt;br /&gt;ಗಾಳಿಗೆ ಅಲ್ಲೇನೂ ಕೆಲಸವಿರಲಿಲ್ಲ...&lt;br /&gt;&lt;br /&gt;&lt;br /&gt;ಅವನು ಅವಳನ್ನೇ ನೋಡುತ್ತಿದ್ದ……&lt;br /&gt;………ಎದುರಿನ ಕಿಟಕಿಗೆ ಒರಗಿ.&lt;br /&gt;&lt;br /&gt;&lt;br /&gt;ಅವನು ಏನು ಹೇಳಬಹುದು? ಇವಳೇ ಊಹಿಸಿದಳು...&lt;br /&gt;“ಆ ಬಿಗಿಯನ್ನು ತೆಗೆದುಬಿಡು...ಸುಂದರವಾಗಿ ಕಾಣುತ್ತೀಯೆ”&lt;br /&gt;&lt;br /&gt;* * *&lt;br /&gt;&lt;br /&gt;ಇದೇ ಮಾತು ಕೇಳಿ ಕೇಳಿ ಅವಳಿಗೂ ಬೇಸರವಾಗಿತ್ತು&lt;br /&gt;ನೂರು ಸಲ, ಸಾವಿರ ಸಲ ಈ ಹಿಂದೆಯೂ ಕೇಳಿ ಆಗಿತ್ತು&lt;br /&gt;ನೂರು ಜನ, ಸಾವಿರ ಜನ ಅದನ್ನೇ ಹೇಳಿದ್ದರು&lt;br /&gt;&lt;br /&gt;ಇವಳು ಕುಂಟೇಬಿಲ್ಲೆಯಾಡುತ್ತಾ ಮನೆಯಿಂದ ಮನೆಗೆ ಎಗರುವಾಗ&lt;br /&gt;…ಪಕ್ಕದಲ್ಲೇ ಗೋಲಿ ಆಡುತ್ತಿದ್ದ ಹುಡುಗರು&lt;br /&gt;ಇವಳು ಮುಂದಿನ ಬೆಂಚಿನಲ್ಲಿ ಕೂತು ನೋಟ್ಸಿನೊಂದಿಗೆ ಒದ್ದಾಡುವಾಗ&lt;br /&gt;…ಹಿಂದುಗಡೆ ಬೆಂಚಿನಲ್ಲಿ ಕೂತ ಹುಡುಗರು&lt;br /&gt;ಇವಳು ಕೆಮಿಸ್ಟ್ರಿ ಲ್ಯಾಬಿನಲ್ಲಿ ಸಲ್ಯೂಷನ್ ತಯಾರಿಸುವಾಗ&lt;br /&gt;…ಆಚೆಕಡೆಯ ಸಾಲಿನಲ್ಲಿ ನಿಂತ ಹುಡುಗರು&lt;br /&gt;&lt;br /&gt;* * *&lt;br /&gt;ಅವಳು ಫೈಲಿನೊಳಗೆ ಇನ್ನೂ ಮುಳುಗಲು ಪ್ರಯತ್ನಿಸಿದಳು&lt;br /&gt;ಅವಳಿಗೂ ಗೊತ್ತು ಅದೇ ದಾರಿ ಎಂದು...&lt;br /&gt;ಆದರೆ, ಅವನು ಅದನ್ನು ಹೇಳಲೇ ಇಲ್ಲ.....&lt;br /&gt;&lt;br /&gt;"ಗಂಟು ತೆಗಿ ಒದ್ದೆ ಕೂದಲು , ತಲೆನೋವು ಬಂದೀತು...&lt;br /&gt;ನನ್ನ ತಾಯಿ ಹೇಳುತ್ತಿದ್ದರು... ತಂಗಿಗೆ!&lt;br /&gt;ಮುದ್ದು ತಂಗಿ ನನ್ನ ಹಿಂದೆ ಅಡಗುತ್ತಿದ್ದಳು...&lt;br /&gt;ಅಮ್ಮ ಅವಳ ತಲೆಯನ್ನು ಬಲವಂತವಾಗಿ ಒರಸಲು ಬಂದಾಗ"&lt;br /&gt;&lt;br /&gt;ಇದಿಷ್ಟೇ ಅವನು ಹೇಳಿದ್ದು...&lt;br /&gt;ಅಷ್ಟು ಹೇಳಿ, ಅವನೂ ಕಳೆದುಹೋದ...&lt;br /&gt;ತನ್ನ ಸವಿನೆನಪುಗಳಲ್ಲಿ......&lt;br /&gt;ತನ್ನ ಆಲೋಚನೆಗಳಲ್ಲಿ......&lt;br /&gt;ತನ್ನ ಮನೆಯ ಮೂಲೆಯಲ್ಲಿ..... ತುಂಬಾ ದೂರದಲ್ಲಿ...&lt;br /&gt;&lt;br /&gt;ಅವಳ ಕೈಗೆ ಅದರದೇ ಮರ್ಜಿ ಬಂತೇನೋ.....&lt;br /&gt;ಗಳಿಗೆಯಲ್ಲಿ ಅವಳ ಬಿಗಿ ಬೀಗದಿಂದ, ಕೂದಲು ಬಿಡಿಸಿಕೊಂಡಿತ್ತು.&lt;br /&gt;.&lt;br /&gt;.&lt;br /&gt;.&lt;br /&gt;.&lt;br /&gt;.&lt;br /&gt;.&lt;br /&gt;ನವಿರಾದ ಮುಂಗುರೊಳೊಂದು ಕಚಗುಳಿಯಿಡುತ್ತಿದೆ...&lt;br /&gt;ಗಾಳಿ ಅವಳ ರೇಷಿಮೆ ಕೂದಲೊಂದಿಗೆ ಆಟವಾಡುತ್ತಿದೆ...&lt;br /&gt;ಅವಳು....&lt;br /&gt;ಅವನೊಂದಿಗೆ, ಮುಸ್ಸಂಜೆಯಲ್ಲಿ, ಹೂದೋಟದಲ್ಲಿ...&lt;br /&gt;ಸುಮ್ಮನೆ ನಕ್ಕುಬಿಡುತ್ತಾಳೆ,&lt;br /&gt;ಅಂದಿನಿಂದ ಇಂದಿನವೆರೆಗೂ...&lt;br /&gt;ಯಾರಿಗೂ ಅಗಿರಲಿಲ್ಲ...&lt;br /&gt;ಅವನು ಬೀಗ ತೆಗೆದಿದ್ದಾದರೂ ಹೇಗೆ?!&lt;br /&gt;ಅವಳ ಮನಸ್ಸಿನ ಬೀಗ ...&lt;br /&gt;ಯಾವ ಕೈಯೂ, ಬುದ್ಧಿವಂತಿಕೆಯೂ ತೆಗೆಯಲಾಗದ ಬೀಗ&lt;br /&gt;&lt;br /&gt;                 * * * * * * &lt;br /&gt;&lt;br /&gt;ಮೂಲ ಪದ್ಯವನ್ನು ಓದಿ - &lt;a href="http://geethascribbling.blogspot.com/2008/08/key.html."&gt;http://geethascribbling.blogspot.com/2008/08/key.html.&lt;/a&gt; ಇದು ನನ್ನ ಮೊದಲ ಪ್ರಯತ್ನವಾದ್ದರಿಂದ ನಿಮ್ಮ ಕ್ರಿಟಿಕ್ಸ್ಗಾಗಿ ಕಾದಿದ್ದೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-2853756649403830312?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/2853756649403830312/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/08/blog-post.html#comment-form' title='11 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/2853756649403830312'/><link rel='self' type='application/atom+xml' href='http://www.blogger.com/feeds/4527995432766899913/posts/default/2853756649403830312'/><link rel='alternate' type='text/html' href='http://muttumani.blogspot.com/2008/08/blog-post.html' title='ಅವಳ ಮನಸ್ಸು'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>11</thr:total></entry><entry><id>tag:blogger.com,1999:blog-4527995432766899913.post-4071468704634151682</id><published>2008-06-01T15:19:00.000+05:30</published><updated>2008-06-07T13:04:37.633+05:30</updated><title type='text'>ತರಗತಿಯಲ್ಲಿ......</title><content type='html'>ಆಸೆ ಬಿದ್ದು ಕರೆಸ್ಪಾಡೆಂನ್ಸಿನಲ್ಲಿ ಎಮ್.ಎ. ತಗೊಂಡು ಕಾಂಟ್ಯಾಕ್ಟ್ ಕ್ಲಾಸಿಗೆ ಹೋಗಿ ಕೂತರೆ ಅಲ್ಲಿ ಆದದ್ದೆ ಬೇರೆ.&lt;br /&gt;&lt;br /&gt;                       *            *            *&lt;br /&gt;&lt;br /&gt;ಪರೀಕ್ಷೆಯ ದಿನ ಒಂದೇ ಬಾರಿಗೆ ಬರೆಯಲು ಹೋದರೆ ಕೈ ನೋವು ಬರಬಹುದು. ಹೌದು, ಈಗಷ್ಟೇ ಕ್ಲಾಸು ಮುಗಿಸಿ ಹೋದ ಶಶಿಕಲಾ ಮೇಡಮ್ಮು ಇದನ್ನೇ ಹೇಳಿದರು. ಅದಕ್ಕೆ ಬರೆಯುವುದನ್ನು ಅಭ್ಯಾಸ ಮಾಡುತ್ತಿದ್ದೇನೆ. ಈ ಅಭ್ಯಾಸ ಮಾಡುವುದಕ್ಕೆ ಬಹುಶಃ ಇದಕಿಂತ ಪ್ರಶಸ್ತವಾದ ಸಮಯ ಸಿಗಲಾರದು. &lt;br /&gt;&lt;br /&gt;ಮುಂದೆ ನಿಂತು ಮಾತನಾಡುತ್ತಿರುವ ಪ್ರಾಣಿಯ ಹೆಸರು ಸಣ್ಣಯ್ಯ. ’ಪಂಪ ಪೂರ್ವ ಯುಗದ ರೂಪು ರೇಷೆ’(ಕಾವ್ಯಗಳದ್ದು)- ಆಹಾ!ಎಂತಹ ವಿಷಯ ಪರೀಕ್ಷೆಗೆ. ನನಗೆ ಮೊದಲೇ ಹಳೆಯದ್ಯಾವುದನ್ನೋ ಹುಡುಕಿಕೊಂಡು ಹೋಗುವುದು ಬೇಜಾರಿನ ವಿಷಯ. ಲೈಬ್ರರಿಯಲ್ಲಿ ನಾನು ಹುಡುಕಿ ಓದುವುದು ಅಷ್ಟರಲ್ಲೇ ಇದೆ. ಇಲ್ಲಿ ಯಾರಾದರೂ ಪಾಠ ಮಾಡಿ ನನಗೂ ಏನಾದರೂ ಒಳ್ಳೆಯದಾಗಬಹುದೆಂದು ಆಶಿಸಿದ್ದೆ. ಊಹೂ... ಅಂಥದ್ದೇನೂ ಆಗುವ ಹಾಗೆ ಕಾಣುತ್ತಿಲ್ಲ. ಬರೆಯುತ್ತಿದ್ದಂತೆ ಕೈ ನೋವು ಬರುತ್ತಿದೆ. &lt;br /&gt;&lt;br /&gt;ಬಹುಶಃ, ಈ ಮನುಷ್ಯನ ಕ್ಲಾಸಿನಲ್ಲಿ ಕೂರುವ ಬದಲು ಆತ ತಂದಿರುವ ಫೈಲಿನಲ್ಲಿರುವ ಪೇಪರುಗಳನ್ನು ಜೆರಾಕ್ಸು ತಗೊಂಡು ಓದಿಕೊಳ್ಳುವುದು ಉಪಯೋಗಕ್ಕೆ ಬರಬಹುದು. ಓಹೋ! ಮರೆತು ಹೋಯ್ತು ಅನಿಸುತ್ತದೆ.ಪೇಪರು ಹುಡುಕುತ್ತಿದ್ದಾರೆ. ಸರಿ, ಸರಿ, ಈಗ ಗೊತ್ತಾಯ್ತು, ಬಂದ ಕೂದಲೇ, ಫ್ಯಾನು ಆರಿಸಿ, ಕಡಿಮೆ ಮಾಡಿ ಎಂದು ಗೋಳಿಟ್ಟಿದ್ದು ಯಾಕೆ ಅಂತ.. ಪೇಪರು ಫೈಲಿನಿಂದ ಆರಿಹೋಗುತ್ತಿದೆ. ಪಾಪ! ಮೊಣಕೈಯಿಂದ - ಅಂಗೈವರೆಗೂ ಎರಡೂ ಕೈಗಳನ್ನು ಪೋಡಿಯಮ್ಮಿನ ಮೇಲೆ ಭದ್ರವಾಗಿ ಊರಿ ಪೇಪರುಗಳನ್ನು ಹಿಡಿತಲ್ಲಿಟ್ಟುಕೊಳ್ಳಲು ಪ್ರಯತ್ನ ಪಡುತ್ತಿರುವುದನ್ನು ನೋಡಿದರೆ ನಗು ಬರುತ್ತದೆ. &lt;br /&gt;&lt;br /&gt;ಯಾವುದಾದಾರೂ ರಕ್ಷಣಾ ಪಡೆಯದ್ದೋ, ಕನ್ನಡ ವೇದಿಕೆಯದ್ದೋ ಮೆಂಬರಾಗಿರಬೇಕು ಈ ಮನುಷ್ಯ. ಮಾತುಮಾತಿಗೂ ಕನ್ನಡಾ ಮಾತೆ, ಕನ್ನಡ ಜನರ ಸಂವೇದನಾಶೀಲತೆ, ದೇಶಪ್ರೇಮ ಇವೇ ಮಾತುಗಳು. ’....ಗೋದಾವರಿ ನದಿ ಆಂಧ್ರ ಪ್ರದೇಶದಲ್ಲಿದ್ದರೂ... ಶ್ರೀ ವಿಜಯ ಕನ್ನಡದವನೇ.... ಸಾಮಾಜಿಕ ಒತ್ತಡಕ್ಕೆ ಬಲಿಯಾಗಿ ನಮ್ಮ ಜಾಗವನ್ನು ಬೇರೆಯವರಿಗೆ ನೀಡಿದ್ದೇವೆ’ ಎಂತಹ ವ್ಯಾಖ್ಯಾನ! ಭಾಷೆಯ ಬೆಳವಣಿಗೆಯ ಬಗ್ಗೆ ಬೇರೆ ಮಾತನಾಡುತ್ತಿದ್ದಾರೆ. ಇಂಗ್ಲೀಷಿಗೂ - ಸಂಸ್ಕೃತಕ್ಕೂ ನಂಟು ಬೇರೆ. ಹೋಓಓಓಓಓಓ....,  ಕರೆಂಟು ಹೋಯ್ತು. ಇನ್ನು ಫೈಲಿನಲ್ಲಿರುವ ಪೇಪರುಗಳು ಕಾಣುತ್ತವೋ? ಇಲ್ಲವೋ? ಗಂಟೆ ಆರಾಯಿತು. ಅಯ್ಯೋ ಪಾಪ! ಇಂತಹ ಗತಿ ಬರಬಾರದಾಗಿತ್ತು. &lt;br /&gt;&lt;br /&gt;....ಒಬ್ಬನು ಗುಣನಂದಿ, ಇಬ್ಬರು ಗುಣವರ್ಮ, ಒಬ್ಬ ಅದನ್ನು ಬರೆದವನು, ಇನ್ನೊಬ್ಬ ಇದನ್ನು ಬರೆದವನು... ಇಲ್ಲಿಗೆ ಪಂಪಪೂರ್ವ ಯುಗದ ರೂಪುರೇಷೆ ಮುಕ್ತಾಯವಾಯಿತು. ಮುಂದೆ ನಾವು ಯೋಚನೆ ಮಾಡಬೇಕಾಗಿರುವುದು..... ಪರೀಕ್ಷೆ ಪಾಸು ಮಾಡುವುದು ಹೇಗೆ ಎಂದು?@#$!$$  &lt;br /&gt;..... ೧ರಿಂದ ೯ನೇ ಶತಮಾನದವರೆಗೂ ಮುಗಿಸಿ ಈಗ ೧೦ನೇ ಶತಮಾನಕ್ಕೆ. ಅಂದರೆ, ೧-೪ನೇ ಪೇಜುಗಳನ್ನು ಓದಿ ಮುಗಿಸಿ ೫ನೇ ಪೇಜಿಗೆ ಬಂದಿದ್ದಾರೆ. ಹೋಗಿ ಬಾಗಿಲು ತೆಗೆಯುತ್ತಿದ್ದಾರೆ. ಆರೂವರೆ ಆಗುತಾ ಬಂತು. ಪಾಪ.. ಬೆಳಕು ಸಾಲದು, ಕರೆಂಟು ಬೇರೆ ಹೋಗಿದೆ..&lt;br /&gt;&lt;br /&gt;&lt;br /&gt;ಹಿಂದಿನ ಬೆಂಚಿನಿಂದ..."@#%&amp;*()*&amp;$@!$^&amp;"&lt;br /&gt;ಯಾರಪ್ಪ ಅದು ಪ್ರಶ್ನೆ ಕೇಳೋರು? ಈ ಮನುಷ್ಯನಿಗೆ ಕೋಪ ಬೇರೆ ಬರುತ್ತಿದೆ. ಕತ್ತಲಾಗುತ್ತಿದ್ದ ಹಾಗೆ ಕಣ್ಣೂ ಕಾಣುವುದಿಲ್ಲವಂತೆ. ಪಂಪನಲ್ಲಿರುವ ಸಿಟ್ಟಿನಬಗ್ಗೆ ಮಾತನಾಡುತ್ತಿದ್ದಾನೆ. ಓಹೋ! ಬಂತು ಬಂತು ಮೈ ಮೇಲೆ ದೇವರು ಬಂತು. ಧಡ್! ಪೋಡಿಯಮ್ಮಿನ ಮೇಲೆ ಕುಟ್ಟಿದ ಜೋರಿಗೆ ಮೊದಲನೇ ಬೆಂಚಿನಲ್ಲೇ ನಿದ್ದೆ ಮಾಡುತ್ತಿದ್ದ ಹುಡುಗಿ ಎದ್ದು ಕೂತಳು. ಉದ್ದೇಶವೂ ಅದೇ ಆಗಿತ್ತೋ ಏನೋ? ಹಿಹಿಹಿ... ಬೆಳಕು ಚೆನ್ನಾಗಿದ್ದಾಗ ನಡೆಯುತ್ತಿದ್ದಷ್ಟು ವೇಗವಾಗಿ ಪಾಠ ಈಗ ನಡೆಯುತ್ತಿಲ್ಲ. ಏನು ಹೇಳಬೇಕೆಂದು ಗೊತ್ತಾಗಿತ್ತಿಲ್ಲವೋ ಏನೋ, ೩ ಸೆಕೆಂಡಿಗೆ ಒಂದು ಪದ ಹೊರಕ್ಕೆ ಬರುತ್ತಿದೆ. ... ಈಗ ಪಂಪ ತನ್ನ ರಾಜನ ಮೇಲೆ ಯಾಕೆ ಬರೆಯಬೇಕಾಗಿತ್ತು ಎಂದು ಚರ್ಚೆ. ಈತ ಸಾಹಿತ್ಯವನ್ನು ಓದುವ ಬದಲು ಮಾರ್ಕ್ಸ್ ವಾದವನ್ನೋ,ಕಮ್ಯುನಿಸಮ್ಮನ್ನೋ ಓದಿಕೊಂಡಿದ್ದರೆ ಚೆನ್ನಾಗಿತ್ತು. ಪಂಪ ಕರ್ಣನ ಕಡೆಗಾದರೆ ರನ್ನ ಅರ್ಜುನನ ಕಡೆಗಂತೆ. ಇವರಿಬ್ಬರೂ ಸೇರಿ ತಮ್ಮ ಕಾವ್ಯಗಳಲ್ಲಿ ಪ್ರಭುತ್ವವನ್ನು ಮಣಿಸಲು ಪ್ರಯತ್ನಿಸಿದ್ದರಂತೆ. &lt;br /&gt;&lt;br /&gt;ಸೊಳ್ಳೆ ಕಚ್ಚುತ್ತಿದೆ. ಹೇಳಿ-ಕೇಳಿ ಬೆಂಗಳೂರಿನ ಜ್ನಾನಭಾರತಿಯಲ್ಲಿ ಕ್ಲಾಸು. ಕುಂಟುಮಿಡತೆ ಕುಟುರ್ ಗುಟ್ಟುತ್ತಿದೆ. &lt;br /&gt;&lt;br /&gt;ಏನೇನು ಆತನಿಗೆ ಗೊತ್ತಾಗುವುದಿಲ್ಲವೋ ಅದನ್ನು ನಾವು ಗಮನಿಸಿಕೊಳ್ಳಬೇಕು. ರನ್ನ, ದುರ್ಯೋಧನರಿಬ್ಬರೂ ಯುದ್ಧಕ್ಕೆ ಹೋದರಂತೆ. ರಾಮ - ಲಕ್ಷ್ಮಣರಿಬ್ಬರೂ ಕಾಡಿನಲ್ಲಿ ಒಬ್ಬ ಹೆಣ್ಣಿನ ಮೇಲೆ ಹಲ್ಲೆ ಮಾಡಿದರಂತೆ. ರಾವಣ ಏಕಪತ್ನೀವ್ರತಸ್ಥನಂತೆ. ಆದ್ದರಿಂದ, ಅವನು ಸೀತೆಯನ್ನು ಕರೆದುಕೊಂಡು ಹೋಗಿ ಮಂಡೋದರಿಗೆ ಒಪ್ಪಿಸಿದನಂತೆ. ಈ ಎಲ್ಲದರಿಂದ ೧೦ನೇ ಶತಮಾನದ ಕವಿಗಳು ಜನರನ್ನು ಹೊಸ ಆಲೋಚನೆಯ ಕಡೆ ಎಳೆದುಕೊಂಡು ಹೋದರಂತೆ. ಇದೆಲ್ಲವೂ ಯಾವ ಯುಗದ ರೂಪುರೇಷೆಯೋ ಕಾಣೆ? &lt;br /&gt;&lt;br /&gt;...ನಮಗೆ ೧೦ನೇ ಶತಮಾನ ಹೊಸ ಪಾಠವನ್ನು ಕಲಿಸಿಕೊಟ್ಟಿದ್ದನ್ನು ಮರೆಯಬಾರ್ದು! ಇನ್ನೇನೋ ಒಂದಷ್ಟು ವಡ.. ವಡ.. ವಡ.. ಇದ್ಯಾವುದನ್ನೂ ನಾವು ಮಾರೀಬಾರ್ದು. ೧  ಗಂಟೆಕಾಲದಿಂದ ಬರೆಯಿತ್ತಿದ್ದೇನೆ. ಆದರೆ, ಬರೆಯುವುದಕ್ಕಾಗಿದ್ದು ನಾಲ್ಕೇ ಪೇಜು. ಇದೇ ನನ್ನ ಎಕ್ಸಾಮಿನ ಸ್ಪೀಡಾದರೆ ಏನಪ್ಪಾ ಎಂದು ಭಯ ಆಗ್ತಿದೆ. ವಡ್ಡಾರಾಧನೆಯ ರೂಪುರೇಷೆಯ ಬಗ್ಗೆ ಈಗ ಡಿಸ್ಕಷನ್. ನಾಯಂಡಹಳ್ಳಿಯಲ್ಲೇ ಪ್ರಿಂಟಾಗಿದ್ದರೂ ಮೇಡಿನ್ ಚೈನಾ ಅಂತ ಲೇಬಲ್ ಅಂಟಿಸಿದ್ದರೆ ನಾವು ಅದನ್ನು ಕೊಳ್ಳುತ್ತೇವೆ. ಹಾಗೆಯೇ, ಸಣ್ಣಕಥೆಗಳು ನಮ್ಮಲ್ಲಿಯೇ ಇದ್ದರೂ, ಅವು ಇಂಗ್ಲೀಷಿನಿಂದ್ ಎಂದು ಹೇಳುವ ಹುಚ್ಚು ನಮಗೆ! ಇದು ವಡ್ಡಾರಾಧನೆಯ ರೂಪುರೇಷೆ. ಅತ್ತಿಮಬ್ಬೆ ಪ್ರಿಂಟೇ ಇಲ್ಲದ ಕಾಲದಲ್ಲಿ ಸಾವಿರ ಪ್ರತಿಗಳನ್ನು ಮಾಡಿ ಹಂಚಿದಳಂತೆ. &lt;br /&gt;&lt;br /&gt;ಹಿಂದಿನ ಬೆಂಚಿನಿಂದ ರಿಕ್ವೆಸ್ಟು! "ಸಾರ್, ಕತ್ತಲಾಗುತ್ತಿದೆ ಬರೆದುಕೊಳ್ಳುವುದಕ್ಕೆ ಆಗಿತ್ತಿಲ್ಲ. ನಾಳೆ ಕಂಟಿನ್ಯೂ ಮಾಡಿ." ಹೊರಗಡೆ ಕತ್ತಲು ಕವಿಯುತ್ತಿದೆ.  ತನ್ನ ಕಣ್ಣುಗುಡ್ಡೆಗಳವರೆಗೂ ಗಡಿಯಾರ ತಂದುಕೊಂಡು ನೋಡಿದ ಮಹಾಶಯ "ಇನ್ನೂ ಐದೂವರೇಏಏಏಏಏ...." "ಇಲ್ಲಾ ಸಾರ್... ಆರೂವರೇಏಏಏಏಏ", ಯಾವುದೋ ಹೆಣ್ಣು ಧ್ವನಿ "ಲೇಟಾಯ್ತು ಬಿಡಿ ಸಾರ್...", "...ನನಗೇನೂ ತೊಂದರೆ ಇಲ್ಲಪ್ಪ, ಆದರೆ ಇವತ್ತು ಹೇಳಿಬೇಕಾಗಿದ್ದನ್ನ ಇನ್ಯಾವತ್ತೂ ಹೇಳೋದಿಲ್ಲಪ್ಪ....". ಇನ್ಯಾವುದೋ ಧ್ವನಿ " ಇಲ್ಲ್ಲ, ಇಲ್ಲ, ನೀವು ಹೇಳಿ ಸಾರ್, ..." ಮೆತ್ತಗೆ.. "ಹೋಗ್ಲಿ ಬಿಡ್ರಪ್ಪ ಕ್ಲಾಸಾದ್ರೂ ಮುಗಿಲೀ...." ಆ ಮಹಾಶಯ "ಆಗ್ಲೀ ಇರ್ರವ್ವ .... ನನಗೆ ಕಣ್ಣೇ ಕಾಣುತ್ತಿಲ್ಲ ಆದರೂ ಪೇಪರೂ ಹುಡುಕುತ್ತಿಲ್ಲವಾ....? &lt;br /&gt;&lt;br /&gt;ಓಹೋ! ಅಂತೂ ಇಂತೂ ಪೇಪರು ಸಿಕ್ಕಿತು. ಆದರೇನು ಫಲ ಪೂರ್ತಿ ಕತ್ತಲು. ಕಣ್ಣೇ ಕಾಣುತ್ತಿಲ್ಲ ಕಿಟಕಿಯ ಪಕ್ಕ ನಿಂತುಕೊಂಡರೂ.. ಬರೇ ಕತ್ತಲೆ ಬಂದು ಪೇಪರಿಗೆ ರಾಚುತಿತ್ತು. ಆ ಮನುಷ್ಯನಿಗೆ ಭಾರಿ ಖುಶಿಯಾಗಿರಬೇಕು. ಯಾರು ಏನು ಮಾಡುತ್ತಿದಾರೋ ಯಾರಿಗೂ ಕಾಣುತ್ತಿಲ್ಲ. ಕರೆಂಟು ಹೋದರೆ ಅದಕ್ಕೆ ಬದಲಿ ವ್ಯವಸ್ಥೆ ಮಾಡಬೇಕೆಂದು ಕೂಡ ತಿಳಿಯಲಿಲ್ಲವೇ? &lt;br /&gt;&lt;br /&gt;ಈಗ ಗೊತ್ತಾಗುತ್ತಿದೆ ಯಾಕೆ ವಿನಯಾ ನಮ್ಮದು ಕಾಡು ಕ್ಯಾಂಪಸ್ ಅಂತ ಹೀಗಳೆಯುತ್ತಿದ್ದಳು ಅಂತ.&lt;br /&gt;&lt;br /&gt;ಕರೆಂಟು ಬಂತು. ಅಯ್ಯೋ ಇನ್ನೂ ಅರ್ಧ ಘಂಟೆ ಬಿಡುವ ಹಾಗೆ ಕಾಣುವುದಿಲ್ಲ, ಈ ಮನುಷ್ಯ. ಹೋ... ಈಗ ನನಗೆ ಡೇಂಜರು ಕಾಣುತ್ತಿದೆ. ನಾನು ಬಹಳ ಬರಕೋತಾ ಇದ್ದಿನಿ ಅಂತ ಈಯಪ್ಪ ನನ್ನನ್ನೇ ನೋಡುತ್ತಿದ್ದಾನೆ. ನಾಳೆಯಿಂದ ಈಯಪ್ಪನ ಕ್ಲಾಸನ್ನು ನಾನು ಅಟೆಂಡು ಮಾಡುವುದಿಲ್ಲ. &lt;br /&gt;&lt;br /&gt;.... ಎಲ್ಲಾ ರಗಳೆಗಳಲ್ಲೂ ಶಿವನೇ ಕೆಳಗೆ ಬಂದು ಭಕ್ತರನ್ನು ಪುಷ್ಪಕವಿಮಾನದಲ್ಲಿ ಕರೆದುಕೊಂಡು ಹೋಗುತ್ತಾನಂತೆ. ದ್ರಾಕ್ಷಿ ಹುಳಿ ಎಂದ ನರಿಗಿಂತ ಬಾಹುಬಲಿ ದೊಡ್ಡವನಂತೆ. ಎಂಥಾ ಹೋಲಿಕೆ. ಯಾವುದನ್ನೋ ಮುಂದಿನ ತರಗತಿಯಲಿ ಹೇಳಬೇಕಾಗಿರುವುದರಿಂದ ಇದನ್ನು ಇಲ್ಲಿಗೆ ಮೊಟಕುಗೊಳಿಸುತ್ತಿದ್ದಾರಂತೆ. ಏಳು ಗಂಟೆ... ಇನ್ನೂ ಬಿಡುವ ಸಮಯವಾಯಿತು .... "ಇನ್ನು ೨೫ ನಿಮಿಷದಲ್ಲಿ ಮುಗಿಸಿಕೊಟ್ಟುಬಿಡುತ್ತೇನೆ ನಿಮಗೆ".. ಹಾಆಆಆಆಆಆಆಆಆ! ಲೇಟಾಯ್ತು ಸಾರ್........!" "ಲೇಟು ಆಗೋ ಹಾಗಿದ್ರೆ ಹೊರಡ್ರಪ್ಪ." ಅರ್ಧ ಕ್ಲಾಸು ಎದ್ದು ಹೊರಟಿತು. ನಾನು ಬೇರೆ ಈಯಪ್ಪನಿಗೆ ನೇರ ನೇರ ಕೂತಿದ್ದೇನೆ. ಭಾರಿ ಬರಕೋತಾ ಇದ್ದೀನಿ ಅಂತ ನನ್ನನ್ನೇ ಣೊಡುತ್ತಿದ್ದಾರೆ. &lt;br /&gt;&lt;br /&gt;ಅಬ್ಬಾ! ಮುಗಿಯಿತು. ಕಿಟಕಿಯಿಂದ ನೇರ ಹುಡುಗಿಯರ ಮುಖಕ್ಕೆ ದಾಳಿ ಮಾಡಿದ ಸೊಳ್ಳೆ, ತಿಗಣೆಗಳ ದೆಸೆಯಿಂದ ಬಿಟ್ಟುಬಿಟ್ಟರು.&lt;br /&gt;&lt;br /&gt;ಆದರೆ, ನನ್ನ ಕೈ ತೋರುಬೆರಳ ತುದಿಯಿಂದ ಮೊಣಕೈವರೆಗೆ ನೋಯುತ್ತಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-4071468704634151682?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/4071468704634151682/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/06/blog-post.html#comment-form' title='10 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/4071468704634151682'/><link rel='self' type='application/atom+xml' href='http://www.blogger.com/feeds/4527995432766899913/posts/default/4071468704634151682'/><link rel='alternate' type='text/html' href='http://muttumani.blogspot.com/2008/06/blog-post.html' title='ತರಗತಿಯಲ್ಲಿ......'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>10</thr:total></entry><entry><id>tag:blogger.com,1999:blog-4527995432766899913.post-2065072855547775093</id><published>2008-04-11T22:24:00.000+05:30</published><updated>2008-05-09T10:13:39.373+05:30</updated><title type='text'>ಅವಳು</title><content type='html'>ಕಿಟಕಿಯ ಪಕ್ಕ ಕೂತು, ಹಾಗೆ ಸ್ವಲ್ಪ ಎಡಕ್ಕೆ ಬಾಗಿ,ಗಾಜಿಗೆ ತಲೆ ಒರಗಿಸಿ, ತನ್ನ ತೆಳುವಾದ ಓಣಿಯನ್ನು ಕಣ್ಣು - ಕೂದಲು ಮರೆಯಾಗುವಂತೆ ಹೊದ್ದು ಮಲಗಿದ್ದ ಆ ಸುಂದರಿಯನ್ನು ಎಷ್ಟು ನೋಡಿದರೂ ನೋಡಬೇಕೆನಿಸುತಿತ್ತು. ಕಿಟಕಿಯಿಂದ ಬೀಳುತ್ತಿದ್ದ ಬಿಸಿಲು ಅವಳ ಓಣಿಗೂ ಮುಖಕ್ಕೂ ಒಂದು ರೀತಿಯ ಹಿತಮಿತವಾದ ಮೆರುಗು ತಂದಿತ್ತು. ಕೂದಲು ನಮ್ಮಮ್ಮ ಎಣ್ಣೆ ಹಚ್ಚಿ ಬಾಚಿದರೆ ಹೇಗೋ ಹಾಗೆ ಅವಳ ಮಾತು ಕೇಳಿತ್ತು. ಮುಖದ ಮೇಲೆ ಯಾವ ಕಂಪನಿಯ ಯಾವ ಪದಾರ್ಥವೂ ಕಾಣದಿದ್ದುದು, ಯಾವುದೋ ಸ್ವಪ್ನ ಸುಂದರಿಯೆಂಬ ಭ್ರಮೆ ಮೂಡಿಸುತ್ತಿತ್ತು.  ಭೂಲೋಕದ ಅರಿವೇ ಇಲ್ಲದಂತೆ ತೋರುತ್ತಿತ್ತು, ನಿದ್ದೆ ಮಾಡುತ್ತಿದ್ದ ಮುಖದ ಭಾವನೆ. ಇಂತಹ ಹುಡುಗಿಯರನ್ನು ನೋಡಿ ಎಷ್ಟು ದಿನವಾಯ್ತಪ್ಪ ಎಂದುಕೊಂಡು ಸುತ್ತ ಕಣ್ಣು ಹರಿಸಿದೆ. ಬರೀ ಪಾಂಡ್ಸು, ಎಲ್ 18, ಲ್ಯಾಕ್ಟೋಕ್ಯಾಲಮೈನ್ಗಳೇ ಕಣ್ಣಿಗೆ ರಾಚಿ ರೆಪ್ಪೆ ಮುಚ್ಚುವಂತಾಯಿತು. ಮತ್ತೆ ಆ ಹುಡುಗಿಯ ಕಡೆಗೆ ಮುಖ ತಿರುಗಿಸಿದೆ, ಸಂತೋಷವಾಯಿತು!&lt;br /&gt;&lt;br /&gt;ಟೌನ್ ಹಾಲ್ ಬಸ್ಟಾಪು ಬಂದಿದ್ದೆ ಎಲ್ಲರು ದಡಬಡನೆ ಇಳಿಯತೊಡಗಿದ್ದರು. ಆ ಹುಡುಗಿಯ ಪಕ್ಕದಲ್ಲೆ ಸೀಟು ಸಿಕ್ಕರೆ ಚಂದ ಎಂದುಕೊಂಡೆ,ಸಿಕ್ಕೇಬಿಟ್ಟಿತು! ಗಾಡಿ ಮುಂದಿನ ಸ್ಟಾಪಿನ ಕಡೆಗೆ ಹೋಗತೊಡಗಿದ್ದೆ ತಡ, ಆ ಸುಂದರಿಗೆ ದಿಢೀರನೆ ಎಚ್ಚರವಾಯಿತು. ಹಿಂದಿನ ಜನ್ಮದ ನೆನಪಿನಲ್ಲಿ ಕಳೆದುಹೋಗಿದ್ದ ಹೆಣ್ಣಿಗೆ ಈ ಜನ್ಮದ ನೆನಪು ಮರುಕಳಿಸಿ ಕರ್ತವ್ಯ ಪ್ರಜ್ನೆ (ಕ್ಷಮಿಸಿ ಅಕ್ಷರ ತಪ್ಪಾಗಿದೆ)ಎಚ್ಚೆತ್ತುಗೊಂಡಂತೆ.&lt;br /&gt;&lt;br /&gt;ನೋಡುನೋಡುತ್ತಿದ್ದಂತೆ ಅವಳ ವ್ಯಾನಿಟಿ ಬ್ಯಾಗಿನಿಂದ ಒಂದೊಂದೆ ಸಾಮಾನು ಹೊರಗೆ ಬರಲಾರಂಭಿಸಿತು. ಮಾತುಕೇಳಿ ಕೂತಿದ್ದ ಕೂದಲು ಅವಳು ಕೈಬೆರಳಾಡಿಸುತ್ತಿದ್ದಂತೆ ನೆಗರಿ ನಿಂತುಕೊಂಡಿತು.ತುಟಿಗೆ ಕೆಂಪು ಹರಡಿತು.ಮುಖಕ್ಕೂ ಬೂದಿ ಬಳಕೊಂಡಾಯಿತು. ರಿಂಗಣಿಸಿದ ಫೋನನ್ನು ತೆಗೆದು ಉತ್ತರಿಸಿದಳು - "ಯಾ, ಯಾ ,ಐ ಯಾಮ್ ಗೆಟಿಂಗ್ ಡೌನ್ ಆರ್ ಯು ದೇರ್? ಓಕೆ ದೆನ್". ತನ್ನ ತೆಳು ದುಪ್ಪಟ್ಟಾವನ್ನು ಮಡಚಿ ಬ್ಯಾಗಲ್ಲಿರಿಸಿ,ಚಿಕ್ಕ ಟಾಪನ್ನು ಸರಿ ಮಾಡಿಕೊಂಡು ಕೆಳಕ್ಕಿಳಿದಳು. ನಾನು ಅವಾಕ್ಕದೆ.......&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-2065072855547775093?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/2065072855547775093/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/04/blog-post_4429.html#comment-form' title='16 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/2065072855547775093'/><link rel='self' type='application/atom+xml' href='http://www.blogger.com/feeds/4527995432766899913/posts/default/2065072855547775093'/><link rel='alternate' type='text/html' href='http://muttumani.blogspot.com/2008/04/blog-post_4429.html' title='ಅವಳು'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>16</thr:total></entry><entry><id>tag:blogger.com,1999:blog-4527995432766899913.post-116124350189583319</id><published>2008-04-11T22:18:00.000+05:30</published><updated>2008-04-11T22:45:52.298+05:30</updated><title type='text'>ರಸ್ತೆಯಲ್ಲಿ</title><content type='html'>ಬಿರಬಿರನೆ ನಡೆಯುತ್ತಿದ್ದ ನನಗೆ&lt;br /&gt;ಅವನು ಹಿಂದೆಬರುತ್ತಿದ್ದುದು ತಿಳಿದು&lt;br /&gt;ಕಾಲೆಳೆಯಿತು......&lt;br /&gt;&lt;br /&gt;ನನ್ನ ಕಂಡೋ ಏನೋ ಅವಗೆ&lt;br /&gt;ಕಣ್ಣು ನೆಟ್ಟು, ರಭಸ ಇಳಿದು,&lt;br /&gt;ನಿಧಾನ ನಡೆಯಿತು......&lt;br /&gt;&lt;br /&gt;ಇಬ್ಬರೂ ಒಟ್ಟಿಗೆ ಹೊರಟೆವು&lt;br /&gt;ದಾರಿ ಸಾಗಿತು&lt;br /&gt;ಗುರಿತಲುಪಿತು&lt;br /&gt;ಆದರೆ, ವಿಪರ್ಯಾಸ&lt;br /&gt;ಆಟೋದಿಂದ ಇಳಿವಾಗ ಚಿಲ್ಲರೆಗಾಗಿ&lt;br /&gt;ಜಗಳವಾಡಬೇಕಾಯಿತು!!!!!!&lt;br /&gt;&lt;br /&gt;[:)]&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-116124350189583319?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/116124350189583319/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/04/blog-post_11.html#comment-form' title='12 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/116124350189583319'/><link rel='self' type='application/atom+xml' href='http://www.blogger.com/feeds/4527995432766899913/posts/default/116124350189583319'/><link rel='alternate' type='text/html' href='http://muttumani.blogspot.com/2008/04/blog-post_11.html' title='ರಸ್ತೆಯಲ್ಲಿ'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>12</thr:total></entry><entry><id>tag:blogger.com,1999:blog-4527995432766899913.post-8171610767156621552</id><published>2008-04-06T21:57:00.000+05:30</published><updated>2008-04-06T22:07:11.883+05:30</updated><title type='text'>ನನ್ನ ಇಂಟರ್ವ್ಯೂ ಗೆಲ್ಲಿಸಿದ ಕೃತಿ</title><content type='html'>ಐದನೇ ಕ್ಲಾಸಿಗೆ ಪ್ರಥಮ ಚಿಕಿತ್ಸೆ ಕೊಡುವ ಬಗ್ಗೆ ಅರಿವು ಮೂಡಿಸುವ ಬಗ್ಗೆ ನನ್ನ ಪ್ರಶ್ನೆ ಇದ್ದದ್ದು.&lt;br /&gt;&lt;br /&gt;SCENE – 1&lt;br /&gt;&lt;br /&gt;&lt;br /&gt;(Children are playing in a vacant space surrounded by houses. they are playing hide and seek. There is a small fire at one end, which children do not notice.)&lt;br /&gt;&lt;br /&gt;Ch. 1: all of you go hide youself.1…2…3…4….5…………… 10………15……..20…..&lt;br /&gt;(Everyone find his or her place to hide) &lt;br /&gt;&lt;br /&gt;Geetha :( holding a child by his hand) come fast chintu. You will be caught,     &lt;br /&gt;definitely.  (Drags him behind a tree).&lt;br /&gt;&lt;br /&gt;Ch.1: 49….50. Where are you people? (turns around and searches for his mates.  &lt;br /&gt;discovers Chintu’s hand behind the tree) (shouting) chintu….chintu... Chintu is the &lt;br /&gt;cheater .. Chintu is the cheater.&lt;br /&gt;&lt;br /&gt;Chintu: You always catch me first. You are all cheaters. I will never play with you again. (Relieves himself from Geetha and stands his head fallen).&lt;br /&gt;&lt;br /&gt;Ch.1: You always have an excuse or the other. I am not going to do it again. You are bound to accept this.&lt;br /&gt;&lt;br /&gt;Chintu: I told you, I will never play with you. Here I go (runs out of the group towards fire. Suddenly stops before the fire and tries to pick up a burning thing). Ouch..  it’s hot.( starts crying loudly).&lt;br /&gt;&lt;br /&gt;Sunitha: Oh! He burnt his hand. Let us go and help him. (They all move towards Chintu).&lt;br /&gt;&lt;br /&gt;Children: Stop it chintu. Do not worry. You will be all right. &lt;br /&gt;&lt;br /&gt;Sunitha: (to self) I think it is a first degree burn. (Loudly) All of you be here. I will be   back in a moment.&lt;br /&gt;(Rushes out and is back in a moment with a box and water)&lt;br /&gt;Chintu show your hand. (Examining his hand). I knew it is a first-degree burn. I will set it right. (Cleanses the wound with water, wipes it gently with a clean cloth and covers the wound with a plastic bandage.)&lt;br /&gt;&lt;br /&gt;Chintu: (smiling) that is very nice. I do not feel any burning now. (Gets up in excitement and is again to fall down)&lt;br /&gt;&lt;br /&gt;Children: (cry) Chintu……&lt;br /&gt;(He manages to stand straight. All of them start laughing and return to their homes)&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;SCENE – 2&lt;br /&gt;&lt;br /&gt;[Sunitha’s home. She is watching “Tom &amp; Jerry”. The doorbell rings and she opens the door standing on a sofa handle. She is indifferent but at once shouts at him]&lt;br /&gt;Sunitha: Papa! Why are you late? You never keep your words, do   &lt;br /&gt;     you? [Yells at her father]. Have you brought the chocolates? &lt;br /&gt;     [Starts checking his pockets]&lt;br /&gt;&lt;br /&gt;Papa: OK, OK, Okay….baby. [Takes out a chocolate and gives it to her)&lt;br /&gt;&lt;br /&gt;Sunitha: Yeh! That’s what I want [Tries to jump off the sofa and falls down].&lt;br /&gt;&lt;br /&gt;Papa: [lifting her up] Oh Oh, Don’t get excited, have it leisurely.&lt;br /&gt;&lt;br /&gt;[Sunitha’s mother comes out of kitchen with a vessel in one hand and a cotton cloth in another]&lt;br /&gt;&lt;br /&gt;Mother: (shouting) Sunitha! I knew you would do this.  (Checks out if there is any wound, &lt;br /&gt;finds out a scratch in her knee). There you have it. Come with me (Drags her inside&lt;br /&gt;            and comes back after a minute). (Loudly to ‘Papa’) get fresh, had anything at &lt;br /&gt;office? Come fast, have your lunch.&lt;br /&gt;&lt;br /&gt;Sunitha: [In her usual excitement] Mama! You know everything. Sudha Madam said the &lt;br /&gt;              same thing yesterday. (As if by hearted) “A wound or scratch should be washed &lt;br /&gt;              first, gently wipe  it with cotton and then cover it with a protective bandage.”&lt;br /&gt;&lt;br /&gt;Mother: OK, OK, I got it. [Goes to the kitchen and arranges dining table for dinner]&lt;br /&gt;              (Loudly) Now, come, have your lunch.&lt;br /&gt;              [Sunitha and Papa come to the table. Mother serves food]&lt;br /&gt;&lt;br /&gt;Mother: (to Papa) why are you late? &lt;br /&gt;&lt;br /&gt;Papa: You know, there is always one or the other work at my desk when I want to leave.&lt;br /&gt;           (Turns to Sunitha) Have you been to your friends’ home today Sunitha?&lt;br /&gt;&lt;br /&gt;Mother (intervenes): Yes, she is always ready for anything and everything. (Stares at &lt;br /&gt;                                  her). Ask her what she did there.&lt;br /&gt;&lt;br /&gt;Sunitha: Papa, I did what my teacher had told us. I know, “whenever there is a burn, you &lt;br /&gt;              should not put cloths on it nor should …..”&lt;br /&gt;&lt;br /&gt;Mother: Shut up! Suni. You act as if you have done your MBBS. You are… (Suddenly &lt;br /&gt;              stops herself, goes to kitchen with a smile on her lips)&lt;br /&gt;&lt;br /&gt;Papa:  Sunitha, what did you do there?&lt;br /&gt;&lt;br /&gt;Sunitha: No papa, Chintu had a burn. No body knew what to do when he started crying. &lt;br /&gt;              I told them to wash it with water and helped to bandage it.&lt;br /&gt;&lt;br /&gt;Papa: Oh! How did you know all this?&lt;br /&gt;&lt;br /&gt;&lt;br /&gt;Sunitha: Of course, I know, Sudha madam has taught all this in our class! Papa, you know, it so happened yesterday in the class…&lt;br /&gt;&lt;br /&gt;SCENE-3&lt;br /&gt;&lt;br /&gt;(Students are moving in a line. A gent teacher is in charge of them)&lt;br /&gt;&lt;br /&gt;Madhu (A naughty girl): (whispers in her friends ears)&lt;br /&gt;     Chuk-buk, chuk-buk&lt;br /&gt;     Train is moving,&lt;br /&gt;     chuk-buk, chuk-buk&lt;br /&gt;     Train is going.&lt;br /&gt;&lt;br /&gt;Teacher: Madhu! What is that? (Madhu gently moves in the line)&lt;br /&gt;&lt;br /&gt;(They come to ground; children disperse and start playing in groups. Some are playing kho-kho, some play skipping. Madhu and group that include Sunitha are in a corner, debating what they should play.)&lt;br /&gt;&lt;br /&gt;Geetha: Let us sit and play word building.&lt;br /&gt;&lt;br /&gt;Veena: What? word building! You always suggest such boring things.&lt;br /&gt;&lt;br /&gt;Geetha: Why do you say that? Mani madam told us that it improves our General  &lt;br /&gt;              Knowledge.&lt;br /&gt;&lt;br /&gt;Veena: No, you always want to sit (hits on her nose)&lt;br /&gt;            (Geetha is hurt but she hides it from her friends)&lt;br /&gt;Madhu: OK, OK. Geetha! We will not sit. Let us do something new. (Starts thinking with a &lt;br /&gt;             finger on her cheek)&lt;br /&gt;&lt;br /&gt;Sunitha: We will have a war and sort of things. It’s very interesting. (Starts acting as if she &lt;br /&gt;              has a gun and bombs). yaaaaa…… disha.. disha..disha…dhamaaaaaaar….(with&lt;br /&gt;              her hands in air and hitting her friends some times.)&lt;br /&gt;&lt;br /&gt;Madhu: Stop it Sunitha! I have an idea. We will make a pyramid. Now, Geetha and you&lt;br /&gt;             kneel down and bend to ground. Sunitha give me support [the girls reluctantly do&lt;br /&gt;             so. Madhu holds her hand, climbs on the girls with one leg on each of them]. Yeh!&lt;br /&gt;             it’s done. Leave your hands (stumbles) [Veena- Not knowing what she should &lt;br /&gt;            actually do, lifts her back to adjust her position]&lt;br /&gt;            No, No (falls down with a loud cry)&lt;br /&gt;&lt;br /&gt;[All the three suffer minor wounds, with Geetha holding her bleeding nose. Teacher (Sudha), comes running with some students]&lt;br /&gt;&lt;br /&gt;Teacher: Madhu! You are again at it?&lt;br /&gt;&lt;br /&gt;Madhu: No. Madam, we were just trying something new. They gave an idea and …&lt;br /&gt;&lt;br /&gt;Veena: No madam, she gave the idea. She made us crouch.&lt;br /&gt;&lt;br /&gt;Teacher: Enough of it! Rohit go get the First Aid box and some water (he runs). Geetha&lt;br /&gt;               your nose is bleeding stand upright still it stops. (Makes Geetha stand upright to&lt;br /&gt;               stop the flow of blood. Rohit is back at once) Children, do not cover them. Come&lt;br /&gt;               to a side. (Students do so) (She gives first aid to all the three)&lt;br /&gt;&lt;br /&gt;Teacher: That’s over. Kiran, you did the right thing. It is always important to inform &lt;br /&gt;               immediately to your parents, teachers or elders whenever you have a situation &lt;br /&gt;               like this.&lt;br /&gt;&lt;br /&gt;Priya: Please show us what all is there in the first aid box madam. It looks very interesting.&lt;br /&gt;&lt;br /&gt;Teacher: Allright. It is important for you to know. What’s in the box and what we use them&lt;br /&gt;                for. See here, there are some plastic bandages, some cotton, Antiseptic towelettes&lt;br /&gt;                Anteptic Ointment, Instant ice pack, Burn gel to treat burns, Pain reliever and&lt;br /&gt;                some Glucose.&lt;br /&gt;&lt;br /&gt;Kiran: Should we use all these things to give first aid?&lt;br /&gt;&lt;br /&gt;A boy: Oh! You will never stop giving first aid then. When will the patient get second aid?&lt;br /&gt;&lt;br /&gt;Teacher:  No, Kiran. You will make use of certain of the things for certain injuries.&lt;br /&gt;&lt;br /&gt;B boy: How do we know what medicines should be used, madam? &lt;br /&gt;&lt;br /&gt;Teacher: I will tell you. The most common thing you come across is a wound or a scratch&lt;br /&gt;               bleeding. You should stop the bleeding by applying pressure using a clean cloth. &lt;br /&gt;               Wash wound with mild soap and water and remove any dirt. Cover the wound &lt;br /&gt;               with a protective bandage(Shows cloth and bandages in the box).&lt;br /&gt;A boy:  That is so easy!&lt;br /&gt;&lt;br /&gt; Teac: No, it is easy only when the bleeding stops. If not, you should immediately consult &lt;br /&gt;           your doctor.&lt;br /&gt; &lt;br /&gt;Rohit: What are we supposed to do when there is a burn?&lt;br /&gt;&lt;br /&gt;Teac:  You will come across burns more frequently, right? (Children nod in agreement)&lt;br /&gt;           I will tell you a few simple things to identify the degree of burns and to give it aid.&lt;br /&gt;           If only the first layer of the skin is burnt or the second layer is burnt and the burn is&lt;br /&gt;           no larger than two or three inches, Run cool water over the burn for a few minutes. &lt;br /&gt;           Cover the burn with a sterile bandage or a clean cloth. You may also take aspirinor&lt;br /&gt;           Acetaminophen to relieve any swelling or pain.&lt;br /&gt;&lt;br /&gt;Madhu: Madam, you did not any of these things to Geetha. Is what you did to her also a first aid?&lt;br /&gt;&lt;br /&gt;Teac: Definitely, Madhu. Whenever there is a Nosebleed, you can either sit or stand upright to slow the flow of blood or Pinch your nose with your thumb and forefinger for 10 minutes while breathing through your mouth.&lt;br /&gt;Sunitha: that is very interesting. Can we try this at home, Madam?&lt;br /&gt;Teac: Yes, you can. However, you should be very careful while doing it. (School bell rings)&lt;br /&gt;Students: Thank you teacher, bye teacher. (Disperse)&lt;br /&gt;&lt;br /&gt;[Back at home]&lt;br /&gt;Sunitha: this is how I know papa.&lt;br /&gt;&lt;br /&gt;Papa: Good Sunitha. You have done a good job. However, always remember you should be very careful and immediately inform your elders at any such situation.&lt;br /&gt;&lt;br /&gt;- END-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-8171610767156621552?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/8171610767156621552/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/04/blog-post.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/8171610767156621552'/><link rel='self' type='application/atom+xml' href='http://www.blogger.com/feeds/4527995432766899913/posts/default/8171610767156621552'/><link rel='alternate' type='text/html' href='http://muttumani.blogspot.com/2008/04/blog-post.html' title='ನನ್ನ ಇಂಟರ್ವ್ಯೂ ಗೆಲ್ಲಿಸಿದ ಕೃತಿ'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>2</thr:total></entry><entry><id>tag:blogger.com,1999:blog-4527995432766899913.post-3816092624884884276</id><published>2008-03-07T21:11:00.000+05:30</published><updated>2008-03-21T10:39:42.449+05:30</updated><title type='text'>ಜೀವನ ಮತ್ತು ನಾನು</title><content type='html'>ಬೆಮನಸಾ ಬಸ್ಸಿನಲ್ಲಿ ಡ್ರೈವರ್ರನ ಹಿಂದುಗಡೆ ಸೀಟಿನಲ್ಲಿ, ಡ್ರೈವರ್ರಿಗೆ ಬೆನ್ನು ಮಾಡಿ, ನನ್ನ ಸಹಪ್ರಯಾಣಿಕರಿಗೆ ಮುಖ ಮಾಡಿಕೊಂಡು ಕೂತಿದ್ದೆ. &lt;br /&gt;ಇದ್ದಕಿದ್ದ ಹಾಗೆ ಏನೋ ಹೊಳೆದಂತಾಯಿತು ............ &lt;br /&gt;&lt;br /&gt;ಎಷ್ಟೆಷ್ಟು ತರದ ಜನ... ಒಂದು ಕ್ಷಣ ನಮ್ಮನ್ನು ನೋಡಿ, ಏನೋ ನಗುವಂತೆ ಮಾಡಿ, ನೋಡಿಯೂ ನೋಡದಂತೆ ಪಕ್ಕಕ್ಕೆ ತಿರುಗಿ, ನನ್ನ ಮುಖದಲ್ಲಿ ಎಂಥದ್ದೋ ವಿಸ್ಮಯವೊಂದನ್ನು ಕಂಡು ಮುಸಿ ಮುಸಿ ನಕ್ಕು, ಸಮಾಧಾನವಾಗದಂಥಹ ಇನ್ನೇನೋ ಒಂದನ್ನು ಕಂಡು ಬೇಸರದ ನಿಟ್ಟುಸಿರು ಬಿಟ್ಟು, ಕಡೆಗೆ ಅಲ್ಲೊಬ್ಬಳು ಕುಳಿತಿದ್ದಳು, ತಮ್ಮ ದೃಷ್ಟಿ ಅವಳ ಮೇಲೆ ಬಿದ್ದಿತ್ತು ಎಂಬ ನೆನಪಿನ ಲವಲೇಶವನ್ನೂ ತಲೆಯಲ್ಲಿ ಉಳಿಸಿಕೊಳ್ಳುವ ಗೋಜಿಗೆ ಹೋಗದೆ ಸರಸರನೆ ಇಳಿದು ತಮ್ಮ ದಾರಿ ತಾವು ನೋಡಿಕೊಂಡು ಹೋಗುವ ಪ್ರಾಯಾಣಿಕರು. ನಾನು ಹಾಗೆ ಕೂತಿಲ್ಲದಿದ್ದರೆ ಇದೆಲ್ಲ ನನಗೆ ಗೊತ್ತಾಗುತ್ತಲೇ ಇರಲಿಲ್ಲ!&lt;br /&gt;&lt;br /&gt;ಜೀವನದಲ್ಲಿಯೂ ಹಾಗೆ ತಾನೆ? ನಮ್ಮ ಅರವತ್ತೋ - ನೂರೋ ವರುಷದ ಆಯಸ್ಸಿನಲ್ಲಿ ಒಟ್ಟಿಗೆ ಇರುವುದು, ಮಾತಾಡುವುದು ಕಡೆಗೆ ಒಟ್ಟಿಗೆ ಕೂತು ಉಣ್ಣುವುದು ಕೇವಲ ಕೆಲವೇ ಘಂಟೆಗಳ ಹರವಿನಲ್ಲಿ. ಯಾರಾದರೂ ನಮ್ಮ ಮುಂದೆ ಇಲ್ಲದಿದ್ದಾಗ ಅವರ ವಿಷಯದಲ್ಲಿ ತೆಗೆದುಕೊಳ್ಳುವ ಸಲಿಗೆಯನ್ನು, ಅವರು ಇದ್ದಾಗ ತೆಗೆದುಕೊಳ್ಳುವುದಿಲ್ಲ.&lt;br /&gt;&lt;br /&gt; ಹೇಳಿದ್ದು, ಮಾಡಿದ್ದು, ಕೊಟ್ಟದ್ದು, ತೆಗೆದುಕೊಂಡದ್ದು ಎಲ್ಲವನ್ನೂ ಮರೆತು, ಮುಂದೆ ಮಾತ್ರ ನೋಡಿಕೊಂಡು ಹೋಗುವುದು ಜೀವನದ ಜಾಯಮಾನ. ಆದರೆ, ನಾನು ಕೂತಿದ್ದ ಸ್ಥಾನ ಹಾಗೆ ಇರಲಿಲ್ಲ. ಡ್ರೈವರ್ ಸಾಹೇಬನು ಯಾವಾಗ ಎಲ್ಲಿ ತಿರುವುತ್ತಾನೆ, ಎಲ್ಲಿ ಬ್ರೇಕ್ ಹಾಕುತ್ತಾನೆ, ಎಲ್ಲಿ ಜೋರಾಗಿ ಓಡಿಸುತ್ತಾನೆ ಎಂಬುದೊಂದೂ ತಿಳಿಯುತ್ತಿರಲಿಲ್ಲ. ಕಂಡಕ್ಟರ್ ಸಾಹೇಬ ತನ್ನ ವಿಶಿಷ್ಟ ಚಿತ್ರಗುಪ್ತನ ಶೈಲಿಯಲ್ಲಿ ಬಂದವರ, ಹೋದವರ, ಹತ್ತಿದ್ದವರ, ಇಳಿದವರ ಲೆಕ್ಕವನ್ನು ಇಡುತ್ತಿದ್ದ.&lt;br /&gt; &lt;br /&gt;ಅಂಗಡಿಗಳು, ಹರಿಯುತ್ತಿದ್ದ ಮೋರಿ ಕೆರೆಗಳು, ಡ್ರೈವರ್ ಹಾಕಿದ್ದ ಹಾಡು, ಹತ್ತಿ ಇಳಿದವರ ನೆನಪು, ದೊಡ್ಡ ಆಲದ ಮರ, ಫುಟ್ಪಾತಿನಲ್ಲಿ ಜಗಳಾಡುತ್ತಿದ್ದ ಗಂಡಹೆಂಡತಿ, ಜನಜಂಗುಳಿ ತುಂಬಿದ ಬಸ್ಟಾಪುಗಳು, ಇವುಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದೆ. ಅದರ ಬಗ್ಗೆಯೆಲ್ಲ ಆಲೋಚಿಸುತ್ತಿದ್ದೆ ಎನ್ನಬಹುದಾದರೂ ಅದರ ಮುಂದಕ್ಕೆ ಏನು ಹೇಳಬೇಕೆಂದು ನನಗೆ ತಿಳಿಯಲಾರದು.&lt;br /&gt;&lt;br /&gt;ಹೀಗೆ, ನನ್ನ ಸ್ಟಾಪು ಬಂದೇ ಬಿಟ್ಟಿತ್ತು. ಎಲ್ಲರೂ ಇಳಿದ ಮೇಲೆ ಸಾವಕಾಶವಾಗಿ ಎದ್ದು,"ಸ್ಟಾಪು ಬರುವುದಕ್ಕೆ ಮುಂಚೆಯೇ ಏಳಬಾರದೇನ್ರೀ?" ಎಂದು ಡ್ರೈವರ್ರನ ಹತ್ತಿರ ಬೈಸಿಕೊಂಡು ಇಳಿದೆ.&lt;br /&gt;&lt;br /&gt;ಏದುಸಿರು ಬಿಡುತ್ತಾ, ಮುಂದಾರಿಯನ್ನೇ ಎದುರು ನೋಡುತ್ತಾ, ಕಾದು ಕಾದು ತಲುಪಿದ್ದ, ಸುಸ್ತಾಗಿದ್ದ ಅವರೆಲ್ಲರಿಗಿಂತ ನಾನು ಸಂತುಷ್ಟಳಾಗಿದ್ದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-3816092624884884276?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/3816092624884884276/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/03/blog-post.html#comment-form' title='6 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/3816092624884884276'/><link rel='self' type='application/atom+xml' href='http://www.blogger.com/feeds/4527995432766899913/posts/default/3816092624884884276'/><link rel='alternate' type='text/html' href='http://muttumani.blogspot.com/2008/03/blog-post.html' title='ಜೀವನ ಮತ್ತು ನಾನು'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>6</thr:total></entry><entry><id>tag:blogger.com,1999:blog-4527995432766899913.post-541157229026307604</id><published>2008-02-09T11:50:00.000+05:30</published><updated>2008-02-09T11:51:53.533+05:30</updated><category scheme='http://www.blogger.com/atom/ns#' term='welcome'/><title type='text'>ಹೈ</title><content type='html'>ಹೈ ಎಲ್ಲರಿಗೂ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-541157229026307604?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/541157229026307604/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/02/blog-post.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/541157229026307604'/><link rel='self' type='application/atom+xml' href='http://www.blogger.com/feeds/4527995432766899913/posts/default/541157229026307604'/><link rel='alternate' type='text/html' href='http://muttumani.blogspot.com/2008/02/blog-post.html' title='ಹೈ'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>2</thr:total></entry><entry><id>tag:blogger.com,1999:blog-4527995432766899913.post-896331824968816599</id><published>2008-02-09T11:45:00.000+05:30</published><updated>2008-03-07T21:23:49.369+05:30</updated><title type='text'>ಎಲ್ಲರಿಗೂ ನಮಸ್ಕಾರ</title><content type='html'>ಹೈ ನಾನು ಹೇಮ, ಈಗ ತಾನೆ ಶುರು ಮಾಡ್ತಿದ್ದೀನಿ ಬ್ಲಾಗಾಟ. ಯಾವ ವಿಷಯದ ಬಗ್ಗೆ ಬರೆಯೋದು ಅಂತ ಸ್ವಲ್ಪ ಕನ್ಫ್ಯೂಷನ್ .......&lt;br /&gt;&lt;br /&gt;ಹಾ    ಒಂದ್ನಿಮಿಷ ಅದೆನೋ ಪೋಸ್ಟು ಮಾಡೋದಂತೆ ಮಾಡಿನೋಡ್ತೀಣಿ ಇರಿ. ಕಾಣಿಸ್ತಿದೆಯೆ ನಿಮಗೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4527995432766899913-896331824968816599?l=muttumani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://muttumani.blogspot.com/feeds/896331824968816599/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://muttumani.blogspot.com/2008/02/blog-post_08.html#comment-form' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4527995432766899913/posts/default/896331824968816599'/><link rel='self' type='application/atom+xml' href='http://www.blogger.com/feeds/4527995432766899913/posts/default/896331824968816599'/><link rel='alternate' type='text/html' href='http://muttumani.blogspot.com/2008/02/blog-post_08.html' title='ಎಲ್ಲರಿಗೂ ನಮಸ್ಕಾರ'/><author><name>ಮುತ್ತುಮಣಿ</name><uri>http://www.blogger.com/profile/02071788886580605152</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://bp3.blogger.com/_WmqaSOv4ABk/R61PmgHSoNI/AAAAAAAAAAU/LiXc3HcuDyE/S220/MF0087.JPG'/></author><thr:total>5</thr:total></entry></feed>
